ಪುಟಗಳು

ಕುವೆಂಪು






"ಕನ್ನಡಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದ
ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ
ಮರೆತೆಯಾದರೆ, ಅಯ್ಯೋ ಮರೆತಂತೆ ನನ್ನಾ" 

-ಕುವೆಂಪು

ಜಿ.ಪಿ.ರಾಜರತ್ನಂ



 "ನರಕಕ್ಕಿಳ್ಸಿ ನಾಲಗೆ ಸೀಳ್ಸಿ ಬಾಯ್ ವೋಲ್ಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನೀ ಕಾಣೆ"

- ಜಿ.ಪಿ.ರಾಜರತ್ನಂ

ಸಮಸ್ತ ಕನ್ನಡದ ಕುಲಭಾಂದವರಿಗೆಲ್ಲರೆಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು


"ಸಾವಿರ ಪರ್ಪಂಚ ಸತ್ತು ಹುಟ್ಟಿದರು
ಲೆಕ್ಕವಿಲ್ದಂಗೆ ಲೋಕ ಸೃಷ್ಟಿಯಾದರು
ಸಾಯೋಕಿಲ್ಲ ನಮ್ಮ ಕನ್ನಡ."
"ಜೈ ಕರ್ನಾಟಕ ಮಾತೆ"


ಕನ್ನಡದ ನುಡಿಮುತ್ತುಗಳು:-
೧. ಏನೇ ಬರಲಿ ಕನ್ನಡ ನಮ್ಮೊಂದಿಗಿರಲಿ
೨. ಯಾರಿಗೆ ಕನ್ನಡ ಬೇಡ, ಅವ್ರು ನಮಗೂ ಬೇಡ
೩. ಓ ಕನ್ನಡಿಗ, ನಿರಭಿಮಾನದಿಂದ ಸೇವಕನಾಗಿದ್ದು ಸಾಕು, ಕನ್ನಡಾಭಿಮಾನದಿಂದ ರಾಜನಾಗು
೪. ಕನ್ನಡವೇ ನಮ್ಮ ತಾಯಿ-ತಂದೆ, ಅದು ಬರದೆ ಇದ್ರೆ ಜಾಗ ಇಲ್ಲ ಇಲ್ಲಿ ಇನ್ನು ಮುಂದೆ
೫. ಕನ್ನಡವೇ ನಮ್ಮ ಉಸಿರು, ಇರಲಿ ಎಲ್ಲೆಡೆ ಇದರ ಹಸಿರು
೬. ಕನ್ನಡಕ್ಕಾಗಿ ಹೋರಾಡು, ಹೇ-ಕನ್ನಡದ ಹೆಬ್ಬುಲಿ
೭. ಕನ್ನಡ ಉಳಿದರೆ, ನಾವು ಉಳಿದೇವು
೮. ಕನ್ನಡವೆನ್ನಿರಿ ಜೊತೆಯಲಿ ಬನ್ನಿರಿ
೯. ಕನ್ನಡದ ತಾಯಿ ನಮ್ಮನ್ನು ಕಾಯಿ
೧೦. ಕನ್ನಡಿಗರಿಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ

ಡಿ.ಡಿ.ಕೊಸಾಂಬಿ ನಿಮಗೆ ತಿಳಿದಿರಲಿ

`ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ’



`ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ’ ಪುಸ್ತಕವು ಯುವ ಹೃದಯಗಳ ನಾಡಿ ಮಿಡಿತ ಭಾರತಮಟ್ಟದ ಹುತಾತ್ಮ `ಭಗತ್ ಸಿಂಗ್’ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಹುತಾತ್ಮ `ಚೆ’ ಇವರಿಬ್ಬರ ವಿವಿಧ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳ ಸಂಗ್ರಹ.

ಬಿರುಕು ಬಿಟ್ಟ ಗೋಡೆ























ಸಾರ್ವಕಾಲಿಕ ಹಾಗೂ ಎಲ್ಲಾ ವಯೋಮಾನದವರೂ ಓದಲು ಇಚ್ಛಿಸುವ ಪುಸ್ತಕ ಪ್ರಾಚೀನ ಚೀನೀ ಪುಟ್ಟ ಕತೆಗಳ ಸಂಗ್ರಹ `ಬಿರುಕು ಬಿಟ್ಟ ಗೋಡೆ ಮತ್ತು ಇತರ ಚೀನಾದ ಪ್ರಾಚೀನ ಕತೆಗಳು

`ಆಯಿಷಾ’
























`ಆಯಿಷಾ’ – ತನ್ನ ತೀರ್ವ ಮಟ್ಟದ ಕಲಿಕೆಯ ಆಸಕ್ತಿಯಿಂದ ಅದ್ಯಾಪಕ ವೃಂದದ ತಿರಸ್ಕಾರವನ್ನು ಹೊಂದಿ ಕಲಿಕೆಯ ಆಸಕ್ತಿಯನ್ನು ಬಲಿಕೊಡಲು ಇಚ್ಛಿಸದೇ ಅಧ್ಯಾಪಕ ವೃಂದದ ಹೊಡೆತದಿಂದ ತಪ್ಪಿಸಿಕೊಳ್ಳಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸಿ ಬಲಿಯಾದ ಹುಡುಗಿಯ ಕತೆ.

ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು

ಶೀರ್ಷಿಕೆ: ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು ಸಂಪಾದಕರು:ಎಸ್. ಶಿವಾನಂದ ಪುಟ:304 ಬೆಲೆ:ರೂ.225/-

Mellage Nade Mellage

Dr. Rajkumar in Bhaktha Prahlada

Scenes from Sampoorna Ramayana-Kannada Drama-vol 4- Dasharatha in grief

ಟೈರ್ ಪಂಕ್ಚರ್ ಸಮಸ್ಯೆ ಇನ್ನಿಲ್ಲ, ಈ ಜೆಲ್ ಬಳಸಿ

Never Get a Puncture Again Through Puncture Killer
ವಾಹನ ಹೊಂದಿರುವರು ಪಂಕ್ಚರ್ ಅಂದ್ರೆ ಬೆಚ್ಚಿ ಬೀಳುತ್ತಾರೆ. ಅರ್ಜೆಂಟಾಗಿ ಎಲ್ಲೋ ಹೋಗುತ್ತಿದ್ದಾಗ, ರಾತ್ರಿ ಪ್ರಯಾಣ ಮಾಡುತ್ತಿರುವಾಗ, ದೂರ ಪ್ರವಾಸ ಹೊರಟಾಗ ಬೈಕ್ ಅಥವಾ ಕಾರು ಪಂಕ್ಚರ್ ಆದರೆ ಕಷ್ಟ.

ವಾಹನಗಳ ಟೈರ್ ಯಾವಾಗ ಠುಸ್ಸ್ ಅನ್ನುತ್ತೆ ಎಂದು ಹೇಳೋದು ಕಷ್ಟ. ರಸ್ತೆಯಲ್ಲಿರುವ ಕಲ್ಲುಮುಳ್ಳು ಚುಚ್ಚಿದರೂ ಟೈರ್ ಪಂಕ್ಚರ್ ಆಗುತ್ತದೆ. ಆಮೇಲೆ ಪಂಕ್ಚರ್ ಹಾಕೋ ಗ್ಯಾರೇಜ್ ಹುಡುಕುವುದು ಕಷ್ಟ. ಆದರೆ ಪಂಕ್ಚರ್ ಆದ ತಕ್ಷಣ ತನ್ನಷ್ಟಕ್ಕೆ ಟೈರ್ ಸರಿಯಾದರೆ ಚೆನ್ನಾಗಿತ್ತು ಅಲ್ಲವೇ.

ಇದೀಗ ಮಾರುಕಟ್ಟೆಗೆ ಪಂಕ್ಚರ್ ಕಿಲ್ಲರ್ ಅನ್ನೋ ಉತ್ಪನ್ನ ಬಂದಿದೆ. ಟೈರ್ ಪಂಕ್ಚರ್ ಆದ ಜಾಗವನ್ನು ಇದು ಸ್ವಯಂಚಾಲಿತವಾಗಿ ತಕ್ಷಣ ಬ್ಲಾಕ್ ಮಾಡುತ್ತದೆ. ಯಾವುದೇ ಟೆನ್ಶನ್ ಇಲ್ಲದೇ ಸವಾರಿ ಮಾಡಬಹುದು. ಮತ್ತೆ ಪಂಕ್ಚರ್ ಹಾಕಲು ಗ್ಯಾರೇಜ್ ಹುಡುಕುವ ಅವಶ್ಯಕತೆಯಿಲ್ಲ.

ಪಂಕ್ಚರ್ ಕಿಲ್ಲರ್ ಉತ್ಪನ್ನ ಒಂದು ರೀತಿಯ ಜೆಲ್. ಇದನ್ನು ಟೈರಿನೊಳಗೆ ಇಂಜೆಕ್ಟ್ ಮಾಡಲಾಗುತ್ತದೆ. ಯಾವುದಾದರೂ ಚೂಪಾದ ವಸ್ತು ಟೈರಿಗೆ ಚುಚ್ಚಿ ಪಂಕ್ಚರ್ ಆಗೋ ಸಾಧ್ಯತೆ ಇರುವಾಗ ಈ ಜೆಲ್ ಆ ತೂತನ್ನು ಬ್ಲಾಕ್ ಮಾಡುತ್ತದೆ.

ಪಂಕ್ಚರ್ ಕಿಲ್ಲರ್ ಕೇವಲ ಪಂಕ್ಚರ್ ಹಾಕಲು ಮಾತ್ರ ಉಪಯೋಗವಲ್ಲ. ಇದು ಟೈರಿನಲ್ಲಿರುವ ಅಪಾಯಕಾರಿ ತೂತುಗಳನ್ನೆಲ್ಲ ಬ್ಲಾಕ್ ಮಾಡುತ್ತದೆ. ಟೈರಿನೊಳಗಿನ ಗಾಳಿಯ ಒತ್ತಡ ಈ ಜೆಲ್ಲಿನ ಮೇಲೆ ಒತ್ತಡ ಹಾಕುತ್ತದೆ.

ಟೈರ್ ನಲ್ಲಿ ಯಾವುದೇ ರಂದ್ರವಾದರೂ ತಕ್ಷಣ ಆ ಕ್ಷೇತ್ರಕ್ಕೆ ಪ್ರವೇಶಿಸಿ ಬ್ಲಾಕ್ ಮಾಡಿಬಿಡುತ್ತದೆ. ಪಂಕ್ಚರ್ ಕಿಲ್ಲರ್ ಹಾಕಿರೋ ಟೈರ್ ಇದ್ರೆ ಯಾವುದೇ ಭಯ ಇಲ್ಲದೇ ಪ್ರಯಾಣ ಮಾಡಬಹುದು.

ಪಂಕ್ಚರ್ ಕಿಲ್ಲರ್ ವಿಶೇಷತೆ

* ಪಂಕ್ಚರ್ ಮತ್ತು ಲೀಕ್ ನಿಂದ ಟೈರನ್ನು ರಕ್ಷಿಸುತ್ತದೆ.
* ಟೈರ್ ಬಾಳಿಕೆ ಹೆಚ್ಚಿಸುತ್ತದೆ
* ವಾಹನದ ಇಂಧನ ದಕ್ಷತೆ ಹೆಚ್ಚಿಸುತ್ತದೆ.
* ಸಾಮಾನ್ಯ ಟೈರ್ ಕೂಡ ಪಂಕ್ಚರ್ ಪ್ರೂಫ್ ಟೈರಾಗುತ್ತದೆ.
* ಟೈರಿನೊಳಗಿನ ಅಗತ್ಯ ಗಾಳಿಯ ಒತ್ತಡವನ್ನು ರಕ್ಷಿಸುತ್ತದೆ.
* ಇದು ಪರಿಸರ ಸ್ನೇಹಿ, ಪರಿಸರಕ್ಕೆ ಹಾನಿಯಿಲ್ಲ.
* ಇದನ್ನು ಟ್ಯೂಬ್ ಮತ್ತು ಟ್ಯೂಬ್ ಲೆಸ್ ಟೈರ್ ಎರಡಕ್ಕೂ ಬಳಸಬಹುದು.
* ಆರಾಮವಾದ ರೈಡಿಗೆ ಸಹಕರಿಸುತ್ತದೆ.

ಈ ವಿಶೇಷ ಉತ್ಪನ್ನದ ಕುರಿತು ಕಂಪನಿಯನ್ನು ಸಂಪರ್ಕಿಸಿದಾಗ ಹೆಚ್ಚಿನ ಮಾಹಿತಿ ದೊರಕಿದೆ. ಅಂದ್ರೆ ಕಾರ್ ಟೈರಿಗೆ ಒಂದು ಲೀಟರ್ ಪಂಕ್ಚರ್ ಕಿಲ್ಲರ್ ಜೆಲ್ ಮತ್ತು ದ್ವಿಚಕ್ರ ವಾಹನಗಳಿಗೆ 600 ಎಂಎಲ್ ಜೆಲ್ ಇಂಜೆಕ್ಟ್ ಮಾಡಬೇಕಂತೆ. ಬೆಂಗಳೂರಿನಲ್ಲೂ ಪಂಕ್ಚರ್ ಕಿಲ್ಲರ್ ಪ್ರತಿನಿಧಿಗಳಿದ್ದಾರೆ.

ಈ ಪಂಕ್ಚರ್ ಕಿಲ್ಲರ್ ದರ ಪ್ರತಿಲೀಟರ್ ಗೆ ಸುಮಾರು 1,399 ರುಪಾಯಿ ಇದೆ. ಸದ್ಯ ಇದು ಪ್ರಮುಖ ನಗರಗಳಲ್ಲಿ ದೊರಕುತ್ತಿದೆ. ಕಂಪನಿಯನ್ನು ಸಂಪರ್ಕಿಸಿದರೆ ಅವರೇ ಬಂದು ಟೈರಿಗೆ ಜೆಲ್ ಇಂಜೆಕ್ಟ್ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.