ಪುಟಗಳು

ಇತ್ತೀಚಿಗೆ ದ್ವನಿಸುರುಳಿ ಬಿಡುಗಡೆಯಾಗಿರುವ ಕನ್ನಡ ಸಿನಿಮಾಗಳ ಹೆಸರು ಹಾಗೂ wallpaper





ಎಂ.ಎಸ್. ಧೋನಿ ಭಾರತೀಯ ಸೇನೆಗೆ ಭರ್ತಿ

ಜಾರ್ಖಂಡ್‌, ಜೂನ್ 24: ಭಾರತೀಯ ಕ್ರಿಕೆಟ್ ಸೇನೆಯ ಸಾರಥ್ಯವನ್ನು ಯಶಸ್ವಿಯಾಗಿ ಹೆಗಲಮೇಲೆ ಹೊತ್ತು ಮೆರೆಯುತ್ತಿರುವ ತಂಡದ ನಾಯಕ ಎಂ. ಎಸ್. ಧೋನಿ ಅವರೀಗ ಸೇನಾ ದಂಡನಾಯಕರಾಗಿಯೂ ನೇಮಕಗೊಳ್ಳಲಿದ್ದಾರೆ. ವಿಶ್ವ್ ಕಪ್ ಅನ್ನು ಭಾರತದ ಮಾಡಿಲಿಗೆ ಹಾಕಿದ ಅಗ್ರಗಣ್ಯ ಆಟಗಾರ ಕಪಿಲ್ ದೇವ್ ಮತ್ತು ಮೊನ್ನೆಯ ವಿಶ್ವ್ ಕಪ್ ಗೆಲುವನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಪ್ರಚಂಡ ಆಟಗಾರ ಸಚಿನ್ ತೆಂಡೂಲ್ಕರ್ ಈ ಹಿಂದೆಯೇ ಸೇನೆಗೆ ಭರ್ತಿ ಆಗಿದ್ದಾರೆ.

ಭಾರತಕ್ಕೆ ಎರಡನೆಯ ಬಾರಿಗೆ ವಿಶ್ವ್ ಕಪ್ ಗೆದ್ದುಕೊಟ್ಟ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಲಿದ್ದಾರೆ. ಈ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ರಕ್ಷಣಾ ಇಲಾಖೆಗೆ ಗುರುವಾರ ಪತ್ರ ಬರೆದಿದ್ದಾರೆ. 2008ರಲ್ಲಿ ಕಪಿಲ್ ಗೆ ಪ್ರಾಂತೀಯ ಸೇನೆಯಲ್ಲಿ ಮತ್ತು 2010 ರಲ್ಲಿ ವಾಯುಪಡೆಯಲ್ಲಿ ಗೌರವ ಸ್ಥಾನ ಪಡೆದಿದ್ದಾರೆ.

ಅಳಿವಿನಂಚಿನಲ್ಲಿರುವ ಹುಲಿಗಳ ಉಳಿವಿಗಾಗಿ ಈಗಾಗಲೇ ಧೋನಿ ಜಾರ್ಖಂಡ್ ಮತ್ತು ಉತ್ತರಾಕಾಂಡ್ ನಲ್ಲಿ ರಾಯಭಾರಿಯಾಗಿದ್ದಾರೆ. ಈ ಮಧ್ಯೆ, ಬಿಹಾರ ಮತ್ತು ಜಾರ್ಖಂಡಿನಲ್ಲಿ ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಧೋನಿ ಅತ್ಯಧಿಕ ಆದಾಯ ತೆರಿಗೆ ಪಾವತಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಇಲಾಖೆ ಇನ್ನೂ ಹೆಚ್ಚಿಗೆ ಇದರ ಪ್ರಯೋಜನ ಪಡೆಯಲು ನಿರ್ಧರಿಸಿದ್ದು, ಧೋನಿ ಅವರನ್ನು ತೆರಿಗೆ ಪಾವತಿಗಾಗಿ ಇಲಾಖೆಯ ಪರವಾಗಿ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.

ಶಿವರಾಮ ಕಾರಂತರ ಕೋಟ ಮನೆ ಮೇಲೆ ಬುಲ್ಡೋಜರ್

 
K Shivaram Karanth
 
ಉಡುಪಿ ಜೂ 24: ’ಕಡಲ ತೀರದ ಭಾರ್ಗವ’ ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಸಾಹಿತಿ ಕೋಟ ಶಿವರಾಮ ಕಾರಂತರ ಕೋಟದಲ್ಲಿರುವ ಮೂಲ ಮನೆ ಬುಡಕ್ಕೆ ಸರ್ಕಾರ ಕೈ ಹಾಕಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಸದ್ಯದಲ್ಲೆ ಕಾರಂತರ ಮನೆ ನೆಲಸಮವಾಗಲಿದೆ.

ಕಾರಂತರ ಮನೆ ಸ್ಮಾರಕಕವಾಗಿ ಉಳಿಸಬೇಕೆಂದು ಸಾಹಿತಿಗಳು ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಶಿವರಾಮ ಕಾರಂತರ ಮನೆ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ.

ಈ ಗ್ರಾಮ ಪಂಚಾಯಿತಿ ಪ್ರತಿವರ್ಷ ಕಾರಂತರ ಸ್ಮರಣಾರ್ಥ ಕಾರಂತರ ಹುಟ್ಟೂರು ಪ್ರಶಸ್ತಿಯನ್ನು ಸಾಹಿತಿಗಳಿಗೆ, ಸಾಧಕರಿಗೆ ನೀಡುತ್ತಿದೆ. ಈಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಕಾರಂತರ ಮನೆ ಧರೆಗುರುಳಲಿದ್ದು, ಕಾಮಗಾರಿಯ ನೀಲನಕ್ಷೆ ಬದಲಾಯಿಸಿ ಕಾರಂತರ ಮನೆ ಹುಟ್ಟೂರು ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ಪ್ರೊ ಕೆ ಆರ್ ಹಂದೆಯ ಅಭಿಪ್ರಾಯಪಟ್ಟಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಏಳು ಮಂದಿ ಕನ್ನಡ ಸಾಹಿತಿಗಳಲ್ಲಿ ಶಿವರಾಮ ಇವರ ಮನೆ ‘ಸುಹಾಸ್’ ಈಗ ಕಾಲಗರ್ಭಕ್ಕೆ ಸೇರಲಿದೆ. ಕಾರಂತರ ಪುತ್ತೂರಿನ ಮನೆಯಾದ ‘ಹರ್ಷ’ ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ. ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯ