ಪುಟಗಳು

ಸಾರ್ವಜನಿಕ ಗಣೇಶ ಉತ್ಸವ : ಪೊಲೀಸರ ಕಟ್ಟಪ್ಪಣೆಗಳು


ಬೆಂಗಳೂರು, ಆ. 29 : ಸೆಪ್ಟೆಂಬರ್ 1ರಂದು ಗಣೇಶ ಚತುರ್ಥಿ. ಚತುರ್ಥಿ ಮುಗಿದ ನಂತರವೂ ನಗರದೆಲ್ಲೆಡೆ ತಮಗಿಷ್ಟವಾದ, ಅನುಕೂಲವಾದ ಸಮಯದಲ್ಲಿ ಸಾರ್ವಜನಿಕ ಗಣೇಶನನ್ನು ಗಲ್ಲಿಗಲ್ಲಿಗಳಲ್ಲಿ ಕೂಡಿಸುತ್ತಾರೆ. ಎಷ್ಟೇ ಹಬ್ಬದ ಆಚರಣೆ ಎಂದರೂ ಸಾರ್ವಜನಿಕರಿಗೆ ತೊಂದರೆ ಇದ್ದದ್ದೆ. ನಗರದಲ್ಲಿ ಶಾಂತಿ, ಸಂಯಮ, ಶಿಸ್ತು, ಕಾನೂನು ಪಾಲನೆಯ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಕೆಲ ನಿಮಯಗಳನ್ನು ವಿಧಿಸಿದ್ದಾರೆ. ನಿಯಮ ಪಾಲಿಸದಿದ್ದರೆ ಜೈಲು ಗ್ಯಾರಂಟಿ ಎಂಬ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ.

ನಿಯಮಾವಳಿಗಳು ಕೆಳಗಿನಂತಿವೆ

* ಗಣೇಶ ಹಬ್ಬದಂದು ಹಾದಿಬೀದಿಗಳಲ್ಲಿ ವಿಗ್ರಹ ಪ್ರತಿಷ್ಠಾಪಿಸುವಂತಿಲ್ಲ.
* ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವವರು ಸಮೀಪದ ಪೊಲೀಸ್ ಸ್ಟೇಶನ್, ಬಿಬಿಎಂಪಿ, ಬೆಸ್ಕಾಂ ಮತ್ತು ಅಗ್ನಿಶಾಮಕ ದಳದ ಕಚೇರಿಯಿಂದ NOC ಪಡೆಯತಕ್ಕದ್ದು.
* ಬೆಳಗ್ಗೆ ಆರರಿಂದ ರಾತ್ರಿ ಹತ್ತರವರೆಗೆ ಮಾತ್ರ ಧ್ವನಿವರ್ಧಕ (ಮೈಕ್) ಉಪಯೋಗಿಸುವುದು.
* ಕಾರ್ಯಕ್ರಮ, ವಿಸರ್ಜನೆ ಮೆರವಣಿಗೆ ಸಾಗುವ ದಾರಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡತಕ್ಕದ್ದು.
* ಗಣೇಶನ ವಿಸರ್ಜನೆ ರಾತ್ರಿ ಹತ್ತರ ವೇಳೆಗೆ ಮುಗಿಯತಕ್ಕದ್ದು.
* ಅಶ್ಲೀಲ ಹಾಡು ಮತ್ತು ನೃತ್ಯ ನಿಷಿದ್ದ.
* ಕಾರ್ಯಕ್ರಮ ಮತ್ತು ಮೆರವಣಿಗೆ ವೇಳೆ VIPಗಳು ಭಾಗವಹಿಸುತ್ತಿದ್ದರೆ ಮುಂಚಿತವಾಗಿ ಪೊಲೀಸರಿಗೆ ತಿಳಿಸುವುದು.
* ಜನಸಂಚಾರದ ಒತ್ತಡ ಹೆಚ್ಚಿರುವ ಪ್ರದೇಶದಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಇಲ್ಲ.
* ಮೆರವಣಿಗೆ ವೇಳೆ ಸ್ಥಳೀಯ ಪೊಲೀಸರು ಕಡ್ಡಾಯವಾಗಿ ಇರತಕ್ಕದ್ದು.
* ಪೊಲೀಸ್ ನೀಡುವ ಸೂಚನೆ ಮೀರಿದರೆ ಬಂಧನ.
* ಸ್ಥಾಪನೆ, ಕಾರ್ಯಕ್ರಮ ಆಯೋಜನೆಗೆ ಚಂದಾ ವಸೂಲಿ ಮಾಡುವಂತಿಲ್ಲ.
* ಸೂಕ್ಷ್ಮ ಪ್ರದೇಶದಲ್ಲಿ ಪಟಾಕಿ ಸಿಡಿಸುವಂತಿಲ್ಲ.
* ವಿದ್ಯಾರ್ಥಿ, ರೋಗಿಗಳು ಮತ್ತು ನಾಗರಿಕರಿಗೆ ತೊಂದರೆ ಆಗದಂತೆ ಧ್ವನಿವರ್ಧಕ ಬಳಸಬೇಕು.
* ಬಿಬಿಎಂಪಿ ಮತ್ತು ಪೊಲೀಸರು ಗುರುತಿಸಿದ ಪ್ರದೇಶದಲ್ಲೇ ವಿಸರ್ಜನೆ ಮಾಡತಕ್ಕದ್ದು.

ಮೇಲೆ ವಿಧಿಸಿದ ಎಲ್ಲಾ ನಿಯಮಗಳನ್ನು ಸಾರ್ವಜನಿಕರು ಮತ್ತು ಪ್ರಾಯೋಜಕರು ಅನುಸರಿಸಿ ಪೊಲೀಸ್ ಇಲಾಖೆಗೆ ಮತ್ತು ಬಿಬಿಎಂಪಿಗೆ ಸಹಕರಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ನಿವೇದನೆ ಮಾಡಿಕೊಂಡಿದ್ದಾರೆ.




ಸೆ.೧೨ ರಿಂದ ಲೋಕಾಯುಕ್ತರ ರಾಜ್ಯ ಪ್ರವಾಸ


ಈ ದಿನದ ಚಿನ್ನದ ಬೆಲೆ

ಅಣ್ಣಾ ಒಂದು ರುಪಾಯಿ ಕೊಡಣ್ಣಾ, ಊಟ ಮಾಡಿಲ್ಲ!


 
 
 
ಭಿಕ್ಷುಕಿ : ಅಣ್ಣಾ.. ಮೂರು ದಿನದಿಂದ ಊಟ ಮಾಡಿಲ್ಲ.. ಒಂದು ರೂಪಾಯಿ ಕೊಡಿ..
ಗುಂಡ : ಮೂರು ದಿನಂದಿಂದ ಊಟ ಮಾಡಿಲ್ಲಾಂತಿಯಾ .. ಒಂದು ರೂಪಾಯಿ ನಲ್ಲಿ ಏನು ಮಾಡ್ತೀಯ:
ಭಿಕ್ಷುಕಿ : ಎಷ್ಟು ಕೆಜಿ ಕಮ್ಮಿ ಆಗಿದ್ದೀನಿಂತಾ ನೋಡ್ತೀನಿ..

***
ತಿಮ್ಮ : ನಿನ್ನೆ ಬರಬೇಕಾದರೆ ನನ್ನ ಹೆಂಡ್ತಿ ಕಣ್ಣಿಗೆ ಸಣ್ಣ ಕಲ್ಲೊಂದು ಬಿತ್ತು.. ಅದನ್ನು ತೆಗೆಸೋಕೆ ನೂರು ರೂಪಾಯಿ ಖರ್ಚಾಯಿತು ಕಣೋ..
ಗುಂಡ : ನಿಂದೇ ಪರವಾಗಿಲ್ಲ ಬಿಡಪ್ಪ..
ತಿಮ್ಮ : ನಿಂಗೆ ಏನಾಯಿತು?
ಗುಂಡ : ನನ್ನ ಹೆಂಡ್ತಿ ಕಣ್ಣಿಗೆ ನಿನ್ನೆ ರೇಷ್ಮೆ ಸೀರೆ ಬಿತ್ತಪ್ಪಾ.. ಐದು ಸಾವಿರ ಖರ್ಚಾಯಿತು!

***
ಗುಂಡ : ನಮ್ಮ ದೂರದ ಉತ್ತರಪ್ರದೇಶ ರಾಜ್ಯದಲ್ಲಿ ಮಕ್ಕಳಿಗೆ ಸರ್ ನೇಮ್ ಯಾವ ರೀತಿ ಇಡುತ್ತಾರೆ ಗೊತ್ತಾ..
ತಿಮ್ಮ : ಗೊತ್ತಿಲ್ಲಾ, ಹೇಳು.
ಗುಂಡ : ಒಂದು ಮಕ್ಕಳಿದ್ದರೆ ಏಕನಾಥ್, 2 - ದುಬೆ, 3 - ತಿವಾರಿ, 4 - ಚತುರ್ವೇದಿ, 5 - ಪಾಂಡೆ, ಎಲ್ಲರದ್ದಾದರೆ - ಮಿಶ್ರಾ.. ಅನಾಥ ಮಕ್ಕಳಾದರೆ - ಗುಪ್ತಾ!

***
ವ್ಯಾಜ್ಯವೊಂದರಲ್ಲಿ ಗುಂಡ ಕಟಕಟೆಯಲ್ಲಿ ನಿಂತಿದ್ದ..
ವಕೀಲ : ನಾನು ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಗೀತೆಯನ್ನು ಮುಟ್ಟಿ ಪ್ರಮಾಣ ಮಾಡು..
ಗುಂಡ : ನಾನು ಯಾರನ್ನೂ ಮುಟ್ಟಲ್ಲ ಸ್ವಾಮಿ..
ವಕೀಲ : ಯಾಕೆ?
ಗುಂಡ : ಕಳೆದ ಬಾರಿ ಮಾರ್ನವಮಿ ಜಾತ್ರೆಯಲ್ಲಿ ಗೊತ್ತಿಲ್ಲದೇ ಲಕ್ಷ್ಮೀಯನ್ನು ಮುಟ್ಟಿ ಪಂಚಾಯತಿಯಲ್ಲಿ ಉಗಿಸಿಕೊಂಡಿದ್ದೆ.. ಇನ್ನು ಗೀತಾ ಮುಟ್ಟಿದರೆ ಅಷ್ಟೇ..

ಅಂಕಿತ ಪ್ರಕಾಶನ:ಹೊಸ ಪುಸ್ತಕಗಳ ಬಿಡುಗಡೆ.

ಏರ್ ಪೋರ್ಟಿನಲ್ಲಿ ಕಸ್ಟಮ್ಸ್ ಎದುರು ಬೆತ್ತಲಾದ ಪುಣ್ಯಾತಗಿತ್ತಿ!


ಲಂಡನ್, ಆಗಸ್ಟ್ 25: 'ನೋಡ್ಕೊಳ್ಳಿ! ಅದೇನ್ ಚೆಕ್ ಮಾಡ್ತೀರೋ ಮಾಡ್ಕೊಳ್ಳಿ' ಎಂದ ಆ ಪುಣ್ಯಾತಗಿತ್ತಿ ತಾನು ಉಟ್ಟಿದ್ದ ಅಷ್ಟೂ ಬಟ್ಟೆಗಳನ್ನು ಸರಸರನೇ ಕಿತ್ತು ಗುಡ್ಡೆ ಹಾಕಿದಳು. ಪಾಪ! ಬೆಟ್ಟ ಅಗೆದ ಕಸ್ಟಮ್ಸ್ 'ಪೋಲಿ'ಸರಿಗೆ ಇಲಿನೂ ಸಿಗಲಿಲ್ಲ ಎಂಬಂತಾಯಿತು.

ಏನಾಯಿತೆಂದರೆ 36 ವರ್ಷದ ಲೌಕಾಯ್ ಫಿಲಿಪ್ಸ್ ಎಂಬ ಮಹಿಳೆಯನ್ನು ಬರ್ಮುಡಾ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಾಮೂಲಿ ಲಗೇಜ್ ತಪಾಸಣೆಗಾಗಿ ಎಂದು ತಡೆದಿದ್ದಾರೆ. ಆ ಮಹಿಳೆಯೋ ಪಾಪ ಅಧಿಕಾರಿಗಳಿಗೆ ಹೆಚ್ಚು ತ್ರಾಸ ಕೊಡುವುದು ಬೇಡವೆಂದು ಮತ್ತು ತಪಾಸಣೆ 'ಪಾರದರ್ಶನಕ'ವಾಗಿ ಇರಲಿ ಎಂದು ಹಾಗೆ ಮಾಡಿದಳೋ ಅಂತೂ ಸಂಪೂರ್ಣವಾಗಿ ವಿವಸ್ತ್ರಳಾದಳು. ಅಧಿಕಾರಿಗಳೋ ಮೂಗಿನ ಬೆರಳಿಟ್ಟುಕೊಳ್ಳುವುದರ ಬದಲು ಕಣ್ಣಿಗೆ ಕೈ ಅಡ್ಡವಿಟ್ಟುಕೊಂಡು ಮುಜುಗರಕ್ಕೊಳಗಾದರು.

'ನನ್ನನ್ನು ಸಂಪೂರ್ಣವಾಗಿ ಚೆಕ್ ಮಾಡಬೇಕಾ? ಮಾಡ್ಕೊಳ್ಳಿ. ಅದೇನು ... ಮಾಡ್ತೀರೋ ಮಾಡಿ' ಎಂದೂ ಉಲಿದಿದ್ದಾಳೆ. ಜನದಟ್ಟಣೆಯ ವಿಮಾನ ನಿಲ್ದಾಣದ ನಟ್ಟ ನಡುವೆ ಈ 'ಫ್ರೀ ಷೋ' ನಡೆದಿದೆ. ಅಧಿಕಾರಿಗಳು, ಮಕ್ಕಳುಮರಿ ಎನ್ನದೆ ಎಲ್ಲ ಪ್ರಯಾಣಿಕರು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ ಎಂದು 'ಡೈಲಿ ಮಿರರ್' ವರದಿ ಮಾಡಿದೆ.

ಫಿಲಿಪ್ಸ್ ಮೂಲತಃ ಬರ್ಮುಡಾ ದ್ವೀಪದವಳೇ. ಆದರೆ ಲಂಡನ್ನಿನಲ್ಲಿ ನೆಲೆಸಿದ್ದಾಳೆ. ಹಣಕಾಸು ವ್ಯವಹಾರವನ್ನು ಇತ್ಯರ್ಥಪಡಿಸಿಕೊಳ್ಳಲು ಈ ಮಹಿಳೆ ಮೊನ್ನೆ ಶನಿವಾರ (ಆಗಸ್ಟ್ 20) ಬರ್ಮುಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಳು.

ನಾನು ಅನೇಕ ಬಾರಿ ವಿಮಾನಗಳಲ್ಲಿ ಸಂಚರಿಸಿದ್ದೇನೆ. ಇಲ್ಲಿ ಕಸ್ಟಮ್ಸ್ ನವರು ವಿಚಿತ್ರವಾಗಿ ತಪಾಸಣೆ ಮಾಡುತ್ತಾರೆ. ನನಗೂ ರೋಸಿಹೋಗಿತ್ತು. ಅದಕ್ಕೆ ಒಮ್ಮೆ ನನ್ನ ರುಚಿ 'ತೋರಿಸಿದೆ' ಎಂದು ಫಿಲಿಪ್ಸ್ ನ್ಯಾಯಾಲಯದಲ್ಲಿ ಪುಣ್ಯಾತಗಿತ್ತಿ ಅವಲತ್ತುಕೊಂಡಿದ್ದಾಳೆ. ಆದರೆ ಜನ್ಮದಲ್ಲಿ ಇನ್ನೆಂದಿಗೂ ಹೀಗೆ ವಿವಸ್ತ್ರವಾಗುವ ಆಲೋಚನೆ ಮಾಡೊಲ್ಲ' ಎಂದೂ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾಳೆ

UID 'Aadhaar' Enrolment Application Form


ಬಂಗಾರ ಖರೀದಿ ಸಮೂಹ ಸನ್ನಿ

ರಾಜ್ಯದ ಬೆಳಕು ಯೋಜನೆ ಕತ್ತಲೆಯನ್ನು ಹರಡೀತೆ?

ಅಣ್ಣಾಗಿರಿ ದಾದಾಗಿರಿ

ಮಾಹಿತಿ ಹಕ್ಕು ಆಯೋಗದ ವಿತಂಡ ವಾದ

೩೩೨ ಶಾಲೆಗೆ ಲ್ಯಾಪ್ ಟಾಪ್

ಭೂ-ನಕಾರಾತ್ಮಕ ಶಕ್ತಿ

ಕಸಾಪ ಚುನಾವಣೆ

ತುಳಸಿ ದಾಸರಾಗಿ

ರಾಜ್ಯದ ವಿಶಿಷ್ಟ ತರಕಾರಿ ಸಾವಯವ ಗ್ರಾಮ

ಅಣ್ಣಾ ಹಜಾರೆ

ಧೂಮಪಾನ ಅನೇಕ ಖಾಯಿಲೆಗಳಿಗೆ ರಹದಾರಿ


ಊಟ ತಿಂಡಿ ಬಿಟ್ಟರೆ ಬೊಜ್ಜು ಕರಗದು

ಹೆರಿಗೆ ನಂತರ ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ

ಪ್ರಕಟಣೆ

ಚಳುವಳಿಗೆ ಅಣ್ಣಾ ಪ್ರವೇಶ ಆಕಸ್ಮಿಕ

ಅರಿವು ಮರೆವು

ಅಸಮಾನತೆ ಏಕೆ ಹೆಚ್ಚುತ್ತದೆ

ತಲೆ ಕೆಟ್ಟವರ ಹೊಸ ವಾದ


ಸ್ತಿತ ಪ್ರಜ್ಞ ಆರ್ಥಿಕ ತಜ್ಞ ಮತ್ತು ಸ್ಥಿತಿ ಇಲ್ಲದ ಪ್ರಧಾನಿ

ಪಡಿತರ -ಗ್ಯಾಸ್ ಸಂಪರ್ಕ ದಾಖಲಾತಿ ಸಲ್ಲಿಕೆ ಆ. 20ರವರೆಗೆ

ಬೆಂಗಳೂರು, ಆಗಸ್ಟ್ 16: ನಕಲಿ ಪಡಿತರ ಚೀಟಿ ಮತ್ತು ನಕಲಿ ಅಡುಗೆ ಅನಿಲ ಸಂಪರ್ಕಗಳನ್ನು ಪತ್ತೆ ಮಾಡುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡಿರುವ ಎಲ್‌ಪಿಜಿ ಮತ್ತು ವಿದ್ಯುತ್ ಸಂಪರ್ಕ ಸಂಖ್ಯೆ ಪರಶೀಲನೆಗಾಗಿ ನಾಗರಿಕರು ಸರಿಯಾದ ದಾಖಲಾತಿಗಳನ್ನು ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು (ಆಗಸ್ಟ್ 15) ಈ ತಿಂಗಳ 20ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ದಾಖಲಾತಿಗಳನ್ನು ಸಲ್ಲಿಸುವಾಗ ವೆಬ್‌ಸೈಟ್ ಮೇಲೆ ಅಧಿಕ ಒತ್ತಡ ಬಿದ್ದಿರುವುದು ಮತ್ತಿತರ ಕಾರಣಗಳಿಂದಾಗಿ ಅನೇಕ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಲಾವಧಿ ವಿಸ್ತರಣೆ ಮಾಡಲಾಗಿದೆ.

ಆಹಾರ ಇಲಾಖೆಯ ಐದು ವಲಯ ಕಚೇರಿಗಳ ವಿಳಾಸ-ದೂರವಾಣಿ ಸಂಖ್ಯೆ:
ಬೆಂಗಳೂರು ಕೇಂದ್ರ ವಲಯ: ಮೋಹನ್ ಮ್ಯಾನ್ಷನ್ ಕಟ್ಟಡ, ಕಸ್ತೂರಾಬಾ ರಸ್ತೆ. ದೂರವಾಣಿ: 2221 4431
ಪಶ್ಚಿಮ ವಲಯ: ಸಹಕಾರಿ ಭವನ, ಭಾಷ್ಯಂ ವೃತ್ತದ ಬಳಿ, ರಾಜಾಜಿನಗರ. ದೂ: 2315 3259
ಉತ್ತರ ವಲಯ: 11ನೇ ಸಿ ಕ್ರಾಸ್, ವೈಯಾಲಿಕಾವಲ್. ದೂ: 2344 5702
ದಕ್ಷಿಣ ವಲಯ: 3ನೇ ಮುಖ್ಯ ರಸ್ತೆ, ಚಾಮರಾಜಪೇಟೆ. ದೂ: 2661 3531
ಪೂರ್ವ ವಲಯ: ಪಾಲಿಕೆ ಕಟ್ಟಡ, ಸೆಂಟ್ ಜಾನ್ ರಸ್ತೆ. ದೂ: 2536 0750

ದಾಖಲಾತಿ ಸಲ್ಲಿಸದೇ ಇರುವುದು, ದಾಖಲಾತಿ ಸಲ್ಲಿಸಿದ್ದರೂ ತಪ್ಪಾಗಿ ನಮೂದಾಗಿರುವುದು ಮತ್ತಿತರ ಕಾರಣಗಳಿಂದ ಅಮಾನತಿನ ಸ್ಥಿತಿಯಲ್ಲಿರುವ ಪಡಿತರ ಚೀಟಿದಾರರು ಮತ್ತು ಎಲ್‌ಪಿಜಿ ಗ್ರಾಹಕರು ಖುದ್ದಾಗಿ ಅಥವಾ ಆನ್‌ಲೈನ್ (http://ahara.kar.nic.in/) ಮೂಲಕ ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ನಗರದಲ್ಲಿರುವ ಆಹಾರ ಇಲಾಖೆಯ ಐದು ವಲಯ ಕಚೇರಿಗಳಲ್ಲಿ ಪಡಿತರ ಚೀಟಿ ಸಂಖ್ಯೆ ಅಥವಾ ಅನಿಲ ಸಂಪರ್ಕದ ಸಂಖ್ಯೆ ಜತೆ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಇರುವ ವಿದ್ಯುತ್ ಬಿಲ್ ರಸೀದಿ ಸಲ್ಲಿಸಬೇಕು

ಆಧಾರ್ ಕಾರ್ಡಿಗಾಗಿ mad rush ಬೇಡ!

 
ಬೆಂಗಳೂರು, ಆಗಸ್ಟ್ 14 : ದೇಶ ವಾಸಿಗಳನ್ನೆಲ್ಲ ಏಕರೂಪದಲ್ಲಿ ಗುರುತಿಸುವ ಸಲುವಾಗಿ ಕೇಂದ್ರ ಸರಕಾರ ಕೊಡಮಾಡುತ್ತಿರುವ ಆಧಾರ್ ವಿಶಿಷ್ಟ ಗುರುತಿನ ಚೀಟಿಗಾಗಿ ಜನ ಎದ್ನೋ ಬಿದ್ನೋ ಎಂದು ಐಡಿ ಕಾರ್ಡ್ ವಿತರಿಸುವ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ ಇವತ್ತೇ ಇದನ್ನು ತೆಗೆದುಕೊಂಡರೆ ನಾಳೆನೇ ಅಷ್ಟೈಶ್ವರ್ಯ ಕುಲಾಯಿಸುತ್ತದೆ ಎಂದೇನೂ ಇಲ್ಲ.

ಸೋ, ಮ್ಯಾಡ್ ರಶ್ ಬೇಡ. ಸುಮ್ಮನೆ ಯುಐಡಿ ಕಾರ್ಡ್ ವಿತರಣೆ ಕೇಂದ್ರಗಳಿಗೆ ಹೋಗಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳಬೇಡಿ. ಏಕೆಂದರೆ ಈಗಿನ ರಷ್ ನೋಡಿದರೆ ಈ ಕಾರ್ಡ್ ಪಡೆಯುವುದು ಆಲ್ ಮೋಸ್ಟ್ ಒಂದು ದಿನದ ಪ್ರೋಗ್ರಾಂ ಆಗುತ್ತದೆ. ಆದ್ದರಿಂದ ಪುರುಸೊತ್ತಿದ್ದರೆ ಮಾತ್ರ ಅತ್ತ ಹೆಜ್ಜೆ ಹಾಕಿ. ಅಷ್ಟಕ್ಕೂ ಇವತ್ತಲ್ಲದಿದ್ದರೆ ನಾಳೆ ಪಡೆದರಾಯಿತು.

ಏಕೆಂದರೆ ಇದು ಕೇವಲ ಒಂದೆರಡು ವಾರದ ಯೋಜನೆ ಅಲ್ಲ. ಆದ್ದರಿಂದ ಇಂದೇ ಪಡೆಯೋಣ ಎಂಬ ಧಾವಂತ ಖಂಡಿತಾ ಬೇಡ. ಆಧಾರ್ ಕಾರ್ಡು ಪಡೆಯುವುದು ಒಳ್ಳೆಯದೇ. ಅದು ಕಡ್ಡಾಯವೂ ಆಗಲಿದೆ. ಆದರೆ ತಿಂಗಳು ಬಿಟ್ಟು ಪಡೆದರಾಯಿತು. urgent ಆಗಿರುವವರು ಹೋಗಿ ಕಾರ್ಡ್ ಪಡೆಯಲಿ. ನೀವು ನಿಧಾನಕ್ಕೆ ಹೋದರಾಯಿತು. ಏನಂತೀರಿ!?

ಅನಂತ ಪ್ರಶ್ನೆ: ಧರ್ಮ ಸಂಕಟದಲ್ಲಿ ಸುಪ್ರೀಂಕೋರ್ಟ್

padmanabha-wealth-ashtamangala-supreme-court
ತಿರುವನಂತಪುರ, ಆಗಸ್ಟ್ 14: ಅನಂತ ಸಂಪತ್ತು ಪ್ರಶ್ನೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿದೆ. ದೇಗುಲದ ನೆಲಮಾಳಿಗೆಯಲ್ಲಿನ ಅನಂತ ಸಂಪತ್ತಿನ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ತೀರ್ಪನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳುವುದೇ? ಎಂಬ ಪ್ರಶ್ನೆ ಕಾಡುತ್ತಿದೆ. ಅಷ್ಟಮಂಗಲ ಪ್ರಶ್ನೆ ಪ್ರಕಾರ ಸಂಪತ್ತು ಶೋಧದಿಂದ ದೇವರು ಮುನಿದಿದ್ದಾರೆ ಹಾಗೂ ಬಿ ಉಗ್ರಾಣನ್ನು ತೆರೆದರೆ ಭಾರೀ ಅವಘಡಗಳು ಸಂಭವಿಸಲಿವೆ.

ಆದರೆ ಈ ಎಚ್ಚರಿಕೆಯನ್ನು ನ್ಯಾಯಾಲಯ ಪರಿಗಣಿಸೀತೆ? ಪರಿಗಣಿಸಿದರೆ ನ್ಯಾಯಾಂಗಕ್ಕಿಂತ ಅಷ್ಟಮಂಗಲ ಪ್ರಶ್ನೆಯೇ ಮಿಗಿಲು ಎಂದಾಗುತ್ತದೆ. ಪರಿಗಣಿಸದೆ ಬಿ ಉಗ್ರಾಣವನ್ನು ತೆರೆಯಲು ಮುಂದಾದರೆ ದೇವರನ್ನು ಧಿಕ್ಕರಿಸಿ ಹೋದಂತಾಗುತ್ತದೆ. ಸೋ, ಹೇಗೆ ನೋಡಿದರೂ ನ್ಯಾಯಾಂಗದ ಪಾಲಿಗೆ ಇದು ಧರ್ಮ ಸಂಕಟದ ವಿಚಾರವಾಗಿ ಪರಿಣಮಿಸಲಿದೆ.

ಮೂರು ದಿನಗಳ ಕಾಲ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ನೆಲಮಾಳಿಗೆಯಲ್ಲಿರುವ ಸಂಪತ್ತು ಶೋಧಿಸಿರುವುದರಿಂದ ಅನಂತ ಪದ್ಮನಾಭ ಮುನಿದಿದ್ದಾನೆ. ಅಂತೆಯೇ ಅತ್ಯಂತ ಮುಖ್ಯವಾಗಿರುವ ಬಿ ಉಗ್ರಾಣವನ್ನು ತೆರೆದರೆ ಅದನ್ನು ತೆರೆದವರ ವಂಶ ನಾಶವಾಗುತ್ತದೆ ಹಾಗೂ ಇನ್ನಿತರ ಅವಘಡಗಳು ಸಂಭವಿಸುತ್ತವೆ. ಸಂಪತ್ತಿನ ಫೊಟೊ ತೆಗೆಯುವುದು ಮತ್ತು ವಿಡಿಯೋ ಶೂಟಿಂಗ್‌ ಮಾಡುವುದು ಕೂಡ ದೇವ ಸಮ್ಮತವಲ್ಲ ಎಂದು ಕಂಡು ಬಂದಿದೆ.

ಬಿ ಉಗ್ರಾಣದಲ್ಲಿ ಅನಂತ ಪದ್ಮನಾಭನ ಇನ್ನೊಂದು ಬೃಹತ್‌ ವಿಗ್ರಹವಿದೆ. ಅನಾದಿ ಕಾಲದಿಂದ ಈ ವಿಗ್ರಹವನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಸಾಕ್ಷಾತ್‌ ನರಸಿಂಹಸ್ವಾಮಿಯೇ ಈ ಉಗ್ರಾಣವನ್ನು ಕಾವಲು ಕಾಯುತ್ತಿದ್ದಾನೆ. ಅಲ್ಲದೆ ಭಯಂಕರ ಸರ್ಪಗಳ ಕಾವಲು ಈ ಉಗ್ರಾಣಕ್ಕಿದೆ. ದೇಗುಲದ ಚೈತನ್ಯವಿರುವುದು ಕೂಡ ಈ ಉಗ್ರಾಣದಲ್ಲಿ. ಜತೆಗೆ ಈಗ ಸಿಕ್ಕಿರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚು ಸಂಪತ್ತು ಬಿ ಉಗ್ರಾಣದಲ್ಲಿದೆ. ಆದರೆ ಇದನ್ನು ಯಾವ ಕಾರಣಕ್ಕೂ ತೆರೆದು ನೋಡಬಾರದು. ಹಾಗೇನಾದರೂ ತೆರೆದರೆ ನಾನಾ ರೀತಿಯ ಕೆಡುಕುಗಳು ತಲೆದೋರಲಿವೆ ಹಾಗೂ ಕ್ಷೇತ್ರಕ್ಕೂ ಧಕ್ಕೆಯಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಟ್ಟಿರುವ ದೈವಜ್ಞರು ಎಚ್ಚರಿಸಿದ್ದಾರೆ.

ರಕ್ಷಾ ಬಂಧನ: ಇದು ಮಧುರವಾದ ಭಾವಾನುಬಂಧ

Raksha bandhan
ಇದು ಅಣ್ಣ, ತಂಗಿಯರ ನವಿರಾದ ಭಾವನೆಗಳನ್ನು ರಕ್ಷಾ ಬಂಧನದ ಮೂಲಕ ಗಟ್ಟಿಗೊಳಿಸುವ ದಿನ. ಅಣ್ಣ-ತಂಗಿಯರಿಗೆ ಈ ದಿನ ಸಂಭ್ರಮವೋ ಸಂಭ್ರಮ. ಬಾಂಧವ್ಯದ ಸಂಕೇತದ ಈ ದಿನವನ್ನ ಇಡೀ ಭಾರತದಾದ್ಯಂತ ಆಚರಿಸಲಾಗುತ್ತದೆ.

ತನ್ನ ಸೋದರನ ಅಭಿವೃದ್ಧಿಗೆ, ನೆಮ್ಮದಿಗೆ ಹಾರೈಸುವ ಅಕ್ಕ ತಂಗಿಯರು ತಮ್ಮ ಅಣ್ಣತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ವಿನಿಯಮ ಮಾಡಿಕೊಂಡು ಉಡುಗೊರೆ ಪಡೆದು ಸಂತಸ ಪಡುವ ರಕ್ಷಾ ಬಂಧನ ಹಬ್ಬ ಬರುವುದು ಶ್ರಾವಣ ಹುಣ್ಣಿಮೆಯಂದು. ರಾಖಿ ಹಬ್ಬ, ನೂಲು ಹುಣ್ಣಿಮೆ ಎಂದು ಕರೆಸಿಕೊಳ್ಳುವ ಈ ಹಬ್ಬಕ್ಕೆ ಭಾವನೆಯೇ ಬೆಂಬಲ.

ಇದು ತಂಗಿಯೆಡೆಗಿನ ವಿಶೇಷ ಕಾಳಜಿ, ಪ್ರೀತಿಯನ್ನು ಪ್ರತಿನಿಧಿಸುವ ಹಬ್ಬ. ಆದ್ದರಿಂದ ಈ ಆಚರಣೆಯನ್ನು ಇನ್ನೂ ಉಳಿಸಿಕೊಂಡು ಬರಲಾಗಿದೆ. ನಾಗರ ಪಂಚಮಿಯಂದೂ ಅಣ್ಣ ತಂಗಿಯರು ಸಿಹಿ ವಿನಿಮಯ ಮಾಡಿಕೊಳ್ಳುವ ರೂಢಿಯಿದ್ದು, ಇದು ರಕ್ಷಾಬಂಧನಕ್ಕೆ ಮುನ್ನುಡಿ ಬರೆದಂತೆ. ಇದೇ ದಿನ ಬ್ರಾಹ್ಮಣರು ಇದನ್ನು ಋಗ್ವೇದ ಉಪಕರ್ಮವೆಂದು ಜನಿವಾರವನ್ನು ಬದಲಿಸಿ ಹೊಸ ಜನಿವಾರವನ್ನು ಹಾಕಿಕೊಂಡು ನಡೆಸಿಕೊಂಡು ಬರುವುದು ಇಂದಿಗೂ ಇದೆ.

ಎಸ್ ಎಲ್ ಭೈರಪ್ಪ ಅವರ ಆವರಣ ಹಿಂದಿಗೆ ಅನುವಾದ

SL Bhyrappa
ಕನ್ನಡದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿದ್ದ ಎಸ್. ಎಲ್. ಭೈರಪ್ಪನವರ ‘ಆವರಣ’ ಹಿಂದಿ ಜಗತ್ತನ್ನೂ ಪ್ರವೇಶಿಸಿದೆ. ಈ ಹಿಂದೆಯೇ ತಮಿಳು, ಮರಾಠಿ, ಸಂಸ್ಕೃತ ಭಾಷೆಗೆ ಆವರಣ ಹೋದ ಸುದ್ದಿ ಇತ್ತು.

ಮುಸ್ಲಿಂ ನವಾಬರ 'ಜನಾನ'ದ ವರೆಗೆ ಕಥೆ ಪ್ರವೇಶಿಸಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಬುದ್ಧಿಜೀವಿಗಳ ಹರಕು-ಹುಳುಕನ್ನು ಕಾದಂಬರಿ ಹರಾಜು ಹಾಕಿ ವಿವಾದಕ್ಕೆ ಕಾರಣವಾಗಿತ್ತು. ಒಂದೇ ವರ್ಷದಲ್ಲಿ 20ಕ್ಕೂ ಹೆಚ್ಚು ಮುದ್ರಣಗಳಿಗೂ ಹೋಗಿತ್ತು.

ಮೂಲಕಥೆ ಉತ್ತರ ಭಾರತದ ಹಿಂದಿ ಜಗತ್ತಿನದೇ. ಇದೀಗ ಕಾದಂಬರಿ ಹಿಂದಿ ಜಗತ್ತನ್ನು ಪ್ರವೇಶಿಸಿದೆ. ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿರುವ ಡಾ. ಪ್ರಧಾನ ಗುರುದತ್ ಹಿಂದಿಗೆ ಅನುವಾದಿಸಿದ್ದಾರೆ.

ಇಂಡಿಯಾ ಟುಡೇ ಹಿಂದಿ ಅವತರಣಿಕೆಯ ಈ ವಾರದ ಸಂಚಿಕೆ ಅರ್ಧ ಪುಟದ ವಿಮರ್ಶೆ ಪ್ರಕಟಿಸಿದೆ. ವಿಮರ್ಶಕ ಶಶಿಭೂಷಣ ದ್ವಿವೇದಿಗೆ ಪ್ರಧಾನರ ಅನುವಾದ ಸಮಾಧಾನ ತಂದಿಲ್ಲವಂತೆ.

ಇದೇ ಅಗಸ್ಟ್ 16ರಂದು ಕೇರಳದ ಕೊಚ್ಚಿನ್ ನಲ್ಲಿ ಆವರಣದ ಸಂಸ್ಕೃತ ಆವೃತ್ತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ‘ಅತ್ಯುತ್ತಮ ಅನುವಾದ’ ಪುರಸ್ಕಾರ ಸಿಗಲಿದೆ ಎಂದು ಗೊತ್ತಾಗಿದೆ.

ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ಅಷ್ಟಲಕ್ಷ್ಮೀ ಸ್ತೋತ್ರ


ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ

ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಹೂವು ಹಣ್ಣು, ತರಕಾರಿ ರೇಟುಗಳು ಗಗನಕ್ಕೇರಿದ್ದರೂ ಶ್ರಾವಣದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಬಿಡುವಂತೆಯೇ ಇಲ್ಲ.

ಹಣ್ಣು, ಹೂವು, ತರಕಾರಿಗಳ ಮೇಲೆ ಹಣ ಸುರಿದು ಜೇಬು ಖಾಲಿಯಾಗಿದ್ದರೂ 'ಭಾಗ್ಯದ ಲಕ್ಷ್ಮಿ ಬಾರಮ್ಮ..' ಎಂದು ಮಹಾಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಡಗರ. ಮನೆಮನೆಗಳಲ್ಲಿ ಸಂಭ್ರಮದ ವಾತಾವರಣ. ಕೆಲಸಕ್ಕೆ ಹೋಗುವ ಹೆಂಗಸಾದರೂ ಸಾಧ್ಯವಾದಷ್ಟು ಬೇಗ ಎದ್ದು ಪೂಜೆ ಮುಗಿಸಿ ಗಡಿಬಿಡಿಯಿಂದ ಬಗೆಬಗೆಯ ತಿನಿಸುಗಳನ್ನು ಮಾಡಿ, ಇನ್ನರ್ಧ ಗಂಟೆ ಲೇಟಾಗಿ ಬರುತ್ತೇನೆಂದು ಬಾಸ್‌ಗೆ ಫೋನಾಯಿಸಿ, ಮನೆಮಂದಿಗೆ ಮೃಷ್ಟಾನ್ನ ಬಡಿಸುವ ಸಡಗರ. 'ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ' ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ 'ಆರತಿ ಬೆಳಗಿರೆ ನಾರಿಯರು..' ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಕೈತುಂಬಾ ಕೆಲಸ.

ಈ ಬಾರಿಯಾದರೂ ಇನ್ಕ್ರಿಮೆಂಟು ಸಿಗಲಪ್ಪಾ ಅಂತ ಒಬ್ಬ, ಫಾರಿನ್‌ಗೆ ಹೋಗುವ ಹಾಗೆ ಹರಸಮ್ಮ ತಾಯಿ ಅಂತ ಮತ್ತೊಬ್ಬಾಕೆ. ವೀಸಾ ಸಿಗಲಪ್ಪಾ ದೇವರೇ ಅಂತ ಬೇಡಿಕೊಳ್ಳುವವಳು ಇನ್ನೊಬ್ಬಾಕೆ. ಅಂಗಡಿ ಮುಂಗಟ್ಟುಗಳಲ್ಲಿ ನಾನಾ ಬಗೆಯ ಆಫರುಗಳ ಆಸೆಯನ್ನು ತೋರಿಸಿ ಲಾಭ ಮಾಡಿಕೊಳ್ಳುವ ಸ್ಟಂಟುಗಳು. ತಾಯಿ ಲಕ್ಷ್ಮಿ ಒಲಿಯಬೇಕೆಂದು ಯಾರಿಗೆ ಹಂಬಲವಿರುವುದಿಲ್ಲ ಹೇಳಿ? ವರಮಹಾಲಕ್ಷ್ಮಿ ಹಬ್ಬದಂದು ಅಕ್ಕ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರ್ತಾರಾ?

ಪೂಜಾ ವಿಧಾನ : ಅಂದಿನ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು, ಮನೆಯ ಮುಂದಿನ ಬಾಗಿಲಿಗೆ ಥಳಿ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣ ಕಟ್ಟಿದಾಗ ಮನೆಗೆ ಒಂದು ಬಗೆಯ ಕಳೆ. ಹೆಣ್ಣುಮಕ್ಕಳು ಅಭ್ಯಂಜನ ಮುಗಿಸಿಕೊಂಡು ರೇಷಿಮೆ ಬಟ್ಟೆ ಧರಿಸಿಕೊಂಡು ಸರಬರ ಓಡಾಡುತ್ತಾ ಪೂಜಾ ಸಾಮಗ್ರಿಗಳನ್ನೆಲ್ಲಾ ತಯಾರು ಮಾಡಿಕೊಂಡು ಪೂಜೆಗೆ ಸಿದ್ಧರಾಗುತ್ತಾರೆ.

ಆಭರಣಗಳಿಂದ ಭೂಷಿತೆಯಾದ ಲಕ್ಷ್ಮಿದೇವಿಯ ಮುಖವಾಡವನ್ನು ಒಂದು ಕಲಶದಲ್ಲಿರಿಸಿ ಅದಕ್ಕೆ ಚೆಂದವಾದ ಜರತಾರಿಯ ಅಂಚು ಸೆರಗು ಇರುವ ಸೀರೆಯನ್ನು ಉಡಿಸಲಾಗುತ್ತದೆ. ಹೀಗೆ ಅಲಂಕೃತಳಾದ ಶ್ರೀವಲ್ಲಭೆ ಬಾಳೆಯ ದಿಂಡಿನಿಂದ ಶೋಭಿತವಾದ ಒಂದು ಮಂಟಪದಲ್ಲಿ ಸ್ಥಾಪಿತಳಾಗುತ್ತಾಳೆ. ಆ ಮಂಟಪದ ಮೇಲ್ಭಾಗಕ್ಕೆ ಕಟ್ಟಿದ ಮಾವಿನ ತೋರಣ ಅದರ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೀಗೆ ಸ್ಥಾಪಿತವಾದ ಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಗೆ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಏರಿಸಿ ಪೂಜೆ ಮಾಡಲಾಗುತ್ತದೆ. ಸುಮಧುರ ಸುವಾಸನೆಯುಳ್ಳ ಸೇವಂತಿಗೆ, ಮಲ್ಲಿಗೆ, ಸಂಪಿಗೆ ಹೂವುಗಳಿಂದ ತಾಯಿ ಅಲಂಕೃತಳಾಗುತ್ತಾಳೆ. ಭಾಗ್ಯದ ಲಕ್ಷ್ಮಿ ಬಾರಮ್ಮ... ಎಂದು ಹಾಡುತ್ತ ಅತ್ಯಂತ ಹರ್ಷದಿಂದ, ಭಕ್ತಿಭಾವದಿಂದ ತಮ್ಮ ತಮ್ಮ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿ ಹರಿಸಲಿ ಎಂದು ಆಕೆಯನ್ನು ಬರಮಾಡಿಕೊಳ್ಳುತ್ತಾರೆ.

ನೈವೇದ್ಯಕ್ಕಾಗಿ ವಿಧವಿಧವಾದ ಸಿಹಿತಿನಿಸುಗಳನ್ನು ಮಾಡಿ ಆಕೆಗೆ ಮೀಸಲಿಡಲಾಗುತ್ತದೆ. ಅದರಲ್ಲೂ ಪುಟಾಣಿ ಸಕ್ಕರೆಯೆಂದರೆ ಸರ್ವಾಲಂಕಾರಭೂಷಿತೆಗೆ ಬಹಳ ಪ್ರಿಯ. ಹೀಗೆ ಬಗೆಬಗೆಯ ಹಣ್ಣು, ಕಾಯಿ, ಸಿಹಿತಿನಿಸು, ಹಾಲುಸಕ್ಕರೆಗಳನ್ನು ಆಕೆಗೆ ಸಮರ್ಪಿಸಲಾಗುತ್ತದೆ. ಈ ದಿನ ಮುತ್ತೈದೆಯರನ್ನು ಮನೆಗೆ ಆಮಂತ್ರಿಸಿ ಅವರಿಗೆ ಅರಿಶಿನ ಕುಂಕುಮದ ಜೊತೆಗೆ ಮರದ ಬಾಗಣವನ್ನು ಕೊಡಲಾಗುತ್ತದೆ.

ನಂತರ ಕೊನಗೆ, ತಮ್ಮ ಸಂಕಷ್ಟಗಳನ್ನು ದೂರಮಾಡಿ ಸುಖ ಶಾಂತಿ ಶಾಶ್ವತವಾಗಿ ನೆಲೆಸಲಿ, ಸಮೃದ್ಧಿಯನ್ನು ದಯಪಾಲಿಸಲಿ ಎಂದು ಹೆಂಗಳೆಯರು ಆರತಿ ಬೆಳಗುತ್ತ..

ಆರತಿ ಬೆಳಗಿರೆ ನಾರಿಯರು ಬೇಗ ಆದಿ
ಕೊಲ್ಹಾಪುರದ ಮಹಾಲಕ್ಷ್ಮಿಗೆ
ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ...

ಎಂದು ಹಾಡುತ್ತಾರೆ.

ಆನಂದತೀರ್ಥ ವರದೇ ದಾನ ವಾರಣ್ಯ ಪಾವಕೆ
ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇಸ್ತು ಮೇಮನಃ
ಶ್ರೀ ವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭೀಷ್ಟದಂ
ಚತುರ್ಮುಖೇರ ತನಯಂ ಶ್ರೀನಿವಾಸಂ ಭಜೇ ನಿಶಂ

ಈ ಮಂತ್ರವನ್ನು ಪಠಿಸಿದರೆ ಶ್ರೀವರಮಹಾಲಕ್ಷ್ಮಿ ಎಲ್ಲರಿಗೆ ಅನುಗ್ರಹ ಮಾಡುತ್ತಾಳೆ ಎಂಬ ನಂಬಿಕೆ.

ಜೋಕಿನಂಗಳ

ವನಜಮ್ಮ:ಏನು ಅನ್ಯಾಯ ಇದೂ ಸರಸ್ವತಮ್ಮಾ ಮಲ್ಲೇಶ್ವರಮ್ ನಲ್ಲಿ ಇವತ್ತು 17ಸಲ ಕರಂಟ್ ಹೋಯ್ತಂತೆ
ಸರಸ್ವತಮ್ಮ: ಯಾಕ್ರಿ ಅನ್ಯಾಯ ವನಜಮ್ಮ 16ಸಲ ವಾಪಸ್ ಬಂತಲ್ಲ,ಅದು ನ್ಯಾಯ ತಾನೆ?


ತಿಮ್ಮ:ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ, ಕಡಿಮೆ ಅಂದ್ರೆ ಐದು ಸಾವಿನ ನುಂಗಿದ್ದಾನೆ
ಗುಂಡ:ನಿಂಗೆ ಹೇಗೆ ಗೊತ್ತಾಯ್ತು?
ತಿಮ್ಮ:ಆ ಭೂಪಾ ರೋಡ್ ರೋಲರ್ ಪಂಚರ್ ಗೆ ಲೆಕ್ಕ ಬರೆದಿದ್ದನೆ ನೋಡು

ಸೇಲ್ಸ್ ಮ್ಯಾನ್:ಸಾರ್ ನಿಮಗೆ ಪೌಡರ್ ಬೇಕಾ?
ಗುಂಡ:ಯಾರಿಗೆ ಇದು?
ಸೇಲ್ಸ್ ಮ್ಯಾನ್:ಇಲಿಗಳಿಗೆ ಸಾರ್
ಗುಂಡ:ಬೇಡ ಇವತ್ತು ಪೌಡರ್ ಕೊಟ್ರೆ ನಾಳೆ ಲಿಪ್ಸ್ ಟಿಕ್ ಕೇಳಬಹುದು....

ಗುಂಡ:ನಿನಗೆ ಎಷ್ಟು ಮಾರ್ಕ್ಸ್ ಬಂತು?
ತಿಮ್ಮ: 99%
ಗುಂಡ:ಅಬ್ಬ ಅಷ್ಟರಲ್ಲಿ ಮೂರುಜನ ಪಾಸ್ ಆಗಬಹುದಿತ್ತು


ಗಂಡ ಹೆಂಡಿರ ಜಗಳ ಗಂಡ" ನಾನು ಹೊರಟು ಹೋದರೆ ನನ್ನಂಥಾ ಗಂಡ ಹುಡುಗಿದರೂ ನಿನಗೆ ಸಿಕ್ಕಲ್ಲ ನೋಡ್ತಿರು" ಹೆಂಡ್ತಿ "ನಿನ್ನಂಥಾ ಗಂಡನ್ನ ಹುಡುಕೋದಾದ್ರೂ ಯಾರು?"

"ನೀವು ಕುಡೀತೀರಾ" ಭಾವೀ ಅಳಿಯನನ್ನು ಮಾವ ಕೇಳಿದ.ಅದಕ್ಕೆ ಅಳಿಯ "ಇದು ಪ್ರಶ್ನೆನೋ ಆಹ್ವಾನನೋ ತಿಳೀ ಲಿಲ್ಲ" ಎಂದ

ಹೆಂಡತಿ ಕಾವಲಿಯ ಮೇಲೆ ದೋಸೆ ಹಾಕುತ್ತಿರಲು ಗಂಡ ಅಲ್ಲಿಗೆ ಬಂದು"ಏಯ್ ಸ್ವಲ್ಪ ತಾಳು ಬಿಸಿ ಆಗ್ಲಿ,ಈಗ ಹಾಕು ಎಣ್ಣೆ ಹಾಕು ಸರಿಯಾಗಿ ಹಿಟ್ಟು ಕಲಕಿ ಕಲಕಿ ಸೌಟು ಸುರಿ,ತಿರುವು, ಹಾಗೆ, ಅಲ್ಲ ನಿಧಾನ ,ತಟ್ಟೆ ಮುಚ್ಚು,ತಾಳು ತಟ್ಟೆ ತೆಗಿ, ಇಲ್ಲ ಇನ್ನೂ ಆಗಿಲ್ಲ, ಈಗ ಸರಿಯಾಗಿ ಕೆಂಪಗೆ ಆಗಿಲ್ಲ ಗರಿಗರಿ ಆಗಬೇಕು...."ಹೆಂದತಿಗೆ ರೇಗಿತು"ಏನ್ರಿ ಯಾವತ್ತೂ ದೋಸೆನೇ ಮಾಡಿಲ್ವ ನಾನು ಹೀಗೆ ಟೀಚ್ ಮಾಡ್ತಿದ್ದೀರಾ" ಅದಕ್ಕೆ ಗಂಡ"ನಾನು ಡ್ರೈವ್ ಮಾಡುವಾಗ ದಿನಾ ನೀನು ನನಗೆ....ಎದೇ ರೀತಿ ಅಲ್ವಾ ಟೀಚ್ ಮಾಡೋದು"ಅಂದ.

ಅಪ್ಪ: ಲೋ ತಿಮ್ಮ ನಾಯಿ ಬಾಲಕ್ಕೆ ಯಾಕೋ ಪೈಪ್ ಹಾಕ್ತಾ ಇದ್ದೀಯಾ,ಅದು ಯಾವತ್ತೂ ನೆಟ್ಟಗೆ ಆಗೋಲ್ಲ
ತಿಮ್ಮ:ಅದಕ್ಕೇ ಅಪ್ಪ ಪೈಪ್ ಸೊಟ್ಟ ಮಾಡ್ತಾ ಇದ್ದೀನಿ

ಗುಂಡ: ನಮ್ಮ ಅಜ್ಜ ಸಾಯೋವಾಗ ತುಂಬ ಆಸ್ತಿ ಬಿಟ್ಟು ಹೋದ,ನಿನ್ನಜ್ಜ?
ತಿಮ್ಮ: ನನ್ನಜ್ಜ ಸಾಯೋವಾಗ ಲೋಕಾನೇ ಬಿಟ್ಟು ಹೋದ

ಪ್ರೀತಿ:ಯಾಕೆ ಗುಂಡ ನನ್ನ ಹತ್ರ ಮಾತೇ ಆಡ್ತಾ ಇಲ್ಲ
ಗುಂಡ: ನೀನೇ ಹೇಳಿದ್ಯಲ್ಲ?ಪ್ರೀತಿಗಿಂತ ಸ್ನೇಹಾನೇ ಶಾಶ್ವತ ಅಂತ.....ಅದಕ್ಕೆ ನಿನ್ನ ಬಿಟ್ಟು ಸ್ನೇಹಾನ ಲವ್ ಮಾಡ್ತಿದ್ದೀನಿ


ನ್ಯಾಯಾಧೀಶ: ಈತನಿಗೆ ಎರಡೂ ಕಿವಿಗಳನ್ನು ಕತ್ತರಿಸಿ
ಗುಂಡ:ಅಯ್ಯೋ ಬೇಡಾ ಸ್ವಾಮಿ ನಾನು ಕುರುಡ ಆಗೋಗ್ತೀನಿ
ನ್ಯಾಯಾಧೀಶ:ಮೂರ್ಖ ಕಿವಿ ಕತ್ತರಿಸಿದರೆ ಕುರುಡು ಹೇಗೆ ಆಗ್ತಾರೆ?
ಗುಂಡ:ಆಮೇಲೆ ಕನ್ನಡಕ ಎಲ್ಲಿ ಹಾಕಲಿ?

ಪೋಲೀಸ್:ನೀನು ಯಾವಾಗ್ಲೂ ಅವರ ಮನೇಲೇ ಯಾಕೆ ಕಳ್ಳತನ ಮಾಡ್ತಿದ್ಯಾ
ಕಳ್ಳ:ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್, ಲಾಯರ್ ಇರ್ತಾರಲ್ಲ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ

ಗುಂಡ ಪೋಲೀಸ್ ಸ್ಟೇಷನ್ ಮುಂದೆ ನಿಂತು ಸುಸು ಮಾಡ್ತಿದ್ದ
ಪೋಲೀಸ್:ಏ ಗುಂಡ ಸ್ಟೇಷನ್ ಮುಂದೆ ಹೀಗೆ ಸುಸು ಮಾಡಿದ್ರೆ ಹಿಡ್ಕೊಂದ್ ಬಿಡ್ತೀನಿ ಹುಷಾರ್
ಗುಂಡ: ಹಿಡ್ಕೊಂಡ್ ಹೋಗಿ ಸಾರ್ ಸುಮ್ಮನೆ ವೇಸ್ಟ್ ಆಗ್ತಿದೆ

ಗುಂಡ: ಅಪ್ಪಾ ನೀನು ಈಜಿಪ್ಟ್ ಗೆ ಹೋಗಿದ್ಯಾ?
ಅಪ್ಪ: ಇಲ್ಲಾ ಕಣೋ,ಯಾಕೆ?
ಗುಂಡ:ಹಾಗಿದ್ರೆ ಈ ಮಮ್ಮಿ ನಿನ್ನಹತ್ರ ಹ್ಯಾಗೆ ಬಂದಳು?

ತಿಮ್ಮ:ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ, ಕಡಿಮೆ ಅಂದ್ರೆ ಐದು ಸಾವಿನ ನುಂಗಿದ್ದಾನೆ
ಗುಂಡ:ನಿಂಗೆ ಹೇಗೆ ಗೊತ್ತಾಯ್ತು?
ತಿಮ್ಮ:ಆ ಭೂಪಾ ರೋಡ್ ರೋಲರ್ ಪಂಚರ್ ಗೆ ಲೆಕ್ಕ ಬರೆದಿದ್ದನೆ ನೋಡು

ಬಾಸ್ - ನಮಗೆ ಒಬ್ಬ ಜವಾಬ್ದಾರಿಯುತ ನೌಕರ ಬೇಕಾಗಿದೆ
ಗುಂಡ - ಹಾಗಿದ್ರೆ ನಾನೇ ಅದಕ್ಕೆ ಲಾಯಕ್ಕು ಸ್ವಾಮಿ, ನನ್ನ ಹಿಂದಿನ ಕೆಲಸದಲ್ಲಿ ಎಲ್ಲಾ ತಪ್ಪಿಗೂ ನಾನೆ ಜವಾಬ್ದಾರಿ ಅಂತಿದ್ರು....ಊ..


ಹೆಂಡತಿ - ರೀ ನಿಮ್ಮ ತಲೇಲಿ ಬರೀ ಗೊಬ್ಬರಾನೇ ತುಂಬಿದೆ.
ಗಂಡ - ಮತ್ಯಾಕೆ ಅದನ್ನೇ ತಿಂತೀಯಾ?

ಗುಂಡ ಹಜಾಮನ ಬಳಿಹೋಗಿ "ಹೇರ್ ಕಟ್ ಗೆ ಎಷ್ಟು?" ಎಂದ   ಹಜಾಮ:"20 ರೂಪಾಯಿ"  ಗುಂಡ:"ಶೇವಿಂಗ್ ಗೆ?"   ಹಜಾಮ:"10 ರೂಪಾಯಿ"     ಗುಂಡ:"ಹಾಗಾದರೆ ಇಡೀ ತಲೇಗೇ ಶೇವಿಂಗೇ ಮಾಡಿ" ತಲೆಯನ್ನು ಸವರಿಕೊಳ್ಳುತ್ತಾ

ರೀ ನಾನು ದೂರ ಹೋದಾಗ ಕಳೆದು ಹೋದ್ರೆ?....ಪೇಪರ್ನಲ್ಲಿ ಹಾಕಿಸ್ತೀನಿ.....”ಏನಂತ?”....... ”ಎಲ್ಲೇ ಇರು ಹೇಗೇ ಇರು ಅಲ್ಲೇ ಹಾಯಾಗಿರು ಅಂತ”.

ಗೆಳೆಯನನ್ನು ಆಸ್ಪತ್ರೆಯಲ್ಲಿ ನೋಡಲು ಹೋದ ಗುಂಡ ನರ್ಸ್ ನನ್ನು ಕರೆದು ಕೇಳಿದ."ಅಲ್ಲಾ ಅದ್ಯಾಕೆ ನೀವು ಎದೆ ಮೇಲೆ ಹಿಂಭಾಗದಲ್ಲಿ ಅಷ್ಟೊಂದು ಪಿನ್ ಗಳನ್ನ ಚುಚ್ಚಿಕೊಂಡಿದ್ದೀರಿ " ಅದಕ್ಕೆ ನರ್ಸ್ ಕೇಳಿದಳು"ಏನಿಲ್ಲಾ ಡಾಕ್ಟರ್ ಗಳನ್ನ ದೂರ ಇಡೋಕೆ"

ಇಬ್ಬರು ಸ್ನೇಹಿತರಿಗೆ 3 ಬಾಂಬುಗಳು ಸಿಕ್ಕಿದವು. ಪೋಲೀಸರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುವಾಗ ಒಬ್ಬ ಹೇಳಿದ
`ಅಕಸ್ಮಾತ್ ದಾರಿಯಲ್ಲಿ 1 ಬಾಂಬ್ ಢಂ ಅಂದ್ಬಿಟ್ರೆ ಏನ್ ಮಾಡೋದು ?'
ಇನೊಬ್ಬ : 3 ರಲ್ಲಿ ಎರಡೇ ಸಿಕ್ಕಿದ್ದು ಅನ್ನೋದು ಅಷ್ಟೇ” !!!

ತಂದೆ:"ಶಾಲೆ ಬಾಗಿಲು ಯಾವಾಗ ತೆಗೆಯುತ್ತದೆಯೋ?" ಮಗ:"ಅದಕ್ಕೇನಪ್ಪಾ ಬೀಗದ ಕೈ ಇದ್ದರೆ ಯಾವಾಗ ಬೇಕಾದ್ರೂ ತೆಗೀಬಹುದು"


ಕನ್ನಡ ಕ್ಯಾಲೆಂಡರ್ 2011

2011, ಜನವರಿ
ಶ್ರೀ ವಿಕೃತಿ ನಾಮ ಸಂವತ್ಸರ, ದಕ್ಷಿಣಾಯಣ/ಉತ್ತರಾಯಣ,
ಹೇಮಂತ/ಶಿಶಿರ ಋತು, ಮಾರ್ಗಶಿರ/ಪುಷ್ಯ ಮಾಸ

01 ಶ - (ದ್ವಾದಶಿ) ಆಂಗ್ಲ ಹೊಸವರ್ಷ ಆರಂಭ
04 ಮಂ - ಅಮಾವಾಸ್ಯೆ
05 ಬು - ಪುಷ್ಯ ಮಾಸ ಆರಂಭ
12 ಬು - ಸ್ವಾಮಿ ವಿವೇಕಾನಂದ ಜಯಂತಿ
15 ಶ - ಮಕರ ಸಂಕ್ರಾಂತಿ
15 ಶ - ಸರ್ವತ್ರ ಏಕಾದಶಿ
19 ಬು - ಹುಣ್ಣಿಮೆ
22 ಶ - ಸಂಕಷ್ಟ ಚತುರ್ಥಿ
29 ಶ - ಸರ್ವತ್ರ ಏಕಾದಶಿ

2011, ಫೆಬ್ರವರಿ
ಶ್ರೀ ವಿಕೃತಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಪುಷ್ಯ/ಮಾಘ ಮಾಸ

02 ಬು - ಅಮಾವಾಸ್ಯೆ, ಗರುಡಜಯಂತಿ, ಪುರಂದರ ದಾಸರ ಪುಣ್ಯದಿನ
03 ಗು - ಮಾಘ ಮಾಸ ಆರಂಭ,
08 ಮಂ - ವಸಂತ ಪಂಚಮಿ
10 ಗು - ರಥ ಸಪ್ತಮಿ
14 ಸೋ - ಸರ್ವತ್ರ ಏಕಾದಶಿ, ವಾಲೆನ್ಟೈನ್ಸ್ ಡೇ
15/20 ಮಂ/ಭಾ - ಮಿಲದ್ ಇನ್ ನಾಬಿ, ಸುನ್ನಿ/ಶಿಯಾ
16 ಬು - ಈದ್ ಮಿಲಾದ್
18 ಶು - ಹುಣ್ಣಿಮೆ
21 ಸೋ - ಸಂಕಷ್ಟ ಚತುರ್ಥಿ
28 ಸೋ - ಸರ್ವತ್ರ ಏಕಾದಶಿ

2011,ಮಾರ್ಚ್
ಶ್ರೀ ವಿಕೃತಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ/ಫಾಲ್ಗುಣ ಮಾಸ

02 ಬು - ಮಹಾಶಿವರಾತ್ರಿ
03 ಗು - ಶನೇಶ್ವರ ಜಯಂತಿ
05 ಶ - ಫಾಲ್ಗುಣ ಮಾಸ ಆರಂಭ
 08 ಮಂ - ಅಂ.ರಾ.ಮಹಿಳಾ ದಿನ
16 ಬು - ಸರ್ವತ್ರ ಏಕಾದಶಿ
19 ಶ - ಹೋಳಿ ಹುಣ್ಣಿಮೆ
22 ಮಂ - ಸಂಕಷ್ಟ ಚತುರ್ಥಿ
30 ಬು - ಸರ್ವತ್ರ ಏಕಾದಶಿ

2011,ಏಪ್ರಿಲ್
ಶ್ರೀ ವಿಕೃತಿ/ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ/ವಸಂತ ಋತು, ಫಾಲ್ಗುಣ/ಚೈತ್ರ ಮಾಸ

03 ಭಾ - ಅಮಾವಾಸ್ಯೆ
04 ಸೋ - ಚಾಂದ್ರಮಾನ ಯುಗಾದಿ,ಚೈತ್ರಮಾಸ, ಖರ ನಾಮ ಸಂವತ್ಸರ ಆರಂಭ
06 ಬು - ಮತ್ಸ್ಯ ಜಯಂತಿ
12 ಮಂ - ಶ್ರೀ ರಾಮ ನವಮಿ
14 ಗು - ಸರ್ವತ್ರ ಏಕಾದಶಿ, ಸೌರ ಯುಗಾದಿ
17 ಭಾ - ಮಹಾವೀರ ಜಯಂತಿ
18 ಸೋ - ಹನುಮದ್ ಜಯಂತಿ, ಹುಣ್ಣಿಮೆ
21 ಗು - ಸಂಕಷ್ಟ ಚತುರ್ಥಿ
22 ಶು - ಗುಡ್ ಫ್ರೈಡೇ
23 ಶ - ಹೋಲಿ ಸಾಟರ್ಡೇ
25 ಸೋ - ಈಸ್ಟರ್ ಮಂಡೆ
27 ಬು - ಸರ್ವತ್ರ ಏಕಾದಶಿ

2011,ಮೇ
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ/ವೈಶಾಖ ಮಾಸ

02 ಸೋ – ಬೋಧಾಯಣ ಅಮಾವಾಸ್ಯೆ
04 ಬು - ವೈಶಾಖ ಮಾಸ ಆರಂಭ
06 ಶು – ಬಸವ ಜಯಂತಿ,ಅಕ್ಷಯ ತದಿಗೆ
07 ಶ – ರಾಮಾನುಜ ಜಯಂತಿ
08 ಭಾ – ಶಂಕರ ಜಯಂತಿ
13 ಶು – ಮೋಹಿನಿ ಏಕಾದಶಿ
14 ಶ – ಶಂಕರಾಚಾರ್ಯ ಅರಾಧನ
17 ಮಂ – ಬುದ್ಧ ಪೌರ್ಣಿಮೆ
20 ಶು – ಸಂಕಷ್ಟ ಚತುರ್ಥಿ
28 ಶ – ಅಪಾರ ಏಕಾದಶಿ

2011,ಜೂನ್
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ವಸಂತ/ಗ್ರೀಶ್ಮ ಋತು, ವೈಶಾಖ/ಜ್ಯೇಷ್ಠ ಮಾಸ

01 ಬು – ಬಾದಾಮಿ ಅಮಾವಾಸ್ಯೆ
02 ಗು – ಜ್ಯೇಷ್ಠ ಮಾಸ ಆರಂಭ
12 ಭಾ – ಸರ್ವತ್ರ ಏಕಾದಶಿ
15 ಬು - ಕರ ಹುಣ್ಣಿಮೆ
19 ಭಾ - ಸಂಕಷ್ಟ ಚತುರ್ಥಿ
27 ಸೋ – ಯೋಗಿನಿ ಏಕಾದಶಿ
30 ಗು - ಅಮಾವಾಸ್ಯೆ

2011,ಜುಲೈ
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ/ದಕ್ಷಿಣಾಯಣ,
ಗ್ರೀಶ್ಮ/ವರ್ಷ ಋತು, ಆಶಾಢ/ಶ್ರಾವಣ ಮಾಸ

01ಶು – ಮಣ್ಣೆತ್ತಿನ ಅಮಾವಾಸ್ಯೆ
02 ಶ – ಆಶಾಢ ಮಾಸ ಅರಂಭ
11 ಸೋ - ಸರ್ವತ್ರ ಏಕಾದಶಿ
15 ಶು – ಗುರು ಪೂರ್ಣಿಮ
18 ಸೋ - ಸಂಕಷ್ಟ ಚತುರ್ಥಿ
26 ಮಂ - ಸರ್ವತ್ರ ಏಕಾದಶಿ
30 ಶ – ನಾಗರ ಅಮಾವಾಸ್ಯೆ
31 ಶ – ಶ್ರಾವಣ ಮಾಸ ಆರಂಭ

2011, ಆಗಸ್ಟ್
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರಾವಣ/ಭಾದ್ರಪದ ಮಾಸ

02,09,16,23 ಮಂ – ಮಂಗಳಗೌರಿ ವ್ರತ
04 ಗು – ನಾಗ-ಗರುಡ ಪಂಚಮಿ
06,13,20,27 ಶ – ಶ್ರಾವಣ ಶನಿವಾರ
09 ಮಂ – ಪವಿತ್ರ ಏಕಾದಶಿ
12 ಶು – ವರಮಹಾಲಕ್ಷ್ಮಿ ವ್ರತ
13 ಶ – ಋಗ್ ಯಜುರ್ ಉಪಾಕರ್ಮ
15 ಸೋ – ಭಾರತ ಸ್ವಾತಂತ್ರ್ಯದಿನಾಚರಣೆ
17 ಬು - ಸಂಕಷ್ಟ ಚತುರ್ಥಿ
22 ಸೋ – ಶ್ರೀಕೃಷ್ಣ ಜನ್ಮಷ್ಟಮಿ
25 ಗು - ಸರ್ವತ್ರ ಏಕಾದಶಿ
28 ಭಾ - ಬೆನಕ ಅಮಾವಾಸ್ಯೆ
30 ಮಂ – ಭಾದ್ರಪದ ಮಾಸ ಆರಂಭ
31 ಬು – ಸ್ವರ್ಣಗೌರಿ ವ್ರತ, ಕುತುಬ್-ಇ-ರಂಜಾನ್

2011,ಸೆಪ್ಟೆಂಬರ್
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ/ಶರದ್ ಋತು, ಭಾದ್ರಪದ/ಆಶ್ವೀಜ ಮಾಸ

01 ಗು – ವರಸಿದ್ಧಿ ವಿನಾಯಕ ವ್ರತ
08 ಗು - ಸರ್ವತ್ರ ಏಕಾದಶಿ
09 ಶು – ತಿರು ಓಣಂ
11 ಭಾ – ಅನಂತಪದ್ಮನಾಭ ವ್ರತ
12 ಸೋ – ಅನಂತನ ಹುಣ್ಣೀಮೆ
13 ಮಂ – ಪಿತೃ ಪಕ್ಷ ಆರಂಭ
16 ಶು - ಸಂಕಷ್ಟ ಚತುರ್ಥಿ
23 ಶು - ಸರ್ವತ್ರ ಏಕಾದಶಿ
27 ಮಂ – ಮಹಾಲಯ ಅಮಾವಾಸ್ಯೆ
28 ಬು – ಅಶ್ವೀಜ ಮಾಸ ಮತ್ತು ನವರಾತ್ರಿ ಹಬ್ಬ ಆರಂಭ

2011,ಅಕ್ಟೋಬರ್
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು,ಆಶ್ವೀಜ/ಕಾರ್ತೀಕ ಮಾಸ

05 ಬು - ಮಹಾನವಮಿ
06 ಗು – ವಿಜಯ ದಶಮಿ
07 ಶು - ಸರ್ವತ್ರ ಏಕಾದಶಿ
11 ಮಂ - ಪೌರ್ಣಿಮೆ
15 ಶ - ಸಂಕಷ್ಟ ಚತುರ್ಥಿ
18 ಮಂ - ತುಲಾಸಂಕ್ರಮಣ
23 ಭಾ - ಸರ್ವತ್ರ ಏಕಾದಶಿ
25 ಮಂ – ನರಕ ಚತುರ್ದಶಿ
26 ಬು – ದೀಪಾವಳಿ ಲಕ್ಷ್ಮೀ ಪೂಜೆ
27 ಗು – ಬಲಿ ಪಾಡ್ಯಮಿ,ಕಾರ್ತೀಕ ಮಾಸ ಆರಂಭ

2011,ನವೆಂಬರ್
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್/ಹೇಮಂತ ಋತು,ಕಾರ್ತೀಕ/ಮಾರ್ಗಶಿರ ಮಾಸ

01 ಮಂ – ಕನ್ನಡ ರಾಜ್ಯೋತ್ಸವ
06 ಭಾ - ಸರ್ವತ್ರ ಏಕಾದಶಿ
07 ಸೋ - ಬಕ್ರೀದ್
10 ಗು – ಗೌರೀ ಹುಣ್ಣಿಮೆ, ಗುರುನಾನಕ್ ಜಯಂತಿ
13 ಭಾ – ಕನಕದಾಸ ಜಯಂತಿ
14 ಸೋ - ಸಂಕಷ್ಟ ಚತುರ್ಥಿ
21 ಸೋ - ಸರ್ವತ್ರ ಏಕಾದಶಿ
24 ಗು – ಬೋಧಾಯಣ ಅಮಾವಾಸ್ಯೆ
25 ಶು - ಸೂರ್ಯ ಗ್ರಹಣ
26 ಶ – ಮಾರ್ಗಶಿರ ಮಾಸ ಆರಂಭ

2011,ಡಿಸೆಂಬರ್
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ/ಶಿಶಿರ ಋತು, ಮಾರ್ಗಶಿರ/ಪುಷ್ಯ ಮಾಸ

06 ಮಂ - ಸರ್ವತ್ರ ಏಕಾದಶಿ
10 ಶ – ದತ್ತಜಯಂತಿ, ಚಂದ್ರ ಗ್ರಹಣ
20/21 ಮಂ/ಬು - ಸರ್ವತ್ರ ಏಕಾದಶಿ
24 ಶ – ಎಳ್ಳಮಾವಾಸ್ಯೆ, ಕ್ರಿಸ್ಮಸ್ ಈವ್
25 ಭಾ - ಕ್ರಿಸ್ಮಸ್,ಪುಷ್ಯ ಮಾಸ ಆರಂಭ

Varamahalakshmi Vrata / ವರಮಹಾಲಕ್ಷ್ಮಿ ವ್ರತ



ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ.
ಈ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ವರಮಹಾಲಕ್ಷ್ಮಿ ಪೂಜೆಯ ಚಿತ್ರ ಕೆಳಗಿದೆ.

ವರಮಹಾಲಕ್ಷ್ಮಿ ಕಲಶ ಸ್ಥಾಪನೆ , ಪೂಜೆ (karnataka.com)
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಈ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ವಿನಾಯಕನಿಗೆ ಪೂಜೆ ಮಾಡಿ ನಂತರ ವರಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ.ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡಬೇಕು.
ಪೂಜೆಯ ಮಾರನೆಯ ದಿನ ಶನಿವಾರ, ದೇವರ ವಿಸರ್ಜನೆ ಮಾಡಿ, ನಂತರ ಕಲಶ ಪಾತ್ರೆಯ ಅಕ್ಕಿಯನ್ನು ಅಡಿಗೆಯಲ್ಲಿ ಉಪಯೋಗಿಸಿ, ಕಲಶಕ್ಕೆ ಇಟ್ಟ ತೆಂಗಿನಕಾಯಿಯಿಂದ ಸಿಹಿ ತಿಂಡಿಯನ್ನು ಮಾಡಿ. ವ್ರತದ ದಿನ ಪೂಜೆ ಮಾಡಲು ಆಗದಿದ್ದರೆ, ಶ್ರಾವಣದಲ್ಲಿ ಇನ್ನೊಂದು ಶುಕ್ರವಾರ ಈ ವ್ರತ ಮಾಡಬಹುದು.
ವರಮಹಾಲಕ್ಷ್ಮಿಯು ನಮ್ಮೆಲ್ಲರನ್ನು ಅನುಗ್ರಹಿಸಿ ಕಾಪಾಡಲಿ :)

ನಾಲ್ಕು ಬೆರಳಿಗೆ ನವ ರತ್ನಗಳು : ನಿಮಗ್ಯಾವ ರತ್ನ



ರತ್ನಗಳಲ್ಲಿ ಪ್ರಮುಖವಾಗಿ ಒಂಬತ್ತು ರತ್ನಗಳನ್ನು ಶುಭದಾಯಕ ಎಂಬ ಕಾರಣಕ್ಕೆ ನಾವು ಧರಿಸುತ್ತಿದ್ದೇವೆ. ಸೂರ್ಯನಿಗೆ ಮಾಣಿಕ್ಯ, ಚಂದ್ರನಿಗೆ ಮುತ್ತು, ಮಂಗಳನಿಗೆ ಕೆಂಪು ಹವಳ, ಬುಧನಿಗೆ ಮರಕತ (ಪಚ್ಚೆ), ಗುರುವಿಗೆ ಹಳದಿ ಪುಷ್ಯರಾಗ, ಶುಕ್ರನಿಗೆ ವಜ್ರ, ಶನಿಗೆ ನೀಲ, ರಾಹುವಿಗೆ ಗೋಮೇದಿಕ ಮತ್ತು ಕೇತುವಿಗೆ ವೈಢೂರ್ಯ.

ಪುಷ್ಯರಾಗ ಮಣಿಯನ್ನು (Yellow sapphire) ತರ್ಜನಿ (ತೋರು) ಬೆರಳಿಗೇ ಧರಿಸಬೇಕೆಂದು ಯಾಕೆ ಸೂಚಿಸುತ್ತಾರೆ? ಯಾಕೆಂದರೆ, ಯಾವುದೇ ವ್ಯಕ್ತಿ ಎಚ್ಚರಿಕೆ ಅಥವಾ ನಿರ್ದೇಶನ ನೀಡುವುದು ಇದೇ ಬೆರಳಿನ ಮೂಲಕ. ಇದೇ ಬೆರಳು ಜಗಳಕ್ಕೂ ಕಾರಣವಾಗುತ್ತದೆ, ಹೀಗಾಗಿ ಎಚ್ಚರದಿಂದಿರುವಂತೆ ಹೇಳಲೂ ಕೆಲಸಕ್ಕೆ ಬರುತ್ತದೆ. ಇದಕ್ಕಾಗಿ ಗುರುವಿನ ರತ್ನ ಪುಷ್ಯರಾಗವನ್ನು ಧರಿಸಬೇಕೆಂದು ಸಲಹೆ ನೀಡಲಾಗುತ್ತದೆ. ಈ ಮಣಿಯನ್ನು ಧರಿಸುವುದರಿಂದ ಆ ವ್ಯಕ್ತಿಗೆ ಗಂಭೀರತೆ ಬರುತ್ತದೆ ಮತ್ತು ಆತ ಅನ್ಯಾಯದ ವಿರುದ್ಧ ಜಾಗೃತನಾಗುತ್ತಾನೆ. ಇದು ಧರ್ಮ-ಕರ್ಮದಲ್ಲಿಯೂ ಶ್ರದ್ಧೆ ಹುಟ್ಟಿಸುತ್ತದೆ. ಗುರುವಿನ ಪ್ರಭಾವ ಹೆಚ್ಚಿಸಲು ಮತ್ತು ಅದರ ಅಶುಭ ಫಲಗಳನ್ನು ಕೊನೆಗಾಣಿಸಲು ಈ ರತ್ನವನ್ನು ಧರಿಸಲಾಗುತ್ತದೆ.

ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು, ಮಂತ್ರಿಗಳು, ರಾಜನಾಯಕರು, ನಟರು ಮುಂತಾದವರ ಕೈಯಲ್ಲಿ ಈ ರತ್ನವನ್ನು ಕಾಣಬಹುದು. ಈ ರತ್ನದೊಂದಿಗೆ ಮಾಣಿಕ್ಯವನ್ನೂ ಧರಿಸಿದರೆ, ಅತಿ ಶುಭ ಫಲ ದೊರೆಯುತ್ತದೆ.

ಮಧ್ಯ ಬೆರಳಿನಲ್ಲಿ ನೀಲ ಮಣಿ ಧಾರಣೆ ಮಾಡಿದರೆ, ಅವರು ಆ ಬೆರಳಲ್ಲಿ ಅದರ ಹೊರತು ಬೇರಾವುದೇ ರತ್ನ ಧರಿಸಬಾರದು. ಇಲ್ಲವಾದರೆ ಶುಭ ಫಲ ದೊರೆಯುವುದಿಲ್ಲ. ಈ ಬೆರಳಲ್ಲಿ ಭಾಗ್ಯ ರೇಖೆಯು ಕೊನೆಗೊಳ್ಳುತ್ತದೆಯಾದುದರಿಂದ, ಯಾರಲ್ಲಿ ಭಾಗ್ಯ ರೇಖೆ ಇಲ್ಲವೋ ಅವರು ತಿಳಿದವರಲ್ಲಿ ಕೇಳಿ, ನೀಲ ಮಣಿ ಧರಿಸಿದರೆ, ಲಾಭ ಪಡೆಯಬಹುದಾಗಿದೆ.

ನೀಲಮಣಿಯು ಶನಿಯ ಶುಭ ಫಲ ದೊರಕಿಸಲು ಸಹಾಯ ಮಾಡುತ್ತದೆ. ಲೋಹದ ಉದ್ಯಮಿಗಳು, ರಾಜಕಾರಣಿಗಳು, ಆಡಳಿತಗಾರರು ಇದನ್ನು ಹೆಚ್ಚಾಗಿ ಧರಿಸುತ್ತಾರೆ. ಈ ರತ್ನವು ತ್ವರಿತ ಫಲದಾಯಕವಾಗಿದೆ ಮತ್ತು ಇದರ ಶುಭ ಅಥಲಾ ಅಶುಭ ಪರಿಣಾಮವು ಅತ್ಯಂತ ಶೀಘ್ರದಲ್ಲೇ ತಿಳಿದುಬಿಡುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ರತ್ನ ಶಾಸ್ತ್ರಜ್ಞರ ಸಲಹೆಯಿಲ್ಲದೆ ಇದನ್ನು ಧರಿಸಬಾರದು ಎಂದು ಹೇಳಲಾಗುತ್ತದೆ.

ಮಾಣಿಕ್ಯವನ್ನು ಅನಾಮಿಕ (ಉಂಗುರ) ಬೆರಳಿಗೆ ಧರಿಸಲಾಗುತ್ತದೆ. ಇದು ಸೂರ್ಯನ ರತ್ನ. ಬರ್ಮಾ ದೇಶದ ಮಾಣಿಕ್ಯಕ್ಕೆ ಬೆಲೆ ಹೆಚ್ಚು. ಇಂದು ಕೆಲವು ನಕಲಿ ಮಾಣಿಕ್ಯಗಳೂ ಬರ್ಮಾದವು ಎಂದು ಹೇಳಿ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಬರ್ಮಾದ ಮಾಣಿಕ್ಯವು ದಾಳಿಂಬೆ ಬೀಜದಂತಿರುತ್ತದೆ. ಇದನ್ನು ಧರಿಸುವುದರಿಂದ ಆಡಳಿತಾತ್ಮಕ ಪ್ರಭಾವ ವೃದ್ಧಿಸುತ್ತದೆ ಮತ್ತು ಶತ್ರುವಿನ ಎದುರು ಜಯ ಸಾಧಿಸಲು ಪೂರಕವಾಗುತ್ತದೆ. ಇದನ್ನು ಕೂಡ ರಾಜಕಾರಣ ಜೊತೆ ಸಂಬಂಧ ಇರುವವರು, ಉಚ್ಚ ಅಧಿಕಾರಿಗಳು, ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮುಂತಾದವರ ಬೆರಳುಗಳಲ್ಲಿ ಕಾಣಬಹುದು.

ಕನಿಷ್ಠ ಬೆರಳಿನಲ್ಲಿ ಅಂದರೆ ಕಿರು ಬೆರಳಿನಲ್ಲಿ ಪಚ್ಚೆ ರತ್ನವನ್ನು ಧರಿಸಬೇಕು. ಇದು ಬೌದ್ಧಿಕ ಗುಣಗಳನ್ನು ಹೆಚ್ಚಿಸುತ್ತದೆಯಾದುದರಿಂದ ಉದ್ಯಮಿಗಳು ಹೆಚ್ಚಾಗಿ ಧರಿಸುತ್ತಾರೆ. ಇದನ್ನು ಧರಿಸುವುದರಿಂದ ಪತ್ರಕರ್ತರು, ಸೇಲ್ಸ್‌ಮ್ಯಾನ್‌ಗಳು, ಪ್ರಕಾಶನದ ಕೆಲಸಗಾರರು, ಕಲಾವಿದರು, ವಾಕ್ಪಟುಗಳು ಹಾಗೂ ಬೌದ್ಧಿಕ ಸಾಮರ್ಥ್ಯ ಹೆಚ್ಚು ಬೇಕಾಗಿರುವ ಕೆಲಸದಲ್ಲಿ ನಿರತರಾದವರಿಗೆ ಶುಭ ಫಲಗಳಾಗುತ್ತವೆ.

ವಜ್ರ, ಮುತ್ತು, ಹವಳ, ಗೋಮೇಧಿಕ ಮತ್ತು ವೈಢೂರ್ಯ: ಹವಳವು ಶಕ್ತಿ ಹೆಚ್ಚಿಸಬಲ್ಲ, ಸಾಹಸ, ಮಹತ್ವಾಕಾಂಕ್ಷೆ ವೃದ್ಧಿ ಮಾಡಲು ಮತ್ತು ಶತ್ರುವಿನ ಮೇಲೆ ಪ್ರಭಾವ ಮಾಡಲು ನೆರವಾಗುತ್ತದೆ. ಅದರ ಮಿತ್ರರು ಗುರು ಮತ್ತು ಸೂರ್ಯ. ಮಕರ ಉಚ್ಚವಾಗಿದ್ದರೆ ಅದನ್ನು ಮಧ್ಯಮ, ಉಂಗುರ ಬೆರಳು ಅಥವಾ ಕಿರು ಬೆರಳಲ್ಲಿ ಧರಿಸಬಹುದು. ಇದನ್ನು ಹೆಚ್ಚಾಗಿ ರಾಜಕಾರಣಿಗಳು, ಪೊಲೀಸರು, ಆಡಳಿತದೊಂದಿಗೆ ಸಂಬಂಧ ಹೊಂದಿರುವವರು ಮತ್ತು ಉನ್ನತ ಅಧಿಕಾರಿಗಳು, ಭೂಮಿ ಸಂಬಂಧಿತ ವ್ಯಕ್ತಿಗಳು, ಬಿಲ್ಡರ್ ಮುಂತಾದವರ ಕೈಗಳಲ್ಲಿ ಕಾಣಬಹುದು.

ಇದನ್ನು ಮಾಣಿಕ್ಯ ಮತ್ತು ಪುಷ್ಯರಾಗದ ಜೊತೆಗೂ ಧರಿಸಬಹುದಾಗಿದೆ. ಯಾರಿಗೆ ಹೆಚ್ಚು ಕೋಪ ಬರುವುದೋ, ಅಂಥವರು ಈ ರತ್ನವನ್ನು ಧರಿಸಬಾರದು. ಹವಳವನ್ನು ಮುತ್ತಿನ ಜತೆಗೆ ಅಥವಾ ಸಂಯುಕ್ತ ರತ್ನದ ಉಂಗುರವನ್ನೂ ಧರಿಸಬಹುದಾಗಿದೆ.

ಕಿರು ಬೆರಳಿನಲ್ಲಿ ಮುತ್ತು ಧರಿಸುವುದು ಶುಭ ಫಲದಾಯಕ. ಯಾಕೆಂದರೆ, ಕನಿಷ್ಠ ಬೆರಳಿನ ಬುಡದಲ್ಲಿ ಚಂದ್ರ ಪರ್ವತ ಇರುತ್ತದೆ. ಈ ಕಾರಣದಿಂದ, ಚಂದ್ರನ ಅಶುಭ ಪರಿಣಾಮ ತಡೆಗಟ್ಟಿ ಶುಭತ್ವಕ್ಕಾಗಿ ಇದು ಲಾಭಪ್ರದವಾಗುತ್ತದೆ. ಇದನ್ನು ಉಂಗುರ ಬೆರಳಿನಲ್ಲಿ ಧರಿಸಬಾರದು. ಗುರುವಿನ ಬೆರಳಾಗಿರುವ ತೋರು ಬೆರಳಿನಲ್ಲಿಯೂ ಇದನ್ನು ಧರಿಸಬಹುದು. ಈ ರತ್ನವು ಮನಸ್ಸನ್ನು ಅಶಾಂತಿಯಿಂದ ರಕ್ಷಿಸುತ್ತದೆ ಮತ್ತು ಯಾರಿಗೆ ಹೆಚ್ಚು ಕೋಪ ಬರುವುದೋ ಅಂಥವರು, ಜಲ ಕಾರ್ಯದ ಜೊತೆ ಸಂಬಂಧ ಹೊಂದಿರುವವರು, ಹಾಲಿನ ವ್ಯಾಪಾರಿಗಳು, ಬಿಳಿ ವಸ್ತುಗಳ ವ್ಯವಹಾರದಲ್ಲಿ ತೊಡಗಿರುವವರು ಧರಿಸಬಹುದಾಗಿದೆ. ಇದನ್ನು ಪುಷ್ಯರಾಗದ ಜೊತೆ ಮತ್ತು ಮಾಣಿಕ್ಯದ ಜೊತೆಗೂ ಧರಿಸಲಾಗುತ್ತದೆ.

ವಜ್ರ ಎಂಬುದು ಎಷ್ಟು ಬೆಲೆ ಬಾಳುವ ರತ್ನವೋ ಅಷ್ಟೇ ಸುಂದರವೂ ಹೌದು. ಇದನ್ನು ಗುರುವಿನ ಬೆರಳಾಗಿರುವ ತೋರು ಬೆರಳಿನಲ್ಲಿ ಧರಿಸುತ್ತಾರೆ. ಯಾಕೆಂದರೆ, ಈ ತರ್ಜನಿ ಬೆರಳಿನ ಬುಡದಲ್ಲಿಯೇ ಶುಕ್ರ ಪರ್ವತ ಇರುತ್ತದೆ. ಶುಕ್ರನ ಅಶುಭ ಫಲವನ್ನು ನಷ್ಟವಾಗಿಸಿ ಶುಭ ಫಲ ಪಡೆಯಲು ವಜ್ರದ ಉಂಗುರ ಧರಿಸುತ್ತಾರೆ. ಇದನ್ನು ಕಲಾವಿದರು, ಸೌಂದರ್ಯ ಪ್ರಸಾಧನದೊಂದಿಗೆ ಸಂಬಂಧ ಹೊಂದಿದವರು, ಪ್ರೇಮಿಗಳು, ಇಂಜಿನಿಯರ್‌ಗಳು, ಚಿಕಿತ್ಸಕರು, ಕಲಾತ್ಮಕ ವಸ್ತುಗಳ ಮಾರಾಟಗಾರರು ಮುಂತಾದವರು ಧರಿಸುತ್ತಾರೆ.

ರಾಹುವಿನ ರತ್ನ ಗೋಮೇದಿಕವನ್ನು ಕನಿಷ್ಠ ಬೆರಳಿನಲ್ಲಿ ಅಂದರೆ ಕಿರು ಬೆರಳಿನಲ್ಲಿ ಧರಿಸಬೇಕು. ಯಾಕೆಂದರೆ, ಮಿಥುನ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವ ಬುಧನ ಬೆರಳು ಕನಿಷ್ಠ ಬೆರಳಿನಲ್ಲಿ ಧರಿಸುವುದು ಶುಭ ಫಲದಾಯಕ. ರಾಜನೀತಿ, ಪತ್ತೆದಾರಿಕೆ, ತಂತ್ರ-ಮಂತ್ರದಲ್ಲಿ ತೊಡಗಿರುವ ಮಂದಿ ಧರಿಸುತ್ತಾರೆ. ಇದು ರಾಹುವಿನ ಅಶುಭ ಪ್ರಭಾವವನ್ನು ದೂರೀಕರಿಸುತ್ತದೆ.

ಬೆಕ್ಕಿನ ಕಣ್ಣು ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುವ ವೈಢೂರ್ಯವನ್ನು ತೋರು ಬೆರಳಿಗೆ ಧರಿಸಬೇಕು. ಯಾಕೆಂದರೆ, ಗುರುವಿನ ರಾಶಿ ಧನುವಿನಲ್ಲಿ ಉಚ್ಚವಾಗಿರುತ್ತದೆ. ಇದು ಉನ್ನತಿಯನ್ನು ಪ್ರದಾನಿಸುತ್ತದೆ ಮತ್ತು ಶತ್ರುನಾಶಕ್ಕೆ ಕಾರಣವಾಗುತ್ತದೆ. ಈ ರತ್ನವನ್ನು ವಜ್ರದ ಜೊತೆಗೆ ಎಂದಿಗೂ ಧರಿಸಬಾರದು. ಯಾಕೆಂದರೆ, ಇದರಿಂದ ಬಾರಿಬಾರಿಗೆ ದುರ್ಘಟನೆಯ ಯೋಗ ಉಂಟಾಗುತ್ತದೆ.