ಪುಟಗಳು

ನನ್ನ ಹತ್ತಿರ ಭಯಂಕರ ಆಯುಧಗಳಿವೆ ! - ಸ್ವಾ. ಸಾವರಕರ



ಲಂಡನ್ ನಗರದಲ್ಲಿ ಒಂದು ದಿನ ಗುಪ್ತಚರರು ಸ್ವಾ. ಸಾವರಕರರನ್ನು ದಾರಿ ಮಧ್ಯದಲ್ಲಿ ನಿಲ್ಲಿಸಿ ಕೇಳಿದರು, "ಮಹಾಶಯರೇ, ಕ್ಷಮಿಸಿರಿ. ನಮಗೆ ನಿಮ್ಮ ಬಗ್ಗೆ ಸಂಶಯವಿದೆ. ನಿಮ್ಮ ಹತ್ತಿರ ಘಾತಕ ಆಯುಧಗಳಿವೆ ಎಂದು ನಿಶ್ಚಿತ ಸುಳಿವು ಸಿಕ್ಕಿದೆ. ಆದ್ದರಿಂದ ನಿಮ್ಮ ತಪಾಸಣೆಯನ್ನು ಮಾಡುತ್ತೇವೆ". ಸಾವರಕರರು ನಿಂತರು, ಗುಪ್ತಚರರು ತಪಾಸಣೆ ಮಾಡಿದರು. ಆದರೆ ಏನೂ ಸಿಗಲಿಲ್ಲ. ಆಗ ಗುಪ್ತಚರರ ಪ್ರಮುಖ ಅಧಿಕಾರಿಗಳು ಕೇಳಿದರು, "ಕ್ಷಮಿಸಿರಿ ತಪ್ಪು ಸುದ್ದಿಯಿಂದಾಗಿ ನಿಮಗ ತೊಂದರೆ ನೀಡಿದೆವು". ಆಗ ಸಾವರಕರರು ಹೇಳಿದರು, "ನಿಮಗೆ ಸಿಕ್ಕ ಸುಳಿವು ತಪ್ಪಲ್ಲ. ನನ್ನ ಬಳಿ ಘಾತಕ ಆಯುಧವಿದೆ". ಜೇಬಿನಲ್ಲಿದ್ದ ಪೆನ್ನನ್ನು ತೋರಿಸಿ ಹೇಳಿದರು, "ನೋಡಿ ಇದೇ ಆ ಆಯುಧ, ಇದರಿಂದ ಹೊರ ಬರುವ ಒಂದೊಂದು ಶಬ್ಧ ಯುವಕರಿಗೆ ಅನ್ಯಾಯದ ವಿರುದ್ಧ ಹೋರಾಡುವ ಪ್ರೇರಣೆಯನ್ನು ನೀಡುತ್ತದೆ. ಈ ಶಬ್ಧಗಳಿಂದ ದೇಶಭಕ್ತರ ರಕ್ತ ಕುದಿಯುತ್ತದೆ ಮತ್ತು ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಲು ಸಿದ್ಧರಾಗುತ್ತಾರೆ". 

ಚಹದೊಂದಿಗೆ ತಿನ್ನಿ ಕುರುಕುರು ಈರುಳ್ಳಿ ಚಕ್ರ

Onion Ring Recipe

ಆನಿಯನ್ ರಿಂಗ್ ಎಂದು ಅಂಗಡಿಗಳಲ್ಲಿ ದೊರೆಯುವ ತಿಂಡಿಯ ರುಚಿ ನೋಡಿರುತ್ತೀರಾ. ಈರುಳ್ಳಿಯಿಂದ ತಯಾರಿಸುವ ರಿಂಗ್ ಆಕಾರದ ತಿಂಡಿ ರುಚಿಕರವಾಗಿದ್ದು ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟವಾಗುವ ಈ ತಿಂಡಿ ಮಾಡಲು ಸುಲಭವಾಗಿದ್ದು ತಯಾರಿಸುವ ವಿಧಾನ ನೋಡಿ ಹೀಗಿದೆ.

ಬೇಕಾಗುವ ಸಾಮಾಗ್ರಿಗಳು:
* 1/2 ಕಪ್ ಮೈದಾ
* 1/4 ಕಪ್ ಜೋಳದ ಹಿಟ್ಟು
* 2 ಚಮಚ ಬೇಯಿಸಿ ಹಿಸುಕಿದ ಆಲೂಗೆಡ್ಡೆ
* ಕೆಂಪು ಮೆಣಸಿನ ಪುಡಿ
* ರುಚಿಗೆ ತಕ್ಕ ಉಪ್ಪು
* ವನಸ್ಪತಿ
* 2-3 ಈರುಳ್ಳಿ (ವೃತ್ತಾಕಾರವಾಗಿ ಕತ್ತರಿಸಿದ್ದು)

ತಯಾರಿಸುವ ವಿಧಾನ:

1. ಮೈದಾ, ಜೋಳದ ಹಿಟ್ಟು, ಕೆಂಪು ಮೆಣಸಿನ ಪುಡಿ, ಆಲೂಗೆಡ್ಡೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.

2. ಬಾಣಲೆಯಲ್ಲಿ ಎಣ್ಣೆ ಹಾಕಿ ಕುದಿಸಬೇಕು.

3. ಈರುಳ್ಳಿಯನ್ನು ಈ ಮಿಶ್ರಣದಲ್ಲಿ ಅದ್ದಿ ಎಣ್ಣೆಗೆ ಹಾಕಬೇಕು.

4. ರಿಂಗ್ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಬೇಕು.

ಇದನ್ನು ಸಾಯಾಂಕಾಲದ ಟೀ ಜೊತೆ ಸೇವಿಸಲು ರುಚಿಕರವಾಗಿರುತ್ತದೆ.

ಒಡೆಯುವ ಪಾದಗಳಿಗೆ ಮುಕ್ತಿ ಇಲ್ಲಿದೆ

ಚಳಿಗಾಲದಲ್ಲಿ ಕಾಲು ಒಡೆಯುವ ಸಮಸ್ಯೆ ಹೆಚ್ಚು. ಕೆಲವರ ಮುಖದ ತ್ವಚೆ ತುಂಬಾ ಚೆನ್ನಾಗಿದ್ದು ಪಾದಗಳಲ್ಲಿ ಬಿರುಕು ಉಂಟಾಗಿ ಕಪ್ಪಾಗಿ ಅಸಹ್ಯವಾಗಿ ಕಾಣುತ್ತದೆ. ಆರೋಗ್ಯಕರವಲ್ಲದ ಆಹಾರಕ್ರಮ , ದೂಳು ಇವುಗಳಿಂದ ಪಾದಗಳಲ್ಲಿ ಮಾಯಿಶ್ಚರೈಸರ್ ಕಡಿಮೆಯಾಗಿ ಪಾದಗಳಲ್ಲಿ ಬಿರುಕು ಹೆಚ್ಚಾಗುವುದು. ಒಂದು ವೇಳೆ ಬಿರುಕು ಬಂದಿದ್ದರೆ ಬೇಜಾರು ಬೇಡ. ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಬಿರುಕು ಹೋಗಲಾಡಿಸಿ ಸುಂದರ ಪಾದಗಳನ್ನು ಪಡೆಯಬಹುದು.

1.ಮಲಗುವ ಮೊದಲು ಕಾಲನ್ನು ಹದ ಬಿಸಿ ನೀರಿನಲ್ಲಿ ಮೃದುವಾದ ಸೋಪು ಹಚ್ಚಿ ತೊಳೆಯಬೇಕು. ನಂತರ ಸಾಸಿವೆ ಎಣ್ಣೆ ಹಚ್ಚಿ ಸಾಕ್ಸ್ ಹಾಕಿ ಮಲಗಬೇಕು.

2. ಬಿಸಿ ನೀರಿಗೆ ನಿಂಬೆರಸ ಹಾಕಿ ಅದರಲ್ಲಿ ಕಾಲುಗಳನ್ನು 10 ನಿಮಿಷ ಇಡಬೇಕು. ನಂತರ ಪ್ಯೂಮಿಕ್ ಕಲ್ಲಿನಿಂದ ತಿಕ್ಕಿ ಕಾಲನ್ನು ಸ್ವಚ್ಚಗೊಳಿಸಬೇಕು. ಈ ರೀತಿ ಮಾಡುತ್ತಿದ್ದರೆ ಕಾಲು ಒಡೆಯುವುದು ಕಡಿಮೆಯಾಗುತ್ತದೆ.

3.
ತೆಂಗಿನೆಣ್ಣೆಯಿಂದ ಪಾದಗಳನ್ನು, ಮಸಾಜ್ ಮಾಡಿ ಸಾಕ್ಸ್ ಹಾಕಿ ಮಲಗಬೇಕು. ನಂತರ ಬೆಳಗ್ಗೆ ಎದ್ದು ಹದ ಬಿಸಿನೀರಿನಿಂದ ಪ್ಯೂಮಿಕ್ ಕಲ್ಲು ಬಸಿ ತಿಕ್ಕಿ ತೊಳೆಯಬೇಕು. ಈ ರೀತಿ ಮಾಡಿದರೆ ಕಾಲಿನಲ್ಲಿನ ಬಿರುಕು ಕ್ರಮೇಣ ಮಾಯವಾಗುತ್ತದೆ.

4. ಬಾಳೆಹಣ್ಣು ಅಥವಾ ಬೆಣ್ಣೆ ಹಣ್ಣಿನಿಂದ ಪಾದಗಳನ್ನು 10 ನಿಮಿಷ ತಿಕ್ಕಿ ನಂತರ 10-15 ನಿಮಿಷ ಬಿಡಬೇಕು. ನಂತರ ಕಾಲುಗಳನ್ನು ತೊಳೆದು ತೆಂಗಿನೆಣ್ಣೆ ಹಚ್ಚಬೇಕು. ಈ ರೀತಿ ಮಾಡಿದರೆ ಪಾದಗಳಲ್ಲಿರುವ ಬಿರುಕು ಕಡಿಮೆಯಾಗುತ್ತದೆ.

5. ಪಪ್ಪಾಯಿ ಹಣ್ಣಿಗೆ ಸ್ವಲ್ಪ ನಿಂಬೆರಸ ಹಾಕಿ ಪಾದಗಳಿಗೆ 10 ನಿಮಿಷ ತಿಕ್ಕಿ ನಂತರ ತೊಳೆಯಬೇಕು. ಈ ರೀತಿ ವಾರಕ್ಕೆ 2 ಬಾರಿ ಮಾಡಿದರೆ ಪಾದಗಳು ನುಣಪಾಗಿ ಸುಂದರವಾಗಿ ಕಾಣುವುದು.

ಕೇಂದ್ರ ಸರಕಾರಿ ನೌಕರರಿಗೆ 7 % DA ಹೆಚ್ಚಳ


central-govt-employees-da-hiked-7-percent
 
ನವದೆಹಲಿ,ಫೆ.1: ಕೇಂದ್ರ ಸರಕಾರಿ ನೌಕರರಿಗೆ ಇಲ್ಲೊಂದು ಸಿಹಿಸುದ್ದಿ. ಕೇಂದ್ರ ನೌಕರರಿಗೆ 2012ರ ಜನವರಿ 1 ರಿಂದ ಅನ್ವಯವಾಗುವಂತೆ ಶೇ. 7ರಷ್ಟು ಅಧಿಕ ತುಟ್ಟಿ ಭತ್ಯೆ (DA) ಪ್ರಾಪ್ತಿಯಾಗಲಿದೆ. ಕಳೆದ ಸೆಪ್ಟೆಂಬರಿನಲ್ಲಿ ಇದೇ ಪ್ರಮಾಣದಲ್ಲಿ ತುಟ್ಟಿ ಭತ್ಯೆ ಹೆಚ್ಚಿಸಲಾಗಿತ್ತು.

ಈವರೆಗೆ ನೌಕರರು ಮೂಲ ವೇತನದ ಶೇ. 58ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದರು. ಈಗ ಅದು ಶೇ. 7ರಷ್ಟು ಹೆಚ್ಚಾಗಲಿದ್ದು, ಇನ್ನು ಮುಂದೆ ನೌಕರರು ಪಡೆಯುವ ತುಟ್ಟಿ ಭತ್ಯೆಯ ಪ್ರಮಾಣ ಶೇ. 65 ಆಗಲಿದೆ. ಸುಮಾರು 50 ಲಕ್ಷ ಹಾಲಿ ಉದ್ಯೋಗಿಗಳು ಮತ್ತು 40 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.

ಡಿಸೆಂಬರ್ 2011ರ ಅವಧಿಯವರೆಗೆ ಅಂದರೆ 12 ತಿಂಗಳಲ್ಲಿ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿಯು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ತನ್ನ ನೌಕರರಿಗೆ ಹೆಚ್ಚುವರಿ ತುಟ್ಟಿ ಭತ್ಯೆ ನೀಡಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ. ಈ ಸರಾಸರಿಯ ಆಧಾರದ ಮೇಲೆ ಪ್ರತಿ 6 ತಿಂಗಳಿಗೊಮ್ಮೆ DA ಪರಿಷ್ಕರಿಸಲಾಗುವುದು.

'ಫೈಲ್' ಸರೀನಾ? 'ಕಡತ' ಸರೀನಾ ಚರ್ಚೆ, ಅವಲೋಕನ


Fuel Kannada Program, Bangalore
 
ಬೆಂಗಳೂರು, ಫೆ.1: ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ 28 ಹಾಗು 29 ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್) ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ, ಗಣಕದಲ್ಲಿ ಹೆಚ್ಚಾಗಿ ಬಳಸಲಾಗುವ ಪರ್ಯಾಯ ಕನ್ನಡ ಪದಗಳ ಅವಲೋಕಿಸುವ ಸಲುವಾಗಿ ಕನ್ನಡ ಸಮುದಾಯದ ಮೂಲಕ ಅವಲೋಕನ ನಡೆಸಲಾಯಿತು. ಕಂಪ್ಯೂಟರ್ ತಂತ್ರಾಂಶಗಳ ಕನ್ನಡ ಅನುವಾದದಲ್ಲಿನ ಗೊಂದಲ ಹಾಗು ಏಕರೂಪತೆಯ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸಂಚಯ (sanchaya.net) ತಂಡವು ಈ FUEL ಕನ್ನಡ ಕಾರ್ಯಗಾರವನ್ನು ರೆಡ್‌ ಹ್ಯಾಟ್‌ನ ನೆರವಿನಿಂದ ಹಮ್ಮಿಕೊಂಡಿತ್ತು.

ಭಾಷಾಶಾಸ್ತ್ರಜ್ಞರು, ಅನುವಾದಕರು ಹಾಗು ಬಳಕೆದಾರರು ಮುಂತಾಗಿ ಸುಮಾರು 15 ಜನರು ಪಾಲ್ಗೊಂಡ ಎರಡು ದಿನಗಳ ಈ ಕಾರ್ಯಗಾರದಲ್ಲಿ ಸುಮಾರು 578 ಪದ/ಪದಗುಚ್ಛಗಳ ಪ್ರಸ್ತುತ ಅನುವಾದವನ್ನು ಅವಲೋಕಿಸಿ, ಅದರಲ್ಲಿನ ತಪ್ಪುಗಳನ್ನು ತಿದ್ದಿ ಒಂದು ಶಿಷ್ಟ ಗಣಕ ಪದಕೋಶವನ್ನು ಸಿದ್ಧಗೊಳಿಸಲಾಯಿತು.
ಉದಾ: file ಎನ್ನುವುದಕ್ಕೆ ಕಡತ, edit-ಸಂಪಾದನೆ, window-ಕಿಟಕಿ..ಇತ್ಯಾದಿ

ರೆಡ್‌ ಹ್ಯಾಟ್‌ನ ಶಂಕರ ಪ್ರಸಾದ್ ಎಲ್ಲರನ್ನೂ ಸ್ವಾಗತಿಸಿ, ಕಂಪ್ಯೂಟರ್ ಪದಕೋಶದಲ್ಲಿ ಶಿಷ್ಟತೆಯ ಅಗತ್ಯಗಳನ್ನು ವಿವರಿಸಿದರು. ನಂತರ ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿಯಾದಂತಹ ಜಿ ಎನ್ ನರಸಿಂಹ ಮೂರ್ತಿಯವರು ಈ ನಿಟ್ಟಿನಲ್ಲಿ ಹಿಂದೆ ನಡೆದ ಕೆಲಸಗಳು ಹಾಗು ಮುಂದಿನ ಕಾರ್ಯಗಳ ಕುರಿತು ಮಾತನಾಡಿದರು.

ಈ ಕಾರ್ಯಗಾರದಲ್ಲಿ ಕಿರುತೆರೆಯ ಖ್ಯಾತ ನಟಿ ಜಯಲಕ್ಷ್ಮಿ ಪಾಟೀಲ್, ಬನವಾಸಿ ಬಳಗದ ಸದಸ್ಯರು, ಕಣಜದಲ್ಲಿ ಕೆಲಸ ಮಾಡುತ್ತಿರುವವರು, ತಂತ್ರಜ್ಞರು, ಗೂಗಲ್ ಸಂಸ್ಥೆಯಲ್ಲಿನ ಈ ಹಿಂದಿನ ಅನುವಾದಕರು, ಪತ್ರಕರ್ತರು, ಭಾಷಾತಂತ್ರಜ್ಞರು ಮುಂತಾದವರು ಭಾಗವಹಿಸಿದ್ದರು.

ಲೋಕಲೈಸೇಶನ್ ಅಥವ ಪ್ರಾದೇಶೀಕರಣ ಎನ್ನುವುದು ಒಂದು ಉತ್ಪನ್ನವನ್ನು ನಿರ್ದಿಷ್ಟ ಪ್ರದೇಶ ಅಥವ ಭಾಷಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಪರಿವರ್ತಿಸುವ ಮಾಡುವ ಕೆಲಸವಾಗಿದೆ. ಪ್ರಾದೇಶೀಕರಣವು ಹೆಚ್ಚು ಸಂಕೀರ್ಣವಾದಂತೆಲ್ಲಾ ಮತ್ತು ಹಲವು ಉಪಕರಣಗಳನ್ನು ಒಳಗೊಂಡಂತೆಲ್ಲಾ ಅನುವಾದ ಮತ್ತು ಪದಕೋಶದ ಶಿಷ್ಟತೆಯು ಎದುರಾಗುತ್ತಾ ಹೋಗುತ್ತದೆ.

ಆದ್ದರಿಂದ, ಈ ಸಂದರ್ಭದಲ್ಲಿ ಆ ರೀತಿಯ ಒಂದು ಕಾರ್ಯಗಾರವು ಅಗತ್ಯ ಹಾಗು ಪ್ರಮುಖವೆನಿಸುತ್ತದೆ. ಇಂದಿನ ತಂತ್ರಜ್ಞಾನ ಕ್ರಾಂತಿಯು ನಮ್ಮ ಕರ್ನಾಟಕದ ಪ್ರತಿ ಮೂಲೆಯನ್ನು ತಲುಪಲು ಅದು ಏಕರೂಪವಾದ ಪದಗಳೊಂದಿಗೆ ಕನ್ನಡದಲ್ಲಿ ಲಭ್ಯವಾಗಿಸುವುದು ಅನಿವಾರ್ಯ.

ಸ್ಥಳೀಯ ಬಳಕೆದಾರರು ತಂತ್ರಜ್ಞಾನವನ್ನು ಸುಲಭವಾಗಿ ಬಳಸಲು ನೆರವಾಗಲು FUEL ಪರಿಯೋಜನೆಯು ಒಂದು ಶಿಷ್ಟವಾದ ಹಾಗು ಏಕರೂಪವಾದ ಪಾರಿಭಾಷಿಕ ಪದಕೋಶವನ್ನು ಒದಗಿಸುತ್ತದೆ. ಈಗಾಗಲೆ ಸುಮಾರು 9 ಭಾರತೀಯ ಭಾಷೆಗಾಗಿ ಈ ಬಗೆಯ ಕಾರ್ಯವು ನಡೆದಿದ್ದು, ಕನ್ನಡದ ಕಂಪ್ಯೂಟರ್ ಪದಕೋಶವು 10ನೆಯದ್ದಾಗಿದೆ.