ಪುಟಗಳು





ಸೆ.೧೨ ರಿಂದ ಲೋಕಾಯುಕ್ತರ ರಾಜ್ಯ ಪ್ರವಾಸ


ಈ ದಿನದ ಚಿನ್ನದ ಬೆಲೆ

ಅಣ್ಣಾ ಒಂದು ರುಪಾಯಿ ಕೊಡಣ್ಣಾ, ಊಟ ಮಾಡಿಲ್ಲ!


 
 
 
ಭಿಕ್ಷುಕಿ : ಅಣ್ಣಾ.. ಮೂರು ದಿನದಿಂದ ಊಟ ಮಾಡಿಲ್ಲ.. ಒಂದು ರೂಪಾಯಿ ಕೊಡಿ..
ಗುಂಡ : ಮೂರು ದಿನಂದಿಂದ ಊಟ ಮಾಡಿಲ್ಲಾಂತಿಯಾ .. ಒಂದು ರೂಪಾಯಿ ನಲ್ಲಿ ಏನು ಮಾಡ್ತೀಯ:
ಭಿಕ್ಷುಕಿ : ಎಷ್ಟು ಕೆಜಿ ಕಮ್ಮಿ ಆಗಿದ್ದೀನಿಂತಾ ನೋಡ್ತೀನಿ..

***
ತಿಮ್ಮ : ನಿನ್ನೆ ಬರಬೇಕಾದರೆ ನನ್ನ ಹೆಂಡ್ತಿ ಕಣ್ಣಿಗೆ ಸಣ್ಣ ಕಲ್ಲೊಂದು ಬಿತ್ತು.. ಅದನ್ನು ತೆಗೆಸೋಕೆ ನೂರು ರೂಪಾಯಿ ಖರ್ಚಾಯಿತು ಕಣೋ..
ಗುಂಡ : ನಿಂದೇ ಪರವಾಗಿಲ್ಲ ಬಿಡಪ್ಪ..
ತಿಮ್ಮ : ನಿಂಗೆ ಏನಾಯಿತು?
ಗುಂಡ : ನನ್ನ ಹೆಂಡ್ತಿ ಕಣ್ಣಿಗೆ ನಿನ್ನೆ ರೇಷ್ಮೆ ಸೀರೆ ಬಿತ್ತಪ್ಪಾ.. ಐದು ಸಾವಿರ ಖರ್ಚಾಯಿತು!

***
ಗುಂಡ : ನಮ್ಮ ದೂರದ ಉತ್ತರಪ್ರದೇಶ ರಾಜ್ಯದಲ್ಲಿ ಮಕ್ಕಳಿಗೆ ಸರ್ ನೇಮ್ ಯಾವ ರೀತಿ ಇಡುತ್ತಾರೆ ಗೊತ್ತಾ..
ತಿಮ್ಮ : ಗೊತ್ತಿಲ್ಲಾ, ಹೇಳು.
ಗುಂಡ : ಒಂದು ಮಕ್ಕಳಿದ್ದರೆ ಏಕನಾಥ್, 2 - ದುಬೆ, 3 - ತಿವಾರಿ, 4 - ಚತುರ್ವೇದಿ, 5 - ಪಾಂಡೆ, ಎಲ್ಲರದ್ದಾದರೆ - ಮಿಶ್ರಾ.. ಅನಾಥ ಮಕ್ಕಳಾದರೆ - ಗುಪ್ತಾ!

***
ವ್ಯಾಜ್ಯವೊಂದರಲ್ಲಿ ಗುಂಡ ಕಟಕಟೆಯಲ್ಲಿ ನಿಂತಿದ್ದ..
ವಕೀಲ : ನಾನು ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಗೀತೆಯನ್ನು ಮುಟ್ಟಿ ಪ್ರಮಾಣ ಮಾಡು..
ಗುಂಡ : ನಾನು ಯಾರನ್ನೂ ಮುಟ್ಟಲ್ಲ ಸ್ವಾಮಿ..
ವಕೀಲ : ಯಾಕೆ?
ಗುಂಡ : ಕಳೆದ ಬಾರಿ ಮಾರ್ನವಮಿ ಜಾತ್ರೆಯಲ್ಲಿ ಗೊತ್ತಿಲ್ಲದೇ ಲಕ್ಷ್ಮೀಯನ್ನು ಮುಟ್ಟಿ ಪಂಚಾಯತಿಯಲ್ಲಿ ಉಗಿಸಿಕೊಂಡಿದ್ದೆ.. ಇನ್ನು ಗೀತಾ ಮುಟ್ಟಿದರೆ ಅಷ್ಟೇ..

ಅಂಕಿತ ಪ್ರಕಾಶನ:ಹೊಸ ಪುಸ್ತಕಗಳ ಬಿಡುಗಡೆ.