ಪುಟಗಳು

ಛಂದ ಪುಸ್ತಕ ಆಹ್ವಾನ

ಕಳೆದ ಏಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2011ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ.
ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ ಅಥವಾ ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು ಕಳುಹಿಸಬೇಕು. ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವದಿಲ್ಲ.ಆಯ್ಕೆಯಾದ ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ ಕೊಟ್ಟು, ಅವರ ಕಥಾ ಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ.
ಈ ಪುಸ್ತಕವನ್ನು 2012ರ ಫೆಬ್ರವರಿ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯವ ಸುಂದರ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರ. ಕತೆಗಳನ್ನು ಕಳಿಸಬೇಕಾದ ವಿಳಾಸ:ಛಂದ ಪುಸ್ತಕ, c/o ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560 076 (ದೂ. 98444 22782)
ಕೊನೆಯ ದಿನಾಂಕ: ಜನವರಿ 10, 2012ಹೆಚ್ಚಿನ ವಿವರಗಳಿಗೆ: vas123u@yahoo.com

ಕನ್ನಡ ಶಾಲೆ ಮುಚ್ಚುವ ನಿರ್ಧಾರ, ಸರಕಾರಕ್ಕೆ ಮುಖಭಂಗ


Kannada Medium Schools
 
ಬೆಂಗಳೂರು, ಡಿ 16: ಕಡಿಮೆ ಮಕ್ಕಳ ಹಾಜರಾತಿವಿರುವ ಕನ್ನಡ ಮೀಡಿಯಂ ಶಾಲೆಗಳನ್ನು ಮುಚ್ಚುವ ಅಥವಾ ಬೇರೆ ಶಾಲೆಗಳ ಜೊತೆ ವಿಲೀನಗೊಳಿಸುವ ಸರಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಶುಕ್ರವಾರ (ಡಿ 16) ವಿಚಾರಣೆ ನಡೆಸಿದ ನ್ಯಾಯಾಲಯ ಕಡಿಮೆ ಮಕ್ಕಳ ಹಾಜರಾತಿವಿರುವ ಕನ್ನಡ ಮೀಡಿಯಂ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯಬೇಕು ಅಲ್ಲದೆ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಸರಕಾರಕ್ಕೆ ಆದೇಶ ನೀಡಿದೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಯ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಚಂದ್ರಶೇಖರ್ ಕಂಬಾರ ಅಲ್ಲದೆ ಚನ್ನವೀರ ಕಣವಿ ಮುಂತಾದವರು, ಸರಕಾರದ ಶಾಲೆ ಮುಚ್ಚುವ ನಿರ್ಧಾರವನ್ನು ಪ್ರಶ್ತ್ನಿಸಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದರು.

LPC Form (last Payment Certificate)


ದೇಶಕ್ಕೆ ಸ್ವಾತಂತ್ರ್ಯ ಬಂದರೂ ಕವಡೇಪುರಕ್ಕೆ ಸ್ವಾತಂತ್ರ್ಯ ಬಂದಿಲ್ಲರೀ



ಶೀರ್ಷಿಕೆ:ಕವಡೆಪುರದ ಕೌರವರು ಲೇಖಕರು: ವೈ.ಎಸ್. ಹರಗಿ ಪ್ರಕಾಶಕರು: ಶ್ರೀನಿವಾಸ ಪುಸ್ತಕ ಪ್ರಕಾಶನ ಪುಟ: 344 ಬೆಲೆ:ರೂ.170/-

Managuli mavana magale

Nettana mooga

Bel bellage

Ati ati sodharati

maavanamagale madhyanadaaga mavina totaka baa

hodi hodi hodi hodi yeesi maava

nadakontha hogabyada hattrabaare nanna tempodaaga

Bhavageethe - ni hinga nodabyda ನೀ ಹಿಂಗ ನೋಡ ಬ್ಯಾಡ ನನ್ನ...

Bhavageethe - onde baari nanna ಒಂದೆ ಬಾರಿ ನನ್ನ ನೋಡಿ...

Maari Nodaka Baara

PREETIYA PARIWALA.MPG

sadArame - Kalla's Part. ಸದಾರಮೆ ಕಳ್ಳನ ಭಾಗ. Scene 6.

ಡೆಂಗ್ಯು ಜ್ವರ ಮತ್ತು ಚಿಕ್ಕನ್ಗುನ್ಯ

Tumkur One

World Aids Day-2011

ಪೇಜಾವರಶ್ರೀಗಳಿಗೆ ದಲಿತರ ಬಹಿರಂಗ ಸವಾಲ್


Dalits challenge Pejawar Seer
 
ಸುಳ್ಯ, ನ.30: ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ನಡೆಯುವ ಮಡೆಸ್ನಾನವನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ದಲಿತ ಸಂಘಟನೆ ಮುಖಂಡರು ಬಹಿರಂಗ ಸವಾಲು ಎಸೆದಿದ್ದಾರೆ.

ದಲಿತ ಕೇರಿಗಳಲ್ಲಿ ಪಾದಯಾತ್ರೆ, ಅಸ್ಪೃಶ್ಯತೆ ವಿರೋಧ, ಉಪವಾಸ ಸತ್ಯಾಗ್ರಹ ಮಾಡುವ ಪೇಜಾವರಶ್ರೀಗಳು ಸುಬ್ರಹ್ಮಣ್ಯದಲ್ಲಿ ಮಾತ್ರ ಮೂಢನಂಬಿಕೆ ಬಿತ್ತುತ್ತಿರುವುದು ಏಕೆ?

ಪುರೋಹಿತಶಾಹಿಗಳ ಮಡೆಸ್ನಾನದ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ? ಕುಕ್ಕೆ ಮಠದ ಸ್ವಾಮಿಯ ಆದೇಶದ ಮೇರೆಗೆ ನಡೆಯುವ ಈ ಅನಿಷ್ಠವನ್ನು ನೈತಿಕತೆ ಬದ್ಧತೆ, ದೈರ್ಯವಿದ್ದರೆ ಪೇಜಾವರರು ವಿರೋಧಿಸಲಿ. ಆಗ ನಿಮ್ಮ ದಲಿತ ಕಾಳಜಿ ಬೂಟಾಟಿಕೆಯೋ, ಅಸಲಿಯೋ ಗೊತ್ತಾಗುತ್ತದೆ.

ತಪ್ಪಿದಲ್ಲಿ ಪೇಜಾವರ ಶ್ರೀ ಸಭೆಗಳಿಗೆ ಕಪ್ಪು ಭಾವುಟ ತೋರಿಸಿ ಪ್ರತಿಭಟಿಸಲಾಗುವುದು. ಈ ಪದ್ಧತಿ ಅನಿಷ್ಟವಲ್ಲ ಎಂಬುದಾದರೆ ಸ್ವಾಮೀಜಿಗಳು ಹರಕೆ ಹೊತ್ತುಕೊಂಡು ಸೇವೆ ಉರುಳು ಸೇವೆ ಕೈಗೊಳ್ಳಲಿ, ದಲಿತರ ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ನಾಟಕವಾಡುವುದನ್ನು ನಿಲ್ಲಿಸಲಿ ಎಂದು ದಲಿತ ಮುಖಂಡ ಶಿವರಾಮು ಗುಡುಗಿದ್ದಾರೆ

World Aids Day