ಪುಟಗಳು

ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ …


ಕನ್ನಡದ ಪ್ರಮುಖ ವೈದ್ಯ ಸಾಹಿತಿಗಳಲ್ಲೊಬ್ಬರಾದ ಡಾ.ಹೆಚ್.ಗಿರಿಜಮ್ಮನವರ `ಗರ್ಭಧಾರಣೆ:ಸಂದೇಹ ನಿವಾರಣೆಪುಸ್ತಕ ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ತಿಳುವಳಿಕೆ ಕೊಡುವ ಕೈಪಿಡಿ.

ಒಂದೆಡೆ ಜನಸಂಖ್ಯೆ ನಾಗಾಲೋಟದಲ್ಲಿ ಏರುತ್ತಲೇ ಇದ್ದರೆ, ಮತ್ತೊಂದೆಡೆ ಲೈಂಗಿಕ ವಿಷಯಗಳ ಕುರಿತ ಅಜ್ಞಾನವೂ ಹೆಚ್ಚುತ್ತಿದೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ಜನಸಾಮಾನ್ಯರಿಗೆ ದಾಂಪತ್ಯ-ಸಾಂಗತ್ಯದ ಕುರಿತು ಸುಲಭ ಭಾಷೆಯಲ್ಲಿ ಅರಿವು ನೀಡುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿರುವ ಗಿರಿಜಮ್ಮನವರ ಈ ಪುಸ್ತಕ ಗರ್ಭಧಾರಣೆ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ವಿಷಯಗಳನ್ನು ಚರ್ಚಿಸುತ್ತದೆ.

ಗಂಡು ಹೆಣ್ಣಿನ ಸಾಂಗತ್ಯ, ಗರ್ಭ ನಿರೋಧಕಗಳ ಬಳಕೆ, ಗರ್ಭಧಾರಣೆ, ಗರ್ಭಿಣಿ ಸ್ತ್ರೀಯರು ವಹಿಸಬೇಕಾದ ಎಚ್ಚರಿಕೆಗಳು, ಮೂಢನಂಬಿಕೆಗಳು, ಆಹಾರಕ್ರಮ, ಸ್ತನ್ಯಪಾನದ ಮಹತ್ವ, ಹೆರಿಗೆ, ಇತ್ಯಾದಿ ವಿಷಯಗಳ ಕುರಿತ ವಿವರಗಳಿವೆ. ಪ್ರಶ್ನೋತ್ತರಗಳ ಮಾದರಿಯ ನಿರೂಪಣೆ ವಿಷಯವನ್ನು ಓದುಗರಿಗೆ ಸುಲಭವಾಗಿ ಮುಟ್ಟಿಸುವಂತಿದೆ. ರೇಖಾಚಿತ್ರಗಳ ಬಳಕೆ ಪುಸ್ತಕದ ಸೊಗಸನ್ನು ಹೆಚ್ಚಿಸಿದೆ.

ಶೀರ್ಷಿಕೆ : ಗರ್ಭಧಾರಣೆ : ಸಂದೇಹ ನಿವಾರಣೆ ಲೇಖಕರು : ಡಾ. ಹೆಚ್. ಗಿರಿಜಮ್ಮ ಪ್ರಕಾಶಕರು : ವಸಂತ ಪ್ರಕಾಶನ ಪುಟಗಳು :115 ಬೆಲೆ:ರೂ.50/-

ಮಣ್ಣೆ ಕಾವಲು ಶ್ರೀ ಮಣ್ಣೆಮ್ಮ ದೇವಿ: ಶ್ರೀ ಮಣ್ಣೆಮ್ಮ ದೇವಿ ಜಾತ್ರಾ ಮಹೋತ್ಸವ (ದಿನಾಂಕ:೨೫.೦೪.೨೦...

ಮಣ್ಣೆ ಕಾವಲು ಶ್ರೀ ಮಣ್ಣೆಮ್ಮ ದೇವಿ: ಶ್ರೀ ಮಣ್ಣೆಮ್ಮ ದೇವಿ ಜಾತ್ರಾ ಮಹೋತ್ಸವ (ದಿನಾಂಕ:೨೫.೦೪.೨೦...