ಪುಟಗಳು

ಮಗಳಿಗೆ 3 ಮಗು ಕರುಣಿಸಿದ್ದ ರೇಪಿಸ್ಟ್ ಫಾದರ್ ಸೆರೆ

ಬರ್ಲಿನ್, ಸೆ.15: ಅಸಹ್ಯವಾದರೂ ಇದು ಸತ್ಯ. ತನ್ನ ಮಗಳಿಗೆ ಮೂರು ಮಕ್ಕಳನ್ನು ಕರುಣಿಸಿದ್ದ, ರೇಪ್ ಮಾಡುವುದರಲ್ಲಿ ಸಿದ್ದಹಸ್ತ ಎನಿಸಿದ್ದ ಜರ್ಮನಿಯ 69 ವರ್ಷದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ಸುಮಾರು 497 ಸಲ ತನ್ನ ಮಗಳ ಮೇಲೆ ಬಲಾತ್ಕಾರ ಮಾಡಿ, ಸುಮಾರು 34 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಆರೋಪವನ್ನು ಜರ್ಮನಿಯ ಮಹಾನ್ ತಂದೆ ಮೇಲೆ ಹೊರೆಸಲಾಗಿದೆ.
  Read:  In English 

12 ವರ್ಷ ವಯಸ್ಸಿದ್ದಾಗಲಿಂದ ತನ್ನ ಲೈಂಗಿಕ ತೃಪ್ತಿಗಾಗಿ ನನ್ನನ್ನು ನನ್ನ ತಂದೆ ಬಳಸುತ್ತಿದ್ದ. ನ್ಯೂರೆಂನ್ಬರ್ಗ್ ನ ಮನೆ ಅಥವಾ ಕಾರಿನಲ್ಲಿ ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದು ಅಪ್ಪನಿಂದ ಮೂರು ಗಂಡು ಮಕ್ಕಳನ್ನು ಪಡೆದ 46 ವರ್ಷದ ಮಗಳು ಹೇಳಿಕೊಂಡಿದ್ದಾಳೆ.

ಇತ್ತೀಚೆಗೆ ತನ್ನ ಅಧಿಕಾರಿಯೊಬ್ಬರ ಬಳಿ ತಂದೆಯ ಪ್ರತಾಪದ ಗುಟ್ಟನ್ನು ಬಿಚ್ಚಿದ್ದು, ಈಗ ಎಲ್ಲೆಡೆ ಸುದ್ದಿಯಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಬಾಬಾ ರಾಮ್‌ದೇವ್‌ಗೆ ರಾಖಿ ಸಾವಂತ್ ಚಾಲೆಂಜ್

ಯೋಗ ಗುರು ಬಾಬಾ ರಾಮ್‌ದೇವ್ ಅವರಿಗೆ ಐಟಂ ಬೆಡಗಿ ರಾಖಿ ಸಾವಂತ್ ಸಖತ್ ಚಾಲೆಂಜ್ ಹಾಕಿದ್ದಾರೆ. ತಾಕತ್ ಇದ್ದರೆ ತಮ್ಮ ಜೊತೆ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಬನ್ನಿ ಎಂದಿದ್ದಾರೆ. ಈ ಹಿಂದೊಮ್ಮೆ ರಾಖಿ ಸಾವಂತ್‌ಗೆ ಬಾಬಾ ತೀವ್ರ ಮುಖಭಂಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಖಿ ತಿರುಗೇಟು ನೀಡಿದ್ದಾರೆ.

'ಬಿಗ್ ಬಾಸ್' ಅಡ್ಡಾಗೆ ಬನ್ನಿ ಮುಖಾ ಮುಖಿ ಭೇಟಿಯಾಗೋಣ. ಅಲ್ಲಿ ನೀನಾ ನಾನಾ ನೋಡೇ ಬಿಡೋಣ ಎಂದಿದ್ದಾರೆ. ಈ ಹಿಂದೆ ಬಾಬಾ ರಾಮ್‌ದೇವ್ ಮೇಲೆ ರಾಖಿಗೆ ಮನಸಾಗಿ ಮದುವೆಯಾಗುವುದಾದರೆ ಅವರನ್ನೇ ಆಗುತ್ತೇನೆ. ಇಲ್ಲದಿದ್ದರೆ 'ಕನ್ಯೆ'ಯಾಗಿಯೇ ಉಳಿದುಬಿಡುತ್ತೇನೆ ಎಂದಿದ್ದರು.
  Read:  In English 

ಇದಕ್ಕೆ ತಡವಾಗಿ ಪ್ರತಿಕ್ರಿಯಿಸಿದ ಬಾಬಾ, ಇದೊಂದು ನಡತೆಗೆಟ್ಟ ಮಾತು ಎಂದಿದ್ದರು. ಬಾಬಾ ಮಾತಿಗೆ ಕೆರಳಿದ ಸರ್ಪದಂತಾಗಿರುವ ರಾಖಿ, "ಬಾಬಾಗೆ ನಾನು ಚಾಲೆಂಜ್ ಮಾಡುತ್ತಿದ್ದೇನೆ, ನನ್ನೊಂಗಿಗೆ ಅವರು ಬಿಗ್‌ಬಾಸ್ ಮನೆಗೆ ಬರಲಿ. ವಿಶ್ವಾಮಿತ್ರನಿಗೆ ಮೇನಕೆ ತಪಸ್ಸು ಭಂಗ ಮಾಡಿದಂತೆ ಮಾಡುತ್ತೇನೆ. ನಾನು ಚಾಲೆಂಜ್ ಮಾಡುತ್ತಿದ್ದೇನೆ ಅವರ ಶೀಲ ಹರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ.

ಕಲರ್ಸ್ ವಾಹಿನಿಯ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮಕ್ಕೆ ವೆಲ್ಡ್ ಎಂಟ್ರಿ ಮೂಲಕ ಬಾಬಾ ರಾಮ್ ದೇವ್ ಹಾಗೂ ರಾಖಿ ಸಾವಂತ್ ಪ್ರವೇಶಿಸುವ ಸಾಧ್ಯತೆಗಳೂ ಇಲ್ಲದಿಲ್ಲ! ಆದರೆ ಬಾಬಾ ರಾಮ್ ದೇವ್‌ ಗಡ್ಡ ಯಾಕೋ ಇಷ್ಟವಾಗಲಿಲ್ಲ. ಅವರು ಕ್ಲೀನ್ ಆಗಿ ಶೇವ್ ಮಾಡಿಕೊಂಡು ಬಂದರೆ ಒಳಿತು ಎಂದಿದ್ದಾರೆ ಬಿಂಕದ ರಾಣಿ ರಾಖಿ.

ವಿದ್ಯಾ ಬಾಲನ್ ಮತ್ತೊಮ್ಮೆ ಕಳಚಲಿದ್ದಾರೆ ವಸ್ತ್ರ!

ಈಗಾಗಲೆ ತಮ್ಮ ಯೌವನವನ್ನು ಬೆಳ್ಳಿತೆರೆಯ ಮೇಲೆ ಪ್ರದರ್ಶಿಸಿ ಚಿತ್ರರಸಿಕರ ಹೃದಯಕ್ಕೆ ಡೈವ್ ಹೊಡೆದಿರುವ ಸಖತ್ ಹಾಟ್ ಬೆಡಗಿ ವಿದ್ಯಾ ಬಾಲನ್ ಮತ್ತೊಮ್ಮೆ ಪಡ್ಡೆಗಳ ನಿದ್ದೆ ಕೆಡಿಸಲು ಬರುತ್ತಿದ್ದಾರೆ. 'ದಿ ಡರ್ಟಿ ಪಿಕ್ಚರ್' ಬಳಿಕ ವಿದ್ಯಾ ಸಹಿ ಹಾಕಿರುವ ಮತ್ತೊಂದು ಚಿತ್ರ 'ಎಂಜಾಯ್ ಯುವರ್ ಲೈಫ್'.
  Read:  In English 

ವಿದ್ಯಾ ತಮ್ಮ ಪಾತ್ರಕ್ಕಾಗಿ ನಗ್ನವಾಗುತ್ತಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು. ಚಿತ್ರದ ಪ್ರಮುಖ ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಕಾಣಿಸಲಿದ್ದಾರೆ. ಏತನ್ಮಧ್ಯೆ 'ದಿ ಡರ್ಟಿ ಪಿಕ್ಚರ್' ನೋಡಿರುವ ದಕ್ಷಿಣದ ನಿರ್ಮಾಪಕರು ಕಾಲ್ ಶೀಟ್‌ಗಾಗಿ ವಿದ್ಯಾ ಹಿಂದಿ ಬಿದ್ದಿದ್ದಾರೆ. ಆದರೆ ಅವರ ಬಲೆಗೆ ವಿದ್ಯಾ ಅಷ್ಟು ಸುಲಭವಾಗಿ ಸಿಗುವ ಮೀನಲ್ಲ.

'ಎಂಜಾಯ್ ಯುವರ್ ಲೈಫ್' ಚಿತ್ರದಲ್ಲಿ ವಿದ್ಯಾ ಏನೇನು ಮಾಡ್ತರೋ ಇನ್ನೇನು ತೋರಿಸ್ತಾರೋ ಎಂಬ ಕುತೂಹಲವಂತೂ ಆಕೆಯ ಅಭಿಮಾನಿಗಳಲ್ಲಿ ಇದ್ದೇ ಇದೆ. ಪ್ರೇಕ್ಷಕರು ಎಂಜಾಯ್ ಮಾಡುವುದಂತೂ ಸತ್ಯ. ಈ ಚಿತ್ರದ ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. ಅಲ್ಲಿಯವೆರಗೂ ವಿದ್ಯಾ ಅಭಿಮಾನಿಗಳು ತಾಳ್ಮೆವಹಿಸಲಿ

ಬೀಟ್ ರೂಟ್ ಮದ್ಯ, ಟೊಮ್ಯಾಟೋ ಮದ್ಯ:ರೇಣು ಯೋಜನೆ


ಬೆಂಗಳೂರು, ಸೆ. 14: ಬೀಟ್‌ರೂಟ್‌ನಿಂದ ಮದ್ಯ ತಯಾರಿಕೆ ಬಗ್ಗೆ ಸುಳಿವು ಕೊಟ್ಟಿದ್ದ ಮಾನ್ಯ ಅಬಕಾರಿ ಸಚಿವರು ಬುಧವಾರ ಮತ್ತೆ ಅದೇ ರಾಗ ಹಾಡಿದ್ದಾರೆ. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಹೊಸ ವಿಧಾನಗಳಲ್ಲಿ ಮದ್ಯ ತಯಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೇಣುಕಾಚಾರ್ಯ ಹೇಳಿದ್ದಾರೆ.

ಬೀಟ್‌ರೂಟ್‌ನಿಂದ ಮದ್ಯ ತಯಾರಿಕೆ ಬಗ್ಗೆ ಕಂಪೆನಿಯೊಂದು ಪ್ರಸ್ತಾವನೆ ಸಲ್ಲಿಸಿದೆ. ಇಲಾಖೆಯ ತಾಂತ್ರಿಕ ಸಮಿತಿ ಸಹ ಇದಕ್ಕೆ ಸಮ್ಮತಿಸಿದೆ. ಆದರೆ, ಹೊಸ ವಿಧಾನದ ಮದ್ಯ ತಯಾರಿಕೆಗೆ ಪ್ರಸಕ್ತ ಕಾಯ್ದೆಯಲ್ಲಿ ಅವಕಾಶಗಳಿಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ರೇಣುಕಾಚಾರ್ಯ ಹೇಳಿದರು.

ಬೀಟ್ ರೂಟ್ ನಂತರ ಟೋಮ್ಯಾಟೋ : 1 ಟನ್ ಬೀಟ್‌ರೂಟ್‌ನಲ್ಲಿ 350 ಲೀಟರ್ ಮದ್ಯ ತಯಾರಿಸಬಹುದು.[ತಯಾರಿಸುವ ವಿಧಾನ ನೋಡಿ] ಈ ಮದ್ಯದಲ್ಲಿ ಶೇ.16ರಷ್ಟು ಸಕ್ಕರೆ ಅಂಶವಿರುತ್ತದೆ. ಕೋಲಾರದ ನಿವೃತ್ತ ಸೇನಾಧಿಕಾರಿಯೊಬ್ಬರು ಟೊಮ್ಯಾಟೊದಿಂದ ಮದ್ಯ ತಯಾರಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಇದರ ಜೊತೆಗೆ, ರಾಜ್ಯದಲ್ಲಿ ಸಣ್ಣ ಪ್ರಮಾಣದ ಮದ್ಯ ತಯಾರಿಕಾ ಘಟಕ ಸ್ಥಾಪನೆಗೆ ಸರಕಾರ ಸಿದ್ಧತೆ ನಡೆಸಿದೆ.  ಚಾನ್ಸರಿ ಹೊಟೇಲ್, ಇಂದಿರಾನಗರದ ಫ್ರೆಶ್‌ಫೋರ್ ಮತ್ತು ನ್ಯೂ ಬಿಇಎಲ್ ರಸ್ತೆಯ ಸ್ಪಿರಿಟ್ ಬಿಯರ್ ವರ್ಲ್ಡ್ ಸಂಸ್ಥೆ ಅರ್ಜಿ ಸಲ್ಲಿಸಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದ್ದಾರೆ

ನಾನೇ ಬೇರೆ ನನ್ನ ಸ್ಟೈಲೇ ಬೇರೆ : ಶಿವರಾಜ ಪಾಟೀಲ - ಸಾಗರ ದೇಸಾಯಿ. ಯಾದಗಿರಿ


ಯಾದಗಿರಿ, ಸೆ. 15 : "ಮೊದಲನೇ ಲೋಕಾಯುಕ್ತ ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆ ಇದೆ ಎನ್ನುವುದನ್ನು ತೋರಿಸಿಕೊಟ್ಟರು. ಎರಡನೇ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸಂಸ್ಥೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋಸಿರಿದರು. ಮೂರನೇಯವನಾಗಿ ನಾನು ಹೇಗೆ ಕೆಲಸ ಮಾಡುತ್ತೇನೆ, ನನ್ನ ಸ್ಟೈಲ್ ಹೇಗಿದೆ ಎಂಬುದನ್ನು ಕಾದು ನೋಡಿ."

ಹೀಗೆಂದು ಲೋಕಾಯುಕ್ತ ಸಂಸ್ಥೆ ಮತ್ತು ತಮ್ಮ ಕಾರ್ಯನಿರ್ವಹಣೆಯ ಬಗ್ಗೆ ವಿಚಿತ್ರ ಕುತೂಲಹ ಕೆರಳಿಸಿದವರು ಮೂರನೇ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ.

ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಯಾದಗಿರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು ಮತ್ತು ಸಾರ್ವಜನಿಕರೊಡನೆ ಮುಕ್ತವಾಗಿ ಸಂವಾದ ನಡೆಸಿದರು.

ಲೋಕಾಯುಕ್ತರಿಗೆ ಸರ್ವಾಧಿಕಾರ ಬೇಡ, ಆದರೆ ಸರಿಯಾದ ಅಧಿಕಾರ ಇರಬೇಕು ಮತ್ತು ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ನಾನು ಲೋಕಾಯುಕ್ತನಾಗಿ ಕಾರ್ಯನಿರ್ವಹಿಸುವ ರೀತಿ ಭಿನ್ನವಾಗಿರುತ್ತದೆ. ನನ್ನ ಸ್ಟೈಲ್ ನೋಡಿ ನೀವೇ ನಿರ್ಧಾರ ಮಾಡಿ ಎಂದು ಅವರು ಜನರಿಗೇ ಸವಾಲ್ ಹಾಕಿದರು.