ಪುಟಗಳು

April 2012, SSLC Examination Dates


SSLC Examination April 2012
Date and Day of ExaminationSubjectSub CodeTimingsDuration
First Language
02-04-2012
Monday
Kannada
Telugu
Hindi
Marathi
Tamil
Urdu
English
Sanskrit
01
04
06
08
10
12
14
16
10:30-13:45 Hours3 Hours 15 Minutes
Core Subject
03-04-2012
Tuesday
* Indian Economics9210:30-13:45 Hours3 Hours 15 Minutes
# Elements of Engineering7110:30-13:15 Hours2 Hours 45 Minutes
# Engineering Drawing7214:30-17:45 Hours3 Hours 15 Minutes
# Elements of Electronic Engineering7310:30-13:45 Hours3 Hours 15 Minutes
# Elements of Computer Science7410:30-13:45 Hours3 Hours 15 Minutes
05-04-2012
Thursday
* Science8310:30-13:45 Hours3 Hours 15 Minutes
# Indian Political Science and Urban Policy9310:30-13:15 Hours2 Hours 45 Minutes
# Carnatic and Hindustani Music9414:30-17:45 Hours3 Hours 15 Minutes
Core Subject
09-04-2012
Monday
Mathematics
Indian Social Studies
81
91
10:30-13:45 Hours3 Hours 15 Minutes
Second Language
11.04.2012
Wednesday
English
Kannada
31
33
10:30-13:15 Hours2 Hours 45 Minutes
Third Language
13-04-2012
Friday
Hindi
Kannada
English
Arabic
Parsian
Urdu
Sanskrit
Konkani
61
62
63
64
65
66
67
68
10:30-13:15 Hours2 Hours 45 Minutes
16-04-2012
Monday
Social Science8510:30-13:45 Hours3 Hours 15 Minutes
# 71,72,73 and 74 subjects are applicable only for Junior Technical School Students.
# On XXX, practical and oral exams will be conducted in their respective centres.
* Only for blind and learning deficienct students.

ಮತ್ತೇರಿಸುವ ಮುತ್ತಿನ ಸುತ್ತ ತಮಾಷೆಯ ಸಂಗತಿಗಳು

Fun facts about kissing
ಮುತಿನಲ್ಲಿ ಮಧುವಿದೆ, ಪ್ರೀತಿಯಿದೆ, ಆಳವಾದ ಬಂಧವಿದೆ, ಕಂದಕಗಳನ್ನು ಸೇರಿಸುವ ಶಕ್ತಿಯಿದೆ. ಚುಂಬನದಲ್ಲಿ ಆಸೆಯ ಭಾವವಿದೆ, ತಮಾಷೆಯಿದೆ. ಆತ್ಮೀಯತೆಯಿಂದ ನೀಡುವ ಚುಂಬನದಲ್ಲಿ ಆರೋಗ್ಯದ ಗುಟ್ಟು ಕೂಡ ಅಡಗಿಕೊಂಡಿದೆ ಎಂದರೆ ನಂಬಲೇಬೇಕು.

ಮತ್ತೇರಿಸುವ ಮುತ್ತನ್ನು ಗಂಡುಹೆಣ್ಣು ಇಂದು ನಿನ್ನೆ ಕಂಡುಕೊಂಡ ಸಂಗತಿಯಲ್ಲ. ಆಡಂ ಮತ್ತು ಈವ್ ಒಬ್ಬರಿಗೊಬ್ಬರು ಆಕರ್ಷಿತರಾದ ಕ್ಷಣದಿಂದ ಮುತ್ತು ಜಾಗತಿಕವಾಗಿ ಜಾರಿಯಲ್ಲಿದೆ. ಪ್ರೀತಿಯನ್ನು ತೋರ್ಪಡಿಸಿಕೊಳ್ಳಲು ಗಂಡುಹೆಣ್ಣು ಕಂಡುಕೊಂಡ ಅತ್ಯಂತ ಸಹಜವಾದ ಕ್ರಿಯೆ ಚುಂಬನ. ಚುಂಬನದ ಜೊತೆ ಇನ್ನೂ ಅನೇಕ ಸಂಗತಿಗಳು ತಳಕುಹಾಕಿಕೊಂಡಿವೆ.

1. ಪ್ಯಾಷನೇಟ್ ಆಗಿ ಒಂದು ನಿಮಿಷಗಳ ಕಾಲ ಗಂಡು ಹೆಣ್ಣಿನ ಅಧರಅಧರಗಳು ಕೂಡಿದರೆ 26 ಕ್ಯಾಲೋರಿ ಸುಟ್ಟುಹೋಗಿರುತ್ತದೆ. ಸೋ, ಜಿಮ್‌ಗೆ ಹೋಗದೆಯೆ ಮುದ್ದಿನ ಸಂಗಾತಿಗೆ ಮುತ್ತಿಡುವ ಮುಖಾಂತರ ತೂಕವನ್ನು ಕೂಡ ಕಳೆದುಕೊಳ್ಳಬಹುದು.

2. ಒಂದು ಸಮೀಕ್ಷೆಯ ಪ್ರಕಾರ ಕಿಸ್ ಕೊಡುವಾಗ ಶೇ.37ರಷ್ಟು ಪುರುಷರು ಕಣ್ಣು ತೆರೆದಿರುತ್ತಾರೆ.

3. ಮುತ್ತಿಡುವಾಗ ಪುರುಷರು ಕಲ್ಪನೆಯಲ್ಲಿ ಕಳೆದುಹೋಗಿಬಿಡುತ್ತಾರೆ. ಆದರೆ, ಮಹಿಳೆಯರು ಇನ್ನಷ್ಟು ಬೇಕು ಎಂದು ಹಂಬಲಿಸುತ್ತಾರೆ.

4. ಚುಂಬಿಸುವಾಗ ಅನೇಕ ಗಂಡಂದಿರು ಹೆಂಡತಿಯ ಕೂದಲು ಅಡ್ಡಬರುವುದನ್ನು ಇಷ್ಟಪಡುವುದಿಲ್ಲ.

5. ಚುಂಬನ ಕ್ರಿಯೆ ನಿರಂತರವಾಗಿದ್ದರೆ ಮುಖದ ಮೇಲೆ ನೆರಿಗೆಗಳು ಹೆಚ್ಚಾಗಿ ಬರುವುದಿಲ್ಲ. ಮುಖದಲ್ಲಿರುವ ಸ್ನಾಯುಗಳು ಚುಂಬಿಸುವಾಗ ಹೆಚ್ಚು ಕ್ರಿಯಾಶೀಲವಾಗಿರುತ್ತವೆ.

6. ಪ್ರಾಚೀನ ಕಾಲದಲ್ಲಿ ಈಜಿಪ್ತರು ತುಟಿಯ ಬದಲು ಮೂಗಿನಿಂದ ಚುಂಬಿಸುತ್ತಿದ್ದರು.

7. ಹಲವಾರು ಶತಮಾನಗಳ ಹಿಂದೆ ಇಟಲಿಯಲ್ಲಿ ಯಾರಾದರೂ ಚುಂಬಿಸುವವರು ಸಿಕ್ಕುಬಿದ್ದರೆ ಮದುವೆಯಾಗಲೇಬೇಕಿತ್ತು.

ಹತ್ತು ನಿಮಿಷಕ್ಕೆ ಒಂದು ಕೋಟಿ ಒಲ್ಲೆ ಎಂದ ಕತ್ರಿನಾ

Actress Katrina Kaif

ಕೇವಲ ಹತ್ತೇ ಹತ್ತು ನಿಮಿಷದ ಕೆಲಸಕ್ಕೆ ರು.1 ಕೋಟಿ ಕೊಡ್ತೀವಿ ಎಂದರೂ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ನೋ ನೋ ಎಂದಿದ್ದಾರೆ! ಇನ್ನೂ 27ರ ಹರೆಯ ಈ ತಾರೆಗೆ ಕೇವಲ ಹತ್ತೇ ಹತ್ತು ನಿಮಿಷದಷ್ಟೂ ಸಮಯವಿಲ್ಲವಂತೆ. ಹಾಗಾಗಿ ಆಫರ್ ತಿರಸ್ಕರಿಸಿದ್ದಾರೆ.

ಏನಿದು ಆಫರ್ ಅಂತೀರಾ? ಕೊಚ್ಚಿ ಫ್ಯಾಷನ್ ಶೋನಲ್ಲಿ ರ್‍ಯಾಂ ಪ್ ಮೇಲೆ ಕ್ಯಾಟ್ ವಾಕ್ ಮಾಡಬೇಕಾಗಿತ್ತಷ್ಟೇ. ಅದೂ ಕೇವಲ ಹತ್ತೇ ಹತ್ತು ನಿಮಿಷ. ಟೈಮಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ ಕತ್ರಿನಾ. ಸದ್ಯಕ್ಕೆ ಈಕೆ ಯಶ್ ಚೋಪ್ರಾ ಅವರ 'ಲಂಡನ್ ಇಷ್ಕ್' ಎಂಬ ಚಿತ್ರಕ್ಕೆ ಸಹಿಹಾಕಿದ್ದಾರೆ.

ಮೊದಲೇ ದೊಡ್ಡ ಬ್ಯಾನರ್ ಚಿತ್ರ. ನಾಯಕ ನಟ ಶಾರುಖ್ ಖಾನ್. ಲಂಡನ್‌ನಲ್ಲಿ ಚಿತ್ರೀಕರಣ. ಇವೆಲ್ಲವನ್ನೂ ಬಿಟ್ಟು ಜುಜುಬಿ ರು.1 ಕೋಟಿಗೆ ಹೆಜ್ಜೆ ಹಾಕಲು ಸಾಧ್ಯವೆ? ಯಶ್ ಚೋಪ್ರಾ ಎಂದರೆ ಕೇಳಬೇಕೆ. ದುಡ್ಡು ಎಷ್ಟೇ ಕೋಟಿಗಳಾಗಲಿ ಚೆಲ್ಲಾಡುವ ಮನುಷ್ಯ. ಅಂದುಕೊಂಡಂತೆ ಚಿತ್ರ ಮೂಡಿಬರಬೇಕಷ್ಟೆ. (ಏಜೆನ್ಸೀಸ್)

ಕೇಂದ್ರ ರೈಲ್ವೆ ಬಜೆಟ್ 2012-13 ಮುಖ್ಯಾಂಶಗಳು

Union Railway Budget 2012-13
ನವದೆಹಲಿ, ಮಾ.14: ಕೇಂದ್ರ ರೈಲ್ವೆ ಸಚಿವ ದಿನೇಶ್ ತ್ರಿವೇದಿ ತಮ್ಮ ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ರವೀಂದ್ರನಾಥ ಠಾಗೋರ್ ಕಾವ್ಯವನ್ನು ವಾಚಿಸುತ್ತಾ, ಸದನದ ಮುಂದೆ ಭಾರತೀಯ ರೈಲ್ವೆ 2012-13 ಮಂಡಿಸಿದರು.

ಕರ್ನಾಟಕಕ್ಕೆ ಸಿಕ್ಕಿರುವ ಹೊಸ ಮಾರ್ಗ ಭರವಸೆ: ಗೇಜ್ ಪರಿವರ್ತನೆ, ಡಬ್ಲಿಂಗ್, ವಿದ್ಯುತ್ ರೈಲು ಮಾರ್ಗ ಮಾಹಿತಿ ಇಲ್ಲಿದೆ:
* ಗುಲ್ಬರ್ಗಾ-ಸುಲ್ತಾನ್ ಪುರ,
* ಹಿರಿಸಾವೆ-ಶ್ರವಣಬೆಳಗೊಳ,
* ಕಡೂರು- ಚಿಕ್ಕಮಗಳೂರು.

ಯೋಜನಾ ಆಯೋಗ ಅನುಮತಿಗೆ ಕಾದಿರುವ ಮಾರ್ಗಗಳು:
* ಗದಗ-ಹಾವೇರಿ
* ಪುಟ್ಟಪರ್ತಿ-ಚಿಕ್ಕಬಳ್ಳಾಪುರ
* ಶ್ರೀನಿವಾಸಪುರ-ಮದನಪಲ್ಲಿ

ಹೊಸ ಮಾರ್ಗ ಸರ್ವೆ:
* ಹಾವೇರಿ-ಶಿರಸಿ
* ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು
* ಮಧುಗಿರಿ-ಗೌರಿಬಿದನೂರು

ಗೇಜ್ ಪರಿವರ್ತನೆ:
* ಕೋಲಾರ-ಚಿಂತಾಮಣಿ
* ಚಿಕ್ಕಬಳ್ಳಾಪುರ-ಶಿಡ್ಲಘಟ್ಟ
* ಚಿಂತಾಮಣಿ-ಶಿಡ್ಲಘಟ್ಟ(2012-13ರಲ್ಲಿ ಪೂರ್ಣ)

ಜೋಡಿ ಮಾರ್ಗ ಪರಿವರ್ತನೆ:
* ರಾಮನಗರ-ಚೆನ್ನಪಟ್ಟಣ
* ಮೈಸೂರು-ನಾಗನಹಳ್ಳಿ
* ಮದ್ದೂರು-ಹನಕೆರೆ
* ಬಳ್ಳಕೆರೆ-ಬೀರೂರು
* ಬೀರೂರು-ಅಜ್ಜಂಪುರ(2012-13 ರಲ್ಲಿ ಪೂರ್ಣ)
* ಚನ್ನಪಟ್ಟಣ-ಶೆಟ್ಟಿಹಳ್ಳಿ
* ಮಂಡ್ಯ-ಎಲಿಯೂರು
* ನಾಗವಂಗಲ- ಅಜ್ಜಂಪುರ
* ಅಜ್ಜಂಪುರ-ಶಿವಾನಿ
* ಗದಗ- ಸೋಲಾಪುರ

2.15: ಕರ್ನಾಟಕಕ್ಕೆ 6 ಹೊಸ ಎಕ್ಸ್ ಪ್ರೆಸ್ 3 ಪ್ಯಾಸೆಂಜರ್ ರೈಲು
* ಯಶವಂತಪುರ ಕೊಚುವೆಲಿ(ಎಸಿ) ವಾರಕ್ಕೊಮ್ಮೆ
* ಚೆನ್ನೈ ಬೆಂಗಳೂರು ಎಸಿ ಡಬ್ಬರ್ ಡೆಕ್ಕರ್(ಪ್ರತಿದಿನ)
* ಇಂದೋರ್ ಯಶವಂತಪುರ ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ)
* ಪುರಿ ಯಶವಂತ ಗರೀಬ್ ರಥ (ವಾರಕ್ಕೊಮ್ಮೆ)
* ಮೈಸೂರು-ಸಾಯಿನಗರ ಶಿರಡಿ (ವಾರಕ್ಕೊಮ್ಮೆ)
* ಸೋಲಾಪುರ ಯಶವಂತಪುರ ಗುಲ್ಬಾರ್ಗಾ(೩ ಬಾರಿ)

3 ಪ್ಯಾಸೆಂಜರ್ ರೈಲು:
* ಮೈಸೂರು ಚಾಮರಾಜನಗರ
* ಮೈಸೂರು ಬೀರೂರು ವಯಾ ಅರಸೀಕೆರೆ
* ಬೆಂಗಳೂರು- ಹಾಸನ ವಯಾ ಶ್ರವಣಬೆಳಗೊಳ

ಇತರೆ ಮಾರ್ಗಗಳು : ಕಡೂರು-ಚಿಕ್ಕಮಗಳೂರು-ಸಕಲೇಶಪುರ, ಬೆಂಗಳೂರು-ಹಾಸನ(via ಶ್ರವಣಬೆಳಗೊಳ)
* ಮೈಸೂರು-ಬೆಂಗಳೂರು ಪ್ಯಾಸೆಂಜರ್ ವಾರಪೂರ್ತಿ ಓಡಾಟ.
* ಬೆಂಗಳೂರು -ಅರಸೀಕೆರೆ ವಾರಪೂರ್ತಿ ಪ್ರಯಾಣ.
* ಗುಲ್ಬರ್ಗಾ-ಸುಲ್ತಾನ್ ಪುರ, ರಾಯಚೂರು-ಗದ್ವಾಲ್ ಮಾರ್ಗ ಮುಂದಿನ ವರ್ಷ ಪೂರ್ಣ. ಹೊಸಮಾರ್ಗಗಳ ಮಾಹಿತಿಗೆ ಓದಿ

2.00: ಹಾವೇರಿಯಿಂದ ಶಿರಸಿಗೆ ಹೊಸ ರೈಲು ಮಾರ್ಗ.
* ಪುರಿ-ಯಶವಂತಪುರಕ್ಕೆ ಹೊಸ ರೈಲು
* ಬೀದರ್ -ಸಿಕಂದರಾಬಾದ್  ಇಂಟರ್ ಸಿಟಿ ರೈಲು.
* ಚೆನ್ನೈ -ಮಂಗಳೂರು ವಾರಪೂರ್ತಿ ಪ್ರಯಾಣ ಸಾಧ್ಯ.
* 20 ರೈಲು ಮಾರ್ಗಗಳಿಗೆ ವಿದ್ಯುತೀಕರಣ ಸರ್ವೆ.
* ಫಾಲ್ಗಾಟ್ ಮಂಗಳೂರು ರೈಲು ಕೊಯಮತ್ತೂರಿಗೆ ವಿಸ್ತರಣೆ

1.40: ರೈಲು ಪ್ರಯಾಣ ದರ ಅಲ್ಪ ಪ್ರಮಾಣ ಏರಿಕೆ, ಪ್ರತಿ ಕಿ.ಮೀ. ಗೆ 2 ಪೈಸೆ ಹೆಚ್ಚಳ. ಪ್ಲಾಟ್ ಫಾರಂ ದರ 3 ರೂ. ನಿಂದ 5 ರೂ.ಗೆ ಏರಿಸಲಾಗಿದೆ. [ವಿವರಗಳನ್ನು ಓದಿ]

1.30: ಬೆಂಗಳೂರಿನಲ್ಲಿ ಸುರಕ್ಷತಾ ಕೇಂದ್ರ ಸ್ಥಾಪನೆ.

1.20: 85 ಹೊಸ ಎಕ್ಸ್ ಪ್ರೆಸ್ ರೈಲು, 21 ಪ್ಯಾಸೆಂಜರ್ ರೈಲು ಘೋಷಣೆ.
*  ಪ್ರಸಕ್ತ ವರ್ಷ 1 ಲಕ್ಷ ಜನರಿಗೆ ಉದ್ಯೋಗವಾಕಾಶ ಲಭ್ಯ.

1.15 :
ರಿಯಲ್ ಟೈಮ್ ನಲ್ಲಿ ರೈಲು ಸಂಚಾರ ಮಾಹಿತಿ ಲಭ್ಯ. 36 ರೈಲುಗಳಿಗೆ ಅಳವಡಿಕೆ. ಮುಂದಿನ 18 ತಿಂಗಳಲ್ಲಿ ಪ್ರಯಾಣಿಕರಿಗೆ ಎಸ್ ಎಂಎಸ್ ಹಾಗೂ ಇಮೇಲ್ ಮೂಲಕ ಮಾಹಿತಿ ರವಾನೆ.

1.00: 
825 ಕಿ.ಮೀ ಗೇಜ್ ಪರಿವರ್ತನೆ ಕಾರ್ಯ ಪೂರ್ಣ.
*
ಹೈದರಾಬಾದ್- ಸಿಕಂದ್ರಾಬಾದ್ MMTC ಗೆ ಅನುಮೋದನೆ.. ಬೆಂಗಳೂರು-ಮೈಸೂರು ಯೋಜನೆಗೆ ಮಾದರಿ.

12.50:
ಕೇರಳಕ್ಕೆ ನಾಲ್ಕು ಹೊಸ ರೈಲ್ವೆ ಕೋಚ್ ಫ್ಯಾಕ್ಟರಿ. ಕೋಲಾರದಲ್ಲೂ ಹಾಗೂ ನವಿ ಮುಂಬೈಗೆ ಒಂದು ಫ್ಯಾಕ್ಟರಿ ಘೋಷಣೆ.
* 114 ಹೊಸ ರೈಲ್ವೆ ಮಾರ್ಗಗಳ ಸರ್ವೆ ಜಾರಿಯಲ್ಲಿದೆ. 5 ವರ್ಷಗಳಲ್ಲಿ 1 ಸಾವಿರ ಹೊಸ ನಿಲ್ದಾಣಗಳು.
* 17 ಗೇಜ್ ಪರಿವರ್ತನೆ ಕಾರ್ಯ ಹಾಗೂ 45 ಯೋಜನೆಗಳು 2012-13 ರಲ್ಲಿ ಪೂರ್ಣ.
* 17,000 ಕಿ.ಮೀ ಹೊಸ ರೈಲು ಮಾರ್ಗ ನಿರ್ಮಾಣ.

12.45:
ಆರ್ಥಿಕ ಕೊರತೆಯಿಂದ 482 ಯೋಜನೆಗಳು ನೆನಗುದಿಗೆ. 487 ಯೋಜನೆಗಳು ಅನುಷ್ಠಾನ ಹಂತದಲ್ಲಿದೆ.
* ಗ್ರಾಮೀಣ ಮತ್ತು ಗಡಿ ಭಾಗಕ್ಕೆ ರೈಲು ಸಂಪರ್ಕ ಒದಗಿಸಲು 5.5 ಲಕ್ಷ ಕೋಟಿ ರು ಮೀಸಲು.

12.30 :
1 ಲಕ್ಷಕ್ಕೂ ಅಧಿಕ ಕಿ.ಮೀ ಗಳಲ್ಲಿ 19,000 ಕಿ.ಮೀ ದೂರ ರೈಲ್ವೆ ಅಧುನೀಕರಣ ಮಾಡಲಾಗುವುದು.(ಸ್ಯಾಂ ಪಿತ್ರೋಡಾ ಸಮಿತಿ ಶಿಫಾರಸು)
*  ರು. 5.6 ಲಕ್ಷ ಕೋಟಿ ರು ರೈಲ್ವೆ ಆಧುನೀಕರಣಕ್ಕೆ ಬಳಕೆ ಮಾಡಲಾಗುವುದು.
* ರೈಲ್ವೆ ಅಪಘಾತವನ್ನು ಶೂನ್ಯಗೊಳಿಸುವುದು ನಮ್ಮ ಗುರಿ. ಶೇ 60 ರಷ್ಟು ಸಾವು ಲೆವೆಲ್ ಕ್ರಾಸಿಂಗ್ ನಲ್ಲಿ ಸಂಭವಿಸುತ್ತಿದೆ.
  Read:  In English 
12.25: Haath ki lakeeron se zindagi nahi banti; humara bhi kuch hissa hain zindagi banane mein ಕವನ ಸಾಲು ಉದ್ಗಾರ
12.20: ಹಿಮಾಲಯ ಇಲ್ಲದ ಭಾರತ, ಗಂಗಾ ನದಿ ಇಲ್ಲದ ಭಾರತ ಊಹಿಸಲು ಸಾಧ್ಯವಿಲ್ಲ. ಅದರಂತೆ ರೈಲ್ವೆ ಇಲ್ಲದೆ ಭಾರತವನ್ನು ಊಹಿಸಲಾಗದು

* ರೈಲ್ವೆ ಸಂಶೋಧನಾ ಮತ್ತು ಅಭಿವೃದ್ಧಿ ಕೌನ್ಸಿಲ್ ಗೆ 7.35 ಲಕ್ಷ ಕೋಟಿ ರು ಬಂಡವಾಳ ಹೂಡಿಕೆ

12.10: ಅನಿಲ್ ಕಾಕೊಡ್ಕರ್ ಅವರ ರೈಲ್ವೆ ಸುರಕ್ಷತಾ ಸಮಿತಿ ನೀಡಿದ ಶಿಫಾರಸುಗಳನ್ನು ಅಳವಡಿಸಲು ಸಿದ್ಧ.