ಪುಟಗಳು

HIV Prevention Public Service Announcement

How AIDS Affects the Body

Documentary on AIDS

AIDS awareness film

HIV AIDS Awareness Video

Fome na Africa

HIV/AIDS Kenya

ಅಚ್ಚ ಕನ್ನಡದೊಳಗೆ ನೂರಾರು ಕನ್ನಡ

 

Method of getting information through Reactive SMS (Karnataka Information Commission)

ಕೇಂದ್ರ ಸಂಸ್ಥೆಗಳ ಸಿಬ್ಬಂಧಿ ನೇಮಕ ಪರೀಕ್ಷೆಗೆ ಅರ್ಜಿ

KIMS Staff Nurse Recruitment Notification

ದೇವರಾಯನದುರ್ಗದಲ್ಲಿ ಉರುಳಿಗೆ ಬಲಿಯಾದ ಚಿರತೆ

Leopard killed in Devarayanadurga
 
ತುಮಕೂರು, ನ. 28 : ತುಮಕೂರು ನಗರಕ್ಕೆ ಕೇವಲ 16 ಕಿ.ಮೀ. ದೂರವಿರುವ ಸುಪ್ರಸಿದ್ಧ ಪ್ರವಾಸಿ ತಾಣ ದೇವರಾಯನದುರ್ಗದಲ್ಲಿ ನವೆಂಬರ್ 27ರಂದು ಬೆಳಿಗ್ಗೆ ಉರುಳಿಗೆ ಬಲಿಯಾದ ಚಿರತೆಯ ಮೃತದೇಹ ಪತ್ತೆಯಾಗಿದ್ದು, ನಿಸರ್ಗಪ್ರಿಯರನ್ನು ಬೆಚ್ಚಿಬೀಳಿಸಿದೆ.

ದೇವರಾಯನದುರ್ಗದ ಕಾಳಿಕಾಂಬ ದೇವಾಲಯದ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಸುಮಾರು 8ರಿಂದ 10 ವರ್ಷದ ಹೆಣ್ಣು ಚಿರತೆಯ ಕೊಳೆಯುತ್ತಿರುವ ಶವ ಪತ್ತೆಯಾಗಿದೆ. ಕಾಡುಪ್ರಾಣಿಗಳ ಬೇಟೆಗಾಗಿ ಕೇಬಲ್ ವೈರ್ ಬಳಸಿಕೊಂಡು ಇಡಲಾಗಿದ್ದ ಉರುಳಿಗೆ ಈ ಚಿರತೆ ಸಿಕ್ಕಿಬಿದ್ದಿದೆ. ಅಲ್ಲಿಂದ ಬಚಾವಾಗಲು ಭಾರೀ ಪ್ರಯತ್ನ ನಡೆಸಿ ವಿಫಲಗೊಂಡ ಚಿರತೆ ಅಲ್ಲೇ ನರಳಾಡಿ ಸತ್ತಿದೆ.

ಈ ಘಟನೆ ನಡೆದು ಸುಮಾರು ಐದಾರು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ತುಮಕೂರಿನ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ವಿ.ಗುಂಡಪ್ಪ, ಗುರುಪ್ರಸಾದ್, ಮಲ್ಲಿಕಾರ್ಜುನ್ ಮೊದಲಾದವರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿ ಮುಂದಿನ ಕ್ರಮ ಕೈಗೊಂಡರು.

ಈ ಯುವತಿಯ ತುಟಿಗಳು ವಿಶ್ವದಲ್ಲೇ ಅತಿ ದೊಡ್ಡವು!


russia-woman-with-world-biggest-lips
 
ಸೆಂಟ್ ಪೀಟರ್ಸ್ ಬರ್ಗ್, ನ. 25: ಶಸ್ತ್ರಚಿಕಿತ್ಸೆಯಿಂದ ಯುವತಿಯರು ತಮ್ಮ ಸ್ತನಗಳನ್ನು ದೊಡ್ಡದು ಮಾಡಿಕೊಳ್ಳುರುತ್ತಾರೆ ಎಂಬುದನ್ನು ಕಂಡು, ಕೇಳಿದ್ದ ಮಹಾಜನತೆಗೆ ಇಲ್ಲೊಂದು ಕುತೂಹಲಕಾರಿ ಸುದ್ದಿಯಿದೆ. ಇಲ್ಲೊಬ್ಬ ಯುವತಿ ಚಿಕಿತ್ಸೆ ಮೂಲಕ ತನ್ನ ತುಟಿಗಳನ್ನು ದೊಡ್ಡದು ಮಾಡಿಸಿಕೊಂಡಿದ್ದು, ಮುಂದೆ ಸ್ತನಕ್ಕೂ ಚಿಕಿತ್ಸೆ ಕೊಡಿಸಿಕೊಳ್ಳುವುದಾಗಿ ಘೋಷಿಸಿದ್ದಾಳೆ.

ಕ್ರಿಸ್ಟಿನಾ ರೆ ಎಂಬ 22 ವರ್ಷದ ಯುವತಿ ವಿಶ್ವದಲ್ಲೇ ಅತಿ ದೊಡ್ಡ ತುಟಿಗಳನ್ನು ಹೊಂದಿರುವ ಕುಖ್ಯಾತಿಗೆ ಪಾತ್ರಳಾಗಿದ್ದಾಳೆ (ಒಮ್ಮೆ ಪಕ್ಕದ ಚಿತ್ರ ನೋಡಿ). ಕ್ರಿಸ್ಟಿನಾ ರೆ ಎಂಬ ಈ ಯುವತಿ ಇದಕ್ಕಾಗಿ 4,000 ಪೌಂಡ್ ಹಣ ಕರ್ಚು ಮಾಡಿ 100ಕ್ಕೂ ಹೆಚ್ಚು ಸಿಲಿಕೋನ್ ಇಂಜೆಕ್ಷನ್ ಗಳನ್ನು ತೆಗೆದುಕೊಂಡು ತನ್ನ ತುಟಿಗಳನ್ನು ಬದಲಾಯಿಸಿಕೊಂಡಿದ್ದಾಳೆ.

ಆ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುವಾಗ ಯಮ ಬಾಧೆಯಾಗುತ್ತಿತ್ತು. ಆದರೂ ದಾಖಲೆಗಾಗಿ ನಾನು ಈ ದುಸ್ಸಾಹಸಕ್ಕೆ ಕೈಹಾಕಿದೆ ಎಂದು ರಷ್ಯಾದ ಸೆಂಟ್ ಪೀಟರ್ಸ್ ಬರ್ಗಿನ ಕ್ರಿಸ್ಟಿನಾ ಹೇಳುತ್ತಾಳೆ.

ಅಂದಹಾಗೆ ಈ ತುಟಿ ಚಿಕಿತ್ಸೆಯ ನಂತರ ಆಕೆ ಗುರುತೇ ಸಿಗದಂತಾಗಿದ್ದಾಳೆ. ಆದರೂ, 'ನಾನೀಗ ಅದ್ಭುತವಾಗಿ ಕಾಣಿಸುತ್ತಿದ್ದೇನೆ. ರಸ್ತೆಯಲ್ಲಿ ಹೋಗುವಾಗ ಜನ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದಾರೆ. ನನಗೇನೂ ಮುಜುಗರವಿಲ್ಲ. ಎಂಜಾಯ್ ಮಾಡುತ್ತಿದ್ದೇನೆ' ಎಂದು ತನ್ನ ಕೆಳ ತುಟಿಯನ್ನು ಕಚ್ಚುತ್ತಾಳೆ.

ಸದ್ಯದಲ್ಲೇ ಸ್ತನಗಳಿಗೂ ಚಿಕಿತ್ಸೆ: 'ನನ್ನು ತುಟಿಗಳು ತುಂಬಾ ಚಿಕ್ಕದಾಗಿದ್ದವು. ನನ್ನ ಗೆಳತಿಯರದ್ದು ದೊಡ್ಡದಾಗಿದ್ದವು. ಇದರಿಂದ ಕೀಳರಿಮೆ ನನ್ನನ್ನು ಕಾಡುತ್ತಿತ್ತು. ಅದರಿಂದ ಹೊರಬರಲು ನನ್ನ ತುಟಿಗಳನ್ನು ಹಿಗ್ಗಿಸಿಕೊಂಡೆ. ಏನೇ ಆಗಲಿ ತುಟಿಗಳು (ನನ್ನತರ) ದೊಡ್ಡದಾಗಿದ್ದು, ಆಕರ್ಷಕವಾಗಿರಬೇಕು ಬಿಡ್ರಿ' ಎಂದು ಪ್ಚ್ ಎನ್ನುತ್ತಾಳೆ ಕ್ರಿಸ್ಟಿನಾ.

'ನಾನು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಅವುಗಳನ್ನು ಇನ್ನೂ ದೊಡ್ಡದಾಗಿ ಮಾಡಿಸಿಕೊಳ್ಳುತ್ತೇನೆ' ಎಂಬ ಬೆದರಿಕೆಯನ್ನೂ ಹಾಕಿದ್ದಾಳೆ ಈ ಪುಣ್ಯಾತ್ತಗಿತ್ತಿ! ಅಷ್ಟೇ ಅಲ್ಲ. 'ನನ್ನ ಸ್ತನಗಳನ್ನೂ ದೊಡ್ಡದಾಗಿಸಿಕೊಳ್ಳುತ್ತೇನೆ. ಸದ್ಯಕ್ಕೆ C ಆಕಾರದಲ್ಲಿರುವ ನನ್ನ ಸ್ತನಗಳನ್ನು DD ಆಕಾರಕ್ಕೆ ತೀಡಿಕೊಳ್ಳುವೆ' ಎಂದು ಕುಲುಕುತ್ತಾಳೆ ತುಟಿ ಬ್ಯೂಟಿ ಕ್ರಿಸ್ಟಿನಾ.

ಶ್ರೀಗಣೇಶ ಏಕದಂತ ಹೇಗೆ ಆದರು?

ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು, ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಶ್ರೀ ಪರಶುರಾಮರು ಗಣೇಶನಿಗೆ ಹೀಗೆ ಹೇಳಿದರು "ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ, ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವಿಗೆ ನಾನು ಶೀಘ್ರವಾಗಿ ಭೇಟಿ ಆಗಲೇಬೇಕು". ಇದನ್ನು ಕೇಳಿದ ಗಣೇಶನು "ನೀವು ಸ್ವಲ್ಪ ಸಮಯ ಕಾಯ್ದಿರಿ", ಎಂದನು.
ಆದರೆ ಗಣೇಶನ ಮಾತು ಕೇಳದೆ ಪರಶುರಾಮನು ಪರಶು ಹಿಡಿದು ನಿರ್ಭಯತೆಯಿಂದ ಹೊರಟರು. ಗಣೇಶನು ಅವರನ್ನು ತಡೆದು ಪ್ರೇಮ ಮತ್ತು ನಮ್ರತೆಯಿಂದ ಕೇಳಿಕೊಂಡನು. ಗಣೇಶನಿಗೆ ಹೊಡೆಯಲು ಪರಶುರಾಮನು ಪರಶು ಎತ್ತಿದನು. ಗಣೇಶನು ಧರ್ಮದ ಸಾಕ್ಷಿಯಾಗಿ ಪುನಃ ಪರಶುರಾಮನನ್ನು ಅವಸರದಲ್ಲಿ ಹೋಗಬೇಡಿ ಎಂದು ಮತ್ತೆ ತಡೆದನು. ಆದರೂ ಪರಶುರಾಮರು ನಿರಾಕರಿಸಿದರು. ಆಗ ಗಣೇಶನು ತನ್ನ ಸೊಂಡಿಲನ್ನು ಕೋಟಿ ಯೋಜನದಷ್ಟು ದೊಡ್ಡದಾಗಿ ಮಾಡಿ ಅದರಲ್ಲಿ ಪರಶುರಾಮರನ್ನು ಸಿಲುಕಿಸಿ ಸಪ್ತಲೋಕಗಳಲ್ಲಿ ಅವರನ್ನು ತಿರುಗಿಸುತ್ತಾನೆ. ಆ ಭ್ರಮಣದಿಂದ ಕೋಪಗೊಂಡ ಪರಶುರಾಮನು ಸಾವಧಾನರಾಗಿ ಗುರುದತ್ತರು ಹೇಳಿರುವ ಸ್ತೋತ್ರಕವಚ ಓದಿ ಗಣೇಶನ ಮೇಲೆ ಪರಶು ಎಸೆದರು. ಅದನ್ನು ವ್ಯರ್ಥ ಮಾಡಬೇಕೆಂದು ಗಣೇಶನು ತನ್ನ ಎಡಗಡೆಯ ದಂತವನ್ನು ಮುಂದೆ ಮಾಡಿದರು. ಆಗ ಪರಶು ವ್ಯರ್ಥವಾಯಿತು, ಆದರೆ ಗಣೇಶನ ದಂತ ಮುರಿಯಿತು.
ಈದನ್ನು ತಿಳಿದ ಎಲ್ಲಾ ದೇವ-ದೇವತೆಗಳು ಒಂದು ಕಡೆ ಸೇರಿದರು. ಶಿವ-ಪಾರ್ವತಿ ಕೂಡ ಹೊರಗೆ ಬಂದರು. ನಡೆದ ಘಟನೆ ತಿಳಿದ ಮೇಲೆ ಪಾರ್ವತಿಯು ಪರಶುರಾಮನಿಗೆ "ಅರೇ ರಾಮ, ನಿನ್ನ ಜನ್ಮವು ಬ್ರಾಹ್ಮಣವಂಶದಲ್ಲಿ ಆಗಿದೆ, ನೀನು ಪಂಡಿತನಾಗಿದ್ದು, ಜಮದಗ್ನಿಯ ಪುತ್ರನು ಮತ್ತು ಯೋಗಿರಾಜನ ಶಿಷ್ಯನೂ ಹೌದು. ನಿನ್ನ ತಾಯಿ, ಮಾಮಾ, ಅಜ್ಜ ಎಲ್ಲರೂ ಶ್ರೇಷ್ಠರು. ಆದರೂ ನೀನು ಯಾವ ದೋಷದ ಕಾರಣದಿಂದ ಹೀಗೆ ಮಾಡಿದೆ? ಅಮೋಘವಾದ ಪರಶುವಿನಿಂದ ಯಾರದರೂ ಸಿಂಹವನ್ನು ಹೊಡೆಯಬಹುದು, ಅಂತ ಪರಶುವನ್ನು ನೀನು ಗಣೇಶನ ಮೇಲೆ ಪ್ರಯೋಗ ಮಾಡಿದಿ! ನಿನ್ನಂತ ಕೋಟಿ ಕೋಟಿ ರಾಮರಿಗೆ ಹೊಡೆಯಲು ಗಣೇಶನು ಸಮರ್ಥನಾಗಿದ್ದಾನೆ. ಅರೇ, ಈ ಗಣೇಶನು ಕೃಷ್ಣನ ಅಂಶ. ದೊಡ್ಡ ವ್ರತದ ಕಾರಣದಿಂದ ಇವನ ಜನ್ಮವಾಗಿದೆ", ಎಂದಳು.
ಆಗ ಶ್ರೀವಿಷ್ಣು "ಹೇ ದೇವಿ ಪಾರ್ವತಿ, ನಿಮಗೆ ಗಣೇಶ ಮತ್ತು ಕಾರ್ತಿಕೇಯ ಹೇಗೊ, ಹಾಗೆ ಪರಶುರಾಮ ಕೂಡ, ಇವರ ಸ್ನೇಹ ಮತ್ತು ಪ್ರೇಮದಲ್ಲಿ ಯಾವ ಬೇಧವೂ ಇಲ್ಲ. ಇಂದಿನಿಂದ ನಿಮ್ಮ ಪುತ್ರನ ಹೆಸರು ಏಕದಂತ ಎಂದಾಗಿದೆ. ಇವರ ಕುಲದಲ್ಲಿ ಎಂಟು ನಾಮಗಳಿವೆ-ಗಣೇಶ, ಏಕದಂತ, ಹೇರಂಬ, ವಿಘ್ನನಾಯಕ, ಲಂಬೊಧರ, ಶೂರ್ಪಕರ್ಣ, ಗಜವಕ್ರ, ಗೃಹಗಜ", ಎಂದರು. ಶ್ರೀವಿಷ್ಣು ಗಣೇಶಸ್ತೋತ್ರ ಕಥೆ ಪಠಣ ಮಾಡಿ ಹೀಗೆ ಹೇಳಿದರು "ಹೇ ದುರ್ಗೇ, ಈ ಪರಶುರಾಮನ ಮೇಲೆ ಸಿಟ್ಟು ಮಾಡಬೇಡ. ಈ ಘಟನೆಯಿಂದಲೇ ಗಣೇಶನಿಗೆ ’ ಏಕದಂತ’ ನಾಮವು ಪ್ರಾಪ್ತವಾಗಿದೆ. ನೀವು ಪುತ್ರನಾದ ಪರಶುರಾಮನಿಗೆ ಅಭಯ ಹಸ್ತ ನೀಡಿ", ಎಂದರು. ಅಂದಿನಿಂದ ಶ್ರೀ ಗಣೇಶನಿಗೆ ಏಕದಂತ ಎಂದೂ ಹೆಸರು ಬಂತು.

ಚಿಕ್ಕಂದಿನಿಂದಲೇ ಅಲೌಕಿಕ ತತ್ವಹೊಂದಿದ ಸ್ವಾಮಿ (ಆದ್ಯಗುರು) ಶಂಕರಾಚಾರ್ಯರು




ಬಾಲಮಿತ್ರರೇ, ಭಗವಾನ ಶಂಕರಾಚಾರ್ಯರು ಭರತವರ್ಷ ಭೂಮಿಯ ಒಂದು ದಿವ್ಯ ವಿಭೂತಿಯಾಗಿದ್ದಾರೆ. ಅವರ ಕೌಶಲ್ಯ ಬುದ್ಧಿಯು ಈ ಘಟನೆಯಿಂದ ತಿಳಿಯುತ್ತದೆ. ಏಳನೇ ವಯಸ್ಸಿನಲ್ಲಿಯೇ ಶಂಕರರ ಪ್ರಖಂಡ ಪಾಂಡಿತ್ಯ ಮತ್ತು ಜ್ಞಾನಸಾಮರ್ಥ್ಯದ ಕೀರ್ತಿ ಎಲ್ಲ ಕಡೆಗಳಲ್ಲಿ ಹಬ್ಬಿತು. ಈ ಜ್ಞಾನ ಮತ್ತು ಕೀರ್ತಿ ಕೇರಳದ ರಾಜ ರಾಜಶೇಖರನ ಕಿವಿಗೆ ಬಿದ್ದಿತು. ರಾಜನು ಶಾಸ್ತ್ರಗಳಲ್ಲಿ ರುಚಿ ಇದ್ದವರಿಗೆ, ವಿದ್ವಾನರಿಗೆ, ಈಶ್ವರ ಭಕ್ತರಿಗೆ, ಶ್ರದ್ಧಾವಾನರಿಗೆ ಮತ್ತು ಪಂಡಿತರಿಗೆ ಆದರದಿಂದ ನೋಡುತ್ತಿದ್ದನು. ಅದಕ್ಕಾಗಿ ರಾಜನಿಗೆ ಈ ಬಾಲಕನನ್ನು ನೋಡುವ ತೀವ್ರ ಇಚ್ಛೆ ಇತ್ತು.
ರಾಜ ರಾಜಶೇಖರನು ಶಂಕರನನ್ನು ಆಸ್ಥಾನಕ್ಕೆ ಕರೆದು ತರಲು ತನ್ನ ಪ್ರಧಾನ ಮತ್ತು ಆನೆಯ ಜೊತೆಗೆ ಆಮಂತ್ರಣವನ್ನು ಕಳುಹಿಸಿದನು. ಪ್ರಧಾನನು ಶಂಕರನ ಮನೆಗೆ ಹೋಗಿ ನಮ್ರತೆಯಿಂದ ರಾಜನು ಕೊಟ್ಟ ಸಂದೇಶವನ್ನು ತಿಳಿಸಿದನು. ಸಂದೇಶವನ್ನು ನೋಡಿ ಶಂಕರನು "ಉಪಜೀವನ ಮಾಡಲು ಭಿಕ್ಷೆಯೇ ಯಾರ ಸಾಧನೆಯಾಗಿದೆಯೋ, ತ್ರಿಕಾಲ ಸಂಧ್ಯಾ ಈಶ್ವರ ಚಿಂತನ, ಪೂಜೆ-ಅರ್ಚನೆ ಮತ್ತು ಗುರುಸೇವೆಯೇ ಯಾರ ಜೀವನದ ನಿತ್ಯ ವ್ರತವಾಗಿದೆಯೋ ಅವರಿಗೆ ಈ ಆನೆಯ ಸವಾರಿ ಯಾಕೆ? ನಾಲ್ಕು ವರ್ಣದ ಸರ್ವ ಕರ್ತವ್ಯಗಳ ಪಾಲನೆ ಮಾಡಿ ಬ್ರಾಹ್ಮಣಾದಿ ಧರ್ಮಮಯ ಜೀವನ ಜೀವಿಸಲು ವ್ಯವಸ್ತೆ ಮಾಡುವುದು ರಾಜನ ಕರ್ತವ್ಯವಾಗಿದೆ. ನನ್ನ ಈ ಸಂದೇಶವನ್ನು ನಿನ್ನ ಸ್ವಾಮಿಗೆ ಹೇಳು", ಎಂದರು. ಈ ಸಂದೇಶದ ಜೊತೆಗೆ ರಾಜ ರಾಜಶೇಖರನು ಕಳಿಸಿರುವ ರಾಜಪ್ರಸಾದ ಆಮಂತ್ರಣಕ್ಕೆ ಸ್ಪಶ್ಟವಾಗಿ ನಿರಾಕರಿಸಿದನು.
ಈ ಉತ್ತರದಿಂದ ರಾಜನು ಅತ್ಯಧಿಕ ಪ್ರಸನ್ನನಾದನು. ಅವನ ಮನಸ್ಸಿನಲ್ಲಿ ಶಂಕರನ ಪ್ರತಿ ಇನ್ನೂ ಶ್ರದ್ಧೆ ಬೆಳೆಯಿತು. ಸ್ವತಃ ರಾಜನೆ ತನ್ನ ಪ್ರಧಾನನ ಜೊತೆ ಶಂಕರನಿಗೆ ಭೇಟಿಯಾಗಲು ಕಾಲ್ನಡಿಗೆಯಲ್ಲಿ ಹೋದನು. ರಾಜನು ಅಲ್ಲಿ ಕುಳಿತಿರುವ ತೇಜಸ್ವಿ ಬಾಲಕ ಮತ್ತು ಅವನ ಸುತ್ತಲೂ ಕುಳಿತಿರುವ ಬ್ರಾಹ್ಮಣರು ವೇದಾಧ್ಯಯನ ಮಾಡುವುದನ್ನು ಕಂಡನು. 
ರಾಜನು ಬರುವುದನ್ನು ಕಂಡು ಶಂಕರನು ನಮ್ರತೆಯಿಂದ ಸಮ್ಮಾನಪೂರ್ವಕ ಸ್ವಾಗತ ಮಾಡಿದನು. ರಾಜನಿಗೆ ಶಂಕರನ ಜೊತೆ ಚರ್ಚೆ ಮಾಡಿದಾಗ ಅವನ ಪ್ರಖಂಡ ಪಾಂಡಿತ್ಯ ಮತ್ತು ಅಲೌಕಿಕ ವಿಚಾರ ಶಕ್ತಿಯ ಅನುಭವವಾಯಿತು. ರಾಜನು ಅಲ್ಲಿಂದ ಹೊರಡುವಾಗ ರತ್ನದ ಮುದ್ರೆಗಳನ್ನು ಶಂಕರನ ಚರಣದಲ್ಲಿ ಅರ್ಪಣೆ ಮಾಡಿ ಸ್ವೀಕರಿಸಲು ವಿನಂತಿಸಿಕೊಂಡನು. ಆಗ ಶಂಕರನು ರಾಜನಿಗೆ "ಮಹಾರಾಜರೇ, ನಾನು ಬ್ರಾಹ್ಮಣ ಮತ್ತು ಬ್ರಹ್ಮಚಾರಿಯಾಗಿದ್ದೇನೆ, ಇದರಿಂದ ನನಗೇನು ಉಪಯೋಗವಿದೆ? ನೀವು ದೇವರ ಪೂಜೆಗೆ ಕೊಟ್ಟಿರುವ ಭೂಮಿ ನನಗೆ ಮತ್ತು ನನ್ನ ತಾಯಿಗೆ ಸಾಕು. ನಿಮ್ಮ ಕೃಪೆಯಿಂದ ನನಗೆ ಯಾವ ಪ್ರಕಾರದ ಅಭಾವವಾಗಿಲ್ಲ", ಎಂದರು.
ಶಂಕರನ ಉತ್ತರ ರಾಜನಿಗೆ ತಿಳಿಯಲಿಲ್ಲ. ಕೊನೆಗೆ ರಾಜನು ಶಂಕರನಿಗೆ ಕೈಮುಗಿದು "ನಿಮ್ಮ ದರ್ಶನದಿಂದ ನಾನು ಧನ್ಯನಾದೆ", ಎಂದು ಹೇಳಿ ಅವರಿಗೆ ದುಡ್ಡನ್ನು ಅರ್ಪಣೆಮಾಡಿ "ಒಂದು ಸಲ ಅರ್ಪಣೆ ನೀಡಿ ಅದನ್ನು ಮತ್ತೆ ನಾನು ತೆಗೆದುಕೊಳ್ಳುವುದು ಸರಿಯಲ್ಲಾ, ಅದಕ್ಕೆ ನೀವೇ ಆ ಹಣವನ್ನು ಯೋಗ್ಯ ವ್ಯಕ್ತಿಗೆ ಕೊಡಿರಿ", ಎಂದನು. ಮುಗುಳ್ನಗುತ್ತಾ ಶಂಕರರು "ಮಹಾರಾಜರೆ, ನೀವು ರಾಜರಾಗಿದ್ದು ಯಾರು ಸುಪಾತ್ರರು, ಯಾರು ಯೋಗ್ಯರಂದು ನಿಮಗೆ ತಿಳಿದಿರಬೇಕು, ನನ್ನಂಥ ಬ್ರಹ್ಮಚಾರಿಗೇನು ಇಂಥಹ ಜ್ಞಾನ ಇರಬಹುದು? ವಿದ್ಯಾದಾನವೇ ಬ್ರಾಹ್ಮಣನ ಧರ್ಮ ಮತ್ತು ಸತ್ಪಾತ್ರೆ ದಾನವೇ ರಾಜಧರ್ಮವಾಗಿದೆ. ನೀವೆ ಯೋಗ್ಯ ಸತ್ಪಾತ್ರನಿಗೆ ಈ ಧನವನ್ನು ನೀಡಿ", ಎಂದರು. ರಾಜನು ನಿರುತ್ತರನಾಗಿ ಶಂಕರನಿಗೆ ವಂದಿಸಿ ಅಲ್ಲಿರುವ ಬ್ರಾಹ್ಮಣರಿಗೆ ಆ ಧನವನ್ನು ಹಂಚಿದನು.
ಮಕ್ಕಳೇ, ನಿರಪೇಕ್ಷೆಯಿಂದ ವಿದ್ಯಾದಾನ ಮಾಡುವ ಮಹತ್ವ ಈಗ ನಿಮಗೆ ತಿಳಿದಿರಬಹುದು. ನಾವು ಕೂಡ ಹೀಗೆ ಮಾಡಬಹುದು. ಯಾವ ವಿಷಯದಲ್ಲಿ ನಿಮಗೆ ಅಧಿಕ ಜ್ಞಾನವಿದೆಯೋ ಅದನ್ನು ತಿಳಿಯದವರಿಗೆ ನೀವು ತಿಳಿಸಿ ಅವರಿಗೆ ಸಹಾಯ ಮಾಡಬಹುದು.

ಅಸಾಮಾನ್ಯ ಪರಾಕ್ರಮದಿಂದ ಸತತ ಸ್ಫೂರ್ತಿ ನೀಡುವ ಝಾನ್ಸೀರಾಣಿ ಲಕ್ಷ್ಮೀಬಾಯಿ !



             ನಮ್ಮ ಹಿಂದೂಸ್ಥಾನದಲ್ಲಿ ೧೮೫೭ರಲ್ಲಿ ನಮಗೆಲ್ಲರಿಗೆ ಆದರ್ಶಪ್ರಾಯರಾಗಿ ಅನೇಕ ವೀರ ಪರಾಕ್ರಮಿಗಳು ಪ್ರಜ್ವಲಿಸಿದರು.
ಜನ್ಮ ಮತ್ತು ಬಾಲ್ಯ
         ಎರಡನೇ ಬಾಜೀರಾವ ಪೇಶ್ವೆಯವರ ಸಂಬಂಧಿ ಚಿಮಾಜೀ ಅಪ್ಪಾರವರ ವ್ಯವಸ್ಥಾಪಕರಾಗಿದ್ದ ಮೋರೊಪಂತ ತಾಂಬೆ ಮತ್ತು ಭಗೀರಥಿ ಬಾಯಿಯವರಿಗೆ ಕಾರ್ತಿಕ ಕೃಷ್ಣ ೧೪, ೧೭೫೭ ವರ್ಷ ಅಂದರೆ ಆಂಗ್ಲ ಪಂಚಾಂಗನುಸಾರ ೧೯ ನವೆಂಬರ ೧೮೩೫ ರಂದು ರಾಣಿ ಲಕ್ಷ್ಮೀಬಾಯಿಯ ಜನನವಾಯಿತು. ಆಕೆಗೆ ‘ಮಣಿಕರ್ಣಿಕಾ’ ಎಂದು ಹೆಸರಿಟ್ಟರು. ಮೋರೋಪಂತರು ಅವಳನ್ನು ಪ್ರೀತಿಯಿಂದ ‘ಮನುತಾಯಿ’  ಎಂದು ಕರೆಯುತ್ತಿದ್ದರು. ಮನುತಾಯಿಯು ನೋಡಲು ಸುಂದರ ಮತ್ತು ತುಂಬಾ ಬುದ್ಧಿವಂತೆಯಾಗಿದ್ದಳು. ಮನುತಾಯಿಗೆ ೩-೪ ವರ್ಷವಿರುವಾಗಲೇ ತಾಯಿವಿಯೋಗ ಅನುಭವಿಸಬೇಕಾಯಿತು. ಅವಳು ಮುಂದೆ ಬ್ರಹ್ಮಾವರ್ತಾದಲ್ಲಿನ ಎರಡನೇ ಬಾಜೀರಾವ ಪೇಶ್ವೆಯವರ ಆಶ್ರಯದಲ್ಲಿ ಬೆಳೆದಳು.
 ಯುದ್ಧಕಲೆಯ ಶಿಕ್ಷಣ
        ಬ್ರಹ್ಮಾವರ್ತಾದಲ್ಲಿ ನಾನಾಸಾಹೇಬ ಪೇಶ್ವೆ ತಮ್ಮ ಬಂಧು ರಾವಸಾಹೇಬರವರೊಂದಿಗೆ ಕತ್ತಿವರಸೆ, ದಾಂಡಪಟ್ಟಿ, ಬಂದೂಕು ಚಲಾಯಿಸುವುದನ್ನು ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಮನುತಾಯಿಯೂ ಸಹ ಅವರೊಂದಿಗೆ ಎಲ್ಲ ಯುದ್ಧಕಲೆಗಳನ್ನು ಕಲಿತು ಅದರಲ್ಲಿ ನಿಪುಣತೆಯನ್ನು ಪಡೆದುಕೊಂಡಳು. ಅವರ ಜೊತೆಯಲ್ಲಿಯೇ ಮನುತಾಯಿ ವಿದ್ಯಾಭ್ಯಾಸವನ್ನು ಮಾಡಿದಳು.
 ವಿವಾಹ
        ಮನುತಾಯಿಗೆ ೭ ವರ್ಷವಿರುವಾಗ ಝಾನ್ಸೀ ಸಂಸ್ಥಾನದ ಅಧಿಪತಿ ಗಂಗಾಧರರಾವ ನೆವಾಳಕರರವರೊಂದಿಗೆ ಅವಳ ವಿವಾಹವು ನೆರವೇರಿತು. ಮೋರೋಪಂತ ತಾಂಬೆಯವರ ಮನುತಾಯಿ ವಿವಾಹದ ನಂತರ ಝಾನ್ಸೀಯ ರಾಣಿಯಾದಳು. ವಿವಾಹದ ನಂತರ ಆಕೆಯನ್ನು ’ಲಕ್ಷ್ಮೀಬಾಯಿ’ ಎಂದು ಸಂಬೋಧಿಲಾಯಿತು.

ಪುತ್ರವಿಯೋಗದ ದುಃಖ
        ರಾಣಿಲಕ್ಷ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವಗೆ ತುಂಬಾ ಆನಂದವಾಯಿತು. ಆದರೆ ಮಗು ಮೂರು ತಿಂಗಳಿರುವಾಗಲೇ ಮರಣಿಸಿತು. ಹಾಗಾಗಿ ರಾಣಿಲಕ್ಷ್ಮೀಬಾಯಿ ಮತ್ತು ಗಂಗಾಧರರಾವ ಇವರು ಪುತ್ರವಿಯೋಗ ಅನುಭವಿಸಬೇಕಾಯಿತು.

ಪತಿವಿಯೋಗದ ದುಃಖ ಮತ್ತು ಮಗನನ್ನು ದತ್ತು ತೆಗೆದುಕೊಳ್ಳುವುದು
        ಪುತ್ರವಿಯೋಗವನ್ನು ಸಹಿಸದೆ ಗಂಗಾಧರರಾವ ಹಾಸಿಗೆ ಹಿಡಿದರು. ಗಂಗಾಧರರಾವ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ’ದಾಮೋದರರಾವ’ ಎಂದು ಹೆಸರಿಟ್ಟರು. ದತ್ತು ಪಡೆದ ನಂತರ ಕೆಲವು ಸಮಯದಲ್ಲೇ ಗಂಗಾಧರರಾವ ಮರಣ ಹೊಂದಿದರು. ಪತಿ ವಿಯೋಗದಿಂದ ರಾಣಿಲಕ್ಷ್ಮೀಬಾಯಿಯು ೧೮ ವರ್ಷದಲ್ಲೇ ವೈಧವ್ಯ ಅನುಭವಿಸಬೇಕಾಯಿತು.

"ನನ್ನ ಝಾನ್ಸೀಯನ್ನು ನಾನು ಎಂದಿಗೂ ಕೊಡುವುದಿಲ್ಲ"
        ಆಂಗ್ಲರು ಹೊರಡಿಸಿದ ಹೊಸ ರಾಜಘೋಷಣೆಯನುಸಾರ ರಾಜ್ಯದ ಉತ್ತರಾಧಿಕಾರಿಯಾಗಿ ರಾಜನ ದತ್ತು ಪುತ್ರನಿಗೆ ಮಾನ್ಯತೆ ಸಿಗಲಾರದು. ಈ ರಾಜಘೋಷಣೆಯ ಕುರಿತು ರಾಣಿಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ ಭೇಟಿಯಾಗಲು ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸೀಯನ್ನು ತಾವು ವಶಪಡೆಸಿಕೊಳ್ಳುವುದಾಗಿ ರಾಜಘೋಷಣೆಯನ್ನು ಮಾಡಿದನು. ರಾಣಿಯು ಸಂತಾಪದಿಂದ ದುಃಖಿತಳಾದಳು ಆದರೆ ಮರುಕ್ಷಣವೇ ಸಿಂಹಿಣಿಯಂತೆ ಘರ್ಜಿಸುತ್ತಾ ಹೇಳಿದಳು, "ನನ್ನ ಝಾನ್ಸೀಯನ್ನು ನಾನು ಎಂದಿಗೂ ಕೊಡುವುದಿಲ್ಲ", ಇದನ್ನು ಕೇಳಿದ ಮೇಜರ ಎಲಿಸನು ಭಯಗ್ರಸ್ತನಾಗಿ ಹಿಂತಿರುಗಿ ಹೋದನು.

೧೮೫೭ ಸಂಗ್ರಾಮ

        ೧೮೫೭ರ ಜನವರಿಯಲ್ಲಿ ಪ್ರಾರಂಭಗೊಂಡ ಸ್ವಾತಂತ್ರ ಸಂಗ್ರಾಮವು ಮೇ ೧೦ನೇ ತಾರೀಖಿನಂದು ಮೀರತನಲ್ಲಿ ಕಾಲಿಟ್ಟಿತ್ತು. ಮೀರತದಿಲ್ಲಿ, ಬರೇಲಿಯು ಕೂಡಲೇ ಆಂಗ್ಲರಿಂದ ಸ್ವತಂತ್ರವಾಯಿತು. ರಾಣಿಲಕ್ಷ್ಮೀಬಾಯಿಯು ಆಂಗ್ಲರ ಸಂಭವನೀಯ ಹಲ್ಲೆಯಿಂದ ಝಾನ್ಸೀಯ ರಕ್ಷಣೆಗಾಗಿ ಸಿದ್ಧತೆಯನ್ನು ಮಾಡತೊಡಗಿದಳು. ಆಂಗ್ಲರು ರಾಣಿಲಕ್ಷ್ಮೀಬಾಯಿಯನ್ನು ಜೀವಂತವಾಗಿ ಹಿಡಿದು ತರಲು ಸರ‍್ ಹ್ಯೂ ರೋಜ್ ಇವರನ್ನು ನೇಮಕ ಮಾಡಿದರು. ಸರ‍್ ಹ್ಯೂ ರೋಜ್ ಇವರ ಸೈನ್ಯವು ಝಾನ್ಸೀಯಿಂದ ಮೂರು ಮೈಲು ದೂರದಲ್ಲಿ ಬೀಡುಬಿಟ್ಟಿತು ಮತ್ತು ರಾಣಿಗೆ ಶರಣಾಗಲು ಸಂದೇಶ ಕಳಿಸಿತು. ಆದರೆ ಝಾನ್ಸೀ ರಾಣಿಯು ಶರಣಾಗದೆ ತಾನೇ ಮುಂದೆ ನಿಂತು ಎಲ್ಲರಿಗೆ ಹೋರಾಡಲು ಸ್ಫೂರ್ತಿ ನೀಡಿದಳು. ಯುದ್ಧ ಪ್ರಾರಂಭವಾಯಿತು. ಝಾನ್ಸೀಯ ಸೈನಿಕರು ಸತತವಾಗಿ ಫಿರಂಗಿಯಿಂದ ಗುಂಡುಗಳನ್ನು ಆಂಗ್ಲರ ಮೇಲೆ ಸಿಡಿಸಲು ಪ್ರಾರಂಭಿಸಿದರು. ಮೂರು ದಿವಸದ ನಂತರವೂ ಆಂಗ್ಲರಿಗೆ ಕೋಟೆಯ ಮೇಲೆ ವಿಜಯ ಸಾಧಿಸಲು ಸಾಧ್ಯವಾಗದಿದ್ದಾಗ ಸರ‍್ ಹ್ಯೂ ರೋಜ್ ಮೋಸದ ಮಾರ್ಗ ಹಿಡಿದರು. ಹೀಗೆ ಆಂಗ್ಲರು ಝಾನ್ಸೀಯ ಮೇಲೆ ವಿಜಯ ಸಾಧಿಸಿದರು. ಆಗ ರಾಣಿಯು ದತ್ತು ಪುತ್ರ ದಾಮೋದರನನ್ನು ಬೆನ್ನಿಗೆ ಕಟ್ಟಿ ಕುದುರೆಯನ್ನೇರಿ ’ಜಯ ಶಂಕರ’ ಎಂಬ ಘೋಷಣೆಯನ್ನು ಮಾಡುತ್ತಾ ಆಂಗ್ಲ ಸೈನ್ಯವನ್ನು ಭೇದಿಸಿ ಮುನ್ನೆಡೆದಳು. ಈ ಸಮಯದಲ್ಲಿ ರಾಣಿಲಕ್ಷ್ಮೀಬಾಯಿಯ ತಂದೆ ಮೋರೋಪಂತರು ಅವಳೊಂದಿಗೆ ಇದ್ದರು. ಆದರೆ ಆಂಗ್ಲರೊಂದಿಗಿನ ಯುದ್ಧದಲ್ಲಿ ಮೋರೋಪಂತರು ಗಾಯಗೊಂಡು ಆಂಗ್ಲರ ಕೈಗೆ ಸಿಕ್ಕುಬಿದ್ದರು. ನಂತರ ಅವರಿಗೆ ನೇಣುಹಾಕಲಾಯಿತು.

ಕಾಲ್ಪಿಯ ಯುದ್ಧ
            ರಾಣಿ ಲಕ್ಷ್ಮೀಬಾಯಿಯು ೨೪ ಗಂಟೆಗಳಲ್ಲಿ ೧೦೨ ಮೈಲಿಗಳಷ್ಟು ದೂರ ಕುದುರೆ ಸವಾರಿ ಮಾಡಿ ’ಕಾಲ್ಪಿ’ ಎಂಬ ಊರು ತಲುಪಿದಳು. ಪೇಶ್ವೆಯವರು ಪರಿಸ್ಥಿತಿಯ ಅಭ್ಯಾಸವನ್ನು ಮಾಡಿ ರಾಣಿ ಲಕ್ಷ್ಮೀಬಾಯಿಗೆ ಎಲ್ಲ ರೀತಿಯ ಸಹಾಯ ಮಾಡಲು ತೀರ್ಮಾನಿಸಿದರು. ರಾಣಿ ಕೇಳಿದಷ್ಟು ಸೈನಿಕರನ್ನು ಅವಳಿಗೆ ನೀಡಿದರು. ಮೇ ೨೨ರಂದು ಸರ‍್ ಹ್ಯೂ ರೋಜ್ ಕಾಲ್ಪಿಯ ಮೇಲೆ ದಾಳಿ ಮಾಡಿದನು. ಯುದ್ಧ ಪ್ರಾರಂಭವಾದದ್ದನ್ನು ನೋಡಿ ರಾಣಿ ಲಕ್ಷ್ಮೀಬಾಯಿಯು ಕೈಯಲ್ಲಿ ಕತ್ತಿ ಹಿಡಿದು ಶರವೇಗದಿಂದ ಮುನ್ನುಗ್ಗಿದಳು. ರಾಣಿಯ ಹಲ್ಲೆಯನ್ನು ನೋಡಿ ಆಂಗ್ಲ ಸೈನ್ಯವು ಹಿಂದೆ ಓಡಿಹೋದರು. ಈ ಪರಾಭವದಿಂದ ದಿಗ್ಭ್ರಾಂತನಾದ ಸರ‍್ ಹ್ಯೂ ರೋಜ್ ಬಾಕಿ ಇದ್ದ ಸೈನ್ಯವನ್ನು ಯುದ್ಧಭೂಮಿಗೆ ಕೂಡಲೇ ಕರೆಸಿದನು. ಹೊಸ ಸೈನ್ಯದ ಮುಂದೆ ದಣಿದಿದ್ದ ಕ್ರಾಂತಿಕಾರರ ಆವೇಶ ಕಡಿಮೆಯಾಯಿತು. ಮೇ ೨೪ರಂದು ಕಾಲ್ಪಿಯನ್ನು ಆಂಗ್ಲರು ತಮ್ಮ ವಶಕ್ಕೆ ಪಡೆದುಕೊಂಡರು.
        ಕಾಲ್ಪಿಯಲ್ಲಿ ಪರಾಭವಗೊಂಡ ರಾವಸಾಹೇಬ ಪೇಶ್ವೆ, ಬಾಂದ್ಯದ ನವಾಬ, ತಾತ್ಯಾ ಟೋಪೆ, ಝಾನ್ಸೀಯ ರಾಣಿ ಮತ್ತು ಇತರ ಪ್ರಮುಖ ಸರದಾರರೆಲ್ಲರು ಗೊಪಾಳಪುರದಲ್ಲಿ ಒಂದು ಕಡೆ ಸೇರಿದರು. ಝಾನ್ಸೀರಾಣಿಯು ಗ್ವಾಲಿಯರನ್ನು ಆಂಗ್ಲರಿಂದ ವಶಕ್ಕೆ ಪಡೆಯಬೇಕೆಂದು ಸೂಚನೆ ನೀಡಿದಳು. ಗ್ವಾಲಿಯರಿನ ರಾಜ ಶಿಂದೆ ಬ್ರಿಟಿಷರ ಅನುಕರಣೆ ಮಾಡುತ್ತಿದ್ದರು. ರಾಣಿಲಕ್ಷ್ಮೀಬಾಯಿಯು ಮುಂದಾಳತ್ವ ವಹಿಸಿ ಗ್ವಾಲಿಯರನ್ನು ಗೆದ್ದು ಪೇಶ್ವೆಯವರ ಕೈಗಿಟ್ಟಳು.

ಸ್ವಾತಂತ್ರವೀರರ ಬಲಿದಾನ
        ಗ್ವಾಲಿಯರನ್ನು ರಾಣಿ ಗೆದ್ದ ಸುದ್ದಿ ಸರ‍್ ಹ್ಯೂ ರೋಜ್ ಗೆ ತಲುಪಿತು. ಇನ್ನು ಸಮಯ ವ್ಯರ್ಥ ಮಾಡಿದರೆ ಆಂಗ್ಲರ ನಾಶವಾಗುವುದೆಂದು ಅರಿತು, ಅವನು ತನ್ನ ಸೈನ್ಯವನ್ನು ಗ್ವಾಲಿಯರನ ಕಡೆ ತಿರುಗಿಸಿದನು. ಜೂನ್ ೧೬ರಂದು ಆಂಗ್ಲರ ಸೈನ್ಯವು ಗ್ವಾಲಿಯರ‍ ತಲುಪಿತು. ರಾಣಿಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ‍್ ಹ್ಯೂ ರೋಜ್ ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆಯನ್ನು ರಾಣಿ ತನ್ನ ಮೇಲೆ ಹೊತ್ತಳು. ಯುದ್ಧದಲ್ಲಿ ಲಕ್ಷ್ಮೀಬಾಯಿಯ ಧೈರ್ಯ ನೋಡಿ ಸೈನಿಕರಿಗೆ ಸ್ಫೂರ್ತಿ ಸಿಕ್ಕಿತು. ರಾಣಿಯ ದಾಸಿಯರಾದ ಮಂದಾರ ಮತ್ತು ಕಾಶಿಯೂ ಪುರುಷರ ವೇಷ ಧರಿಸಿ ಯುದ್ಧ ಮಾಡಲು ಬಂದರು. ರಾಣಿಯ ಶೌರ್ಯದಿಂದಾಗಿ ಆ ದಿನ ಆಂಗ್ಲರು ಪರಾಜಯ ಹೊಂದಬೇಕಾಯಿತು.
        ಜೂನ್ ೧೮ ರಂದು ರಾಣೀ ಲಕ್ಷ್ಮೀಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಒಟ್ಟಿಗೆ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರನ್ನು ಬೇಧಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳನ್ನು ಬೇಧಿಸಿ ಹೊರಹೋಗುವಾಗ ಒಂದು ನೀರಿನ ಪ್ರವಾಹ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ’ರಾಜರತ್ನ’ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಇದ್ದಳು. ಆ ಕುದುರೆಗೆ ನೀರಿನ ಪ್ರವಾಹ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲೂ ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರಿತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಬಿದ್ದ ಹೊಡೆತದಿಂದಾಗಿ ರಕ್ತಸಿಕ್ತಳಾಗಿ ಕೆಲಗೆ ಬಿದ್ದಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಅದು ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಆಕೆಯನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಡು ಹೋದರು ಮತ್ತು ಆಕೆಗೆ ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣವನ್ನಪ್ಪಿದಳು.
        ಜಗತ್ತಿನಾದ್ಯಂತದ ಕ್ರಾಂತಿಕಾರರಿಗೆಲ್ಲ ಭಗತ ಸಿಂಗನ ತ್ಯಾಗ, ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಸಂಘಟನಾ ಶಕ್ತಿ ಹಾಗೆಯೇ ಝಾಂಸಿರಾಣಿಯ ಶೌರ್ಯವು ಸ್ಫೂರ್ತಿಯನ್ನು ನೀಡಿದೆ. ಇಂತಹ ವೀರಾಂಗನೆ ರಾಣಿಲಕ್ಷ್ಮೀಬಾಯಿಯ ಚರಣಗಳಲ್ಲಿ ನಮನಗಳು.

೧೮೫೭ ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ವೀರರ ಗೌರವಾರ್ಥ ಭಾರತ ಸರಕಾರ ಬಿಡುಗಡೆ ಮಾಡಿದ ಅಂಚೆಚೀಟಿ


 
ಝಾನ್ಸೀ ರಾಣಿಯ ಗೌರವಾರ್ಥ ಭಾರತದ ಸ್ಟಾಂಪ್

ಝಾನ್ಸೀ ರಾಣಿಯ ಮೂಲ ಚಿತ್ರ

ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ 162 ವಜ್ರಗಳು

!
Tirupati Temple
 
ತಿರುಮಲ, ನ.24: ಅನಾಮಧೇಯ ಭಕ್ತನೊಬ್ಬ ಸುಮಾರು 160ಕ್ಕೂ ಅಧಿಕ ವಜ್ರಗಳನ್ನು ಕಲಿಯುಗ ದೈವ ಶ್ರೀವೆಂಕಟೇಶ್ವರ ಸ್ವಾಮಿ ಹುಂಡಿಯಲ್ಲಿ ಹಾಕಿ ಕೈ ಮುಗಿದು ಹೋಗಿದ್ದಾನೆ.

ಸುಮಾರು 1 ಕೋಟಿ ರೂ ಅಧಿಕ ರೂ ಬೆಲೆ ಬಾಳುವ ಈ ವಜ್ರಗಳು ತಿಮ್ಮಪ್ಪನ ಹುಂಡಿಯಲ್ಲಿ ಕಾಣಿಸಿದೆ. ನುಣುಪಾದ ಬ್ಯಾಗ್ ನಲ್ಲಿದ್ದ ಕಣ್ಣು ಕೋರೈಸುವ ವಜ್ರಗಳ ಬಗ್ಗೆ ಟಿಟಿಡಿ ಸಿಬ್ಬಂದಿ ಖಚಿತಪಡಿಸಿದ್ದಾರೆ.
 
ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಜಗತ್ತಿನ ಶ್ರೀಮಂತ ದೇಗುಲಗಳಲ್ಲಿ ಒಂದಾಗಿದೆ. ವಾರ್ಷಿಕವಾಗಿ ಸುಮಾರು 700ಕೋಟಿ ರೂ.ಗೂ ಅಧಿಕ ಆದಾಯವನ್ನು ಈ ದೇಗುಲ ಹೊಂದಿದೆ.

ತಿಮ್ಮಪ್ಪನಿಗೆ ವಜ್ರಗಳನ್ನು ಅರ್ಪಿಸಿದ ಭಕ್ತನ ಬಗ್ಗೆ ವಿವರಗಳು ಇನ್ನೂ ತಿಳಿದುಬಂದಿಲ್ಲ. ವಜ್ರಗಳ ನೈಜತೆ ಅಳೆಯುವ ಪ್ರಮಾಣ ಪತ್ರ ಕೂಡಾ ಆ ಬ್ಯಾಗ್ ನಲ್ಲಿತ್ತು ಎಂಬುದು ವಿಶೇಷ. ಬಹುಶಃ ಮಂಗಳವಾರ(ನ.22) ಈ ವಿಶೇಷ ಕಾಣಿಕೆಯನ್ನು ದೇವರಿಗೆ ಅರ್ಪಿಸುವ ಸಾಧ್ಯತೆಯಿದೆ ಎಂದು ಟಿಟಿಡಿ ಹೇಳಿದೆ.

‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’

-  ಶ್ಯಾಮಲ ಜನಾರ್ದನನ್
ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು – ಮದಕರಿ ನಾಯಕ ಒಬ್ಬ ಅರಸನಲ್ಲ ಜೀವಂತ ಆಪ್ತನೆಂಟ. ಚಿತ್ರದುರ್ಗ – ಮದಕರಿನಾಯಕ ಬೇರೆ ಬೇರೆಯಲ್ಲ ಒಂದೇ ಎಂಬ ಅವಿನಾಭಾವ, ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ ” ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ.
ನಾಯಕವಂಶದಲ್ಲಿ ಹಲವಾರು ಮದಕರಿನಾಯಕರುಗಳಿದ್ದರೂ, ಜನತೆ ಈಗಲೂ ತುಂಬಾ ಅಭಿಮಾನದಿಂದ ದುರ್ಗ – ಮದಕರಿ ಎಂದರೆ ನೆನಪಿಸಿಕೊಳ್ಳುವುದು, ಈ ಕಥೆಯ ನಾಯಕ, ಕೊನೆಯ ಪಾಳೆಯಗಾರ / ಅರಸ ಚಿಕ್ಕ ಮದಕರಿನಾಯಕರನ್ನೇ !! ಈ ನಮ್ಮ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ “ದುರ್ಗಾಸ್ತಮಾನ” ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.
ದುರ್ಗಾಸ್ತಮಾನವನ್ನು ಅನೇಕ ಸಂಶೋಧನೆಗಳು, ಮುದ್ರಣ ರೂಪದಲ್ಲಿ ಪ್ರಕಟವಾಗಿಲ್ಲದ ಶ್ರೀ ಚಿಕ್ಕೇರೂರು ಗೋವಿಂದಾಚಾರ್ಯರು ಬರೆದ ಹರಪನಹಳ್ಳಿ ಪಾಳೆಯಗಾರರ ಚರಿತ್ರೆಯ ಹಸ್ತಪ್ರತಿಯನ್ನು ಆಧರಿಸಿ ಬರೆಯಲಾಗಿದೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಮತ್ತು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ ನಂತರವೇ ಶ್ರೀ ತರಾಸುರವರು ಕಾದಂಬರಿ ಬರೆದಿದ್ದಾರೆ.
ತರಾಸುರವರು, ಅತ್ಯಂತ ಕಾಳಜಿಯಿಂದ, ಎಲ್ಲಾ ಅಧ್ಯಯನಗಳನ್ನೂ ಮಾಡಿ, ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ – ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ.

ರಣಬಯಲಿನಲ್ಲಿ ಪರಶುರಾಮನಾಯಕನ ಧ್ವನಿ ಅಣ್ಣಾ….ಅಣ್ಣಾ…………. ಮದಕೇರಣ್ಣಾ…….. ಎಂದು ಕೂಗಿಕೊಂಡು ಪ್ರೇತದಂತೆ ಅಲೆಯುವಾಗ, ದುರ್ಗವೇ ಹಂಬಲಿಸಿ ತನ್ನ ದೊರೆಯನ್ನು ಕರೆಯುವಂತಿರುವಾಗ, ಎಲ್ಲವನ್ನೂ ನುಂಗಿ ದುರ್ಗವನ್ನು ಕತ್ತಲಾವರಿಸುತ್ತದೆ ಮತ್ತೆ ಹಗಲಾಗುವುದಿಲ್ಲ.
೬೯೬ ಪುಟಗಳ ಪುಸ್ತಕವನ್ನು ಓದಿ ಮುಗಿಸಿದಾಗ, ನಮ್ಮ ಮನ:ಪಟಲದಲ್ಲಿ ಓಡುತ್ತಿದ್ದ ದೃಶ್ಯಗಳು ಒಮ್ಮೆಲೇ ಕಡಿವಾಣ ಹಾಕಿ ನಿಲ್ಲಿಸಿದ ಕುದುರೆಯಂತಾಗುತ್ತದೆ. ಪರಶುರಾಮ ನಾಯಕರ ಧ್ವನಿ ಅನುಸರಿಸಿ, ನಮ್ಮ ಮನಸ್ಸೂ ಹಂಬಲಿಸಿ ಕೂಗುತ್ತಿರುತ್ತದೆ. ದುರ್ಗದ ವೈಭವ, ಮದಕರಿ ನಾಯಕನ ಧೀಮಂತ ವ್ಯಕ್ತಿತ್ವ ನಮ್ಮನ್ನು ಪೂರ್ತಿಯಾಗಿ ಆವರಿಸಿಕೊಂಡು ಬಿಡುತ್ತದೆ. ಅರಿವು ಬೇಕೆಂದರೂ ಮನವು ಗುಂಗಿನಿಂದ ಹೊರಬರಲು ನಿರಾಕರಿಸುತ್ತದೆ. ಆರಂಭದಿಂದ ಅಂತ್ಯದವರೆಗೂ ನಡೆದ ಐತಿಹಾಸಿಕ ಘಟನೆಗಳ ವಿವರಣೆ, ಅರಮನೆ – ಗುರುಮನೆಯ ಅವಿನಾಭಾವ ಸಂಬಂಧ, ಯುದ್ಧದ ಚಿತ್ರಣ, ಎಲ್ಲವೂ ಶ್ರೀ ತರಾಸುರವರ ಪದಗಳ ಪ್ರಯೋಗ ಮತ್ತು ಭಾಷೆಯ ಸೊಗಡಿನಲ್ಲಿ ನಮ್ಮನ್ನು ಬಂಧಿಸಿಬಿಡುತ್ತದೆ.
ದುರ್ಗಾಸ್ತಮಾನ ನನ್ನ ಅತ್ಯಂತ ಮೆಚ್ಚಿನ ಮೇರು ಕೃತಿ. ಮೇರು ಪರ್ವತದಷ್ಟೇ ಎತ್ತರವಾದದ್ದು ಮತ್ತು ತನಗೆ ತಾನೇ ಸಾಟಿಯಾದ ಉತ್ಕೃಷ್ಟ ಕಾದಂಬರಿ. ಎಷ್ಟು ಸಾರಿ ಓದಿದರೂ ಮತ್ತೆ ಮತ್ತೆ ಓದಬೇಕೆಂಬ ಹಂಬಲ ಹುಟ್ಟಿಸುವಂಥದ್ದು.
ಶ್ರೀ ಬಿ ಎಲ್ ವೇಣುರವರ ಗಂಡುಗಲಿ ಮದಕರಿ ನಾಯಕ ಐದನೇ ಮುದ್ರಣ ಕಂಡಿರುವ ಕೃತಿ. ನಾಲ್ಕನೇ ಮುದ್ರಣದ ಪ್ರತಿಗಳು ಮುಗಿದು ೬ ವರ್ಷಗಳ ನಂತರ ಮರು ಮುದ್ರಣ ಕಂಡ ಪುಸ್ತಕ. ಇವರೂ ಕೂಡ ಕೊನೆಯ ಅರಸ ಮದಕರಿ ನಾಯಕರ ಚಿತ್ರಣವನ್ನು ಮಹಾ ಪರಾಕ್ರಮಿ, ಚಿತ್ರದುರ್ಗದ ಸ್ವಾಭಿಮಾನದ ಸಂಕೇತ ಎಂದೇ ಚಿತ್ರಿಸಿದ್ದಾರೆ.
ಈ ಪುಸ್ತಕದಲ್ಲಿ ಲೇಖಕರು ಮದಕರಿ ನಾಯಕರ ವಿವಾಹ ತರೀಕೆರೆಯ ಲಕ್ಷ್ಮೀಸಿರಿವಂತಿಯೊಂದಿಗೆ ಆದ ಪ್ರಸ್ತಾಪ ಮಾಡುತ್ತಾರಾದರೂ, ಅರಸನ ಪ್ರೇಮಕ್ಕೂ ಹೃದಯಕ್ಕೂ ಒಡತಿಯಾಗಿ ಪದ್ಮವ್ವೆನಾಗತಿ ಚಿತ್ರಿತವಾಗುತ್ತಾಳೆ. ಆದರೆ ಇಲ್ಲಿ ಗುಡಿಕೋಟೆಯ ಪಾಳೆಯಗಾರ ಮುಮ್ಮಡಿ ಜಟಂಗಿನಾಯಕರ ಮಗಳು ಪದ್ಮವ್ವೆನಾಗತಿಯೊಂದಿಗಿನ ವಿವಾಹ ಮಾತ್ರ ಉಲ್ಲೇಖವಾಗುತ್ತದೆ. ತರಾಸುರವರ ದುರ್ಗಾಸ್ತಮಾನದಲ್ಲಿ ಪದ್ಮವ್ವೆಯ ಜೊತೆ, ಜರಿಮಲೆಯ ಇಮ್ಮಡಿ ಬೊಮ್ಮನಾಯಕರ ಮಗಳು ಬಂಗಾರವ್ವನೊಡನೆಯೂ, ಒಟ್ಟಿಗೇ ವಿವಾಹವಾದ ಪ್ರಸ್ತುತಿಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಕಳ್ಳಿ ನರಸಪ್ಪನವರನ್ನು ನಾಯಕರ ವಿರುದ್ಧ ದ್ರೋಹವೆಸಗಿದಂತೆಯೂ, ರಾಜದ್ರೋಹಿಯಾಗಿಯೂ, ಚಿತ್ರಿಸಲಾಗಿದೆ. ಕಳ್ಳಿ ನರಸಪ್ಪ ಹೈದರನ ಸೇನೆ ಸೇರಿ, ಚಿತ್ರದುರ್ಗದ ಕೋಟೆಯ ಬಲಹೀನ ಜಾಗಗಳ ವಿಷಯ, ಕಳ್ಳಗಿಂಡಿಯ ಸುದ್ದಿ ಎಲ್ಲವನ್ನೂ ಬಹಿರಂಗಗೊಳಿಸಿದ್ದರಿಂದ, ಹೈದರಾಲಿ ಮದಕರಿನಾಯಕರನ್ನು ಸೋಲಿಸಲು ಸಾಧ್ಯವಾಯಿತೆಂದು ಬರೆದಿದ್ದಾರೆ. ಆದರೆ ದುರ್ಗಾಸ್ತಮಾನದಲ್ಲಿ ಲೇಖಕರು ಇದು ತಪ್ಪು ಅಭಿಪ್ರಾಯ, ನರಸಪ್ಪನವರು ಅಂತಹವರಲ್ಲವೆಂದೂ, ದಾಖಲೆಗಳು ಹಾಗೆ ಹೇಳುವುದಿಲ್ಲವೆಂದೂ ಹೇಳಿದ್ದಾರೆ. ಯುದ್ಧಾನಂತರ ಅಂದರೆ ಚಿತ್ರದುರ್ಗದ ಅವಸಾನದ ನಂತರ ಹೈದರಲಿ “ಕಳ್ಳಿ ನರಸಪ್ಪಯ್ಯ ಎಂಬಾತನಿಗೆ ದುರ್ಗದಲ್ಲಿ ಒಂದು ಅಧಿಕಾರ ಕೊಟ್ಟ” ಎಂದು ಮಾತ್ರ ಉಲ್ಲೇಖವಿದೆಯೇ ಹೊರತು ಅವರನ್ನು ದ್ರೋಹಿ ಎಂದು ಎಲ್ಲೂ ಯಾವ ಕಡತದಲ್ಲೂ ಹೇಳಿಲ್ಲವೆಂದೂ ಹೇಳುತ್ತಾರೆ. ಮುಂದುವರೆದು ದುರ್ಗಾಸ್ತಮಾನದಲ್ಲಿ ತೀರ್ಥಯಾತ್ರೆಗೆ ತೆರಳಿದ್ದ ಕಳ್ಳಿ ನರಸಪ್ಪಯ್ಯ ಮತ್ತು ಅವರ ಸಂಸಾರ, ಹೈದರಾಲಿಯ ಕೈಗೆ ಸೆರೆ ಸಿಕ್ಕಾಗ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಚಿತ್ರಿಸಿದ್ದಾರೆ. ಗಂಡುಗಲಿ ಮದಕರಿಯಲ್ಲಿ, ಕಳ್ಳಿ ನರಸಪ್ಪಯ್ಯನನ್ನು ಯುದ್ಧಾನಂತರ, ರಾಜದ್ರೋಹಿಯೆಂದು, ಹೈದರಾಲಿಯು ತೋಪಿನ ಬಾಯಿಗೆ ಕಟ್ಟಿ ಉಡಾಯಿಸಿಬಿಡುತ್ತಾನೆ.
ದುರ್ಗಾಸ್ತಮಾನದಲ್ಲಿ ನಾಗತಿಯರು ಮದಕರಿ ಕೊನೆಯ ದಿನದ ಯುದ್ಧಕ್ಕೆ ಹೊರಟ ತಕ್ಷಣ, ಹೊಂಡದಲ್ಲಿ ಆತ್ಮಾಹುತಿ ಮಾಡಿಕೊಳ್ಳುತ್ತಾರೆ ಆದರೆ ಗಂಡುಗಲಿ ಮದಕರಿ ನಾಯಕ ಪುಸ್ತಕದಲ್ಲಿ ಯುದ್ಧ ರಂಗದಲ್ಲಿ ಹೋರಾಡುತ್ತಾ ದೊಡ್ಡ ಮದಕರಿನಾಯಕರ ಪತ್ನಿ ರತ್ನಮ್ಮ ನಾಗತಿ ಹೈದರಾಲಿಯ ಸೈನಿಕರು ತನ್ನ ಮುಡಿ-ಸೆರಗು ಹಿಡಿದೆಳೆದು ಮಾಡಿದ ಅವಮಾನ ತಾಳಲಾಗದೆ, ಹೊಂಡಕ್ಕೆ ಹಾರುತ್ತಾಳೆ, ವೀರಾವೇಷದಿಂದ ಹೋರಾಡುವ ಪದ್ಮವ್ವ ನಾಗತಿಯೂ ದೇಹದಲ್ಲೆಲ್ಲಾ ಕತ್ತಿಗಳನ್ನು ಚುಚ್ಚಿಸಿಕೊಂಡು, ಹೈದರಾಲಿಯ ಸೈನಿಕರು ಬಟ್ಟೆಗಳನ್ನು ಹರಿದೆಳೆದಾಗ ದಿಗ್ಭ್ರಾಂತಳಾಗಿ ಹೊಂಡಕ್ಕೆ ಹಾರುತ್ತಾಳೆ. ಇಲ್ಲಿ ನಾಗತಿಯರ ಕೊನೆ ಏಕೋ ಮನಸ್ಸಿಗೆ ಹಿಡಿಸುವುದಿಲ್ಲ.
ಕೊನೆಯದಾಗಿ ಮದಕರಿ ನಾಯಕನ ಅಂತ್ಯ ಅತ್ಯಂತ ಸೂಕ್ಷ್ಮವಾದ, ನವಿರಾದ ಭಾವನೆಗಳಿಂದ ದುರ್ಗಾಸ್ತಮಾನದಲ್ಲಿ ಹೇಳಲ್ಪಟ್ಟಿದೆ. ಅವನ ಅದಮ್ಯ ದೇಶಪ್ರೇಮ, ಅವನನ್ನು ಕೊನೆಯ ಘಳಿಗೆಯವರೆಗೂ ವೀರಾವೇಶದಿಂದ ಹೋರಾಡಿಸಿ ಹೈದರಾಲಿಯ ಹಸಿರು ಧ್ವಜ ಹಾರಾಡುತ್ತಿದ್ದ ಧ್ವಜಕಂಬವನ್ನೇ ಕತ್ತರಿಸಿ ತುಂಡು ಮಾಡಿ, ದುರ್ಗದ ಮಣ್ಣಿಗೆ ಮುಟ್ಟಿಟ್ಟು, ಕೊನೆಯುಸಿರೆಳೆಯುಂತೆ ಮಾಡುತ್ತದೆ. ವೀರ ಮರಣ ಅಪ್ಪುತ್ತಾನೆ ನಮ್ಮೆಲ್ಲರ ಅಭಿಮಾನಿ ಅರಸ, ನಾಯಕ ಮದಕರಿ.
ಗಂಡುಗಲಿ ವೀರ ಮದಕರಿ ಪುಸ್ತಕದಲ್ಲಿ ಮದಕರಿಯನ್ನು ಅವನ ಸಾಕು ಮಗಳಾದ (ಕಳ್ಳಿ ನರಸಪ್ಪಯ್ಯನವರ ಮಗಳು) ಗಾಯತ್ರಿಯ ಮೂಲಕ ಸಂಚು ಮಾಡಿ ಸೆರೆ ಹಿಡಿಯುತ್ತಾರೆ, ಆದರೆ ಅಲ್ಲೂ ಗಂಡುಗಲಿ ತನ್ನ ಪರಾಕ್ರಮದಿಂದ, ತನ್ನ ತಲೆ ತಾನೇ ಕತ್ತರಿಸಿಕೊಂಡು ದುರ್ಗದ ಮಣ್ಣಿಗೆ ಎಸೆದು, ಕುಸಿದು ಬೀಳುತ್ತಾನೆ. ನಿನ್ನ ಕೈಗೆ ನನ್ನ ತಲೆ ಸಿಗದು ಎಂದು ಹೈದರಾಲಿಗೆ ಹೇಳಿದ್ದ ಮಾತು ಉಳಿಸಿಕೊಳ್ಳುವಂತೆ, ಬಿರುಗಾಳಿ ಎದ್ದು ನಾಯಕನ ತಲೆ ಹೊಂಡಕ್ಕೆ ಉರುಳಿ ಬೀಳುತ್ತದೆ.
ದುರ್ಗಾಸ್ತಮಾನ ಓದಿ ಮೂಕವಾದ ಮನ, ಗಂಡುಗಲಿ ಮದಕರಿ ನಾಯಕ ಪುಸ್ತಕವನ್ನು ಪೂರ್ತಿಯಾಗಿ ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಬೇರಾವ ಪುಸ್ತಕಕ್ಕೂ ಹೋಲಿಸಲಾಗದ ದುರ್ಗಾಸ್ತಮಾನದ ಮುಂದೆ ಇದು ಸಪ್ಪೆ ಎನಿಸಿದರೂ, ಶ್ರೀ ವೇಣು ಅವರ ಬರವಣಿಗೆಯ ಶೈಲಿ ನಮ್ಮನ್ನು ಹಿಡಿದಿಡುತ್ತದೆ. ಅವರ ಇತರ ಪುಸ್ತಕಗಳಂತೇ ಇದೂ ಅವರದೇ ಆದ ಪ್ರಾಮುಖ್ಯತೆ ಪಡೆಯುತ್ತೆ. ಆದರೆ ಎರಡೂ ಓದಿದ ನಮ್ಮ ಮನಸು ಮಾತ್ರ ಗೊಂದಲಮಯವಾಗುತ್ತದೆ…….!!!!!

Save the Indian Rupee

YOU CAN MAKE A HUGE DIFFERENCE TO THE INDIAN ECONOMY BY FOLLOWING FEW SIMPLE STEPS:-
Please spare a couple of minutes here for the sake of India.
I got this article from one of my friends, but it's true. I can see this in day to day life.
Here's a small example:-
Before 12 months 1 US $ = IND Rs 39
After 12  months, now 1 $ = IND Rs 50
Do you think US Economy is booming? No, but Indian Economy is Going Down.
Our economy is in your hands....

INDIAN economy is in a crisis. Our country like many other ASIAN countries, is undergoing a severe economic crunch. Many INDIAN industries are closing down. The INDIAN economy is in a crisis and if we do not take proper steps to control those, we will be in a critical situation.

More than 30,000 crore rupees of foreign exchange are being siphoned out of our country on products such as cosmetics, snacks, tea, beverages, etc... which are grown, produced and consumed here.

A cold drink that costs only 70 / 80 paisa to produce, is sold for Rs.9 and a major chunk of profits from these are sent abroad. This is a serious drain on INDIAN economy.

We have nothing against Multinational companies, but to protect our own interestsm we request everybody to use INDIAN products only atleast for the next two years. With the rise in petrol prices, if we do not do this, the Rupee will devalue further and we will end up paying much more for the same products in the near future.

What you can do about it?
1. Buy only products manufactured by WHOLLY INDIAN COMPANIES.
2. ENROLL as many people as possible for this cause.....

Each individual should become a leader for this awareness. This is the only way to save our country from severe economic crisis. You don't need to give-up your lifestyle. You just need to choose an alternate product.
All categories of products are available from WHOLLY INDIAN COMPANIES.
LIST OF PRODUCTS
COLD DRINKS:-
DRINK LEMON JUICE, FRESH FRUIT JUICES, CHILLED LASSI (SWEET OR SOUR), BUTTER MILK, COCONUT WATER, JAL JEERA, ENERJEE, and MASALA MILK...
INSTEAD OF  COCA COLA, PEPSI, LIMCA, MIRINDA, SPRITE
BATHING SOAP:-
USE CINTHOL & OTHER GODREJ BRANDS, SANTOOR, WIPRO SHIKAKAI, MYSORE SANDAL, MARGO, NEEM, EVITA, MEDIMIX, GANGA , NIRMA BATH & CHANDRIKA
INSTEAD OF  LUX, LIFEBUOY, REXONA, LIRIL, DOVE, PEARS, HAMAM, LESANCY, CAMAY, PALMOLIVE

TOOTH PASTE:-
USE  NEEM, BABOOL, PROMISE, VICO VAJRADANTI, PRUDENT, DABUR PRODUCTS, MISWAK
INSTEAD OF  COLGATE, CLOSE UP, PEPSODENT, CIBACA, FORHANS, MENTADENT.

TOOTH BRUSH: -
USE PRUDENT, AJANTA , PROMISE
INSTEAD OF COLGATE, CLOSE UP, PEPSODENT, FORHANS, ORAL-B
SHAVING CREAM:-
USE GODREJ, EMAMI
INSTEAD OF PALMOLIVE, OLD SPICE, GILLETE

BLADE:-
USE  SUPERMAX, TOPAZ, LAZER, ASHOKA
INSTEAD OF  SEVEN-O -CLOCK, 365, GILLETTE

TALCUM POWDER:-
USE  SANTOOR, GOKUL, CINTHOL, WIPRO BABY POWDER, BOROPLUS
INSTEAD OF  PONDS, OLD SPICE, JOHNSON'S BABY POWDER, SHOWER TO SHOWER

MILK POWDER:-
USE  INDIANA, AMUL, AMULYA,NANDINI
INSTEAD OF  ANIKSPRAY, MILKANA, EVERYDAY MILK, MILKMAID.

SHAMPOO:-
USE  LAKME, NIRMA, VELVETTE
INSTEAD OF  HALO, ALL CLEAR, NYLE, SUNSILK, HEAD AND SHOULDERS, PANTENE
MOBILE CONNECTIONS:-
USE BSNL, AIRTEL
INSTEAD OF HUTCH
Food Items:-
Eat Tandoori chicken, Vada Pav, Idli, Dosa, Puri, Uppuma
INSTEAD OF  KFC, MACDONALD'S, PIZZA HUT, A&W
Every INDIAN product you buy makes a big difference. It saves INDIA. Let us take a firm decision today.

BUY INDIAN TO BE INDIAN - We are not against of foreign products.
WE ARE NOT ANTI-MULTINATIONAL. WE ARE TRYING TO SAVE OUR NATION. EVERY DAY IS A STRUGGLE FOR A REAL FREEDOM. WE ACHIEVED OUR INDEPENDENCE AFTER LOSING MANY LIVES.
THEY DIED PAINFULLY TO ENSURE THAT WE LIVE PEACEFULLY. THE CURRENT TREND IS VERY THREATENING.

MULTINATIONALS CALL IT GLOBALIZATION OF INDIAN ECONOMY. FOR INDIANS LIKE YOU AND ME, IT IS RE-COLONIZATION OF INDIA. THE COLONIST'S LEFT INDIA THEN. BUT THIS TIME, THEY WILL MAKE SURE THEY DON'T MAKE ANY MISTAKES.

WHO WOULD LIKE TO LET A "GOOSE THAT LAYS GOLDEN EGGS" SLIP AWAY?

PLEASE REMEMBER: POLITICAL FREEDOM IS USELESS WITHOUT ECONOMIC INDEPENDENCE

RUSSIA, S.KOREA, MEXICO - THE LIST IS VERY LONG!! LET US LEARN FROM THEIR EXPERIENCE AND FROM OUR HISTORY. LET US DO THE DUTY OF EVERY TRUE INDIAN.

FINALLY, IT'S OBVIOUS THAT YOU CAN'T GIVE UP ALL OF THE ITEMS MENTIONED ABOVE. SO GIVE UP AT LEAST ONE ITEM FOR THE SAKE OF OUR COUNTRY!
We would be sending useless forwards to our friends daily. Instead, please forward this mail to all your friends to create awareness.
"LITTLE DROPS MAKE A GREAT OCEAN."
PLEASE TRY TO BE AN INDIAN.....

ಜೈಲಿನಲ್ಲಿ ಪರಮಾತ್ಮ

ಶ್ರೀ ಯಡಿಯೂರಪ್ಪ ಪ್ರಾರ್ಥನೆ

ಇಂಟರ್ನೆಟ್ ಪರಮಾತ್ಮ

ಮಸಾಲೆ ದೋಸೆ ಕನ್ನಡ ಕಥೆ ..

ಚಿತ್ರನಟಿ ರಮ್ಯ ..... ಚೈತ್ರ ಕಾಲ.

ಶ್ರೀ ಯಡಿಯೂರಪ್ಪ ವಿರಹಲೋಕ

HYUNA 'Bubble Pop!'

ಚಂದ್ರವಳ್ಳಿ

       
ಚಿತ್ರದುರ್ಗದ ವಾಯುವ್ಯ ಬೆಟ್ಟದ ತಪ್ಪಲಿನ ಪ್ರದೇಶವೇ ಚಂದ್ರವಳ್ಳಿ. ಅಂಕಲಿಮಠದಿಂದ ಆಂಜನೇಯಗುಡಿವರೆಗೂ ಉತ್ತರ-ದಕ್ಷಿಣಾದಿಯೋಪಾದಿಯಲ್ಲಿ ಈ ಪ್ರದೇಶ ಹಬ್ಬಿದೆ. ಈ ಪ್ರದೇಶದಲ್ಲಿ ಉತ್ಖನನ, ಭೂಸಂಶೋಧನೆ ನಡೆಸಿದಾಗ ಈ ಪ್ರದೇಶದಲ್ಲಿ ದೊರೆತ ವಸ್ತುಗಳ ನಾಣ್ಯಗಳು, ಕಟ್ಟಡದ ಅವಶೇಷಗಳಿಂದ ಇಲ್ಲಿ ಚಂದ್ರವಳ್ಳಿ (ಚಂದನಾವತಿ) ಎಂಬ ದೊಡ್ಡ ನಗರವಿದ್ದುದಾಗಿಯೂ, ಪ್ರಾಚೀನ ಸಂಸ್ಕೃತಿಯ ತಾಣವಾಗಿದ್ದಿತೆಂದು, ಈ ಸಂಸ್ಕೃತಿ ಹರಪ್ಪ, ಮೆಹೊಂಜೋದಾರ ಸಂಸ್ಕೃತಿಗೆ ಸಮಾನವೆಂದು ಸಂಶೋಧಕರ ಅಭಿಪ್ರಾಯ.
        ಇಲ್ಲಿ ದೊರೆತ ಸಾವಿರಕ್ಕೂ ಮಿಗಿಲಾದ ವಸ್ತುಗಳಿಂದ ಕ್ರಿಸ್ತ ಪೂರ್ವದಲ್ಲಿಯೇ ಚಂದ್ರವಳ್ಳಿ ಪ್ರದೇಶವು ನಾಗರೀಕವಾಗಿದ್ದಿತೆಂದು ತಿಳಿದು ಬಂದಿದೆ. ಇಲ್ಲಿ ಕ್ರಿ.ಪೂ. 139ರಲ್ಲಿ ರ್ಹ್ಯಾ ಉಂಗಿಯ ಹಿತ್ತಾಳೆ ನಾಣ್ಯ, ರೋಮ್ ಚಕ್ರವರ್ತಿಯ ಅಗಸ್ಟಸ್ ನ ಬೆಳ್ಳಿಯ ನಾಣ್ಯ, ವೀರ ಬಲ್ಲಾಳನ ನಾಣ್ಯ ದೊರೆತಿವೆ. ಇಲ್ಲಿ ದೊರೆಕಿರುವ ಶಾತವಾಹನರ ನಾಣ್ಯಗಳ ಮೇಲೆ ಪುಲುಮಾಯಿ, ಮಹಾರಥಿ ಮುಂತಾದವರ ಹೆಸರುಗಳಿವೆ. ಹಲವಾರು ಆಧಾರಗಳಿಂದ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಕದಂಬರ ಮಯೂರವರ್ಮನ ಕಾಲದವರೆಗೂ ಈ ಪ್ರದೇಶದಲ್ಲಿ ಬೌದ್ಧ ಮತ ಪ್ರಚಾರದಲ್ಲಿತೆಂದು ತಿಳಿಯಬಹುದಾಗಿದೆ.
        ಇಲ್ಲಿಯ ಭೈರವೇಶ್ವರ ದೇವಾಲಯದ ಬಳಿಯ ಮಯೂರವರ್ಮನ ಶಾಸನದಿಂದ ಈ ಪ್ರದೇಶದಲ್ಲಿ ಆಗಲೇ ಇದ್ದ ತಟಾಕ(ಕೆರೆ)ಯನ್ನು ದುರಸ್ಥಿ ಮಾಡಿಸಿದನೆಂದು ತಿಳಿದು ಬರುತ್ತದೆ. ಈಗ ಅದೇ ಪ್ರದೇಶದಲ್ಲಿ ಸರ್ಕಾರವು ಸುಂದರವಾದ ಕೆರೆಯನ್ನು ಕಟ್ಟಿಸಿ ನೆನಪನ್ನು ಚಿರಸ್ಥಾಯಿಯಾಗಿಸಿದ್ದಾರೆ. ಇದೇ ಚಂದ್ರವಳ್ಳಿ ಪ್ರದೇಶದಲ್ಲಿ ಶ್ರೀ ಹುಲಿಗೊಂದಿ ಭೈರವೇಶ್ವರ ದೇವಾಲಯವು, ಚಂದ್ರವಳ್ಳಿ ಕೆರೆ, ಅಂಕಲಿಮಠ, ಪಂಚಲಿಂಗೇಶ್ವರ ಗುಹಾಂತರ ದೇವಾಲಯ, ಧವಳಪ್ಪನ ಗುಡ್ಡ, ಬಾಲಾಂಜನೇಯ ಪ್ರೇಕ್ಷಣೀಯ ಸ್ಥಳಗಳಾಗಿವೆ.
 ಪಂಚಲಿಂಗೇಶ್ವರ ದೇವಾಲಯ:
        ಹುಲಿಗೊಂದಿಯಲ್ಲಿರುವ ಪ್ರಸಿದ್ಧ ಅಂಕಲಿಮಠಕ್ಕೆ ಹೊಂದಿಕೊಂಡಂತೆ ಇರುವ ಬೃಹತ್ ಬಂಡೆಗಳ ಅಡಿಯಲ್ಲಿ ಪಾಂಡವರಿಂದ ಪ್ರತಿಷ್ಟಾಪಿಸಲ್ಪಟ್ಟಿವೆಯೆಂದು ಹೇಳಲಾಗುವ ಐದು ಲಿಂಗಗಳಿರುವ ದೇಗುಲವೇ ಈ ಪಂಚಲಿಂಗೇಶ್ವರ ದೇವಾಲಯ.

ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯ


       
ಚಿತ್ರದುರ್ಗ ಜಿಲ್ಲೆಗೆ ಒಂದು ಇತಿಹಾಸವಿದೆ. ಅದರ ಅರಿವೂ ಇಲ್ಲಿಯ ಪ್ರಾಚ್ಯಕಾಲದ ಸಂಸ್ಕೃತಿಯ ವೈಭವದ ಸ್ಮರಣೆಯೂ, ಕನ್ನಡಿಗರ ಮನದಲ್ಲಿ ಮೂಡಬೇಕು. ಭವ್ಯ ಕನ್ನಡದ ಇತಿಹಾಸ ಕಣ್ಣ ಮುಂದೆ ಕಟ್ಟಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಯುವಜನ ಸಮೂಹಕ್ಕೆ ಚೇತನದಾಯಕವಾಗಬೇಕು ಎಂಬ ಗುರಿಯನ್ನಿಟ್ಟಿಕೊಂಡು ಕೀರ್ತಿಶೇಷ ಹುಲ್ಲೂರು ಶ್ರೀನಿವಾಸ ಜೋಯಿಸರು ಜಿಲ್ಲೆಯ ಕೇಂದ್ರವಾದ ಚಿತ್ರದುರ್ಗದಲ್ಲಿ ಒಂದು ಐತಿಹಾಸಿಕ ವಸ್ತು ಸಂಗ್ರಹಾಲಯವನ್ನು ನಿರ್ಮಿಸಬೇಕೆಂಬ ಇವರ ಆಕಾಂಕ್ಷೆಗೆ, ಮೈಸೂರು ಸರ್ಕಾರವು ಸಂಗ್ರಹಾಲಯದ ಸ್ಥಾಪನೆಗೆ ಅನುಮತಿ ನೀಡಿತು. 1951ರ ಆಗಸ್ಟ್ ತಿಂಗಳಲ್ಲಿ ಮಾನ್ಯ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರಿಂದ ಆರಂಭೋತ್ಸವವು ನೆರವೇರಿಸಲ್ಪಟ್ಟಿತು. ಅದಕ್ಕೆ ಪ್ರಥಮ ಗೌರವ ಕ್ಯೂರೇಟರವರಾಗಿ ಹುಲ್ಲೂರು ಶ್ರೀನಿವಾಸ ಜೋಯಿಸರು ನೇಮಿಸಲ್ಪಟ್ಟರು.
ಪ್ರಾಚ್ಯ ವಸ್ತುಸಂಗ್ರಹಲಾಯಗಳನ್ನು ಪ್ರವೇಶಿಸಿದಾಗ ಸಾಹಸಿಗಳೆನಿಸಿದ ಚಿತ್ರದುರ್ಗದ ಪಾಳೆಯಗಾರರ ಕಾಲದಲ್ಲಿ ಉಪಯೋಗಿಸುತ್ತಿದ್ದ ಕತ್ತಿ, ಈಟಿ, ಸುರಗಿ, ಕೈಅಂಬು, ನೂರಾರು ಶತ್ರು ಸೈನಿಕರ ಗುಂಪನ್ನು ಒಬ್ಬನೇ ಎದುರಿಸಿ ರಕ್ಷಿಸಿಕೊಳ್ಳಲು ನೆರವಾಗುತ್ತಿದ್ದ ಪರಿಘಾಯುಧ, ಚಕಮಕಿ (Flint), ಕಲ್ಲಿನಿಂದ ಬೆಂಕಿ ಉತ್ಪನ್ನವಾಗಿ ಗುಂಡು ಹಾರುತ್ತಿದ್ದ ಪಾಳೆಯಗಾರರ ಕಾಲದ ಒಂದು ಬಂದೂಕು., ಸಿಡಿಗುಂಡುಗಳು, ಮಾಯಕೊಂಡದ ಮಣ್ಣಿನಲ್ಲಿ ವೀರಾವೇಶದಿಂದ ಯುದ್ಧ ಮಾಡಿ ವೀರಸ್ವರ್ಗವನ್ನು ಪಡೆದ ಚಿತ್ರದುರ್ಗ ಪಾಳೆಯಗಾರ ಹಿರಿಯ ಮೆದಕೇರಿನಾಯಕನ ಸಮಾಧಿಯಲ್ಲಿ ದೊರೆತ ಉಕ್ಕಿನ ಕತ್ತಿ, ಪಟ್ಟದ ಕುದುರೆ ಹಲ್ಲುಗಳು, ಬಹುಮುಖ್ಯವಾದ ಸಂಗ್ರಹಗಳು. ಇದಲ್ಲದೇ ಯೋಧರ ಧರಿಸುತ್ತಿದ್ದ ಉಕ್ಕಿನ ಅಂಗಿ ಅಪೂರ್ವವಾದ ಸಂಗ್ರಹವೂ ಇಲ್ಲಿದೆ.
ಸಂಗ್ರಹಾಲಯದಲ್ಲಿ ಜೋಡಿಸಲ್ಪಟ್ಟಿರುವ ವಾರಹಿ, ಬ್ರಾಹ್ಮೀ, ಮಹೇಶ್ವರಿ, ಇಂದ್ರಾಣಿ, ಚಾಮುಂಡೇಶ್ವರಿ, ಭಿಕ್ಷಾಟನ ಶಿವ, ಸೂರ್ಯ ನಾರಾಯಣ, ಭೈರವ ಶಿಲ್ಪಗಳೆಲ್ಲವೂ ಹೊಯ್ಸಳರ ಕಾಲಕ್ಕೂ ಮುಂಚಿನವು ಎನ್ನಲಾಗಿದೆ. ದ್ವಿಬಾಹು ಗಣೇಶ, ವೀರಭದ್ರ, ಬಸವ, ನಾಗಕನ್ನಿಕಾ, ಇವುಗಳೊಂದಿಗೆ ಹಲವಾರು ಮಾಸ್ತಿ-ವೀರಗಲ್ಲುಗಳ ಸಂಗ್ರಹವೇ ಇಲ್ಲಿದೆ.
ಶಾಸನ ವಿಭಾಗದಲ್ಲಿ ಚಿತ್ರದುರ್ಗಕ್ಕೆ ಸಂಭಂಧಪಟ್ಟ ಅಮೂಲ್ಯವಾದ ಶಿಲಾಶಾಸನ ಇಲ್ಲಿದೆ. ಚಿತ್ರದುರ್ಗವೂ ಕ್ರಿ.ಶ. ಹನ್ನೊಂದನೇ ಶತಮಾನದಲ್ಲಿ ಸೂಳ್ಗಲ್ಲು ಎಂಬ ಹೆಸರು ಹೊಂದಿತ್ತೆಂಬುದಕ್ಕೆ ಈ ಶಾಸನವೇ ಸಾಕ್ಷಿ. ಚಿತ್ರದುರ್ಗದ ಪಾಳೆಯಗಾರರ ಕಾಲದ ತಾಮ್ರಪಟ್ಟ ದಾನಶಾಸನವು, ಭರಮಣ್ಣನಾಯಕನ ಘಂಟೆ ಶಾಸನವು ಮುಖ್ಯ ಸಂಗ್ರಹಗಳು.
ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ ಪ್ರದೇಶಗಳಲ್ಲಿರುವ ಪ್ರಾಚೀನ ನಿವೇಶನಗಳ ಭೂಸಂಶೋಧನೆಯಲ್ಲಿ ದೊರೆತ ಅತ್ಯಮೂಲ್ಯ ವಸ್ತುಗಳು ಸಂಗ್ರಹಾಲಯದ ಎರಡನೇ ಕೊಠಡಿಯಲ್ಲಿವೆ. ಇವುಗಳಲ್ಲಿ ಚಂದ್ರವಳ್ಳಿಯ ರೋಮ್ ಮತ್ತು ಚೀನಾ ದೇಶದ ನಾಣ್ಯಗಳು, ಶಾತವಾಹನರ ಕಾಲದ ನಾಣ್ಯಗಳು, ಗುಹೆಗಳಲ್ಲಿ ದೊರೆತ ನವಶಿಲಾಯುಗದ ನಯವಾದ ಕಲ್ಲಿನ ಆಯುಧಗಳು, ಭೂಸಂಶೋಧನೆಯಲ್ಲಿ ದೊರೆತ ಭಾರಿ ಇಟ್ಟಿಗೆಗಳು, ವಿವಿಧ ಮಣಿಗಳು, ದಂತದ ಮತ್ತು ಗಾಜಿನ ಬಣ್ಣಬಣ್ಣದ ಬಳೆಗಳು, ಪ್ರಾಚ್ಯಕಾಲದ ಮಹಿಳೆಯರ ಅಭಿರುಚಿಯನ್ನು ವ್ಯಕ್ತಪಡಿಸುತ್ತದೆ.
 ಸಂಗ್ರಹಾಲಯದಲ್ಲಿ ಪ್ರಾಚೀನ ತಾಳೆಗರಿಗಳ ಹಸ್ತಪ್ರತಿಗಳ ಸಂಗ್ರಹಗಳಿವೆ. ಇದೇ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ದೊಡ್ಡೇರಿ ಗ್ರಾಮದಲ್ಲಿ ತಯಾರಿಸುತ್ತಿದ್ದ ವಿಶಿಷ್ಟ ಕಾಗದವನ್ನು ನೋಡಬಹುದು.

(ಆಧಾರ: ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಲಾಯ ಹೆಚ್.ಎಸ್.ಪಾಂಡುರಂಗ ಜೋಯಿಸರು)

ಚಿತ್ರದುರ್ಗದ ಕೋಟೆಯೊಳಗಿನ ಸ್ಥಳಗಳು

       













ಉಚ್ಚಂಗಮ್ಮನ ದೇವಾಲಯ:ದೊಡ್ಡಪೇಟೆ, ಚಿಕ್ಕಪೇಟೆಗಳು ಹಾಗೂ ಬೆಟ್ಟಕ್ಕೆ ಹೋಗುವ ಮಾರ್ಗ ಸಂಧಿಸುವ ಸ್ಥಳದಲ್ಲಿ ಉಚ್ಚಂಗಮ್ಮನ ಭವ್ಯಮಂದಿರವಿದೆ. ಕ್ರಿ.ಶ. 1674 ರವರೆಗೆ ಚಿತ್ರದುರ್ಗದ ಪಾಳೆಯಗಾರನಾಗಿದ್ದ ಇಮ್ಮಡಿ ಮೆದಕೇರಿನಾಯಕನು ಕ್ರಿ.ಶ. 1665 ರಲ್ಲಿ ಉಚ್ಚಂಗಿದುರ್ಗದಿಂದ ಉತ್ಸವಾಂಬೆಯ ಉತ್ಸವ ಮೂರ್ತಿಗಳನ್ನು ತಂದು ಇಲ್ಲಿ ಚಿಕ್ಕಗುಡಿ ಕಟ್ಟಿಸಿ, ಮೂರ್ತಿಗಳನ್ನು ಪ್ರತಿಷ್ಟಾಪಿಸಿದರು. ಆಗ ಗುಡಿ ಕೇವಲ 22 ಅಂಕಣಗಳಿಂದ ಕೂಡಿತ್ತು. ಮುಂದೆ ಬಿಚ್ಚುಗತ್ತಿ ಭರಮಣ್ಣನಾಯಕನು ಗುಡಿಯ ಸುತ್ತ 108 ಅಂಕಣಗಳ ಭವ್ಯ ಕಲ್ಲುಮಂಟಪಗಳನ್ನು ಐದು ಅಂತಸ್ತಿನ ಭವ್ಯ ಮಹಾದ್ವಾರವನ್ನು, ಗುಡಿಯ ಆವರಣದಲ್ಲಿ ಮಾತಂಗಿ, ಮಾವು ರಾಣಿಯರ ಎರಡು ಚಿಕ್ಕ ದೇವಮಂದಿರಗಳನ್ನು ಕಟ್ಟಿಸಿದನು. ಈ ದೇವಾಲಯದ ಎದುರಿಗೆ ಉಯ್ಯಾಲೆ ಕಂಬ, ದೊಡ್ಡ ದೀಪಾಲೆ ಕಂಬ ಹಾಗೂ ಒಂದು ಸುಂದರ ಚಿಕ್ಕ ಬಾವಿಯಿದೆ.

            ಪೂರ್ವ ದಿಕ್ಕಿಗಿರುವ ಈ ಮಹಾದ್ವಾರವು ಪಾಳೆಯಗಾರರ ಮನೆದೇವರಾದ ನೀರ್ಥಡಿ ರಂಗನಾಥನ ಹೆಸರಿನಲ್ಲಿ “ರಂಗಯ್ಯನ ಬಾಗಿಲು” ಎಂದು ಹೆಸರಾಗಿದೆ. ಇದು ಹೊರಸುತ್ತಿನ ಕೋಟೆಯ ಭಾಗವಾಗಿದ್ದು, ಇಡೀ ಊರನ್ನೇ ಸುತ್ತಿ 12 ಕಿ.ಮೀ. ಉದ್ದವಾಗಿದ್ದು, ಬೆಟ್ಟದ ಹಿಂಭಾಗವೆಂದರೆ ಆವರಿಸಿದೆ. ಈಗ ಇಲ್ಲಿ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಲಾಯವೂ ಇದೆ.

ದೇವಾಲಯದಲ್ಲಿ ಉತ್ಸವಾಂಬೆ (ಉಚ್ಚಂಗಮ್ಮ) ಮತ್ತು ಪರಶುರಾಮರ ಮೂರ್ತಿಗಳಿವೆ. ಕೆತ್ತನೆಗಳಿಂದ ಕೂಡಿದ ಕಲ್ಲುಮಂಟಪ ಕಲಾತ್ಮಕವಾಗಿದೆ. ದೇವಾಲಯದ ಹಿಂಭಾಗದ ಗುಪ್ತದ್ವಾರದಿಂದ ನೇರವಾಗಿ ಬೆಟ್ಟಕ್ಕೆ ಹೋಗಬಹುದು. ಪ್ರತಿವರ್ಷ ದೇವಿಯ ಸಿಡಿ ಹಾಗೂ ನವರಾತ್ರಿ ಉತ್ಸವಗಳು ನಡೆಯುತ್ತವೆ. ತಿಪ್ಪಿನಘಟ್ಟಮ್ಮ, ಬರಗೇರಮ್ಮ ಭೇಟಿ ಉತ್ಸವಗಳು ಈ ದೇವಾಲಯದ ಮುಂದೆಯೇ ನಡೆಯುತ್ತವೆ.

 ಕರಿವರ್ತಿ ಈಶ್ವರ ದೇವಾಲಯ:
            ಕಾಮನ ಬಾಗಿಲಿಂದ ಬೆಟ್ಟದ ಮೇಲಕ್ಕೆ ಹೋಗದೇ, ಕಂದಕದ ದಾರಿಯನ್ನೇ ಹಿಡಿದು ಸಾಗಿದರೆ ಶ್ರೀ ರಾಮದೇವರ ಒಡ್ಡಿಗೆ ಹೋಗುವ ಮಾರ್ಗದಲ್ಲಿ ಕರಿವರ್ತಿ ಈಶ್ವರ ದೇವಾಲಯವಿದೆ. ಈ ದೇವಾಲಯದ ಎದುರು ಒಂದು ಸುಂದರವಾದ ಪುಟ್ಟ ಕಲ್ಯಾಣ ಒಂದೊಂದಿದೆ. (ಕಹಳೆ ಬತೇರಿಯ ಪೂರ್ವಕ್ಕೆ). ಈ ದೇವಾಲಯ ಹೊಯ್ಸಳ ಶೈಲಿಯಲ್ಲಿ ಕಟ್ಟಲ್ಪಟ್ಟು, ಸುಂದರ ಭುವನೇಶ್ವರಿ ನವರಂಗಗಳಿಂದ ಕೂಡಿದ್ದು, ಇಲ್ಲಿಯ ಕಂಬಗಳ ಮೇಲೆ, ದೇವಾಲಯದ ಗೋಡೆಗಳ ಮೇಲೆ ಗೋಪಿಕಾ ಸ್ತ್ರೀಯರು, ಕಾಳಿಂಗ ಮರ್ಧನ, ನೃತ್ಯ ಗಣಪತಿ, ಮಹಿಷಾಸುರ ಮರ್ಧಿನಿ, ನರಸಿಂಹ ಮುಂತಾದ ಕೆತ್ತನೆಗಳಿಂದ ತುಂಬಿದೆ.  

 ಒಂಟಿಕಾಲು ಬಸವ:
            ಬೆಟ್ಟಕ್ಕೆ ಹೋಗುವ ಮಾರ್ಗದ ಬಲಬದಿ, ಬೆಟ್ಟದ ಏರಿಯ ಮೇಲೆ ದೊಡ್ಡ ಬಂಡೆಗೆ ಹೊಂದಿದಂತೆ ನಿಂತಿರುವ ಒಂಟಿ ಕಂಬದ ಮೇಲೆ ಪೆಟ್ಟಿಗೆಯಂತಹ ಚಿಕ್ಕ ಗುಡಿಯೊಂದಿದೆ. ಈ ಗುಡಿಯಲ್ಲಿ ಚಿಕ್ಕ ಬಸವನ ವಿಗ್ರಹ ಒಂದಿದೆ. ಇದಕ್ಕೆ ಒಂಟಿ ಕಾಲು ಬಸವನಗುಡಿ ಎನ್ನುತ್ತಾರೆ. 

 ಸಾನಂದ ಗಣಪತಿ ಮಂದಿರ:
            ಬೆಟ್ಟವನ್ನು ಹತ್ತುವಾಗ ಟೀಕಿನ ಬಾಗಿಲನ್ನು ದಾಟಿದರೆ ಏಕನಾಥೇಶ್ವರಿಯ ಪಾದಗಳು ಸಿಗುತ್ತವೆ. ಸ್ವಲ್ಪ ಮುಂದೆ ಹೋದರೆ ದೊಡ್ಡ ಬಂಡೆಯ ಮೇಲೆ ಗಣಪತಿ ವಿಗ್ರಹ ಕೆತ್ತಿ, ಒಂದು ಗುಡಿ ನಿರ್ಮಿಸಿದ್ದಾರೆ. ಇದೇ ಸಾನಂದ ಗಣಪತಿ ಮಂದಿರ. ಪಕ್ಕದಲ್ಲೇ ಗರಡಿ ಮನೆ ಎನ್ನಲಾಗುವ ಕಲ್ಲಿನ ಮಂಟಪ ಇದೆ.  

 ಬನಶಂಕರಿ ದೇವಾಲಯ:
            ಬೆಟ್ಟದ ಮೇಲೆ ಬೀಸುವ ಕಲ್ಲನ್ನು ನೋಡಲು ಹೋಗುವ ದಾರಿಯಲ್ಲಿ ಬಲಗಡೆ ಹುಟ್ಟುಬಂಡೆಯಲ್ಲಿ ನೆಲಗವಿಯಲ್ಲಿ ಬನಶಂಕರಿ ದೇವಿ ಅಂಗಹೀನಳಾಗಿ ಸರ್ವಾಲಂಕಾರ ಭೂಷಿತೆಯಾಗಿ, ಪದ್ಮಾಸೀನಳಾಗಿದ್ದಾಳೆ. ಕೋಟೆ ಕಟ್ಟುವುದಕ್ಕೆ ಮೊದಲೇ ಈ ವನದ ಮಧ್ಯೆ ದೇವಿ ನೆಲಸಿರಬೇಕು. ಈ ದೇವಾಲಯದ ಬಳಿ ಹಲವಾರು ನಾಗರ ಕಲ್ಲುಗಳಿವೆ.

 ಚಳ್ಳಕೆರೆಮ್ಮನ ಗುಡಿ:
            ಬಂಡೆಯಡಿಯೊಂದರಲ್ಲಿ ಬನಶಂಕರಿ ಗುಡಿಯ ಬಲಭಾಗದಲ್ಲಿ ಈ ಗುಡಿ ಇದೆ. ಈ ಗುಡಿಯ ಎದುರಿಗೆ ಆಳವಾದ ಗುಂಡಿಯೊಂದಿದೆ. ಇದು ಹಗೇವು ಇರಬಹುದು. ಮುಂದೆ ಕೊನೆಯ ಹಿರೇಮೆದಕೇರಿನಾಯಕನು ಇಲ್ಲಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಪ್ರತಿಷ್ಟಾಪಿಸಿದ. ಅಲ್ಲೊಂದು ದೇವಸ್ಥಾನ ನಿರ್ಮಿಸಿದನು.  

 ತುಪ್ಪದ ಕೊಳ:
            ಸಂಪಿಗೆ ಸಿದ್ದೇಶ್ವರ ದೇವಾಲಯದ ಬೃಹತ್ ಬಂಡೆಗಳ ಸಮೂಹಕ್ಕೆ ತುಪ್ಪದ ಕೊಳ ಎನ್ನುತ್ತಾರೆ. ದೇವಾಲಯದ ಪಕ್ಕದ ಚಿಕ್ಕಚಿಕ್ಕ ಪಾವಟಿಗೆಗಳ ಮೂಲಕ ಹತ್ತಿ, ಬೆಟ್ಟದ ನೆತ್ತಿಯ ಮೇಲಿನ ಬತೇರಿಗೆ ಹೋದರೆ, ಕಲ್ಲುಮಂಟಪ, ದೀಪಸ್ತಂಭ, ಏಕಶಿಲೆಯಲ್ಲಿ ಕೂಡಿದ 15-20 ಅಡಿ ಆಳದ ತುಪ್ಪದ ಕೊಳವಿದೆ. ಹಿಂದೆ ಈ ಕೊಳದಲ್ಲಿ ತುಪ್ಪ ಸಂಗ್ರಹಿಸುತ್ತಿದ್ದರಂತೆ. ಗೋಪಾಲಸ್ವಾಮಿ ಹೊಂಡದ ಬಳಿಯ ಪಾವಟಿಗೆಗಳಿಂದ ಇಳಿದು ಹೋಗಬೇಕು.  

ಏಕನಾಥೇಶ್ವರಿ ದೇವಾಲಯ:
            ಬೆಟ್ಟದ ಮೊದಲ ಸುತ್ತಿನ ಝಂಡಾ ಬತೇರಿಯ ದಕ್ಷಿಣದ ಕಡೆ ಏಕನಾಥೇಶ್ವರಿ ದೇವಾಲಯವಿದೆ. ಮೊದಲು ಬೌದ್ಧ ವಿಹಾರವಾಗಿದ್ದ ಈ ಸ್ಥಳದಲ್ಲಿ ದೇವಿ ಮುಳ್ಳು ಪೊದೆಯಲ್ಲಿ ಅಡಗಿಸಿದ್ದರಂತೆ. ಈ ಗುಹಾಂತರ ದೇವಾಲಯದ ಮುಖಮಂಟಪವನ್ನು ಪಾಳೆಯಗಾರರ ಕಾಲದಲ್ಲಿ ನಿರ್ಮಿಸಲಾಯಿತಂತೆ. ದೇವಾಲಯದ ಮುಂದೆ ಬೃಹತ್ ದೀಪಾಲೆ ಕಂಬ ಹಾಗೂ ಉಯ್ಯಾಲೆ ಕಂಭಗಳಿವೆ. ದೀಪಸ್ತಂಭದಲ್ಲಿ ದುರ್ಗದ ಎರಡನೇ ಪಾಳೆಯಗಾರ ಓಬಣ್ಣನಾಯಕ ಮತ್ತು ಈತನ ಪತ್ನಿ ಕನಕಮ್ಮ ನಾಗತಿಯ ಕೆತ್ತನೆ ಚಿತ್ರಗಳಿವೆ. ವರ್ಷಕ್ಕೊಮ್ಮೆ ದೇವಿಯ ಕಾರ್ತಿಕ ಹಾಗೂ ಸಿಡಿ ಉತ್ಸವ ನಡೆಯುತ್ತದೆ. ಗಾರೆ ಬಾಗಿಲು ಎಡಕ್ಕಿರುವ ದಿಬ್ಬದ ಮೇಲೆ ದೇವಿಯ ಪಾದಗಟ್ಟೆ ಇದೆ. 

ಸಂಪಿಗೆ ಸಿದ್ದೇಶ್ವರ ದೇವಾಲಯ:
ಚಿತ್ರದುರ್ಗದ ಬೆಟ್ಟದ ಮೇಲುದುರ್ಗದಲ್ಲಿ ಸಿದ್ದೇಶ್ವರನ ದೇವಾಲಯವಿದೆ. ದೇವಾಲಯದ ಸುತ್ತಲೂ ಕೆಂಡ ಸಂಪಿಗೆ ಸುವಾಸನೆಯ ಗಿಡಮರಗಳಿಂದ ಪಾಳೆಯಗಾರರ ಕಾಲದಲ್ಲಿ ಈ ಗುಡಿಗೆ ಸಂಪಿಗೆ ಸಿದ್ದೇಶ್ವರನ ದೇವಾಲಯವೆಂಬ ಹೆಸರು ಬಂದಿದೆ.       ತುಪ್ಪದ ಕೊಳ ಬತೇರಿಯ ತಪ್ಪಲಲ್ಲಿ ಇದೊಂದು ಪುರಾತನ ಗುಹಾಂತರ ದೇವಾಲಯವಿದೆ. ಈ ದೇವಾಲಯವಿರುವ ಗುಡ್ಡಕ್ಕೆ ಮುಕ್ತಿ ಶಿವಾಲಯ ಶಿಬಿರ ಎನ್ನುತ್ತಾರೆ. ದೇವಾಲಯ ಏಕಶಿಲಾ ಗುಹೆಯಾಗಿದ್ದು, ಉತ್ತರದಲ್ಲಿ ಕಲ್ಲುಗೋಡೆ ಮುಖಮಂಟಪವಿದೆ.     
         ಈ ದೇವಾಲಯವು ಗರ್ಭಗುಡಿ, ಸುಖನಾಸಿ, ನವರಂಗಗಳಿಂದ ಕೂಡಿದ್ದು ಗರ್ಭಗುಡಿಯಲ್ಲಿ ಅನಾದಿಕಾಲದ ಸಿದ್ದನನಾಥ ಲಿಂಗವಿದೆ. ಈ ಸಿದ್ದೇಶ್ವರ ಲಿಂಗದ ಹಿಂದೆ ಕತ್ತಲೆಯಿಂದ ಕೂಡಿದ ನಾಲ್ಕು ಕೋಣೆಗಳ ಗುಹೆ ಇದೆ. ಇಲ್ಲಿ ಅಲ್ಲಮಪ್ರಭುವಿನ ವಿಗ್ರಹವಿದೆ. ನವರಂಗದಲ್ಲಿ ಗಣೇಶ, ಶೂಲಬ್ರಹ್ಮ, ನಾಗರಕಲ್ಲುಗಳು, ನಂದಿ, ಭೈರವ ಮುಂತಾದ ಸುಂದರ ವಿಗ್ರಹಗಳಿವೆ. ಮೂಲೆಯಲ್ಲಿ ಸುಮಾರು ಐದು ಅಡಿ ಎತ್ತರದ ಕಿರೀಟದಲ್ಲಿ ಲಿಂಗ, ರಳಲ್ಲಿ ರುಂಡಮಾಲೆ ಧರಿಸಿದ, ಕರ್ಣಕುಂಡಲಧಾರಿಯಾಗಿರುವ ಸುಂದರ ವೀರಭದ್ರ ನಿಂತಿದ್ದಾನೆ. ಬಲಗಡೆ ಆಡಿನ ತಲೆಯ ದಕ್ಷಬ್ರಹ್ಮ, ನಂದಿ ವಿಗ್ರಹ, ಹಿಂದೆ ನರಸಿಂಹನ ವಿಗ್ರಹವಳಿವೆ.

ಚಿತ್ರದುರ್ಗದ ಕೋಟೆಯ ಬಾಗಿಲುಗಳು

        
ಚಿತ್ರದುರ್ಗದ ಏಳು ಸುತ್ತಿನ ಕೋಟೆಯೆಂದೊಡನೆ ಥಟ್ಟನೆ ನಮಗೆ ನೆನಪಿಗೆ ಬರುವುದು ಈ ಪ್ರಾಂತ್ಯವನ್ನು ಆಳಿದ ಪಾಳೆಯಗಾರರು. ಈ ದುರ್ಗಮ ಕೋಟೆಯನ್ನು ಪಾಳೆಯಗಾರಗಿಂತ ಮೊದಲು ಆಳ್ವಿಕೆ ನಡೆಸಿದವರು ಈ ಕೋಟೆಯ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ಸುಮಾರು 10ನೇ ಶತಮಾನದಲ್ಲಿಯೇ ಕೋಟೆಯ ನಿರ್ಮಾಣವಾಗಿರಬಹುದು ಎಂಬುವುದು ಇತಿಹಾಸಕಾರರ ಅನಿಸಿಕೆ ಕ್ರಿ.ಶ.1070 ರಲ್ಲಿಯೇ ಕೋಟೆ ಇದುದ್ದಕ್ಕೆ ಆಧಾರವಿದೆ. ಏಳು ಸುತ್ತಿನಿಂದ ಕೂಡಿರುವ ಈ ಕೋಟೆಗೆ ಏಳು ಪ್ರಮುಖ ಬಾಗಿಲುಗಳಿವೆ.
ರಂಗಯ್ಯನ ಬಾಗಿಲು:
            ಪೂರ್ವ ದಿಕ್ಕಿಗಿರುವ ಈ ಮಹಾದ್ವಾರವು ಪಾಳೆಯಗಾರರ ಮನೆದೇವರಾದ ನೀರ್ಥಡಿ ರಂಗನಾಥನ ಹೆಸರಿನಲ್ಲಿ “ರಂಗಯ್ಯನ ಬಾಗಿಲು” ಎಂದು ಹೆಸರಾಗಿದೆ. ಇದು ಹೊರಸುತ್ತಿನ ಕೋಟೆಯ ಭಾಗವಾಗಿದ್ದು, ಇಡೀ ಊರನ್ನೇ ಸುತ್ತಿ 12 ಕಿ.ಮೀ. ಉದ್ದವಾಗಿದ್ದು, ಬೆಟ್ಟದ ಹಿಂಭಾಗವೆಂದರೆ ಆವರಿಸಿದೆ. ಈಗ ಇಲ್ಲಿ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಲಾಯವೂ ಇದೆ.
ಸಿದ್ದಯ್ಯನ ಬಾಗಿಲು:
            ಇದಕ್ಕೆ ‘ಸಂತೆಬಾಗಿಲು’ ಎಂತಲೂ ಕರೆಯುತ್ತಾರೆ. ಗಾಂಧಿ ಸರ್ಕಲ್ ನಲ್ಲಿ [ಮಾರ್ಕೆಟ್ ಮುಂಭಾಗ] ನಿಂತು ನೋಡಿದರೆ, ಈ ಬಾಗಿಲು ಕಾಣುತ್ತದೆ. ಪಾಳೆಯಗಾರರ ಕಾಲದಲ್ಲಿ ಈ ಬಾಗಿಲು ಅಂಕಣದಲ್ಲಿ ಕುಸ್ತಿಕಾಳಗ, ಹುಲಿ ಕಾಳಗ, ಮುಂತಾದವುಗಳು ನಡೆಯುತ್ತಿದ್ದು, ಪಾಳೆಯಗಾರರು ಪುರಪ್ರಮುಖರು ಇಲ್ಲಿಯ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಒಂದು ಭಾಗದ ದ್ವಾರವನ್ನು ಮುಚ್ಚಿ, ಲಕ್ಷ್ಮಿನಾರಾಯಣಸ್ವಾಮಿ ಗುಡಿಯನ್ನಾಗಿಸಿದ್ದಾರೆ. 
ಉಚ್ಚಂಗಿ ಬಾಗಿಲು :
            ಪಾಳೆಯಗಾರರ ಮನೆದೇವತೆ ಉಚ್ಚಂಗಮ್ಮ ಈ ದೇವತೆಯ  ಹೆಸರಿನಲ್ಲೇ ಕೋಟೆಯ ಪಶ್ಚಿಮ ದಿಕ್ಕಿನ ಬಾಗಿಲಿಗೆ ಉಚ್ಚಂಗಿ ಬಾಗಿಲು ಎನ್ನುತ್ತಾರೆ. ಈ ದ್ವಾರದ ಮೂಲಕ ಸಿಹಿನೀರು ಹೊಂಡಕ್ಕೆ ಹೋಗಬಹುದು. ಈ ಬಾಗಿಲ ಬಳಿ ನರಸಿಂಹ, ಆಂಜನೇಯನ ದೇವಾಲಯಗಳಿವೆ. ಒಂದು ವೃಂದಾವನವು ಇದೆ. ಹಿಂದೆ ಈ ಹೊಂಡದಲ್ಲಿ ದೇವಿಯ ತೆಪ್ಪೋತ್ಸವ ನಡೆಯುತ್ತಿದ್ದಿತಂತೆ. ಈ ಹೊಂಡದ ನೀರನ್ನೇ ದೇವಿಯ ಅಭಿಷೇಕ್ಕೆ ಉಪಯೋಗಿಸುತಿದ್ದರಂತೆ.
ಜೋಡು ಬತೇರಿ ಬಾಗಿಲು:
            ಇದಕ್ಕೆ ಇನ್ನೊಂದು ಹೆಸರು ಲಾಲ್ ಗಡದ ಬತೇರಿ ಬಾಗಿಲು. ಲಾಲ್ ಗಡ್ ಎಂದು ಹೇಳಲು ಈ ಭಾಗದ ಕೋಟೆಗೆ ಕೆಂಪುವರ್ಣದ ಕಲ್ಲನ್ನು ಉಪಯೋಗಿಸಿರುವುದು. ಪಾಳೆಯಗಾರರ ದೇವರಾದ ಅಹೋಬಲ ನರಸಿಂಹನ ಹೆಸರಿನಿಂದಲೂ ಕರೆಯುತ್ತಾರೆ. 
ಹನುಮನ ಬಾಗಿಲು:
            ಪಾಳೆಗಾರರ ಆರಾಧ್ಯ ದೈವ ಹನುಮ. ಅವರ ಧ್ವಜವೂ ಸಹ ಹನುಮದ್ಗರುಡ ಲಾಂಛನ ಉಳ್ಳದ್ದು. ಈ ಕೋಟೆಯ ಪಶ್ಚಿಮದಲ್ಲಿ ಹನುಮಂತ ದೇವಾಲವಿದೆ. ಆದ್ದರಿಂದ ಹನುಮನ ಬಾಗಿಲೆಂತಲೂ ಕರೆಯುತ್ತಾರೆ. 
ಗಾರೆ ಬಾಗಿಲು:
            ಉಚ್ಚಂಗಮ್ಮನ ಗುಡಿಯಿಂದ ಬೆಟ್ಟದ ದಕ್ಷಿಣ ಭಾಗದಲ್ಲಿರುದೇ ಗಾರೆ ಬಾಗಿಲು ಕೋಟೆಯ ಏಳನೇ ಸುತ್ತು ಇಲ್ಲಿಂದಲೇ ಆರಂಭವಾಗುತ್ತದೆ. ನಯವಾದ ಗಾರೆಗಚ್ಚಿನಿಂದ ಕಟ್ಟಿರುವುದರಿಂದ ಗಾರೆಬಾಗಿಲು ಎನ್ನುತ್ತಾರೆ. 
ಕಾಮನ ಬಾಗಿಲು:
            ಬೆಟ್ಟಕ್ಕೇರಲು ಹಾಗೂ ಕೋಟೆಯ ಮುಖ್ಯದ್ವಾರಕ್ಕೆ ಮತ್ತು ಮೂರನೇ ಸುತ್ತಿನ ಕೋಟೆ ಪ್ರವೇಶಿಸುವ ಬಾಗಿಲೇ ಕಾಮನ ಬಾಗಿಲು. ಇಡೀ ಚಿತ್ರದುರ್ಗದ ಕೋಟೆಯ ಮಹಾದ್ವಾರಗಳಲ್ಲೇ ಅತ್ಯಂತ್ಯ ಪ್ರಮುಖ, ಸುಂದರ, ಸುಭದ್ರ, ಕಲಾತ್ಮಕ ಬಾಗಿಲು. 25 ಅಡಿ ಎತ್ತರದ ಈ ಭಾರಿ ಗೋಡೆಗಳ ಹೊರಭಾಗದಲ್ಲಿ ಆದಿಶೇಷ, ಶಿವಲಿಂಗ, ವಿಘ್ನೇಶ್ವರ, ಬಸವ, ಹಂಸ, ಕಮಲ, ಗಂಡಭೇರುಂಡ ಮುಂತಾದ ಸುಂದರ ಶಿಲ್ಪಗಳಿವೆ. ಬಾಗಿಲ ಬಳಿ ಸುಮಾರ 10 ಅಡಿ ಎತ್ತರದ ಕಲ್ಲಿನ ತೊಟ್ಟಿ ಇದೆ. ಈ ತೊಟ್ಟಿಯಲ್ಲಿ ಆನೆಗಳು ನೀರು ಕುಡಿಯುತ್ತಿದ್ದವಂತೆ. ಈ ಬಾಗಿಲ ಪಕ್ಕದಲ್ಲೇ ಒಂದು ಚೌಕಾಕಾರದ ಸುಂದರ ಹೊಂಡವಿದೆ. ಕಾಮನಬಾಗಿಲ ಬಳಿ ಇರುವುದರಿಂದ ಇದಕ್ಕೆ ‘ಕಾಮನಬಾವಿ’ ಎನ್ನುತ್ತಾರೆ.   

ಕೋಟೆಯೊಳಗಿನ ಸುತ್ತುಗಳು
ಹೊರಸುತ್ತಿನ ಕೋಟೆ:
ರಂಗಯ್ಯನ ಬಾಗಿಲು, ಲಾಲ್ ಕೋಟೆ ಬಾಗಿಲು, ಉಚ್ಚಂಗಿ ಬಾಗಿಲು, ಸಂತೆ ಬಾಗಿಲನ್ನು ಒಳಗೊಂಡಿದೆ.
ಗಾರೆ ಬಾಗಿಲು ಸುತ್ತು ಕೋಟೆ:
ಎರಡನೇ ಸುತ್ತು ಕೋಟೆಯ ಆವರಣ ಆವರಿಸಿದೆ.  
 ಕಾಮನ ಬಾಗಿಲು ಸುತ್ತು ಕೋಟೆ:
ಕೋಟೆಯ ಮೂರನೇ ಸುತ್ತನ್ನು ಒಳಗೊಂಡಿದೆ.  
 ಜಾಗಟೆ ಬಾಗಿಲು ಸುತ್ತು ಕೋಟೆ:
ಈ ನಾಲ್ಕನೇ ಸುತ್ತಿನ ಕೋಟೆಯ ಬಾಗಿಲಿಗೆ ವಿಷದ ಕತ್ತಿ ಬಾಗಿಲು ಎನ್ನುತ್ತಾರೆ.  
 ಗಂಟೆ ಬಾಗಿಲು ಸುತ್ತು ಕೋಟೆ:
ಐದನೇ ಸುತ್ತಿನ ಕೋಟೆಯ ಆವರಣ ಹೊಂದಿರುವ ಬಾಗಿಲಿಗೆ ಗಂಟೆ ಬಾಗಿಲು ಎನ್ನುತ್ತಾರೆ.  
ಟೀಕಿನ ಬಾಗಿಲು :
ಈ ಭಾಗದ ಕೋಟೆಯ ಬಾಗಿಲಿಗೆ ಕಸ್ತೂರಿ ರಂಗಪ್ಪನಾಯಕರ ಬಾಗಿಲು, ಟೀಕಿನ ಬಾಗಿಲು ಎಂದು ಕರೆಯುತ್ತಾರೆ.
 ಏಕನಾಥೇಶ್ವರಿ ಬಾಗಿಲು ಕೋಟೆ:
ಈ ಭಾಗದ ಕೋಟೆಯಲ್ಲಿ ಅರಮನೆ, ನಾಗರ, ತುಪ್ಪದ ಕೊಳ ಮುಂತಾದವುಗಳಿವೆ. ಏಕನಾಥೇಶ್ವರಿ ದೇವಾಲಯವಿದೆ. ಈ ಬಾಗಿಲಿಗೆ ಅಜ್ಜಿ ಬಾಗಿಲು ಎನ್ನುತ್ತಾರೆ.

ಪರಶುರಾಂಪುರದ ಚನ್ನಕೇಶವ ದೇವಾಲಯ

       
ಪರಶುರಾಂಪುರವು ಚಳ್ಳಕೆರೆಯಿಂದ ಪೂರ್ವಕ್ಕೆ 30 ಕಿ.ಮೀ. ದೂರದಲ್ಲಿರುವ ಆಂಧ್ರದ ಗಡಿಯಲ್ಲಿರುವ ಹೋಬಳಿ ಕೇಂದ್ರ. ದಕ್ಷಿಣಕ್ಕೆ ಊರ ಹೊರವಲಯ ಕೆರೆಯ ಕೆಳಗೆ ಚನ್ನಕೇಶವ ದೇವಸ್ಥಾನವಿದೆ. ದೇವಸ್ಥಾನದ ಎದುರಿಗೆ ಶ್ರೀ ವೈಷ್ಣವ ಪಂಥದ ಮುದ್ರೆಯನ್ನು ಸಾಂಕೇತಿಕವಾಗಿ ಸೂಚಿಸುವಂತಿರುವ ಮೂರು ಗರುಡ ಸ್ತಂಭಗಳಿವೆ. ಅವುಗಳ ಪಕ್ಕದಲ್ಲಿ ಆಳೆತ್ತರದ ನಿಲುವು ಬಂಡೆಗಳಲ್ಲಿ ಭಕ್ತಿಯಿಂದ ಕೈಮುಗಿದ ಗರುಡ ಮತ್ತು ಅದರ ಎದುರಿಗೆ ಇರುವ ಮತ್ತೊಂದು ಬಂಡೆಯಲ್ಲಿ ಹನುಮಂತನ ರೇಖಾಚಿತ್ರಗಳನ್ನು ಬಿಡಿಸಿ ಬಣ್ಣಗಳಿಂದ ತುಂಬಿದ್ದಾರೆ. ದೇವಸ್ಥಾನದ ಕಟ್ಟಡ ಸಾಧಾರಣ ಗೋಡೆಯಿಂದ ಕೂಡಿದೆ. ಆದರೆ ಗರ್ಭಗುಡಿಯಲ್ಲಿರುವ ಚನ್ನಕೇಶವ ವಿಗ್ರಹ, ಪಕ್ಕದ ಇನ್ನೊಂದು ಗರ್ಭಗುಡಿಯಲ್ಲಿರುವ ಲಕ್ಷ್ಮಿಯ ವಿಗ್ರಹ, ನವರಂಗದ ಪಕ್ಕದ ಗೋಡೆಯ ಬಳಿ ಪ್ರತಿಷ್ಟಾಪಿಸಲಾಗಿರುವ ಆಳ್ವಾರ ವಿಗ್ರಹವನ್ನು ಕಾಣಬಹುದು.

ಪರಶುರಾಂಪುರದ ಹಂಪಯ್ಯನ ಮಠ

       
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದಿಂದ ಕೊರ್ಲಕುಂಟೆ ಗ್ರಾಮದ ಮಾರ್ಗವಾಗಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಕೋಟೆಕೆರೆ ಜಮೀನೊಂದರಲ್ಲಿ ಗತಕಾಲ ವೈಭವವನ್ನು ಸಾರುವ, ಈಗ ಹಾಳು ಬಿದ್ದಿರುವ ಮಠವೊಂದು ಕಣ್ಣಿಗೆ ಕಾಣುತ್ತದೆ. ಇದು ಚೋಳಕಾಲದ ಇತಿಹಾಸವನ್ನು ಸಾರುತ್ತದೆ.
         ಕೋಟೆಕೆರೆಯ ಜಿ.ಶಾಂತಪ್ಪಗೌಡರ ಜಮೀನಿನಲ್ಲಿ ಹಂಪಯ್ಯ ಎಂಬ ಸಾಧು ಕಟ್ಟಿಸಿದ ಮಠ ಎಂಬುದು ಆಧಾರವಿಲ್ಲದ ಸತ್ಯ. ಈ ಮಠವು 13 ಕಂಬಗಳಿಂದ ರಚಿಸಲ್ಪಟ್ಟಿದ್ದು, ಕಂಬಗಳ ನಾಲ್ಕು ಬದಿಯಲ್ಲಿ ವಿವಿಧ ಬಗೆಯ ಶಿಲ್ಪಕೃತಿಗಳನ್ನು ಕೆತ್ತಲಾಗಿದೆ. ಬಸವಣ್ಣ, ಹಂಪಯ್ಯ, ಲಕ್ಷ್ಮಿ, ವ್ಯಾಸ, ವೀರಭದ್ರಸ್ವಾಮಿ, ನಟರಾಜ, ಮೂರು ತಲೆ ಹಸು ಲಿಂಗಕ್ಕೆ ಹಾಲುಣಿಸುತ್ತಿರುವುದು, ಪೂರ್ಣಚಂದ್ರ, ಚಕ್ರ, ಆನೆ, ಗಣಪತಿ, ಕಾಮಧೇನು, ಹೀಗೆ ವಿವಿಧ ಭಂಗಿಗಳನ್ನು ಕಂಬಗಳಲ್ಲಿ ಚಿತ್ರಿಸಲಾಗಿದೆ. ಈ ಮಠದ ದಕ್ಷಿಣ ಭಾಗದಲ್ಲಿ 16 ಕಂಬಗಳಿದ್ದು, ಅದರಲ್ಲಿ 3 ಕಂಬಗಳು ಬಿದ್ದುಹೋಗಿದ್ದು, ಮಂಟಪದ ಸುತ್ತ ಹಾಗೂ ಒಳಗೆ ಅವನತಿಯ ಅಂಚಿನಲ್ಲಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಗಮನಹರಿಸುವುದು ಅವಶ್ಯವಾಗಿದೆ.
         ಈ ಮಠದಿಂದ ಸ್ವಲ್ಪ ಹಿಂದೆ ವೀರಭದ್ರಸ್ವಾಮಿ ದೇಗುಲವೊಂದು ಕಂಡು ಬರುತ್ತದೆ. ಈ ದೇಗುಲವೂ ಸಹ ಅದಲದಿು, ಅದರಲ್ಲಿಯೂ ಸಹ ಶಿಲ್ಪಕೃತಿಗಳು ಕಂಡು ಬರುತ್ತದೆ. ಅಲ್ಲದೇ ಸುತ್ತಮುತ್ತಲೂ ಶಾಸನಗಳು, ವೀರಗಲ್ಲುಗಳು ಕಾಣಸಿಗುತ್ತದೆ. ಗರ್ಭಗುಡಿಯ ಮುಂಭಾಗ ಮೇಲೆ ಒಂದು ಹಾವು ಚಂದ್ರನನ್ನು ನುಂಗುವ ಕಲಾಕೃತಿಯನ್ನು ನಯನ ಮನೋಹರವಾಗಿ ಕೆತ್ತಿಸಲಾಗಿದೆ. ಇತಿಹಾಸ ಸಂರಕ್ಷಣೆ ನಮ್ಮ ಕೈಯಲ್ಲಿಯೇ ಇದೆಯಾದರೆ, ಇಂತಹವುಗಳನ್ನು ನಾವು ಏಕೆ ಸಂರಕ್ಷಿಸಬಾರದು?

9ನೇ ಶತಮಾನದ ಮಲ್ಲೇಶ್ವರ ದೇವಾಲಯ

       




















ಚಳ್ಳಕೆರೆ ತಾಲ್ಲೂಕಿನಿಂದ ಸೋಮಗುದ್ದು-ಸೊಂಡೇಕೆರೆ ಮಾರ್ಗವಾಗಿ ಸುಮಾರು 13 ಕಿ.ಮೀ. ದೂರದಲ್ಲಿರುವ ಚಿಕ್ಕಮಧುರೆ ಎಂಬ ಗ್ರಾಮವಿದೆ. ಚಿಕ್ಕಮಧುರೆ ಎಂಬ ಗ್ರಾಮದಲ್ಲಿ ಸುಮಾರು ಅರ್ಧ ಕಿ.ಮೀ. ನಷ್ಟು ಒಂದು ಸುಂದರ ದೇವಾಲಯವು ಕಾಣಸಿಗುತ್ತದೆ. ಇದು ನೊಳಂಬರ ಕಾಲದ ದೇವಾಲಯವಾಗಿದ್ದು, ಈ ದೇವಾಲಯವು ಈಗ ಜೀರ್ಣೋದ್ಧಾರಗೊಂಡಿದೆ. ಈಗ ನೋಡಲಿಕ್ಕೆ ಇದು ಪ್ರಾಚೀನ ದೇವಾಲಯದಂತೆ ಕಾಣುವುದಿಲ್ಲವಾದರೂ ಈ ದೇಗುಲದ ಮುಂದಿರುವ ಶಿಲ್ಪಕಲೆಗಳು, ಶಾಸನಗಳೇ ಸಾಕ್ಷಿ.
     ಇದು ನೊಳಂಬರ ಕಾಲದಲ್ಲಿ ಕಟ್ಟಿಸಿರಬಹುದೆಂದು ಕಂಡು ಬಂದಿರುತ್ತದೆ. ಈ ದೇವಸ್ಥಾನದಿಂದ ಕಂಬ ಶಾಸನದಿಂದ ಕ್ರಿ.ಶ. 815ರಲ್ಲಿ ಸಿಂಹಪೋತನ ಮಗ ಪರಮೇಶ್ವರ ಪಲ್ಲವಾದಿ ರಾಜ ಹಾಗೂ ಅವನ ಮಗ ಪಲ್ಲವಮಲ್ಲ ಇವರು ರಾಷ್ಟ್ರಕೂಟರ ಸಾಮಂತರಾಗಿದ್ದರೆಂದು, ತಲಕಾಡಿನ ಗಂಗರು ಇವರಿಗೆ ಸೋತು ಸಾಮಂತರಾಗಿದ್ದರೆಂದು, ಪರಮೇಶ್ವರ ಪಲ್ಲವನು ನೊಳಂಬಾಳಿಗೆ ನೀರ್ಗುಂದ ನಾಡನ್ನು ಆಳುತ್ತಿದ್ದಾಗ ಅವನ ರಾಣಿ ಗಾವಗನಬ್ಬೆ, ನಾರಮಾರಬ್ಬೆಯರು ಶಿವಾಲಯಕ್ಕೆ ದತ್ತಿ ಬಿಟ್ಟಿದ್ದನ್ನು, ಪರಮೇಶ್ವರನ ಸೋದರಿ ಪೆರ್ಮಾಡಿಯ ರಾಣಿಯಾಗಿದ್ದನ್ನು, ಗಂಗನೊಳಂಬರ ವೈವಾಹಿಕ ಸಂಭಂಧವನ್ನು, ದಾನನಬ್ಬೆಯ ಮದರಿಕಲ್ಲಿನ ಗಾವಗನೇಶ್ವರಿ ದೇವಾಲಯವೊಂದನ್ನು ಕಟ್ಟಿಸಿ ಭೂದತ್ತಿ ನೀಡಿದಳೆಂದು ಈ ಕನ್ನಡ ಶಾಸನ ತಿಳಿಸುತ್ತದೆ. ಅಲ್ಲದೇ ನೊಳಂಬರ ಕಾಲದ ರಾಜಮಾತೆಯು ಇಲ್ಲಿರುವ ಶಿವಲಿಂಗವನ್ನು ಪ್ರತಿಷ್ಟಾಪಿಸಿದಳೆಂದು ತಿಳಿದು ಬಂದಿದೆ. ಈ ಗ್ರಾಮದ ಸುತ್ತಮುತ್ತಲ ಹೊಲಗಳಲ್ಲಿ ವೀರಗಲ್ಲುಗಳು, ಶಾಸನಗಳು ಪತ್ತೆಯಾಗಿದೆ.


ಉಮಾ ಮಹೇಶ್ವರ ದೇವಾಲಯ

       
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ನಾಯಕನಹಟ್ಟಿ ಗ್ರಾಮದಿಂದ ಸುಮಾರು 7-8 ಕಿ.ಮೀ.  ದೂರದಲ್ಲಿರುವ ಎನ್.ಗೌರಿಪುರ ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಸ್ಥಾಪಿತವಾಗಿರುವ ಹಾಗೂ ದಕ್ಷಿಣ ಭಾರತದಲ್ಲೇ ಇತಿಹಾಸದ ಹಿನ್ನೆಲೆಯನ್ನು ಹೊಂದಿರುವ ಏಕಶಿಲಾ ಗೌರಿಶಂಕರ ವಿಗ್ರಹವುಳ್ಳ ದೇವಾಲಯವು ಇಲ್ಲಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಶಿವನ ತೊಡೆಯ ಮೇಲೆ ಪಾರ್ವತಿದೇವಿ ಕುಳಿತಿರುವ ಹಾಗೂ ಒಂದೇ ಕಲ್ಲಿನಲ್ಲಿ ಕೆತ್ತಿರುವ ವಿಗ್ರಹವು ದಕ್ಷಿಣ ಭಾರತದಲ್ಲಿಯೇ ಎಲ್ಲಿಯೂ ಇಲ್ಲವೆಂಬುದು. ಈ ಗ್ರಾಮವು ಚಳ್ಳಕೆರೆಯಿಂದ ಸುಮಾರು 22 ಕಿ.ಮೀ. ಗೌರಿಯನ್ನು ತೊಡೆಯ ಮೇಲೆ ಕುಳ್ಳಿರಿಸಿದಂತಹ ಭಂಗಿ ನಿಜಕ್ಕೂ ನಯನ ಮನೋಹರ. ನಿಜಕ್ಕೂ ಅಪರೂಪ! ಹಾಗೂ ಅಮೋಘ!!
         ಈ ದೇಗುಲದ ಗರ್ಭಗುಡಿಯ ಮುಂದಿನ ನವರಂಗದ ಚಚ್ಚೌಕದ ಕಂಬಗಳು ತಮ್ಮ ಶಿಲ್ಪಕಲೆಯೊಂದಿಗೆ ಸೆಳೆಯುತ್ತವೆ. ಕಂಬಗಳಲ್ಲಿ ನರಸಿಂಹ, ಗಿಳಿ, ಬೇಡರಕಣ್ಣಪ್ಪ, ಭೈರಾಗಿ, ಇನ್ನು ಮುಂತಾದ ಆಕರ್ಷಕ ಕೃತಿಗಳನ್ನು ರಚಿಸಲಾಗಿದೆ. ಶಿವ-ಪಾರ್ವತಿಯರಿಗೆ ಎದುರಾಗಿ ನಂದಿ ವಿಗ್ರಹವೂ ಇದೆ. ಈ ದೇವಾಲಯವನ್ನು ನೋಡಲು ನಾಡಿನೆಲ್ಲೆಡೆಯಿಂದ ಶಿವಭಕ್ತರೂ ಬರುತ್ತಾರೆ. ಸಾಮಾನ್ಯವಾಗಿ ಶಿವನ ದೇವಾಲಯವೆಂದರೆ ಎಲ್ಲೆಡೆಯೂ ಲಿಂಗರೂಪದಲ್ಲಿಯೇ ಹೆಚ್ಚಾಗಿರುತ್ತದೆ. ಆದರೆ ಈ ದೇಗುಲದಲ್ಲಿ ಶಿವನು ಗೌರಿಸಮೇತನಾಗಿರುವುದು ಹಾಗೂ ಪುತ್ರರತ್ನರಾದ ಗಣೇಶ-ಸುಬ್ರಹ್ಮಣ್ಯರೊಂದಿಗೆ ಕುಟುಂಬ ಸಮೇತನಾಗಿರುವುದು ವಿಶೇಷ.

ಹೊಸಗುಡ್ಡ ಗುಹಾಂತರ ದೇವಾಲಯ (ರಾಮದುರ್ಗ)

       
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಹೀಗೊಂದು ಕಾಲಕ್ಕೆ ಕೇವಲ ಹಟ್ಟಿ ಎಂಬ ಹೆಸರನ್ನು ಹೊಂದಿದ್ದ ಪಾಳೆಯಪಟ್ಟಾಗಿತ್ತು. ಈ ಹಟ್ಟಿಯನ್ನಾಳಿದ ಪಾಳೆಯಗಾರರೇ ಹಟ್ಟಿ ಪಾಳೆಯಗಾರರು ಎಂದು ಹೆಸರಾಗಿದ್ದಾರೆ. ಈ ಪಾಳೆಯಗಾರರಲ್ಲಿ ಒಬ್ಬನಾದ ಕಾಕಳನಾಯಕನೇ ಹಟ್ಟಿಯ ಮೂಲ ನಿರ್ಮಾಪಕ ಎನ್ನಲಾಗಿದೆ. ಇವನ ಮಗನೇ ದೊಡ್ಡಿಲ ಮಲ್ಲಪ್ಪನಾಯಕ. ಅವರ ಎರಡನೇ ಮಗನೇ ಬೋಡಿ ಮಲ್ಲಪ್ಪನಾಯಕ. ಚಿತ್ರದುರ್ಗದ ಚಿಕ್ಕಣ್ಣನಾಯಕನ ತಂಗಿ ಸರ್ಜಮ್ಮನಾಗತಿ ಕಾಕಳನಾಯಕನ ಹೆಂಡತಿ. ಒಮ್ಮೆ ಈ ನಾಯಕನು ಕಾಶೀಯಾತ್ರೆ ಮಾಡುತ್ತಾ, ಆನೆಗೊಂದಿ ಪಟ್ಟಣಕ್ಕೆ ಬಂದನು. ಅಲ್ಲಿ ಭೀಮಾ ಜಟ್ಟಿ ಎಂಬುವವನೊಬ್ಬನು ತನ್ನನ್ನು ಸೋಲಿಸುವರೇ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದನು. ಅಂತಹ ಜಟ್ಟಿಯನ್ನು ಕಾಕಳನಾಯಕನು ದ್ವಂದ್ವಯುದ್ಧದಲ್ಲಿ ಮಣ್ಣು ಮುಕ್ಕಿಸಿದನು. ಆನೆಗೊಂದಿಯ ರಾಯರು ಇವನ ಸಾಹಸ, ಪರಾಕ್ರಮಗಳನ್ನು ಮೆಚ್ಚಿ, ಇವನಿಗೆ ಮೂರು ಗ್ರಾಮಗಳನ್ನು ಕೊಟ್ಟು, ಹಾಗೆಯೇ ಭೀಮ ಎಂಬ ಬಿರುದು ನೀಡಿ ಸನ್ಮಾನಿಸಿದರು.
         ಮುಂದೆ ಬೋಡಿ ಮಲ್ಲಪ್ಪನಾಯಕನು ಕಾಶಿಯಿಂದ ಬೋಡಿಲಿಂಗವನ್ನು ರಾಮೇಶ್ವರದಿಂದ ಮತ್ತೊಂದು ಲಿಂಗವನ್ನು ತೆಗೆದುಕೊಂಡು ಬಂದು ರಾಮದುರ್ಗದಲ್ಲಿ ಪ್ರತಿಷ್ಟಾಪಿಸಿದನು. ನಾಯಕನಹಟ್ಟಿಯ ದಕ್ಷಿಣಕ್ಕಿರುವ ಈ ಗುಡ್ಡ ಕೋಟೆ ಕಟ್ಟಲು ಪ್ರಶಸ್ತ ಸ್ಥಳ ಎನಿಸಿದ್ದರಿಂದ ಅದನ್ನುರಾಮದುರ್ಗ ಎಂದು ಕರೆದನು. ಇದಲ್ಲದೇ ಈ ನಾಯಕನು ಏಳು ಕೆರೆ ಮತ್ತು ಒಂಭತ್ತು ಗ್ರಾಮಗಳನ್ನು ಕಟ್ಟಿಸಿದನು. ಆನೆಗೊಂದಿ ರಾಯರು ಕೊಟ್ಟ ಭೀಮ ಎಂಬ ಬಿರುದು ಸದಾಕಾಲ ಉಳಿಯುವಂತೆ ಅವನು ಕಟ್ಟಿಸಿದ ಕೆರೆಯಲ್ಲಿ ಒಂದಕ್ಕೆ ಭೀಮನಕೆರೆ ಎಂದು ಹೆಸರಿಟ್ಟನು.

(ಆಧಾರ: ಹರಿತಿ ಸಿರಿ ಲಕ್ಷ್ಮಣ್ ತೆಲಗಾವಿ)

ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಕ್ಷೇತ್ರ

       
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರವು ರಾಜ್ಯದ್ಯಾಂತ ಮನೆಮಾತಾಗಿರುವ ಮಹಾಕ್ಷೇತ್ರವಾಗಿದೆ. ಚಳ್ಳಕೆರೆ ನಗರದಿಂದ ಸುಮಾರು 16 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವು ಐತಿಹಾಸಿಕ ಹಿನ್ನೆಲೆಯೂ ಹೊಂದಿದೆ.

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ:
ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಕಂದಾಯ ಹೋಬಳಿ ಕೇಂದ್ರಸ್ಥಳವಾಗಿದ್ದು, ಈ ಗ್ರಾಮದಲ್ಲಿ ಪ್ರತಿವರ್ಷ ಫಾಲ್ಗುಣ ಮಾಸ ಬಹುಳದ ಚಿತ್ತ ನಕ್ಷತ್ರದಂದು ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ರಥೋತ್ಸವವು ಕರ್ನಾಟಕ ರಾಜ್ಯದಲ್ಲಿ ನಡೆಯುವ ಅತ್ಯಂತ್ಯ ದೊಡ್ಡ ಜಾತ್ರೆಗಳಲ್ಲಿ ಒಂದು. ನಾಯಕನಹಟ್ಟಿ ಜಾತ್ರೆಯು ಹಿಂದೂ-ಮುಸಲ್ಮಾನರ ಭಾವೈಕ್ಯತೆಯ ದ್ಯೋತಕವಾಗಿದೆ. ಇಲ್ಲಿನ ಕೇಂದ್ರ ಶಕ್ತಿಯಾದ ಗುರು ತಿಪ್ಪೇರುದ್ರಸ್ವಾಮಿಯನ್ನುಶ್ರೀ ಗುರು ತಿಪ್ಪೇರುದ್ರಸ್ವಾಮಿ ಎಂತಲೂ ಕರೆಯುತ್ತಾರೆ. ಹಿಂದೆ ಪಂಚಗಣಾಧೀಶ್ವರರೆಂದು ಹೇಳಲಾಗಿರುವ ಕೋಲುಶಾಂತೇಶ, ಕೆಂಪಯ್ಯ, ಚೆನ್ನಪ್ಪಯ್ಯ, ಚನ್ನಬಸವೇಶ್ವರ ಹಾಗೂ ತಿಪ್ಪೇಸ್ವಾಮಿಗಳು ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಜನಜಾಗೃತಿಯನ್ನು ಮೂಡಿಸಿದ್ದರು ಎನ್ನಲಾಗಿದೆ. ಈ ಐವರಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ನಿಜಗಲ್ಲು-ರಾಯದುರ್ಗ ಕಡೆಗಳಲ್ಲಿ ಸಂಚರಿಸುವ ಸಂಧರ್ಭದಲ್ಲಿ ಫಣಿಯಪ್ಪ ಎಂಬ ಭಕ್ತನ ವ್ಯಕ್ತಿತ್ವಕ್ಕೆ ಮಾರುಹೋಗಿ, ಅವರನ್ನು ತನ್ನೊಂದಿಗೆ ಕರೆತರುತ್ತಾರೆ. ಅಲ್ಲಿಯ ಹಳ್ಳಿಜನರ ಬಡತನದ ಬಗ್ಗೆ ಅರಿತ ಸ್ವಾಮಿಗಳು ಅಲ್ಲಲ್ಲಿ ಕೆಲವು ಕೆರೆಗಳನ್ನು ನಿರ್ಮಿಸುತ್ತಾರೆ. ಕೂಲಿಕಾರರಿಗೆ ದಿನದ ಕೂಲಿಯನ್ನು ಮಾಡಿದಷ್ಟು ನೀಡು ಭಿಕ್ಷೆ ಎಂಬ ಮಂತ್ರಶಕ್ತಿಯಿಂದ ಸೃಷ್ಟಿಸುತ್ತಿದ್ದರು ಎಂಬ ದಂತಕಥೆಯು ಇದೆ.
 ಪವಾಡ ಪುರುಷರಾಗಿದ್ದರೆಂದು ನಂಬಲಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಯಾವ ಸ್ಥಳದವರು? ಯಾವ ಜಾತಿಯವರು? ಎಂಬ ಬಗ್ಗೆ ಈಗಲೂ ವಿವಾದಗಳಿವೆ. ಇವರು ವೀರಶೈವರೆಂದು ಕೆಲವರು ನಂಬಿದ್ದಾರೆ. ಇವರು ಬೇಡ ಜನಾಂಗದವರು ಇದ್ದಿರಬಹುದೆಂದು ಕೆಲವರ ವಾದ. ಒಂದು ದಿನ ನಾಯಕನಹಟ್ಟಿಗೆ ಬಂದ ತಿಪ್ಪೇಸ್ವಾಮಿಯವರು ಅದೇ ಗ್ರಾಮದಲ್ಲಿದ್ದ ಮಾರಮ್ಮನ ಗುಡಿಗೆ ಹೋಗಿ ಒಂದೆರಡು ದಿನ ತಂಗಲು ಸ್ಥಳಾವಕಾಶ ನೀಡಲು ಮಾರಮ್ಮದೇವಿಯ ಅಪ್ಪಣೆ ಪಡೆದರೆಂದೂ, ಮಾರಮ್ಮ ಬದಲು ಹಳ್ಳಿಗಳಿಗೆ ತಿರುಗಾಡಿ ಬರಲು ಹೋದಾಗ ಗುಡಿಯ ತುಂಬಾ ತಿಪ್ಪೇಸ್ವಾಮಿಯವರ ಜೋಳಿಗೆ-ಬೆತ್ತಗಳು ಕಾಣಿಸಿಕೊಂಡು, ಇದನ್ನು ಕಂಡ ಮಾರಮ್ಮ ಗುಡಿಯನ್ನು ತಿಪ್ಪೇಸ್ವಾಮಿಯವರಿಗೆ ಬಿಟ್ಟುಕೊಟ್ಟು ವಡ್ನಹಳ್ಳಿಗೆ ಹೋಗಿ ನೆಲೆಸಿದಳೆಂದು ಇಲ್ಲಿನ ಜನರು ಕಥೆ ಹೇಳುವುದಿದೆ. ಈಗ ಅದೇ ಗುಡಿಶ್ರೀ ಗುರು ತಿಪ್ಪೇಸ್ವಾಮಿಯ ಒಳಮಠ. ಇಲ್ಲಿ ತಿಪ್ಪೇಸ್ವಾಮಿಯವರನ್ನು ಲಿಂಗರೂಪದಲ್ಲಿ ಪ್ರತಿಷ್ಟಾಪಿಸಿ ಆರಾಧಿಸಲಾಗುತ್ತಿದೆ.

ಹೊರಮಠ ಹಾಗೂ ಒಳಮಠ:
ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಸಂಭಂಧಿಸಿದ ಎರಡು ಆರಾಧನಾ ಸ್ಥಳಗಳಾಗಿದ್ದು, ಅವುಗಳನ್ನು ಹೊರಮಠ ಹಾಗೂ ಒಳಮಠ ಎಂದು ಹೆಸರಿಸಲಾಗಿದೆ. ಶ್ರೀ ತಿಪ್ಪೇಸ್ವಾಮಿಗಳು ಜೀವಿತಾವಧಿಯಲ್ಲಿ ವಾಸವಾಗಿದ್ದ ಸ್ಥಳವು ಊರೊಳಗಿದ್ದು, ಅದನ್ನು ಒಳಮಠವೆಂದು ಕರೆಯುತ್ತಾರೆ. ಜೀವಂತ ಸಮಾಧಿ ಹೊಂದಿದ್ದ ಸ್ಥಳವು ಊರಿಂದ ಹೊರಗಡೆ ಚಿಕ್ಕಕೆರೆ ಹತ್ತಿರ ಇದ್ದು, ಇದಕ್ಕೆ ಹೊರಮಠ ಎನ್ನುವರು. ಒಳಮಠದ ಗೋಪುರವು 50 ಅಡಿ ಎತ್ತರವಿದ್ದು, ಅತ್ಯಾಕರ್ಷಕವಾಗಿದೆ. ಒಳಮಠದ ಮುಂದೆ ಜಾತ್ರೆ ಸಂಧರ್ಭದಲ್ಲಿ ಬೃಹತ್ತಾದ ಅಗ್ನಿಕುಂಡದಲ್ಲಿ ಒಣಕೊಬ್ಬರಿಯ ಹೋಳುಗಳ ರಾಶಿಯನ್ನು ಸುಡುವುದು ರಾಜ್ಯದಲ್ಲಿಯೇ ವಿಶೇಷ ಆಚರಣೆಯಾಗಿದೆ. ಈ ಆಚರಣೆಯ ಹಿಂದೆ ವಿಶಿಷ್ಟ ಕತೆಯೇ ಇದೆ. ತಿಪ್ಪೇಸ್ವಾಮಿಯವರು ಮೊದಲಿಗೆ ರಾಯದುರ್ಗದಿಂದ ನಾಯಕನಹಟ್ಟಿಗೆ ಬರುವಾಗ ರಾತ್ರಿ ಕತ್ತಲೆ ಆವರಿಸಿದ್ದು, ಫಣಿಯಪ್ಪನು ಒಣಕೊಬ್ಬರಿಗಳನ್ನು ಕೋಲುಗಳಿಗೆ ಸಿಕ್ಕಿಸಿ ಬೆಂಕಿಯಿಂದ ಹೊತ್ತಿಸಿ, ಆ ಬೆಳಕಿನಲ್ಲಿ ತಿಪ್ಪೇಸ್ವಾಮಿಯವರನ್ನು ಹಟ್ಟಿಗೆ ಕರೆತಂದನಂತೆ. ಆ ಕಾರಣಕ್ಕೆ ಇಂದಿಗೂ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಭಕ್ತರು ಒಣಕೊಬ್ಬರಿ ಸುಡುವ ಸಂಪ್ರದಾಯ ರೂಢಿಯಲ್ಲಿದೆ. ಅದೇ ರೀತಿ ದುಂಡು ಮೆಣಸು ಎರಚುವ ಸಂಪ್ರದಾಯ ಇಲ್ಲಿ ಇರುತ್ತದೆ.
         ಹೊರಮಠವನ್ನು ಶ್ರೀ ತಿಪ್ಪೇರುದ್ರಸ್ವಾಮಿ ಗದ್ದುಗೆ ಎಂದು, ಒಳಮಠವನ್ನು ಶ್ರೀ ತಿಪ್ಪೇಸ್ವಾಮಿಯ ಮಠವೆಂದು ಕರೆಯುತ್ತಾರೆ. ಒಳಮಠಕ್ಕೆ ಶೈವರು ಪೂಜಾಧಿಕಾರವನ್ನು ಹೊಂದಿದ್ದರೆ, ಒಳಮಠದಲ್ಲಿ ಪ್ರತಿ ಸೋಮವಾರ ಪೂಜೆ ನಡೆಯುವುದಕ್ಕೆ ಹೊರಮಠಕ್ಕೆ ಜೀವಕಳೆ ಬರಬೇಕು ವಾಡಿಕೆಯಿದೆ! ನಾಯಕನಹಟ್ಟಿ ಜಾತ್ರೆಗೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದಷ್ಟೇ ಅಲ್ಲದೇ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಭಕ್ತಾದಿಗಳು ಸಾಗರೋಪಾದಿಯಲ್ಲಿ ಸೇರುತ್ತಾರೆ. ಸುತ್ತಲೂ ಹತ್ತಾರು ಸ್ಥಳಗಳಿಂದ ರಾಜ್ಯ ಸರ್ಕಾರದ ವಿಶೇಷ ಬಸ್ಸುಗಳ ಜಾತ್ರೆಗೆ ಹಗಲಿರುಳು ಸಂಚರಿಸುತ್ತವೆ.

- ಚಿತ್ತಾರದುರ್ಗ.ಕಂ

ತ.ರಾ.ಸುಬ್ಬರಾಯ (1920-1984)


      
 ತ.ರಾ.ಸು. ಕುರಿತು....
ಬರೆದಂತೆ ಬದುಕಿದವರು ವಿರಳ, ಬರೆದೇ ಬದುಕಿದವರು ಇನ್ನೂ ವಿರಳ. ಆದರೆ ತ.ರಾ.ಸು. ರವರು ಬರೆದಂತೆ ಬದುಕಿದವರು. ಬರೆದೇ ಬದುಕಿದವರು. ಸುಮಾರು 68 ಕೃತಿಗಳನ್ನು ತಮ್ಮ ಜೀವಿತಾವಧಿಯಲ್ಲಿ ರಚಿಸಿದ ನಂತರವೂ ಬರವಣಿಗೆಗಿಂತ ಬದುಕೇ ದೊಡ್ಡದು ಎಂದು ನಂಬಿಕೊಂಡವರು. ಗಂಡು ಮೆಟ್ಟಿನ ನಾಡಾದ ಚಿತ್ರದುರ್ಗ ಜಿಲ್ಲೆಯು ಕೇವಲ ಗತಕಾಲದ ಇತಿಹಾಸ ಪುಟಗಳಲ್ಲಿ ಅಷ್ಟೇ ಉಳಿಯದೇ ಸಾಹಿತ್ಯ ಲೋಕಕ್ಕೂ, ಅನರ್ಘ್ಯ ರತ್ನಗಳನ್ನು ಕಾಣಿಕೆಯಾಗಿ ನೀಡಿದೆ. ಅವರಲ್ಲಿ ಪ್ರಮುಖರೆಂದರೆ ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಹೆಸರಾದ ಶ್ರೀ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು, ಆಶುಕವಿಗಳಾದ ಶ್ರೀ ಬೆಳಗೆರೆ ಚಂದ್ರಶೇಖರಶಾಸ್ತ್ರಿಗಳು, ತ.ರಾ.ಸು. ಮುಂತಾದವರನ್ನು ಹೆಸರಿಸಬಹುದು.  ತ.ರಾ.ಸು. ರವರ ಜನನ 1920 ನೇ ಏಪ್ರಿಲ್ 21 ರಂದು ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಯ್ಯ, ತಳಕು ಗ್ರಾಮದ ಆಶುಕವಿಗಳು. ದೊಡ್ಡಸುಬ್ಬಣ್ಣನವರ ಎರಡನೇ ಮಗ; ತ.ರಾ.ಸು. ರವರ ತಂದೆ. ಹರಿಹರದಲ್ಲಿ ಅಮಲ್ದಾರರಾಗಿದ್ದವರು. ತಾಯಿ ಸೀತಮ್ಮನವರು ಸರಳ ಸಜ್ಜನಿಕೆಯ ಸ್ವಭಾವದ ಹೆಣ್ಣುಮಗಳು. ದೊಡ್ಡಪ್ಪ ಟಿ.ಎಸ್.ವೆಂಕಣ್ಣಯ್ಯ, .ಸು.ಶಾಮರಾಯರು ಇವರ ಚಿಕ್ಕಪ್ಪ.  ಹೀಗಾಗಿ ಇವರ ಮನೆಯ ಪರಿಸರದಲ್ಲೂ, ಇವರ ವಂಶವಾಹಿಣಿಯಲ್ಲೂ ಸಾಹಿತ್ಯದ ಒಲವು ತಾನಾಗಿಯೇ ಹರಿದು ಬಂದಿತ್ತು.
 ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಚಿತ್ರದುರ್ಗದ ಬಗ್ಗೆ ಹೇಳುತ್ತಿದ್ದ ಕಥೆಗಳೇ, ಮುಂದೊಂದು ದಿನ ದುರ್ಗಾಸ್ತಮಾನದಂತಹ ಮಹಾನ್ ಐತಿಹಾಸಿಕ ಕಾದಂಬರಿಗೆ ಪ್ರೇರಣೆಯಾಯಿತು. ಅದಕ್ಕೂ ಮುಂಚೆ ಒಮ್ಮೆ ವೆಂಕಣ್ಣಯ್ಯನವರು ವಾಚಾಳಿಯಾಗಿದ್ದ ತ.ರಾ.ಸು. ರವರಿಗೆ ಇಷ್ಟೆಲ್ಲಾ ಮಾತಾನಾಡುವಿಯೆಲ್ಲಾ, ಇದನ್ನೇ ಬರೆಯುವ ಸಾಮರ್ಥ್ಯ ನಿನ್ನಲ್ಲಿದೆಯೇ? ಒಂದು ಕಥೆ ನಿನ್ನ ಕೈಯಲ್ಲಿ ಬರೆಯಲಾದೀತೆ?” ಎಂದು ಸವಾಲು ಹಾಕಿದಾಗ ತ.ರಾ.ಸು. ರವರು ಸಂಜೆಯೊಳಗೆ ಒಂದು ಕಥೆ ಬರೆದು ಹತ್ತು ರೂಪಾಯಿ ಗಿಟ್ಟಿಸಿಕೊಂಡರು. ಆ ಕಥೆಯ ಹೆಸರು ಪುಟ್ಟನ ಚೆಂಡು. (ಅವರ ಕೊನೆಯ ಐತಿಹಾಸಿಕ ಕಾದಂಬರಿ ದುರ್ಗಾಸ್ತಮಾನವನ್ನು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.) ರಾಮಸ್ವಾಮಯ್ಯನವರ ಮಿತ್ರನಾಗಿದ್ದ ಎಸ್.ನಿಜಲಿಂಗಪ್ಪನವರು ಪ್ರೀತಿಯಿಂದ ತ.ರಾ.ಸು.ರವರನ್ನು ಧ್ರುವ ಎಂದು ಕರೆಯುತ್ತಿದ್ದರು. ಗಾಂಧೀಜಿಯವರ ಚಳುವಳಿಯು ದೇಶಾದಾಂತ್ಯ ಸಂಚಲನ ಉಂಟುಮಾಡಿತ್ತು.1937ರ ಸುಮಾರಿನಲ್ಲಿ ಚಿತ್ರದುರ್ಗದಲ್ಲಿ ಧ್ವಜ ಸತ್ಯಗ್ರಹ ನಡೆದು ಜಿಲ್ಲೆಯ ಹೊಸದುರ್ಗ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡು ಮಿತ್ರರೊಡನೆ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಕ್ರಾಂತಿ ಗೀತೆಗಳನ್ನು ಹಾಡುತ್ತ.ಭಾಷಣ ಮಾಡುತ್ತಿದ್ದರು. ಬಾಗೂರು ಎಂಬ ಹಳ್ಳಿಯಲ್ಲಿ ಭಾಷಣ ಮಾಡುತ್ತಿದ್ದಾಗ ತ.ರಾ.ಸು. ದಸ್ತಗಿರಿಯಾದರು.ಆಗ ಅವರಿಗೆ 17ರ ಪ್ರಾಯ!
 ಚಿತ್ರದುರ್ಗದಲ್ಲಿದ್ದರೆ ಮಗ ಚಳುವಳಿಗಳ ಹಿಂದೆ ಹೋಗಬಹುದೆಂದು ರಾಮಸ್ವಾಮಯ್ಯನವರು ತ.ರಾ.ಸು. ರವರನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದರು. ಎಸ್.ಎಸ್.ಎಲ್.ಸಿ. ಮುಗಿಸಿಕೊಂಡ ತ.ರಾ.ಸು. ಶಿವಮೊಗ್ಗದಲ್ಲಿ ಕಾಲೇಜು ಸೇರಿ, ಕಾಲೇಜಿನ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಎಂ.ಶ್ರೀ.ಯವರಿಂದ ಬಹುಮಾನ ಸ್ವೀಕರಿಸಿದರು. ಶಿವಮೊಗ್ಗದ ಕಾಲೇಜಿನಲ್ಲಿ ತ.ರಾ.ಸು. ಓದಿದ್ದು ಒಂದೇ ವರ್ಷ. ಜೂನಿಯರ್ ಇಂಟರ್ ಮೀಡಿಯಟ್ ಪರೀಕ್ಷೆಯ ನಂತರ ಸೀನಿಯರ್ ಇಂಟರ್ ಓದಲು ತುಮಕೂರಿಗೆ ಹೋದರು. 1942ರ ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ಚಳುವಳಿ (ಚಲೇಜಾವ್ ಚಳುವಳಿ) ಆರಂಭವಾಗುತ್ತಿದ್ದಂತೆ ಬ್ರಿಟೀಷರು ಗಾಂಧೀಜಿ ಮೊದಲಾದ ರಾಷ್ಟ್ರನಾಯಕರನ್ನು ಬಂಧಿಸಿದರು. ಇದರಿಂದ ಇಡೀ ಶಾಲಾ ಕಾಲೇಜುಗಳಿಗೆ ಬಹಿಷ್ಕಾರ ಹಾಕಲಾಯಿತು. ವಿದೇಶಿ ವಸ್ತುಗಳ ದಹನ ನಡೆಸಲಾಯಿತು. ಇದಕ್ಕೆ ತ.ರಾ.ಸು. ಮತ್ತು ಇವರ ಮಿತ್ರರೂ ಹೊರತಾಗಿರಲಿಲ್ಲ. ಒಮ್ಮೆ ಈ ತಂಡ ರೈಲು ಹಳಿಗಳನ್ನು ತಪ್ಪಿಸಿ ಸೇತುವೆಯನ್ನು ಉರುಳಿಸುವ ಏರ್ಪಾಡು ಮಾಡಿಕೊಂಡಿದ್ದಾಗ ಅದು ಪೋಲಿಸರ ಗಮನಕ್ಕೆ ಬಂದು ದಸ್ತಗಿರಿಯಾದರು. ಸೆರೆಮನೆಯಲ್ಲಿದ್ದರೂ ಇವರ ಚಳುವಳಿ ಮುಂದುವರೆದಿತ್ತು. 1942ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆಯೇನೋ ಆದರು. ಆದರೆ ಗಾಂಧೀಜಿಯವರು ಬಿಡುಗಡೆಯಾದ ಹೊರತು ಹಾಗೂ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಹೊರತು ಪುನಃ ಕಾಲೇಜು ಮೆಟ್ಟಿಲು ಹತ್ತುವುದಿಲ್ಲ ಎಂದು ನಿರ್ಧರಿಸಿದರು.
 
 ಪತ್ರಿಕೋದ್ಯಮಿಯಾಗಿ ತ.ರಾ.ಸು.
        1942ರಲ್ಲಿ ಬೆಂಗಳೂರಿಗೆ ಬಂದ ತ.ರಾ.ಸು. ಕೆಲಕಾಲ ವಿಶ್ವಕರ್ನಾಟಕ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಆ ಸುಮಾರಿಗೆ ಇವರ ವಿವಾಹವು ಅಂಬುಜಾರವರೊಂದಿಗೆ ಆಯಿತು. ಆಗ ಅವರಿಗೆ ಬರುತ್ತಿದ್ದ ಸಂಬಳ 25 ರೂಪಾಯಿ. ಎಷ್ಟೋ ದಿನ ಅವರು ಕಡಲೆಕಾಯಿ ತಿಂದು ದಿನದೂಡುತ್ತಿದ್ದರು. ವಿಶ್ವಕರ್ನಾಟಕ ಪತ್ರಿಕೆ ಬಿಟ್ಟ ನಂತರ ಬಿ.ಎನ್.ಗುಪ್ತ ರವರಪ್ರಜಾಮತ ವಾರಪತ್ರಿಕೆಯಲ್ಲಿ ಉಪಸಂಪಾದಕರಾದರು. 1945-46ರ ವೇಳೆಗೆ ಎಂ.ಎಸ್.ಚಿಂತಾಮಣಿ ಎಂಬುವವರು ಆರಂಭಿಸಿ ನಡೆಸುತ್ತಿದ್ದ ವಾಹಿನಿ ಎಂಬ ವಾರಪತ್ರಿಕೆಗೆ ಸಹಸಂಪಾದಕರಾದರು. ವಾಹಿನಿ ವಾರಪತ್ರಿಕೆ ಹೊರಬಂದ ತ.ರಾ.ಸು. ಹೆಂಡತಿಯನ್ನು ತವರುಮನೆಗೆ ಬಿಟ್ಟು ಚಿತ್ರದುರ್ಗಕ್ಕೆ ಹಿಂದಿರುಗಿದರು. ಆಗ ಶ್ರೀಧರ ಎಂಬುವವರು ಆಗತಾನೇ ಆರಂಭಿಸಿದ ನವೋದಯ ಎಂಬ ಪತ್ರಿಕೆಗೆ ಕೆಲಸ ಮಾಡಿದರಾದರೂ ಅದೂ ಸಹ ಊರ್ಜಿತವಾಗಲಿಲ್ಲ. ಆಗಿದ್ದ ಪರಿಸ್ಥಿತಿಯಲ್ಲಿ ಒಂದು ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ತೀರಿಕೊಂಡಿತು. ಇದಾದ ಕೆಲದಿನಕ್ಕೆ ಆಗಷ್ಟೇ ಆರಂಭವಾಗಿದ್ದ ಪ್ರಜಾವಾಣಿಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದರು. ಮೈಸೂರಿನಲ್ಲಿದ್ದಾಗ ಮೈಸೂರು ಪತ್ರಿಕೆಗೆ ಅಂಕಣಕಾರರಾಗಿದ್ದರು. ಕಾಲದೂತ ಎಂಬ ಪತ್ರಿಕೆಯನ್ನು ಕೆಲಕಾಲ ನಡೆಸಿದರು. ವಿಚಾರವಾಣಿ ಎಂಬ ಪತ್ರಿಕೆಗೆ ಗೌರವ ಸಂಪಾದಕರಾಗಿದ್ದರು. ಶ್ರೀ ಶಂಕರ ಕೃಪಾ ಎಂಬ ಧಾರ್ಮಿಕ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿಯೂ ಸಹ ಕೆಲ ಕಾಲ ಇದ್ದರು.
 
 ಬರಹಗಾರರಾಗಿ ತ.ರಾ.ಸು.
        ಪಾರಿಜಾತ ಎಂಬ ಕಾದಂಬರಿ ಬರೆದು ಮೈಸೂರು ಹೆಸರಾಂತ ಪ್ರಕಾಶಕ ಶ್ರೀ ಡಿ.ವಿ.ಕೆ.ಮೂರ್ತಿ ರವರಿಗೆ ಪ್ರಕಟಿಸಲು ಕೊಟ್ಟರು. ಆಗಲೇ ತ.ರಾ.ಸು.ರವರು ಮೈಸೂರಿನಲ್ಲಿ ಇದ್ದು, ಬರೆಯಲು ನಿಶ್ಚಯಿಸಿದ್ದರು. ಇನ್ನೊಬ್ಬ ಗೆಳೆಯ ರಾ.ವೆಂ.ಶ್ರೀನಿವಾಸಮೂರ್ತಿ ಎಂಬುವವರು ತ.ರಾ.ಸು. ರವರ ಕಾದಂಬರಿಗಳ ಪ್ರಕಟಣೆಗೆ ವ್ಯವಸ್ಥೆ ಮಾಡಿದ್ದರಲ್ಲದೇ ತಾವೇ ರಾಯರ ಪುಸ್ತಕಗಳನ್ನು ಪ್ರಕಟಿಸಿದರು. ತ.ರಾ.ಸುಬ್ಬರಾಯರು ಹಂಸಗೀತೆಯನ್ನು ಬರೆದಾಗ ಈ ಕೃತಿಯು ಎಷ್ಟೊಂದು ಜನಪ್ರಿಯವಾಗಿತ್ತೆಂದರೇ, ಆಗಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು ಓದಿ ಮೆಚ್ಚಿಕೊಂಡು ತ.ರಾ.ಸು. ರವರನ್ನು ನೋಡಬಯಸಿದರಂತೆ. ಪದವಿ ಪರೀಕ್ಷೆಗೆ ಈ ಕೃತಿ ಪಠ್ಯಪುಸ್ತಕವಾಯಿತು. ಇದೇ ಕಾದಂಬರಿ ಹಿಂದಿ ಚಿತ್ರರಂಗದಲ್ಲಿ ಬಸಂತ್ ಬಹಾರ್ ಆಗಿ 1953ರಲ್ಲಿ ತೆರೆಕಂಡಿತ್ತು. ಮುಂದೆ 1972ರಲ್ಲಿ ಹಂಸಗೀತೆಯಾಗಿ ಕನ್ನಡದಲ್ಲಿ ತೆರೆಕಂಡಿತು. ಈ ಚಿತ್ರ ರಾಷ್ಟ್ರಪ್ರಶಸ್ತಿ ಗಳಿಸಿದ್ದಲ್ಲದೇ ವಿದೇಶಗಳಲ್ಲಿಯೂ ಪ್ರದರ್ಶಿತಗೊಂಡಿತು. ತ.ರಾ.ಸು. ಸಾಮಾಜಿಕ ಕಾದಂಬರಿಗಳನ್ನಷ್ಟೇ ಅಲ್ಲದೇ ಐತಿಹಾಸಿಕ ಹಾಗೂ ಪೌರಾಣಿಕ ಕಾದಂಬರಿಗಳನ್ನು ಬರೆದರು. ರಾಷ್ಟ್ರಕೂಟರ ಅರಸುನೃಪತುಂಗನ ಕುರಿತು ಬರೆದ ಮೊದಲ ಐತಿಹಾಸಿಕ ಕೃತಿ. ತ.ರಾ.ಸು. ಕನ್ನಡದ ದಿಗ್ಗಜರಲ್ಲೊಬ್ಬರಾದ ಡಿ.ಎಲ್.ನರಸಿಂಹಾಚಾರ್ ರವರ ಪ್ರೇರಣೆಯಂತೆ ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪದ ಸೃಷ್ಠಿಗೆ ಕಾರಣಕರ್ತನಾದ ಗಂಗರಸನ ಮಂತ್ರಿ ಚಾವುಂಡರಾಯನಕುರಿತು ಶಿಲ್ಪಶ್ರೀ ಎಂಬ ಐತಿಹಾಸಿಕ ಕಾದಂಬರಿ ಬರೆದರು. ನಡುನಡುವೆ ಬರೆದ ಸಾಮಾಜಿಕ ಕಾದಂಬರಿಗಳು ಸಾಕಷ್ಟು ಹೆಸರು ಮಾಡಿದರು. ಚಂದ್ರವಳ್ಳಿಯ ತೋಟ ಪಠ್ಯಪುಸ್ತಕವಾಗಿತ್ತು. ಸತ್ಯಕಾಮ ಜಾಬಾಲಿಯ ಕಥೆ ಕುರಿತಾದ ನಾಲ್ಕುXನಾಲ್ಕು=ಒಂದು ಪೌರಾಣಿಕ ಕಾದಂಬರಿಯನ್ಉನ ಕೇವಲ ಹನ್ನೊಂದು ದಿನಗಳಲ್ಲಿ ಬರೆದಿದ್ದರು.
 ಚಿತ್ರದುರ್ಗ ತ.ರಾ.ಸು. ರವರಿಗೆ ಪ್ರಿಯವಾಗಿದ್ದ ಸ್ಥಳ. ಇಲ್ಲಿನ ಕೋಟೆಯ ಪ್ರತಿಯೊಂದು ಕಲ್ಲು ಇವರಿಗೆ ಚಿರಪರಿಚಿತ. ಚಿತ್ರದುರ್ಗದ ಮೇಲೆ ಇವರಿಗೆ ಇದ್ದ ಅದಮ್ಯ ಪ್ರೀತಿಗೆ ಸಾಕ್ಷಿಯಾಗಿರುವುದೇ ದುರ್ಗಾಸ್ತಮಾನ; ತ.ರಾ.ಸು. ರವರ ಕೊನೆಯ ಕೃತಿ. ಅದ್ವೈತ ಮತ ಸ್ಥಾಪನಾಚಾರ್ಯ ಶಂಕರಾಚಾರ್ಯರ ಕುರಿತು ಆನಂದಂ ಬ್ರಹ್ಮೇತಿ ವ್ಯಜನಾತ್ ಎಂಬ ಕಾದಂಬರಿ ಬರೆಯಲು ಸಾಕಷ್ಟು ಟಿಪ್ಪಣಿಗಳನ್ನು ಮಾಡಿಕೊಂಡಿದ್ದ ತ.ರಾ.ಸು. ರವರಿಗೆ ಕಡೆಯವರೆಗೂ ಅದನ್ನು ಬರೆಯಲು ಸಾಧ್ಯವಾಗಲಿಲ್ಲ. ಇದರಿಂದ ಕನ್ನಡಿಗರಿಗೆ ಒಂದು ಅಮೂಲ್ಯ ಕೃತಿ ಸಿಗುವುದು ತಪ್ಪಿಹೋಯಿತು. ತ.ರಾ.ಸು. ರವರು ಬರೆದ ಶ್ರೀ ಚಕ್ರೇಶ್ವರಿ ಕಾದಂಬರಿ ಅಪೂರ್ಣವಾಗಿಯೇ ಉಳಿದಿತ್ತು. ಆದರೆ ಅದರ ಕಥೆ ಕೇಳಿದ್ದ ಅವರ ಶಿಷ್ಯ ನಾ.ಪ್ರಭಾಕರ್ ಅದನ್ನು ಪೂರೈಸಿದ್ದರು. 1927ರ ನಂತರದ ವರ್ಷಗಳಲ್ಲಿ ಕಾಗದ ಲೇಖನಗಳನ್ನು ಡಿಕ್ಟೇಷನ್ ಕೊಡುತ್ತ ಪ್ರಭಾಕರರಿಂದಲೇ ತ.ರಾ.ಸು. ಬರೆಸುತ್ತಿದ್ದರು. ತ.ರಾ.ಸು. ಬರೆದ ಆತ್ಮಕಥೆ ಜಿಲ್ಲಾಮಟ್ಟದ ಸೌರಭ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತಾದರೂ, ಹಿಂದಿರುಗಿ ನೋಡಿದಾಗ ಎಂಬ ಅಪೂರ್ಣ ಆತ್ಮಕಥೆಯನ್ನು ತರಂಗದಲ್ಲಿ ಪ್ರಕಟವಾಯಿತು. ಹಿಂದಿರುಗಿ ನೋಡಿದಾಗ ಅಪೂರ್ಣ ಆತ್ಮಕಥೆಯನ್ನು ತ.ರಾ.ಸು. ರವರ ಪತ್ನಿ ಅಂಬುಜಾ ರವರು ಪೂರ್ಣಗೊಳಿಸಿ 1990ರಲ್ಲಿ ಹೊರತಂದರು.
 
 ಚಿತ್ರರಂಗದಲ್ಲಿ ತ.ರಾ.ಸು.
ಕನ್ನಡದ ಕಾದಂಬರಿಗಳನ್ನಾಧರಿಸಿ ಕನ್ನಡ ಚಿತ್ರಗಳನ್ನು ನಿರ್ಮಿಸುವ ಒಂದು ಪರಂಪರೆ 1962ರಲ್ಲಿ ಪ್ರಾರಂಭವಾಯಿತು. ಕೃಷ್ಣಮೂರ್ತಿ ಪುರಾಣಿಕರ ಧರ್ಮದೇವತೆ ಕಾದಂಬರಿ ಆಧರಿಸಿದ ಕರುಣೆಯೇ ಕುಟುಂಬ ಕಣ್ಣು ಚಿತ್ರವು ಕನ್ನಡದ ಪ್ರಥಮ ಕಾದಂಬರಿ ಆಧಾರಿತ ಚಿತ್ರ. ಹಾಗೇ ನೋಡಿದರೆ ತ.ರಾ.ಸು. ರವರ ವಿಶಿಷ್ಟ ಕೃತಿ ಹಂಸಗೀತೆಯನ್ನಾಧರಿಸಿ ಹಿಂದಿಯಲ್ಲಿ ಬಸಂತ್ ಬಹಾರ್ ಎಂಬ ಸಿನಿಮಾ ಬಹುಹಿಂದೆಯೇ ತೆರೆಕಂಡಿತ್ತು. 1959ರಲ್ಲಿಯೇ ತ.ರಾ.ಸು. ತಮ್ಮ ಕನ್ನಡ ಚಳುವಳಿ, ರಾಜಕೀಯ ಚಟುವಟಿಕೆಗಳ ಜತೆಗೆ ಸಿನಿಮಾ ಚಟುವಟಿಕೆಯಲ್ಲೂ ತೊಡಗಿದ್ದರು. ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಮಾರ್ಗದರ್ಶಿ (ಮಾರ್ಗದರ್ಶಿ, ಭಾಗ್ಯಶಿಲ್ಪ ಮತ್ತು ಬೆಳಕಿನ ಬೀದಿ ಕಾದಂಬರಿಗಳ ಆಧಾರಿತ), ಪುರ್ನಜನ್ಮ (ಸಾಕುಮಗಳು ಆಧಾರಿತ), ನಾಗರಹಾವು (ನಾಗರಹಾವು, ಎರಡು ಹೆಣ್ಣು ಒಂದು ಗಂಡು, ಹಾಗೂ ಸರ್ಪಮತ್ಸರ ಕಾದಂಬರಿಗಳ ಆಧಾರಿತ), ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಮಸಣದ ಹೂ, ಆಕಸ್ಮಿಕ (ಆಕಸ್ಮಿಕ-ಅಪರಾಧ-ಪರಿಣಾಮ ಆಧಾರಿತ), ಇವು ತ.ರಾ.ಸು. ರವರು ಬರೆದ ಕಾದಂಬರಿಗಳ ಆಧಾರಿತ ಚಲನಚಿತ್ರಗಳು. ಎಸ್.ಆರ್.ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ ನಾಗರಹಾವು ಚಿತ್ರ ತೆಲುಗಿನಲ್ಲಿ ಕೋಡೆನಾಗು ಎಂದೂ, ತಮಿಳಿನಲ್ಲಿ ರಾಜನಾಗಂ ಎಂದು ಮತ್ತು ಹಿಂದಿಯಲ್ಲಿ ಜಹರೀಲಾ ಇನ್ಸಾನ್ ಎಂದು ತೆರೆಕಂಡಿತು. ಅದೇ ಪುಟ್ಟಣ್ಣನವರ ಕೊನೆಯ ಚಿತ್ರ ಮಸಣದ ಹೂ ಸಹ ತ.ರಾ.ಸು. ರವರ ಕಾದಂಬರಿ ಆಧಾರಿತ ಚಿತ್ರ.

(ಆಧಾರ: ತ.ರಾ.ಸು. ಕುರಿತು... ನಾ.ಪ್ರಭಾಕರ್)


ಹೆಸರು
ತ.ರಾ.ಸುಬ್ಬರಾಯ (ತ.ರಾ.ಸು)
ಜನ್ಮ ದಿನಾಂಕ
21-04-1920
ಜನ್ಮ ಸ್ಥಳ
ಮಲೇಬೆನ್ನೂರು (ಹರಿಹರ ತಾಲ್ಲೂಕು)
ವಂಶಸ್ಥರ ಸ್ಥಳ
ತಳಕು (ಚಳ್ಳಕೆರೆ ತಾಲ್ಲೂಕು)
ಶಿಕ್ಷಣ
ಸೀನಿಯರ್ ಇಂಟರಮೀಡಿಯಟ್ ವರೆಗೆ
ಕೃತಿಗಳು
ಸಾಮಾಜಿಕ:
ಚಕ್ರತೀರ್ಥ, ಬೇಡದ ಮಗು, ಜೀತದ ಜೀವ, ಯಕ್ಷಪ್ರಶ್ನೆ ಇತ್ಯಾದಿ.
ಐತಿಹಾಸಿಕ:
ದುರ್ಗಾಸ್ತಮಾನ, ನೃಪತುಂಗ, ರಕ್ತರಾತ್ರಿ, ಶಿಲ್ಪಶ್ರೀ ಇತ್ಯಾದಿ.
ಕಥಾಸಂಕಲನ:
ರೂಪಸಿ, ತೊಟ್ಟಿಲು ತೂಗಿತು, ತ.ರಾ.ಸು.ರವರ ಸಮಗ್ರ ಕಥೆಗಳು, ಇತ್ಯಾದಿ.
ನಾಟಕ:
ಜ್ವಾಲಾ, ಮೃತ್ಯು ಸಿಂಹಾಸನ.
ಆತ್ಮಕಥೆ:
ಹಿಂದಿರುಗಿ ನೋಡಿದಾಗ.
ಬರೆದ ಮೊದಲ ಕೃತಿ:
ಪುಟ್ಟನ ಚೆಂಡು.
ಸ್ವಾತಂತ್ಯ ಆಂದೋಳನದಲ್ಲಿ ತ.ರಾ.ಸು.ಧ್ವಜ ಸತ್ಯಾಗ್ರಹ (1937),
ಅರಣ್ಯ ಸತ್ಯಾಗ್ರಹ (1939),
ಚಲೇಜಾವ್ ಚಳುವಳಿ (1942),
ಜವಬ್ದಾರಿ ಸರ್ಕಾತಿ ಚಳುವಳಿ (1947),
ಪ್ರಗತಿಶೀಲ ಸಾಹಿತ್ಯ ಚಳುವಳಿ (1944),
ಕನ್ನಡ ಚಳುವಳಿ (1960-84)
ಚಲನಚಿತ್ರವಾದ ತ.ರಾ.ಸು. ರವರ ಕಾದಂಬರಿಗಳು
ಹಂಸಗೀತೆ, ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಸಾಕುಮಗಳು (ಪುರ್ನಜನ್ಮ), ನಾಗರಹಾವು, ಗಾಳಿಮಾತು, ಬೆಂಕಿಯ ಬಲೆ, ಮಸಣದ ಹೂವು, ಬಿಡುಗಡೆಯ ಬೇಡಿ, ಆಕಸ್ಮಿಕ ಇತ್ಯಾದಿ
ಮರಣ10-04-1984