ಪುಟಗಳು

ಕನ್ನಡ ಸೇನಾನಿ ಪಿ.ಕೆ. ನಾರಾಯಣ

ದೇಶಭಕ್ತಿಯು ಚಿಮ್ಮುವ ಈ ಮುಂದಿನ ಕವನದ ಶೀರ್ಷಿಕೆ ಗಣರಾಜ ಗೀತೆ. ಈ ಗೀತೆ ಆರಂಭವಾಗುವುದು ಹೀಗೆ :
ಜಯ ಜಯ ಭಾರತ, ಜಯ ಜಯ ಭಾರತ ಜಯ ಭಾರತವೆಂದೆನ್ನಿ ||
ದಾಸ್ಯವನೋಡಿಸಿ, ಬಿಡುಗಡೆಯಾಡಿಸಿ
ಲಾಸ್ಯವ ಜನಮನಕೊದಗಿಸುತೀಗ
ಮೂಡಿತು ಭಾರತ ಗಣರಾಜ್ಯ!
ಹಾಡಿರಿ ಜನತೆಯ ಸಾಮ್ರಾಜ್ಯ!
ಋಷಿಗಳ ತಪಸು, ಕವಿಗಳ ಕನಸು
ಯೋಧರ ನೆನಸು, ಭಾರತ ಸೊಗಸು
ನವೀನ ಭಾರತ ಗಣರಾಜ್ಯ!
ಸುವೀರ ಚರಿತೆಯ ಸಾಮ್ರಾಜ್ಯ!
ಕೃಷ್ಣನ ಯೋಗವು ಬುದ್ಧನ ತ್ಯಾಗವು
ಗಾಂದಿಯ ಸತ್ಯವು ಅಹಿಂಸೆಯೆಲ್ಲವು
ಬೆರೆತಿಹ ಭಾರತ ಗಣರಾಜ್ಯ!
ಮೆರೆಯಲಿ ಧರ್ಮದ ಸಾಮ್ರಾಜ್ಯ!
ಸಮರದ ಯಾತನೆ ಜಗದಿಂ ತೊಲಗಿಸಿ
ಸಮತೆಯ ನೀತಿಯ ಜಗದಲಿ ಹಬ್ಬಿಸಿ
ಆಳಲಿ ಭಾರತ ಗಣರಾಜ್ಯ!
ಬಾಳಲಿ ಶಾಂತಿಯ ಸಾಮ್ರಾಜ್ಯ!
ಇಲ್ಲಿನ ಮಾತ್ರಾಲಯಗಳು ಗೇಯ ಪ್ರಧಾನವಾಗಿದ್ದು ಓದುಗರಲ್ಲಿ ದೇಶಭಕ್ತಿ ಹೊಮ್ಮು ವಂತೆ ಮಾಡುತ್ತವೆ. ಬಾಲ್ಯದಲ್ಲಿಯೇ ತಂದೆಯವರಿಗೆ ದೇಶದ ಮೇಲೆ ಭಕ್ತಿ ಹೆಚ್ಚು. ಯೌವನದ ಆರಂಭದಲ್ಲೇ ಸ್ವಾತಂತ್ರ್ಯದ ಹೋರಾಟದಲ್ಲಿ ಧುಮುಕಿ ಜೈಲಿಗೆ ಹೋದವರು ಅವರು. ಮೊಳಹಳ್ಳಿ ಶಿವರಾಯರ ಉಪದೇಶದಿಂದಾಗಿ, ಕುಟುಂಬದ ರಕ್ಷಣೆಗಾಗಿ ಅನಂತರ ಬಾಹ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಬಿಟ್ಟರೂ ಆ ಕಾಲದಲ್ಲಿ ರಚಿತವಾದ ಅವರ ಕವನಗಳಲ್ಲಿ, ಮಾಡಿದ ಭಾಷಣ ಗಳಲ್ಲಿ, ಬರೆದ ಲೇಖನಗಳಲ್ಲಿ ‘ದೇಶಭಕ್ತಿ’ ಎದ್ದು ಕಾಣುವ ಅಂಶವಾಗಿತ್ತು. ಗಾಂಧೀಜಿ, ನೆಹರೂ, ಅನ್ನಿಬೆಸೆಂಟ್ ಮೊದಲಾದ ರಾಷ್ಟ್ರನಾಯಕರನ್ನು ಕುರಿತ ಭಾಷಣಗಳನ್ನು, ಪ್ರಜಾಪ್ರಭುತ್ವ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆಗಳಂಥ ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಅವರ ಭಾಷಣಗಳನ್ನು ಕೇಳುವ ಸುಯೋಗ ನನ್ನದಾಗಿತ್ತು. ದೇಶಭಕ್ತಿಯ ಕೆಚ್ಚು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸಾಮಾನ್ಯರ ತ್ಯಾಗ – ಬಲಿದಾನಗಳನ್ನು ಹೇಳುವಾಗ ಅವರು ತುಂಬ ಭಾವುಕರಾಗುತ್ತಿದ್ದರು clik this link ---------> ಕನ್ನಡ ಸೇನಾನಿ ಪಿ.ಕೆ. ನಾರಾಯಣ

ಮಾಧವ ಶ್ರೀಹರಿ ಅಣೆ

ದೇಶದ ಹಿತವನ್ನೇ ಮುಖ್ಯ ಗುರಿಯಾಗಿಟ್ಟು ಕೊಂಡು ಹಲವು ರೀತಿಗಳಲ್ಲಿ ದುಡಿದರು. ಬ್ರಿಟಿಷರ ಕಾನೂನು ಮುರಿದು ಸೆರೆಮನೆ ಸೇರಿದರು. ವೈಸರಾಯರ ಸಲಹಾಮಂಡಲಿಯಲ್ಲಿ ಕೆಲಸ ಮಾಡಿದರು. ವೈಸರಾಯಿ ತಪ್ಪು ಮಾಡಿದನೆಂದು ಕಂಡಾಗ ರಾಜೀನಾಮೆ ಕೊಟ್ಟರು. ಸ್ವತಂತ್ರ ಭಾರತದಲ್ಲಿಯೂ ಸೇವೆ ಸಲ್ಲಿಸಿದರು. ಮಾಧವ ಶ್ರೀಹರಿ ಅಣೆ

ಜಯಶಂಕರ ಪ್ರಸಾದ್

ಹಿಮಾದ್ರಿ ತುಂಗ ಶೃಂಗ ಸೇ
ಪ್ರಬುದ್ಧ ಶುದ್ಧ ಭಾರತೀ
ಸ್ವಯಂ ಪ್ರಭಾ ಸಮುಜ್ವಲಾ
ಸ್ವತಂತ್ರತಾ ಪುಕಾರತೀ..
ಅಮರ್ತ್ಯ, ವೀರಪುತ್ರ ಹೋ, ದೃಢ ಪ್ರತಿಜ್ಞ ಸೋಚ್ ಲೋ, ಪ್ರಶಸ್ತ ಪುಣ್ಯ ಪಂಥ ಹೈ .. ಬಡೇ ಚಲೋ ಬಡೇ ಚಲೋ

ಮೇಲಿನದು ಒಂದು ದೇಶಭಕ್ತಿಗೀತೆ, ಹಿಂದೀ ಭಾಷೆಯಲ್ಲಿದೆ. ನಮಗೆ ಸ್ವಾತಂತ್ರ್ಯ ಬರುವ ಮುನ್ನ ಅನೇಕ ಭಾರತೀಯರಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಪ್ರೇಮವನ್ನು ಹುಟ್ಟಿಸಿದ ಗೀತೆ. ಇದರಲ್ಲಿ ಭಾರತ ಮಾತೆಯ ಗುಣಗಾನವಿದೆ. ಭಾರತೀಯರ ಕರ್ತವ್ಯದ ಬಗೆಗೆ ಕಳಕಳಿ ಇದೆ.
ಈ ದೇಶಭಕ್ತಿ ಗೀತೆಯನ್ನು ರಚಿಸಿದವರು ಪ್ರಸಿದ್ಧ ಹಿಂದೀ ಕವಿ ಜಯಶಂಕರ ಪ್ರಸಾದರು.
CLICK THIS LINK --------------> ಜಯಶಂಕರ ಪ್ರಸಾದ್

ಶಾಂತವೇರಿ ಗೋಪಾಲಗೌಡ

  ಶಾಂತವೇರಿ ಗೋಪಾಲಗೌಡ — ಬೆಂಕಿಯಂತಹ ವ್ಯಕ್ತಿತ್ವದ ಗೋಪಾಲ ಗೌಡರು ಅಧಿಕಾರಕ್ಕೆ ಆಸೆ ಪಡಲಿಲ್ಲ. ಸ್ವಾತಂತ್ರ್ಯದ ಹೋರಾಟದಲ್ಲಿ ಸೆರೆಮನೆ ಕಂಡರು. ಬಡತನವನ್ನು ಅನುಭವಿಸಿದ್ದ ಅವರು ಬಡವರಿಗಾಗಿ, ನಿಮ್ನ ವರ್ಗದವರಿಗಾಗಿ ಶ್ರಮಿಸಿದರು. ಕರ್ನಾಟಕದಲ್ಲಿ ಸಮಾಜವಾದ ಬಿತ್ತಿ ಬೆಳೆಸಿದರು.......... CLIK THIS LINK ...ಶಾಂತವೇರಿ ಗೋಪಾಲಗೌಡ

ಮುಂಡರಗಿ ಭೀಮರಾಯ

 ೧೮೫೭ರಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ಸಿಡಿದೆದ್ದಾಗ ಸ್ವದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಧೀರ. ರಾಜನಲ್ಲ, ರಾಜವಂಶಸ್ಥನಲ್ಲ, ದೇಸಾಯಿಯಲ್ಲ, ಜನತೆಯ ಪ್ರತಿನಿಧಿ. ವೀರನಾಗಿ ಬಾಳಿ ವೀರನಾಗಿ ಸಾವನ್ನು  ಆಹ್ವಾನಿಸಿದ.
ಮುಂಡರಗಿ ಭೀಮರಾಯ

ಸ್ವಾತಂತ್ರ್ಯ ಹೋರಾಟ ಚಾರಿತ್ರಿಕ ಅವಲೋಕನ

ಅಧ್ಯಾಯ 1: <span style='background-color: #ffff00'>ಸ್ವಾತಂತ್ರ್ಯ</span> ಹೋರಾಟ ಚಾರಿತ್ರಿಕ ಅವಲೋಕನ