ಪುಟಗಳು

ಹೆರಿಗೆ ನಂತರ ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ

ಪ್ರಕಟಣೆ

ಚಳುವಳಿಗೆ ಅಣ್ಣಾ ಪ್ರವೇಶ ಆಕಸ್ಮಿಕ

ಅರಿವು ಮರೆವು

ಅಸಮಾನತೆ ಏಕೆ ಹೆಚ್ಚುತ್ತದೆ

ತಲೆ ಕೆಟ್ಟವರ ಹೊಸ ವಾದ


ಸ್ತಿತ ಪ್ರಜ್ಞ ಆರ್ಥಿಕ ತಜ್ಞ ಮತ್ತು ಸ್ಥಿತಿ ಇಲ್ಲದ ಪ್ರಧಾನಿ

ಪಡಿತರ -ಗ್ಯಾಸ್ ಸಂಪರ್ಕ ದಾಖಲಾತಿ ಸಲ್ಲಿಕೆ ಆ. 20ರವರೆಗೆ

ಬೆಂಗಳೂರು, ಆಗಸ್ಟ್ 16: ನಕಲಿ ಪಡಿತರ ಚೀಟಿ ಮತ್ತು ನಕಲಿ ಅಡುಗೆ ಅನಿಲ ಸಂಪರ್ಕಗಳನ್ನು ಪತ್ತೆ ಮಾಡುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡಿರುವ ಎಲ್‌ಪಿಜಿ ಮತ್ತು ವಿದ್ಯುತ್ ಸಂಪರ್ಕ ಸಂಖ್ಯೆ ಪರಶೀಲನೆಗಾಗಿ ನಾಗರಿಕರು ಸರಿಯಾದ ದಾಖಲಾತಿಗಳನ್ನು ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು (ಆಗಸ್ಟ್ 15) ಈ ತಿಂಗಳ 20ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ದಾಖಲಾತಿಗಳನ್ನು ಸಲ್ಲಿಸುವಾಗ ವೆಬ್‌ಸೈಟ್ ಮೇಲೆ ಅಧಿಕ ಒತ್ತಡ ಬಿದ್ದಿರುವುದು ಮತ್ತಿತರ ಕಾರಣಗಳಿಂದಾಗಿ ಅನೇಕ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಲಾವಧಿ ವಿಸ್ತರಣೆ ಮಾಡಲಾಗಿದೆ.

ಆಹಾರ ಇಲಾಖೆಯ ಐದು ವಲಯ ಕಚೇರಿಗಳ ವಿಳಾಸ-ದೂರವಾಣಿ ಸಂಖ್ಯೆ:
ಬೆಂಗಳೂರು ಕೇಂದ್ರ ವಲಯ: ಮೋಹನ್ ಮ್ಯಾನ್ಷನ್ ಕಟ್ಟಡ, ಕಸ್ತೂರಾಬಾ ರಸ್ತೆ. ದೂರವಾಣಿ: 2221 4431
ಪಶ್ಚಿಮ ವಲಯ: ಸಹಕಾರಿ ಭವನ, ಭಾಷ್ಯಂ ವೃತ್ತದ ಬಳಿ, ರಾಜಾಜಿನಗರ. ದೂ: 2315 3259
ಉತ್ತರ ವಲಯ: 11ನೇ ಸಿ ಕ್ರಾಸ್, ವೈಯಾಲಿಕಾವಲ್. ದೂ: 2344 5702
ದಕ್ಷಿಣ ವಲಯ: 3ನೇ ಮುಖ್ಯ ರಸ್ತೆ, ಚಾಮರಾಜಪೇಟೆ. ದೂ: 2661 3531
ಪೂರ್ವ ವಲಯ: ಪಾಲಿಕೆ ಕಟ್ಟಡ, ಸೆಂಟ್ ಜಾನ್ ರಸ್ತೆ. ದೂ: 2536 0750

ದಾಖಲಾತಿ ಸಲ್ಲಿಸದೇ ಇರುವುದು, ದಾಖಲಾತಿ ಸಲ್ಲಿಸಿದ್ದರೂ ತಪ್ಪಾಗಿ ನಮೂದಾಗಿರುವುದು ಮತ್ತಿತರ ಕಾರಣಗಳಿಂದ ಅಮಾನತಿನ ಸ್ಥಿತಿಯಲ್ಲಿರುವ ಪಡಿತರ ಚೀಟಿದಾರರು ಮತ್ತು ಎಲ್‌ಪಿಜಿ ಗ್ರಾಹಕರು ಖುದ್ದಾಗಿ ಅಥವಾ ಆನ್‌ಲೈನ್ (http://ahara.kar.nic.in/) ಮೂಲಕ ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ನಗರದಲ್ಲಿರುವ ಆಹಾರ ಇಲಾಖೆಯ ಐದು ವಲಯ ಕಚೇರಿಗಳಲ್ಲಿ ಪಡಿತರ ಚೀಟಿ ಸಂಖ್ಯೆ ಅಥವಾ ಅನಿಲ ಸಂಪರ್ಕದ ಸಂಖ್ಯೆ ಜತೆ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಇರುವ ವಿದ್ಯುತ್ ಬಿಲ್ ರಸೀದಿ ಸಲ್ಲಿಸಬೇಕು

ಆಧಾರ್ ಕಾರ್ಡಿಗಾಗಿ mad rush ಬೇಡ!

 
ಬೆಂಗಳೂರು, ಆಗಸ್ಟ್ 14 : ದೇಶ ವಾಸಿಗಳನ್ನೆಲ್ಲ ಏಕರೂಪದಲ್ಲಿ ಗುರುತಿಸುವ ಸಲುವಾಗಿ ಕೇಂದ್ರ ಸರಕಾರ ಕೊಡಮಾಡುತ್ತಿರುವ ಆಧಾರ್ ವಿಶಿಷ್ಟ ಗುರುತಿನ ಚೀಟಿಗಾಗಿ ಜನ ಎದ್ನೋ ಬಿದ್ನೋ ಎಂದು ಐಡಿ ಕಾರ್ಡ್ ವಿತರಿಸುವ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ ಇವತ್ತೇ ಇದನ್ನು ತೆಗೆದುಕೊಂಡರೆ ನಾಳೆನೇ ಅಷ್ಟೈಶ್ವರ್ಯ ಕುಲಾಯಿಸುತ್ತದೆ ಎಂದೇನೂ ಇಲ್ಲ.

ಸೋ, ಮ್ಯಾಡ್ ರಶ್ ಬೇಡ. ಸುಮ್ಮನೆ ಯುಐಡಿ ಕಾರ್ಡ್ ವಿತರಣೆ ಕೇಂದ್ರಗಳಿಗೆ ಹೋಗಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳಬೇಡಿ. ಏಕೆಂದರೆ ಈಗಿನ ರಷ್ ನೋಡಿದರೆ ಈ ಕಾರ್ಡ್ ಪಡೆಯುವುದು ಆಲ್ ಮೋಸ್ಟ್ ಒಂದು ದಿನದ ಪ್ರೋಗ್ರಾಂ ಆಗುತ್ತದೆ. ಆದ್ದರಿಂದ ಪುರುಸೊತ್ತಿದ್ದರೆ ಮಾತ್ರ ಅತ್ತ ಹೆಜ್ಜೆ ಹಾಕಿ. ಅಷ್ಟಕ್ಕೂ ಇವತ್ತಲ್ಲದಿದ್ದರೆ ನಾಳೆ ಪಡೆದರಾಯಿತು.

ಏಕೆಂದರೆ ಇದು ಕೇವಲ ಒಂದೆರಡು ವಾರದ ಯೋಜನೆ ಅಲ್ಲ. ಆದ್ದರಿಂದ ಇಂದೇ ಪಡೆಯೋಣ ಎಂಬ ಧಾವಂತ ಖಂಡಿತಾ ಬೇಡ. ಆಧಾರ್ ಕಾರ್ಡು ಪಡೆಯುವುದು ಒಳ್ಳೆಯದೇ. ಅದು ಕಡ್ಡಾಯವೂ ಆಗಲಿದೆ. ಆದರೆ ತಿಂಗಳು ಬಿಟ್ಟು ಪಡೆದರಾಯಿತು. urgent ಆಗಿರುವವರು ಹೋಗಿ ಕಾರ್ಡ್ ಪಡೆಯಲಿ. ನೀವು ನಿಧಾನಕ್ಕೆ ಹೋದರಾಯಿತು. ಏನಂತೀರಿ!?

ಅನಂತ ಪ್ರಶ್ನೆ: ಧರ್ಮ ಸಂಕಟದಲ್ಲಿ ಸುಪ್ರೀಂಕೋರ್ಟ್

padmanabha-wealth-ashtamangala-supreme-court
ತಿರುವನಂತಪುರ, ಆಗಸ್ಟ್ 14: ಅನಂತ ಸಂಪತ್ತು ಪ್ರಶ್ನೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿದೆ. ದೇಗುಲದ ನೆಲಮಾಳಿಗೆಯಲ್ಲಿನ ಅನಂತ ಸಂಪತ್ತಿನ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ತೀರ್ಪನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳುವುದೇ? ಎಂಬ ಪ್ರಶ್ನೆ ಕಾಡುತ್ತಿದೆ. ಅಷ್ಟಮಂಗಲ ಪ್ರಶ್ನೆ ಪ್ರಕಾರ ಸಂಪತ್ತು ಶೋಧದಿಂದ ದೇವರು ಮುನಿದಿದ್ದಾರೆ ಹಾಗೂ ಬಿ ಉಗ್ರಾಣನ್ನು ತೆರೆದರೆ ಭಾರೀ ಅವಘಡಗಳು ಸಂಭವಿಸಲಿವೆ.

ಆದರೆ ಈ ಎಚ್ಚರಿಕೆಯನ್ನು ನ್ಯಾಯಾಲಯ ಪರಿಗಣಿಸೀತೆ? ಪರಿಗಣಿಸಿದರೆ ನ್ಯಾಯಾಂಗಕ್ಕಿಂತ ಅಷ್ಟಮಂಗಲ ಪ್ರಶ್ನೆಯೇ ಮಿಗಿಲು ಎಂದಾಗುತ್ತದೆ. ಪರಿಗಣಿಸದೆ ಬಿ ಉಗ್ರಾಣವನ್ನು ತೆರೆಯಲು ಮುಂದಾದರೆ ದೇವರನ್ನು ಧಿಕ್ಕರಿಸಿ ಹೋದಂತಾಗುತ್ತದೆ. ಸೋ, ಹೇಗೆ ನೋಡಿದರೂ ನ್ಯಾಯಾಂಗದ ಪಾಲಿಗೆ ಇದು ಧರ್ಮ ಸಂಕಟದ ವಿಚಾರವಾಗಿ ಪರಿಣಮಿಸಲಿದೆ.

ಮೂರು ದಿನಗಳ ಕಾಲ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ನೆಲಮಾಳಿಗೆಯಲ್ಲಿರುವ ಸಂಪತ್ತು ಶೋಧಿಸಿರುವುದರಿಂದ ಅನಂತ ಪದ್ಮನಾಭ ಮುನಿದಿದ್ದಾನೆ. ಅಂತೆಯೇ ಅತ್ಯಂತ ಮುಖ್ಯವಾಗಿರುವ ಬಿ ಉಗ್ರಾಣವನ್ನು ತೆರೆದರೆ ಅದನ್ನು ತೆರೆದವರ ವಂಶ ನಾಶವಾಗುತ್ತದೆ ಹಾಗೂ ಇನ್ನಿತರ ಅವಘಡಗಳು ಸಂಭವಿಸುತ್ತವೆ. ಸಂಪತ್ತಿನ ಫೊಟೊ ತೆಗೆಯುವುದು ಮತ್ತು ವಿಡಿಯೋ ಶೂಟಿಂಗ್‌ ಮಾಡುವುದು ಕೂಡ ದೇವ ಸಮ್ಮತವಲ್ಲ ಎಂದು ಕಂಡು ಬಂದಿದೆ.

ಬಿ ಉಗ್ರಾಣದಲ್ಲಿ ಅನಂತ ಪದ್ಮನಾಭನ ಇನ್ನೊಂದು ಬೃಹತ್‌ ವಿಗ್ರಹವಿದೆ. ಅನಾದಿ ಕಾಲದಿಂದ ಈ ವಿಗ್ರಹವನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಸಾಕ್ಷಾತ್‌ ನರಸಿಂಹಸ್ವಾಮಿಯೇ ಈ ಉಗ್ರಾಣವನ್ನು ಕಾವಲು ಕಾಯುತ್ತಿದ್ದಾನೆ. ಅಲ್ಲದೆ ಭಯಂಕರ ಸರ್ಪಗಳ ಕಾವಲು ಈ ಉಗ್ರಾಣಕ್ಕಿದೆ. ದೇಗುಲದ ಚೈತನ್ಯವಿರುವುದು ಕೂಡ ಈ ಉಗ್ರಾಣದಲ್ಲಿ. ಜತೆಗೆ ಈಗ ಸಿಕ್ಕಿರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚು ಸಂಪತ್ತು ಬಿ ಉಗ್ರಾಣದಲ್ಲಿದೆ. ಆದರೆ ಇದನ್ನು ಯಾವ ಕಾರಣಕ್ಕೂ ತೆರೆದು ನೋಡಬಾರದು. ಹಾಗೇನಾದರೂ ತೆರೆದರೆ ನಾನಾ ರೀತಿಯ ಕೆಡುಕುಗಳು ತಲೆದೋರಲಿವೆ ಹಾಗೂ ಕ್ಷೇತ್ರಕ್ಕೂ ಧಕ್ಕೆಯಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಟ್ಟಿರುವ ದೈವಜ್ಞರು ಎಚ್ಚರಿಸಿದ್ದಾರೆ.