ಪುಟಗಳು

ಸಾವನ್ನು ತಿಳಿಯುವ ತನಕ ಜೀವನ ತಿಳಿಯದು - ಮಾನ್ಯಪುರ ಗೋವಿಂದರಾಜು



ಜೀವ ಪ್ರಕಾಶನ,
ಮಣ್ಣೆ (ಮಾನ್ಯಪುರ)
ಬೆಲೆ ರೂ.೫೦/-
ಮೊಬೈಲ್ ಸಂಖ್ಯೆ .೭೨೫೯೫೫೭೦೧, ೯೭೩೯೩೬೭೧೨೪,
ಬದುಕು ಪಾತ್ರೆಯಂತೆ ಅದರಲ್ಲಿ ಏನು ಅಡುಗೆ ಮಾಡಿಕೊಳ್ತೀವಿ ಅದನ್ನ ನಾವೇ ಉಣ್ಣಬೇಕಾಗುತ್ತದೆ ಎಂದು ನಂಬಿರುವವ ನಾನು. ನನ್ನೆಲ್ಲ ಸೋಲುಗಳಿಗೆ, ಅಪಸಹ್ಯಗಳಿಗೆ ಕಷ್ಟಗಳಿಗೆ ಸುಖಗಳಿಗೆ ಮತ್ತೇನೇ ಇದ್ದರೂ ಅದಕ್ಕೆ ನಾನೇ ಹೊಣೆಗಾರನೆಂದು ಅರ್ಥ ಮಾಡಿಕೊಂಡಿದ್ದೇನೆ ನೆಮ್ಮದಿಯಿಂದ ಸಾಗುತ್ತಿದ್ದ ಬದುಕಿಗೆ ಅರ್ಥಗಳ ಹುಡುಕ ಹೋಗಿ ಸತ್ಯವನ್ನು ಅರಿತವನಂತೆ ಒಡನೆಯೆ ಸಾಯುವಂತೆ ನನ್ನಲ್ಲಿ ನಾನೇ ನಟಿಸಿಕೊಂಡು ನನ್ನ ಚಿತೆಗಾಗುವಷ್ಟು ಸಿಗರೇಟು ಸುಟ್ಟು ಮತ್ತಿಳಿಯದಂತೆ ವಾರಗಟ್ಟಲೆ ಮಧ್ಯಸೇವಿಸಿ ಎದ್ದೇಳದಂತೆ ಮಾಸಗಟ್ಟಲೆ ಮಲಗಿ ಬೇಕಾದ್ದು ತಿಂದು ತೇಗಿ ಗಾಂಜಾದ ಸಹವಾಸಕ್ಕೆ ಬಿದ್ದ ಮೇಲೂ ನನಗೆ ಆತ್ಮ ಸಂತೋಷವನ್ನು ನೀಡಿದ್ದು ಪುಸ್ತಕಗಳಷ್ಟೆ ನನ್ನ ಸ್ನೇಹಿತರಲ್ಲಿ ಆಗಾಗ ಹೇಳುತ್ತಿರುತ್ತೇನೆ ನನ್ನ ಬುದುಕಿನ ಆಸೆಯೆಂದರೆ ಸಾಯುವರೆಗೂ ಎರಡೊತ್ತಿನ ಊಟಕ್ಕೆ ಸಾಕಾಗುವಷ್ಟು ಹಣ ಸಂಪಾದಿಸಿಕೊಂಡು ಒಂದು ಚಿಕ್ಕ ಮನೆಯ ತುಂಬ ಪುಸ್ತಕಗಳ ತುಂಬಿಕೊಂಡು ಓದುತ್ತ ನನ್ನ ಜೀವನದ ಅನುಭವಗಳ ಬರೆಯುತ್ತ ಆಗಾಗ ಕಾಡು ಮೇಡು ಬೆಟ್ಟ ಗುಡ್ಡ ಊರು ಕೇರಿ ಕೊಂಪೆಗಳ ಸುತ್ತುತ್ತ ಒಬ್ಬಂಟಿಗನಾಗಿ ಬದುಕಬೇಕೆಂದು.
- ಮಾನ್ಯಪುರ ಗೋವಿಂದರಾಜು