ಈಗಾಗಲೆ ಸಾಕಷ್ಟು ಉಬ್ಬರವಿಳಿತಗಳನ್ನು ಕಾಣುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗಳಾಗಲಿವೆ, ಅನೇಕ ಬದಲಾವಣೆಗಳಾಗಲಿವೆ ಎಂದು ಹೇಳಿ ಶ್ರೀಗಳು ರಾಜ್ಯ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.
ಕೆಲವೇ ತಿಂಗಳಲ್ಲಿ ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಭಾರೀ ನಷ್ಟ ಸಂಭವಿಸಲಿದೆ. ನಕ್ಸಲೀಯರ ಹಾವಳಿಯೂ ರಾಜ್ಯದಲ್ಲಿ ಹೆಚ್ಚಾಗಲಿದೆ. ಇಷ್ಟು ಮಾತ್ರವಲ್ಲ ಕರ್ನಾಟಕದಲ್ಲಿ ಉಗ್ರರಿಂದ ದಾಳಿಯಾಗುವ ಸಂಭವನೀಯತೆ ಇದೆ ಮುನ್ನೆಚ್ಚರಿಕೆ ನೀಡಿದ್ದಾರೆ. ಸರಕಾರ ಈಗಲೆ ಎಚ್ಚೆತ್ತುಕೊಳ್ಳುವುದು ಕ್ಷೇಮ.
ಇವೆಲ್ಲ ನಿರೀಕ್ಷಿಸಬಹುದಾದ ಭವಿಷ್ಯಗಳಾದರೆ, ನಿರೀಕ್ಷಿಸದೆ ಇರುವ ಭವಿಷ್ಯವನ್ನೂ ಹೇಳಿದ್ದಾರೆ. ಅದೇನೆಂದರೆ, ಶೋಕೇಸಿನಲ್ಲಿ ಕೂತಿದ್ದ ಮುತ್ತಿನ ಗಿಳಿಯೂ ಮಾತನಾಡಲಿದೆ. ಇದು ಶುಭದ ಸಂಕೇತವಲ್ಲ ಎಂದು ಹೇಳಿ ಕೋಡಿಮಠ ಶ್ರೀಗಳು ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದಾರೆ.
ಕೃಪೆ- ಒನ್ ಇಂಡಿಯಾ ಕನ್ನಡ