ಪುಟಗಳು

ಪತ್ತೇದಾರಿ ಸಾಹಿತ್ಯ - ಶಬ್ದ ದೊಳಗಣ ನಿಶ್ಯಬ್ದ

ಇವು ಕಥೆಗಳಲ್ಲ. ವಾಸ್ತವ ಘಟನೆಗಳು ಎಂದು ಲೇಖಕರು ನೆನಪಿಸಿದ್ದಾರೆ. ಕಳೆದ 26 ವರ್ಷಗಳ ಕಾಲ ಪೋಲೀಸ್ ಅಧಿಕಾರಿಯಾಗಿ ಕೈಗೊಂಡ ತನಿಖೆಗಳಲ್ಲಿ ಯಶಸ್ವಿಯಾದವುಗಳನ್ನು ಸ್ವಾರಸ್ಯಕರವಾಗಿ ಪಾಲಾಕ್ಷಯ್ಯ ಇಲ್ಲಿ ಹೇಳಿಕೊಂಡು ಹೋಗಿದ್ದಾರೆ. ಹಾಗಾಗಿ ಇವು ಕತೆಯ ಸ್ವರೂಪವನ್ನೂ ಪಡೆದಿವೆ.
ಪೋಲೀಸರಿಗೆ ಗೊತ್ತಾಗದಿದ್ದ ಕೊಲೆ, ಪತ್ತೆ ಮಾಡಲು ಸಾಧ್ಯವೇ ಇಲ್ಲವೆಂದು ಫೈಲು ಮುಚ್ಚಿ ಹಾಕಿದ್ದ ಕೊಲೆ, ಸತ್ತ ವ್ಯಕ್ತಿ ಯಾರೆಂದು ಗೊತ್ತೇ ಆಗದೆ ದಿಕ್ಕು ತಪ್ಪಿಸಿದ ಪ್ರಕರಣ – ಇನ್ನೂ ಇಂತಹದೇ ಅತಿ ಕ್ಲಿಷ್ಟಕರವಾದ 9 ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಮ್ಮ ವೃತ್ತಿಯಲ್ಲಿ ದಕ್ಕಿದ ಅನುಭವಗಳನ್ನು ಹೇಳಬಲ್ಲ ಬರಹಗಾರ ಅವರೊಳಗಿದ್ದಾನೆ.
ಇಲ್ಲಿನ ಬಹುತೇಕ ಎಲ್ಲಾ ಕತೆಗಳೂ ಉದಯ ಟಿವಿ ಕ್ರೈಂ ಸ್ತೋರಿ ಧಾರಾವಾಹಿಯಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿವೆ. ಹೀಗೆ ಬೇರೆ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿದವರು ತಮ್ಮ ಅನುಭವಗಳನ್ನು ಪರಿಣಾಮಕಾರಿಯಾಗಿ ಹೇಳಿಕೊಂಡಲ್ಲಿ ಕನ್ನಡ ಸಾಹಿತ್ಯದ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಬಯಲಾಟದ ಕಲಾವಿದರೂ ಆಗಿರುವ ಪಾಲಾಕ್ಷಯ್ಯ ಅವರ ಸಾಂಸ್ಕೃತಿಕ ಸೂಕ್ಷ್ಮ ಸಂವೇದನೆ ಅವರ ವೃತ್ತಿ ಕೌಶಲ್ಯವನ್ನೂ ಹೆಚ್ಚಿಸಿರುವುದು ಕುತೂಹಲಕಾರಿ ಬೆಳವಣಿಗೆ.

ಶೀರ್ಷಿಕೆ: ಶಬ್ದ ದೊಳಗಣ ನಿಶ್ಯಬ್ದ
ಲೇಖಕರು: ಡಿ. ಪಾಲಾಕ್ಷಯ್ಯ
ಪ್ರಕಾಶಕರು : ನೀಲಾ ಪ್ರಕಾಶನ
ಪುಟಗಳು : 179
ಬೆಲೆ:ರೂ.100/-
ಕೃಪೆ : ಸುಧಾ