ಪುಟಗಳು

ಲೋಕಾಯುಕ್ತಕ್ಕೆ ಪರಮಾಧಿಕಾರ ಬೇಕಾಗಿಲ್ಲ: ಪಾಟೀಲ್

ಗುಲ್ಬರ್ಗಾ, ಸೆ.14: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಮಾಧಿಕಾರ ಎನ್ನುವುದಕ್ಕೆ ಅರ್ಥವಿರುವುದಿಲ್ಲ. ಲೋಕಾಯುಕ್ತ ಸಂಸ್ಥೆ ಪರಮಾಧಿಕಾರ ಅಥವಾ ಸರ್ವಾಧಿಕಾರ ನೀಡುವ ಅವಶ್ಯಕತೆ ಇಲ್ಲ ಎಂದು ಲೋಕಾಯುಕ್ತ ಶಿವರಾಜ್ ಪಾಟೀಲ್ ಅವರು ಹೇಳಿದ್ದಾರೆ.

ಪರಮಾಧಿಕಾರ ನೀಡುವಂತೆ ಸರ್ಕಾರವನ್ನು ಕೇಳುವುದಿಲ್ಲ. ಆದರೆ, ಮೂರು ಮುಖ್ಯ ಅಧಿಕಾರ ನೀಡಬೇಕು. ಕರ್ನಾಟಕದ ಲೋಕಾಯುಕ್ತ ಕಾಯ್ದೆ ದೇಶದಲ್ಲೇ ಉತ್ತಮವಾದ ಕಾಯ್ದೆ ಎಂದು ಶಿವರಾಜ್ ಪಾಟೀಲ್ ಅವರು ಸಾರ್ವಜನಿಕ ಅಹವಾಲು ಸ್ವೀಕರಿಸಿದ ನಂತರ ಹೇಳಿದರು.

* ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿ, ನೌಕರರನ್ನು ಹುದ್ದೆಗೆ ಪುನರ್ ನೇಮಕ ಮಾಡುವಾಗ ಲೋಕಾಯುಕ್ತರ ಗಮನಕ್ಕೆ ತರಬೇಕು.
* ದಾಳಿ ನಂತರ ಅಧಿಕಾರಿಗಳು, ನೌಕರರು ಯಾರೇ ಆಗಿರಲಿ ಅವರ ವಿಚಾರಣೆಗೆ ಅನುಮತಿ ನೀಡಬೇಕು.
* ಭ್ರಷ್ಟರ ವಿರುದ್ಧ ಚಾರ್ಜ್ ಶೀಟ್ ಹಾಕಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವ ಅಧಿಕಾರ ಕಲ್ಪಿಸಬೇಕು.

ಈ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು. ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ್ಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಉಪ ಲೋಕಾಯುಕ್ತರ ಅಧೀನದಲ್ಲಿ 12 ಸಾವಿರ ಪ್ರಕರಣಗಳಿವೆ. ಲೋಕಾಯುಕ್ತರ ಅಧೀನದಲ್ಲಿ 3000 ಪ್ರಕರಣಗಳು ಬಾಕಿ ಉಳಿದಿವೆ.