ಪುಟಗಳು

ಅನಂತ ನಿಧಿ: 'ಬಿ' ಉಗ್ರಾಣ ತೆಗೆಯುವುದು ಅಪಶಕುನ

ತಿರುವನಂತಪುರ, ಜುಲೈ 6: ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆರನೇ ರಹಸ್ಯ ಉಗ್ರಾಣ ತೆರೆಯುವುದನ್ನು ಮುಂದೂಡಲು ಪುರಾಣ ಪ್ರತೀತಿ, ನಂಬಿಕೆಯೇ ಕಾರಣ ಎಂದು ತಿಳಿದುಬಂದಿದೆ.

ನಂಬಿಕೆಗಳ ಪ್ರಕಾರ 'ಬಿ' ಉಗ್ರಾಣವನ್ನು ತೆರೆಯುವುದು ಅಪಾಯಕಾರಿ. ಈ ಕೊಠಡಿಯ ಪ್ರಧಾನ ಬಾಗಿಲಿನಲ್ಲಿ ಹಾವಿನ ಮಾದರಿಯೊಂದಿದೆ. ಅದನ್ನು ತೆರೆದರೆ ಅಪಶಕುನ ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿದೆ. ಅಂತೆಯೇ ಈ ಉಗ್ರಾಣದ ತಳದಲ್ಲಿ ರಹಸ್ಯ ಸುರಂಗವಿದ್ದು, ಇದು ನೇರವಾಗಿ ಸಮುದ್ರಕ್ಕೆ ಕರೆದುಕೊಂಡು ಹೋಗುತ್ತದೆ ಎಂಬಿತ್ಯಾದಿ ನಂಬಿಕೆಗಳಿವೆ.

'ಬಿ' ಉಗ್ರಾಣ ತೆರೆಯುವುದರಿಂದ ಅನಾಹುತಗಳಾಗಬಹುದು ಎಂದು ರಾಜಮನೆತನದವರೂ ಈ ಕೊಠಡಿಯನ್ನು ತೆರೆಯುವುದಕ್ಕೆ ಆಕ್ಷೇಪ ಎತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಮಿತಿ ತಜ್ಞರ ಅಭಿಪ್ರಾಯ ಪಡೆದುಕೊಂಡು ಮುಂದುವರಿಯುವ ತೀರ್ಮಾನಕ್ಕೆ ಬಂದಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ದೇವಸ್ಥಾನದ ನೆಲಮಾಳಿಗೆಯ ಉಗ್ರಾಣಗಳಲ್ಲಿರುವ ಸಂಪತ್ತನ್ನು ಎಣಿಸುತ್ತಿರುವ ಏಳು ಜನರ ಸಮಿತಿ ಏಳನೇ ದಿನವಾದ ಸೋಮವಾರ ಹಠಾತ್‌ ಕಾರ್ಯಸ್ಥಗಿತಗೊಳಿಸಿ ಶುಕ್ರವಾರ 'ಬಿ' ಕೊಠಡಿಯ ಬಾಗಿಲು ತೆರೆಯುವ ಕುರಿತು ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ಈಗಾಗಲೇ ತೆರೆದಿರುವ ಐದು ಕೊಠಡಿಗಳಲ್ಲಿರುವ ವಸ್ತುಗಳನ್ನು ಎಣಿಸುವ ಕಾರ್ಯ ಮುಗಿದಿದ್ದು, ಒಂದು ಲಕ್ಷ ಕೋಟಿ ರೂ ಮೇಲ್ಪಟ್ಟು ಸಂಪತ್ತು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ 'ಬಿ' ಉಗ್ರಾಣದಲ್ಲಿ ಎಷ್ಟು ಸಂಪತ್ತು ಇರಬಹುದು ಎಂಬ ಕುತೂಹಲ ಕೆರಳಿರುವಾಗಲೇ ಸಮಿತಿ ಎಣಿಕೆಯ ಕಾರ್ಯವನ್ನು ಅನಿರೀಕ್ಷಿತವಾಗಿ ಮುಂದೂಡಿದೆ.

ಸುಪ್ರೀಂಕೋರ್ಟ್‌ ನೇಮಿಸಿರುವ ಏಳು ಸದಸ್ಯರ ಸಮಿತಿ ಶುಕ್ರವಾರ ಸಮಾಲೋಚಿಸಿ ಮುಂದಿನ ನಡೆಯ ಬಗ್ಗೆ ನಿರ್ದಾರ ಕೈಗೊಳ್ಳಲಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ನಂಬಿಕೆಗಳಿರುವುದರಿಂದ ಸಮಿತಿ ಏಕಪಕ್ಷೀಯವಾಗಿ ವರ್ತಿಸುವುದಿಲ್ಲ. ಅಂತೆಯೇ ಆರನೇ ಉಗ್ರಾಣದ ಬಾಗಿಲು ತೆರೆಯಲು ಕೆಲವೊಂದು ರೀತಿಯ ತಂತ್ರಜ್ಞಾನದ ಅರಿವು ಹೊಂದಿರುವುದು ಕೂಡ ಅಗತ್ಯ ಎಂದು ಸಮಿತಿಯಲ್ಲಿರುವ ನಿವೃತ್ತ ನ್ಯಾಯಾಧೀಶ ಎಂ. ಎನ್‌. ಕೃಷ್ಣನ್‌ ಹೇಳಿದ್ದಾರೆ

'ಪದ್ಮನಾಭ ದೇಗುಲ ರಹಸ್ಯಗಳೆಲ್ಲ 1941ರಲ್ಲೇ ಪ್ರಕಟವಾಗಿತ್ತು'

ತಿರುವನಂತಪುರಂ, ಜುಲೈ 6: ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ನೆಲಮಾಳಿಗೆಯ ರಹಸ್ಯ ಕೊಠಡಿಗಳಲ್ಲಿ ಸಿಕ್ಕಿರುವ ಅಮೂಲ್ಯ ವಸ್ತುಗಳ ಪೈಕಿ ಹೆಚ್ಚಿನವುಗಳ ವಿವರ ಪುರಾತನ 'ಮತಿಲಾಕಂ ರೆಕಾರ್ಡ್ಸ್‌' ಕೃತಿಯಲ್ಲಿ ಭದ್ರವಾಗಿ ಲಾಕ್ ಆಗಿವೆ.

ಮತಿಲಾಕಂ ಎಂದರೆ ಅರಮನೆಯ ದಾಖಲೆಗಳು ಎಂದರ್ಥ. ತಿರುವಾಂಕೂರು ರಾಜಮನೆತನ ಮತ್ತು ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಇತಿಹಾಸದ ದಾಖಲೆಗಳನ್ನು ಮಲಯಾಳಂ ಕವಿ ಉಳ್ಳೂರು ಎಸ್‌. ಪರಮೇಶ್ವರನ್‌ ಅಯ್ಯರ್ 1941ರಲ್ಲಿ ಸಂಕಲಿಸಿ ಪ್ರಕಟಿಸಿದ್ದಾರೆ. ಅಂತೆಯೇ 12 ಆವೃತ್ತಿಗಳಲ್ಲಿರುವ 'ಕೊಟ್ಟಾರಂ' ದಾಖಲೆಯಲ್ಲೂ ಸಂಪತ್ತಿನ ವಿವರಗಳಿವೆ.

ತಿರುವಾಂಕೂರು ಅರಮನೆ ಮತ್ತು ಅನಂತ ಪದ್ಮನಾಭಸ್ವಾಮಿ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ತಿರುವಾಂಕೂರಿನ ಇತಿಹಾಸ ಬರೆಯುವಾಗ ಅದರಲ್ಲಿ ದೇವಸ್ಥಾನದ ಇತಿಹಾಸವೂ ಅಂತರ್ಗತವಾಗಿರುತ್ತದೆ. ಮತಿಲಾಕಂನಲ್ಲಿ ದೀರ್ಘ‌ ಕಾಲದಿಂದ ತೆರೆದಿರದಿದ್ದ ರಹಸ್ಯ ಉಗ್ರಾಣಗಳಲ್ಲಿರುವ ವಸ್ತುಗಳ ವಿವರಗಳಿವೆ ಎಂದು ಸಂಕೇತ ಭಾಷೆಯನ್ನು ಓದಿರುವ ಸಾಹಿತಿ ಉಳ್ಳೂರು ಹೇಳಿದ್ದಾರೆ. ಪದ್ಮನಾಭನಿಗೆ ಕಾಣಿಕೆಯಾಗಿ ಸಿಕ್ಕಿರುವ ಎಲ್ಲ ಆಭರಣಗಳ ವಿವರಗಳು ಮತಿಲಾಕಂನಲ್ಲಿದೆ. ಸರಪಳಿಯಂತಹ ಚಿನ್ನದ ಸರಗಳು ತೂಕ, ಉದ್ದ, ಗಾತ್ರ ಹಾಗೂ ಅದಕ್ಕೆ ಪೋಣಿಸಿರುವ ವಜ್ರ, ಮುತ್ತುರತ್ನಗಳ ವಿವರಗಳನ್ನು ಮತಿಲಾಕಂನಲ್ಲಿ ಬರೆದಿಟ್ಟಿದ್ದಾರೆ.

ತಿರುವಾಂಕೂರು ಅರಸರು ಬಹಳ ಜತನದಿಂದ ಹಾಗೂ ಭಯಭಕ್ತಿಯಿಂದ ಅನಂತ ಪದ್ಮನಾಭನ ಸಂಪತ್ತನ್ನು ಸಂರಕ್ಷಿಸಿಟ್ಟಿರುವುದಕ್ಕೆ ಇತಿಹಾಸದಲ್ಲಿ ಅನೇಕ ನಿದರ್ಶನಗಳು ಸಿಗುತ್ತವೆ. ಈ ಪೈಕಿ ಒಂದು ಇಂತಿದೆ. ರಾಜಮನೆತನದ ಸದಸ್ಯರು ಅನಂತ ಪದ್ಮನಾಭನ ದರ್ಶನ ಮಾಡಿ ಹೊರಬರುವಾಗ ಕಾಲಿನಲ್ಲಿರುವ ಮಣ್ಣನ್ನು ಕೂಡ ಅಲ್ಲಿಯೇ ಕೊಡವಿಕೊಳ್ಳುತ್ತಾರೆ. ದೇವರಿಗೆ ಸೇರಿದ ಧೂಳಿನ ಕಣವನ್ನು ಕೂಡ ತಾವು ಒಯ್ದಿಲ್ಲ ಎನ್ನುವುದನ್ನು ತೋರಿಸಿಕೊಡುವ ಸಾಂಕೇತಿಕ ವಿಧಿ ಇದು. ರಾಜ ಮನೆತನದವರು ಈಗಲೂ ಈ ವಿಧಿಯನ್ನು ಪಾಲಿಸುತ್ತಾರೆ.

ಈಗ ರಾಜಮನೆತನಕ್ಕೆ ಮುಖ್ಯಸ್ಥರಾಗಿರುವ ಉತ್ರದಾಮ್‌ ತಿರುನಾಳ್‌ ಮಾರ್ತಾಂಡ ವರ್ಮ ಒಂದು ದಿನ ಅನಂತ ಪದ್ಮನಾಭ ದೇವರ ದರ್ಶನ ಮಾಡಲು ಸಾಧ್ಯವಾಗದಿದ್ದರೆ 151.55 ಪೈಸೆ ತಪ್ಪುಕಾಣಿಕೆ ಒಪ್ಪಿಸುವ ಕ್ರಮವನ್ನು ವಿಧಿವತ್ತಾಗಿ ಪಾಲಿಸಿಕೊಂಡು ಬಂದಿದ್ದಾರೆ. ಅರವನೆಯ ಖರ್ಚು ವೆಚ್ಚಗಳನ್ನು ಸಂಬಾರ ವ್ಯಾಪಾರದಿಂದ ಬರುವ ವರಮಾನದಿಂದ ನಿಭಾಯಿಸಿಕೊಳ್ಳಬೇಕೆ ಹೊರತು, ರಾಜ್ಯದ ಬೊಕ್ಕಸದ ಹಣವನ್ನು ಬಳಸಬಾರದು ಎಂಬ ಅಲಿಖಿತ ನಿಮಯ ಅಂದಿನ ದಿನಗಳಲ್ಲಿ ತಿರುವಾಂಕೂರು ಅರಮನೆಯಲ್ಲಿ ಜಾರಿಯಲ್ಲಿತ್ತು.

ಪ್ರಾಚೀನ ಮಲಯಾಳಂ ಭಾಷೆಯಲ್ಲಿ ಬರೆದಿರುವ ಮತಿಲಾಕಂ ಆಭರಣ ಹಾಗೂ ಮತ್ತಿತರ ವಸ್ತುಗಳ ಸಂಖ್ಯೆ, ರೂಪ, ಗಾತ್ರ ಮತ್ತಿತರ ವಿವರಗಳನ್ನು ಒದಗಿಸುತ್ತಿದೆ. ಉದಾಹರಣೆಗೆ ಹೇಳುವುದಾದರೆ ಸಮಿತಿಗೆ ಸಿಕ್ಕಿರುವ ಭಾರೀ ಗಾತ್ರದ ಸರಕ್ಕೆ ಮತಿಲಾಕಂನಲ್ಲಿ 'ಪೊನ್ನಾಲಿ ಪಟ್ಟತ್ತಾಳಿ' ಎಂಬ ಹೆಸರಿದೆ. ಪೊನ್ನಾಲಿ ಪಟ್ಟತ್ತಾಳಿಗೆ ಪೋಣಿಸಿರುವ ಹವಳ, ಮರಕತ ಮತ್ತು ನೀಲಮಣಿಗಳ ವಿವರವೂ ಅದರಲ್ಲಿದೆ

'ಅನಂತ' ದೇಗುಲ ನಿಧಿ ಬೆಳಕಿಗೆ ಬರಲು ಕಾರಣವೇನು?


ತಿರುವನಂತಪುರಂ, ಜುಲೈ 3: ಕೇರಳ ರಾಜಧಾನಿ ತಿರುವನಂತಪುರಂನ ಅನಂತ ಪದ್ಮನಾಭಸ್ವಾಮಿ ಸದ್ಯಕ್ಕೆ 1 ಲಕ್ಷ ಕೋಟಿ ರು. ನಷ್ಟು ಶ್ರೀಮಂತ! ಮುಂದೆ ಇನ್ನೂ ಹೆಚ್ಚಾಗಬಹುದು. ಇಷ್ಟಕ್ಕೂ ಶತಮಾನಗಳಿಂದ ಕತ್ತಲೆಯ ಕೋಟೆಯಲ್ಲಿ ಗುಪ್ತವಾಗಿದ್ದ ಈ ನಿಧಿ ಈಗ ಬೆಳಕಿಗೆ ಬರುತ್ತಿರುವುದಕ್ಕೆ ಕಾರಣವಾದರೂ ಏನು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ...

ಟಿ.ಪಿ. ಸುಂದರರಾಜನ್ ಎಂಬ ವಕೀಲರು ಈ ದೇವಸ್ಥಾನದ ಆಸ್ತಿ ದುರ್ಬಳಕೆ ಆಗುತ್ತಿದೆ ಎಂದು ಕೋರ್ಟ್ ಮೊರೆಹೋಗಿದ್ದರು. ಆಗ ನೆಲಮಾಳಿಗೆಯನ್ನು ತೆರೆದು ಒಳಗೇನಿದೆಯೋ ಪರಿಶೋಧಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತು. ಅದರಂತೆ ಈಗ ಶೋಧ ಕಾರ್ಯ ಆರಂಭವಾಗಿದೆ ಎಂದು ಸರಳವಾಗಿ ಹೇಳಬಹುದು.

ಅದಕ್ಕೂ ಮುನ್ನ 2007ರಲ್ಲಿ ಏನಾಗಿತ್ತೆಂದರೆ... ಮಾರ್ತಾಂಡ ವರ್ಮಾ ನೇತೃತ್ವದ ದೇವಸ್ಥಾನದ ಟ್ರಸ್ಟ್ ಸದಸ್ಯರು ನೆಲಮಾಳಿಗೆಯನ್ನು ತೆರೆದು ನಿಧಿಗಳ ಫೋಟೋ ತೆಗೆದು ಆಲ್ಬಂ ತಯಾರಿಸಲು ನಿರ್ಧರಿಸಿದ್ದರು. ಟ್ರಸ್ಟ್ ಸೂಚನೆಯಂತೆ ಗ್ಯಾಸ್ ಕಟ್ಟರ್ ಬಳಸಿ ಶತಮಾನಗಳಿಂದ ಮುಚ್ಚಿಡಲಾದ ನೆಲಮಾಳಿಗೆಯ ಬಾಗಿಲನ್ನು ಒಡೆದು ಸುರಂಗ ಮಾರ್ಗದಲ್ಲಿ ಒಳಗಿನ ಗುಹೆಗೆ ಇಳಿದಾಗ ಯಾವುದೇ ನಿಧಿ ಕಾಣಿಸಿರಲಿಲ್ಲ. ಕೇವಲ ಕಲ್ಲು ಮಣ್ಣು ತುಂಬಿತ್ತು. ಗುಪ್ತ ನಿಧಿ ಅಂಥಹುದೇನೂ ಇಲ್ಲವೆಂದು ಟ್ರಸ್ಟ್ ಸದಸ್ಯರು ಸುಮ್ಮನಾದರು.

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. 2007ರ ಆಗಸ್ಟ್ 3ರಂದು ಈ ಕುರಿತು ದೇವಸ್ಥಾನದ ಎಕ್ಸಿಕ್ಯೂಟಿವ್ ಅಧಿಕಾರಿ ಮಾರ್ತಾಂಡ ವರ್ಮಾ ಒಂದು ಸರ್ಕ್ಯುಲರ್ ಹೊರಡಿಸಿ, ಇದೆಲ್ಲ ಟ್ರಸ್ಟ್ ನ ಹಕ್ಕು ಎಂದು ಪ್ರತಿಪಾದಿಸಿದರು. ಆದರೆ ಇದರ ವಿರುದ್ಧ ಸುಂದರರಾಜನ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಆಗ 2007ರ ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ನ್ಯಾಯಾಲಯ ಸರ್ಕ್ಯುಲರ್ ಕ್ರಮಕ್ಕೆ ತಡೆಯಾಜ್ಞೆ ನೀಡಿತು.

ಇದರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮರ್ತಾಂಡ ವರ್ಮರಿಂದಾಗಿ ಕ್ಷೇತ್ರಾಡಳಿತ ಟ್ರಸ್ಟ್ ಅಧೀನದಲ್ಲೇ ಉಳಿಯಿತು. ಆದರೆ ದೇವಸ್ಥಾನದ ವ್ಯಾಪ್ತಿಯಲ್ಲಿರುವ ನಿಧಿಯ ಗಣತಿ ನಡೆಸುವಂತೆ ಕೋರ್ಟ್ ಆದೇಶಿಸಿತು.

ಸುಪ್ರೀಂಕೋರ್ಟ್ ನಿಯೋಜಿಸಿದ ಆಯೋಗದ ಸದಸ್ಯರು ನೆಲಮಾಳಿಗೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಆ ಸಂದರ್ಭದಲ್ಲಿ ಚಪ್ಪಡಿಯಾಕಾರದ ಕಗ್ಗಲ್ಲನ್ನು ಕಂಡು ಕುತೂಹಲಗೊಂಡ ಸದಸ್ಯರು ಅದನ್ನು ಸರಿಸಿದಾಗ ಕಿರಿದಾದ ಸುರಂಗ ಮಾರ್ಗ ಕಾಣಿಸಿಕೊಂಡಿತು. ಆ ಮಾರ್ಗವಾಗಿ ಇಳಿದುಹೋದಾಗ ಈ ಮಹಾ ಸಂಪತ್ತು ಬೆಳಕಿಗೆ ಬಂದಿದೆ.

ನೆಲಮಾಳಿಗೆಯಲ್ಲಿ ಒಟ್ಟು 6 ಕೊಠಡಿಗಳಿದ್ದು, 20 ಅಡಿಗೂ ಹೆಚ್ಚು ಆಳದಲ್ಲಿ ಸಂತ್ತನ್ನು ಹುದುಗಿಡಿಸಲಾಗಿದೆ. ಎ, ಬಿ, ಸಿ, ಡಿ ಮತ್ತು ಇ ಎಂದು ಕೊಠಡಿಗಳಿಗೆ ನಾಮಕರಣ ಮಾಡಲಾಗಿದೆ. ಇದುವರೆಗೆ ಐದು ಕೊಠಡಿಗಳ ತಲಾಶೆ ನಡೆದಿದೆ. ಜುಲೈ 10ರೊಳಗಾಗಿ ಸಂಪೂರ್ಣ ಶೋಧ ಕಾರ್ಯ ಮುಕ್ತಾಯವಾಗುವ ಅಂದಾಜಿದೆ.

ಈ ಮಧ್ಯೆ, ನೆಲ ಮಾಳಿಗೆಗೆ ಕಾಂಕ್ರೀಟ್ ಮಾಡಲು ತೀರ್ಮಾನಿಸಲಾಗಿದೆ. ಸುರಂಗ ಮಾರ್ಗದ ಮೂಲಕ ಮೇಲಿನ ದೇವಸ್ಥಾನಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಇದರ ಜತೆಗೆ ನೆಲಮಾಳಿಗೆಯೊಳಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಅಂತಿಮವಾಘಿ ಅಷ್ಟೂ ನಿಧಿನ್ನು ಆಯಾ ನೆಲ ಮಾಳಿಗೆಗಳ ಒಳಗಡೆಯೇ ಸಂರಕ್ಷಿಸಿಡಲು ತೀರ್ಮಾನಿಸಲಾಗಿದೆ

ಶ್ರೀಕೃಷ್ಣದೇವರಾಯನ ನಿಧಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಪತ್ತೆ!

ತಿರುವನಂತಪುರಂ, ಜುಲೈ 4: ಇಲ್ಲಿನ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಪತ್ತೆಯಾಗಿರುವ ಸುಮಾರು 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಬೆಲೆಬಾಳುವ ಸಂಪತ್ತಿಗೆ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀ ಕೃಷ್ಣದೇವರಾಯನೂ ಕೊಡುಗೆ ಸಲ್ಲಿಸಿದ್ದಾನೆ. ಕೃಷ್ಣದೇವರಾಯನ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಇಲ್ಲಿ ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ 'ದಿ ಹಿಂದೂ' ಪತ್ರಿಕೆ ಸೋಮವಾರ ವರದಿ ಮಾಡಿದೆ.

'ಶ್ರೀ ಕೃಷ್ಣದೇವರಾಯ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಪತ್ತೆಯಾಗಿವೆ. 29- 9-1109 ಎಂಬ ದಿನಾಂಕವಿರುವ ಕೆತ್ತನೆಯೂ ಲಭಿಸಿದೆ. ವಿಜಯನಗರ ಸಾಮ್ರಾಜ್ಯದ ಹಲವು ಆಭರಣಗಳು ಮುಖ್ಯಪ್ರಾಣ ದೇವ ಅನಂತಪದ್ಮನಾಭ ಸ್ವಾಮಿಯನ್ನು ಅಲಂಕರಿಸಿವೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ, ಶ್ರೀ ಕೃಷ್ಣದೇವರಾಯ ತನಗೆ ಆಪತ್ತು ಒದಗಿರುವುದನ್ನು ಅರಿತು ತನ್ನ ಸಾಮ್ರಾಜ್ಯದ ಸಂಪತ್ತನ್ನು ಅನೇಕ ಆನೆಗಳ ಮೇಲೆ ಸಾಗಿಸಿದನು ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ತನ್ನ ವಿಜಯನಗರ ಸಾಮ್ರಾಜ್ಯದ ಸಂಪತ್ತನ್ನು ಕೃಷ್ಣದೇವರಾಯನ ತಿರುಪತಿ ಬೆಟ್ಟಕ್ಕೂ ಸಾಗಿಸಿದ್ದ ಎಂದೂ ಅನೇಕ ಇತಿಹಾಸಕಾರರು ಈಗಾಗಲೇ ಅಭಿಪ್ರಾಯಪಟ್ಟಿರುವುದು ಇಲ್ಲಿ ದಾಖಲಾರ್ಹ

'ಅನಂತ' ನಿಧಿ: ಕರ್ನಾಟಕ ದೇಗುಲಗಳ ಮೇಲೂ ಬಿತ್ತು ಕಣ್ಣು!

vijaynagar kingdom
ಬೆಂಗಳೂರು, ಜುಲೈ 4: ಕೇರಳದ ಅನಂತ ಪದ್ಮನಾಭ ದೇವಸ್ಥಾನದ ಖಜಾನೆಯಲ್ಲಿ ಒಂದು ಲಕ್ಷ ಕೋಟಿ ಸಂಪತ್ತು ಸಿಕ್ಕಿರುವ ಬೆನ್ನಲ್ಲೇ ಕರ್ನಾಟಕದ ಪ್ರಾಚೀನ ದೇವಾಲಯಗಳಲ್ಲಿನ ನಿಧಿ ಸಂಪತ್ತು ಬಗ್ಗೆ ಜಿಜ್ಞಾಸೆ ಶುರುವಾಗಿದೆ. ಅದರಲ್ಲಿಯೂ ಹಂಪಿ ಸಾಮ್ರಾಜ್ಯ ಮತ್ತು ಅಲ್ಲಿನ ಪ್ರಾಚೀನ ದೇವಾಲಯಗಳ ಚಿನ್ನಾಭರಣ, ವಜ್ರ ವೈಢೂರ್ಯಗಳ ಬಗ್ಗೆ ಇತಿಹಾಸಕಾರರು ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ರಾಜಮನೆತನ ಹಂಪಿ ವಿಜಯನಗರ ಸಾಮ್ರಾಜ್ಯ. 13ನೇ ಶತಮಾನದಲ್ಲಿ ರಾಜರು ಕಟ್ಟಿಸಿದ ಅತ್ಯಂತ ಪ್ರಾಚೀನವಾದ ಬಹಳಷ್ಟು ದೇವಸ್ಥಾನಗಳು ಈಗಲೂ ಹಂಪಿಯಲ್ಲಿವೆ. ಅಲ್ಲದೆ ಕರ್ನಾಟಕದಲ್ಲಿ ರಾಜ ಮನೆತನದ ಆಳ್ವಿಕೆಯಲ್ಲಿ ಅತಿ ಹೆಚ್ಚು ದೇವಾಲಯಗಳು ಇದ್ದಿದ್ದು ಕೂಡ ಹಂಪಿಯಲ್ಲೇ.

ಶಾಸನಗಳ ಪ್ರಕಾರ ಹಂಪಿಯಲ್ಲಿ ಪ್ರಾಚೀನ ಕಾಲದ 70ಕ್ಕೂ ಅಧಿಕ ದೇವಸ್ಥಾನಗಳಿವೆ. ಆ ಎಲ್ಲಾ ದೇವಾಲಯಗಳಿಗೂ ರಾಜರು ದಾನ ರೂಪದಲ್ಲಿ ಚಿನ್ನದ ನಾಣ್ಯ, ವಜ್ರ, ವೈಢೂರ್ಯ ನೀಡುತ್ತಿದ್ದರು. ಆದರೆ ಈಗ ಹಂಪಿಯಲ್ಲಿ ನಾಲ್ಕೈದು ದೇವಾಲಯ ಹೊರತುಪಡಿಸಿದರೆ ಉಳಿದೆಲ್ಲವೂ ಪಾಳು ಬಿದ್ದಿವೆ. ಇವುಗಳ ಉತ್ಖನನ ನಡೆಸಿದರೆ ಪದ್ಮನಾಭ ದೇವಸ್ಥಾನದ ಹತ್ತು ಪಟ್ಟು ಸಂಪತ್ತು ಸಿಗಬಹುದು ಎನ್ನುವುದು ಇತಿಹಾಸಜ್ಞರ ಅಭಿಪ್ರಾಯ.

ತಿರುವಾಂಕೂರಿನ ರಾಜ ಮಾರ್ತಾಂಡ ವರ್ಮ ಕಟ್ಟಿಸಿದ್ದ ಸಣ್ಣ ಪದ್ಮನಾಭ ದೇವಸ್ಥಾನದಲ್ಲಿ ಟನ್‌ಗಟ್ಟಲೆ ಚಿನ್ನಾಭರಣ ಸಿಕ್ಕಿರಬೇಕಾದರೆ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರೀಮಂತ ರಾಜ ಮನೆತನಕ್ಕೆ ಸೇರಿದ ವಿರೂಪಾಕ್ಷ ದೇವಸ್ಥಾನದ ಸಂಪತ್ತು ಎಲ್ಲಿ ಹೋಗಿವೆ ಎನ್ನುವ ಪ್ರಶ್ನೆ ಸಹಜ.

ಇತಿಹಾಸಕಾರರು ಹಾಗೂ ಶಾಸನ ತಜ್ಞರು ಹೇಳುವ ಪ್ರಕಾರ ಹಂಪಿಯಲ್ಲಿ ಬಹಳಷ್ಟು ಕಡೆ ಅಪಾರ ಸಂಪತ್ತು ಸಂಗ್ರಹದ ನಿಧಿಗಳು ಇರುವುದು ಗ್ಯಾರಂಟಿ. ಅದರಲ್ಲಿಯೂ ವಿರೂಪಾಕ್ಷನ ಗುಡಿ, ಕಮಲಾಪುರದ ರಾಜರ ಅರಮನೆಯಾದ ಮಹಾನವಮಿ ದಿಬ್ಬ, ಅನೆಗೊಂದಿ ಆಂಜನೇಯ ಗುಡಿ, ಕೃಷ್ಣಸ್ವಾಮಿ ದೇವಸ್ಥಾನ, ತುಂಗಭದ್ರ ದಡದ ವಿಜಯ ವಿಠಲ ದೇವಸ್ಥಾನ, ಕಮಲಾಪುರದ ಪಟ್ಟಾಭಿರಾಮ ದೇವಸ್ಥಾನ, ಮಾತಂಗ ಪರ್ವತದ ಬುಡದಲ್ಲಿರುವ ಅಚ್ಚುತರಾಯ ದೇವಾಲಯ ಸುತ್ತಮುತ್ತ ಇಂಥ ಸಂಪತ್ತಿನ ನಿಧಿ ಇರುವುದು ಖಚಿತ. ಆದರೆ ಅವು ನಿರ್ಧಿಷ್ಟವಾಗಿ ಎಲ್ಲಿವೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಈ ಮಧ್ಯೆ ವಿಜಯನಗರ ಸಾಮ್ರಾಜ್ಯದ ಖಜಾನೆ ಎಲ್ಲಿದೆ ಎನ್ನುವುದು ಶಾಸನ, ದಾಖಲೆಗಳಲ್ಲಿಯೂ ಇಲ್ಲ. ಸುರಕ್ಷತೆ ದೃಷ್ಟಿಯಿಂದ ರಾಜರು ತಮ್ಮ ಖಜಾನೆಯನ್ನು ಬಹಳ ಗೌಪ್ಯವಾಗಿಟ್ಟಿದ್ದರು. ಆದರೆ ವಿಶಾಲ ಹಂಪಿಯಲ್ಲಿ ಖಜಾನೆ ಇತ್ತು ಮತ್ತು ಅದನ್ನು ಸಂಪೂರ್ಣವಾಗಿ ಬ್ರಿಟಿಷರಿಂದ ದೋಚಲು ಆಗಿರಲಿಲ್ಲ. ಹಾಗಾದರೆ ರಾಜರ ಖಜಾನೆ ಎಲ್ಲಿದೆ ಎನ್ನುವುದು ಕೂಡ ಬಿಲಿಯನ್‌ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

ವಿರೂಪಾಕ್ಷನ ದೇವಸ್ಥಾನದ ಭುವನೇಶ್ವರಿ ಗರ್ಭಗುಡಿ ಪೂರ್ವ ದಿಕ್ಕಿಗೆ ಸುಮಾರು 100 ಮೀಟರ್ ದೂರದಲ್ಲಿ ಅಪಾರ ಸಂಪತ್ತಿನ ಸಂಗ್ರಹ ಇದೆ ಎಂದು ಹೇಳಲಾಗುತ್ತಿದೆ. ಹಂಪಿ ಸುತ್ತಮುತ್ತ ಬಹಳಷ್ಟು ಕಡೆ ಸುವರ್ಣ ನಾಣ್ಯ ಹೂತಿಟ್ಟಿರುವ ಬಗ್ಗೆ ಶಾಸನಗಳು ಉಲ್ಲೇಖಿಸಿವೆ.

ಈ ಮಧ್ಯೆ, 'ಆದರೆ ಹಂಪಿಯಲ್ಲಿ ಇರಬಹುದಾದ ಸಂಪತ್ತು ಶೋಧನೆ ವೈಜ್ಞಾನಿಕವಾಗಿ ನಡೆಯಬೇಕು. ಶೋಧನೆಯಿಂದ ಯಾವುದೇ ಕಾರಣಕ್ಕೂ ಹಂಪಿ ಪರಂಪರೆ, ಸ್ಮಾರಕ ಅಥವಾ ಇತಿಹಾಸಕ್ಕೆ ಧಕ್ಕೆಯಾಗಬಾರದ್ದು' ಎಂದು ಡಾ. ಡಿ.ವಿ. ಪರಮಶಿವಮೂರ್ತಿ, ಹಂಪಿ ಕನ್ನಡ ವಿವಿ ಶಾಸನಶಾಸ್ತ್ರ ವಿಭಾಗ ಮುಖ್ಯಸ್ಥರು ಎಚ್ಚರಿಸಿದ್ದಾರೆ.

ಇತ್ತೀಚಿಗೆ ದ್ವನಿಸುರುಳಿ ಬಿಡುಗಡೆಯಾಗಿರುವ ಕನ್ನಡ ಸಿನಿಮಾಗಳ ಹೆಸರು ಹಾಗೂ wallpaper





ಎಂ.ಎಸ್. ಧೋನಿ ಭಾರತೀಯ ಸೇನೆಗೆ ಭರ್ತಿ

ಜಾರ್ಖಂಡ್‌, ಜೂನ್ 24: ಭಾರತೀಯ ಕ್ರಿಕೆಟ್ ಸೇನೆಯ ಸಾರಥ್ಯವನ್ನು ಯಶಸ್ವಿಯಾಗಿ ಹೆಗಲಮೇಲೆ ಹೊತ್ತು ಮೆರೆಯುತ್ತಿರುವ ತಂಡದ ನಾಯಕ ಎಂ. ಎಸ್. ಧೋನಿ ಅವರೀಗ ಸೇನಾ ದಂಡನಾಯಕರಾಗಿಯೂ ನೇಮಕಗೊಳ್ಳಲಿದ್ದಾರೆ. ವಿಶ್ವ್ ಕಪ್ ಅನ್ನು ಭಾರತದ ಮಾಡಿಲಿಗೆ ಹಾಕಿದ ಅಗ್ರಗಣ್ಯ ಆಟಗಾರ ಕಪಿಲ್ ದೇವ್ ಮತ್ತು ಮೊನ್ನೆಯ ವಿಶ್ವ್ ಕಪ್ ಗೆಲುವನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಪ್ರಚಂಡ ಆಟಗಾರ ಸಚಿನ್ ತೆಂಡೂಲ್ಕರ್ ಈ ಹಿಂದೆಯೇ ಸೇನೆಗೆ ಭರ್ತಿ ಆಗಿದ್ದಾರೆ.

ಭಾರತಕ್ಕೆ ಎರಡನೆಯ ಬಾರಿಗೆ ವಿಶ್ವ್ ಕಪ್ ಗೆದ್ದುಕೊಟ್ಟ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಲಿದ್ದಾರೆ. ಈ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ರಕ್ಷಣಾ ಇಲಾಖೆಗೆ ಗುರುವಾರ ಪತ್ರ ಬರೆದಿದ್ದಾರೆ. 2008ರಲ್ಲಿ ಕಪಿಲ್ ಗೆ ಪ್ರಾಂತೀಯ ಸೇನೆಯಲ್ಲಿ ಮತ್ತು 2010 ರಲ್ಲಿ ವಾಯುಪಡೆಯಲ್ಲಿ ಗೌರವ ಸ್ಥಾನ ಪಡೆದಿದ್ದಾರೆ.

ಅಳಿವಿನಂಚಿನಲ್ಲಿರುವ ಹುಲಿಗಳ ಉಳಿವಿಗಾಗಿ ಈಗಾಗಲೇ ಧೋನಿ ಜಾರ್ಖಂಡ್ ಮತ್ತು ಉತ್ತರಾಕಾಂಡ್ ನಲ್ಲಿ ರಾಯಭಾರಿಯಾಗಿದ್ದಾರೆ. ಈ ಮಧ್ಯೆ, ಬಿಹಾರ ಮತ್ತು ಜಾರ್ಖಂಡಿನಲ್ಲಿ ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಧೋನಿ ಅತ್ಯಧಿಕ ಆದಾಯ ತೆರಿಗೆ ಪಾವತಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಇಲಾಖೆ ಇನ್ನೂ ಹೆಚ್ಚಿಗೆ ಇದರ ಪ್ರಯೋಜನ ಪಡೆಯಲು ನಿರ್ಧರಿಸಿದ್ದು, ಧೋನಿ ಅವರನ್ನು ತೆರಿಗೆ ಪಾವತಿಗಾಗಿ ಇಲಾಖೆಯ ಪರವಾಗಿ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.

ಶಿವರಾಮ ಕಾರಂತರ ಕೋಟ ಮನೆ ಮೇಲೆ ಬುಲ್ಡೋಜರ್

 
K Shivaram Karanth
 
ಉಡುಪಿ ಜೂ 24: ’ಕಡಲ ತೀರದ ಭಾರ್ಗವ’ ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಸಾಹಿತಿ ಕೋಟ ಶಿವರಾಮ ಕಾರಂತರ ಕೋಟದಲ್ಲಿರುವ ಮೂಲ ಮನೆ ಬುಡಕ್ಕೆ ಸರ್ಕಾರ ಕೈ ಹಾಕಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಸದ್ಯದಲ್ಲೆ ಕಾರಂತರ ಮನೆ ನೆಲಸಮವಾಗಲಿದೆ.

ಕಾರಂತರ ಮನೆ ಸ್ಮಾರಕಕವಾಗಿ ಉಳಿಸಬೇಕೆಂದು ಸಾಹಿತಿಗಳು ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಶಿವರಾಮ ಕಾರಂತರ ಮನೆ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ.

ಈ ಗ್ರಾಮ ಪಂಚಾಯಿತಿ ಪ್ರತಿವರ್ಷ ಕಾರಂತರ ಸ್ಮರಣಾರ್ಥ ಕಾರಂತರ ಹುಟ್ಟೂರು ಪ್ರಶಸ್ತಿಯನ್ನು ಸಾಹಿತಿಗಳಿಗೆ, ಸಾಧಕರಿಗೆ ನೀಡುತ್ತಿದೆ. ಈಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಕಾರಂತರ ಮನೆ ಧರೆಗುರುಳಲಿದ್ದು, ಕಾಮಗಾರಿಯ ನೀಲನಕ್ಷೆ ಬದಲಾಯಿಸಿ ಕಾರಂತರ ಮನೆ ಹುಟ್ಟೂರು ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ಪ್ರೊ ಕೆ ಆರ್ ಹಂದೆಯ ಅಭಿಪ್ರಾಯಪಟ್ಟಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಏಳು ಮಂದಿ ಕನ್ನಡ ಸಾಹಿತಿಗಳಲ್ಲಿ ಶಿವರಾಮ ಇವರ ಮನೆ ‘ಸುಹಾಸ್’ ಈಗ ಕಾಲಗರ್ಭಕ್ಕೆ ಸೇರಲಿದೆ. ಕಾರಂತರ ಪುತ್ತೂರಿನ ಮನೆಯಾದ ‘ಹರ್ಷ’ ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ. ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯ

First portable computer

Pictured here is one of the first "portable" computers. It could be considered the first laptop.
This is the Osborne 1, which came out in 1981.
The computer cost $1,800, weighed 25 pounds, and had a 5 inch screen.