ಪುಟಗಳು

ಪತ್ರಿಕಾ ಪ್ರಕಟಣೆ: ವಿಶ್ವ ಕನ್ನಡ ಸಮ್ಮೇಳನ – ೨೦೧೧

ಕನ್ನಡಿಗರ ಸಡಗರದ ಅಭಿಮಾನ ವಿಶ್ವಕನ್ನಡ ಸಮ್ಮೇಳನ. ಸಕಲ ಹೃದಯಗಳ ಕೂಡಲಸಂಗಮ ; ಬುದ್ಧಿಭಾವಗಳ ಸಂಭ್ರಮ.
೨೦೧೧ರ ಮಾರ್ಚ್ ೧೧, ೧೨ ಮತ್ತು ೧೩ರಂದು ಏರ್ಪಡಿಸುವ ವಿಶ್ವಕನ್ನಡ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ವಿದ್ವಾಂಸರನ್ನು, ಚಿಂತಕರನ್ನು ಆಹ್ವಾನ ಮಾಡಿ ವಿಚಾರ ವಿನಿಮಯಕ್ಕೆ ಮತ್ತು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾವಿದರನ್ನು ಆಹ್ವಾನಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ೧೫ ವೇದಿಕೆಗಳಲ್ಲಿ ಏರ್ಪಡಿಸಲಾಗುತ್ತಿದೆ.
ಉದ್ಘಾಟನೆಯ ಸಮಾರಂಭದಂದು ಬೆಳಗಾವಿಯ ಶಾಲಾ/ಕಾಲೇಜುಗಳಿಂದ ೫೦೦ ಜನ ಬಾಲಕ/ಬಾಲಕಿಯರನ್ನು ನಾಡಗೀತೆಯ ಗಾಯನಕ್ಕೆ ಸಿದ್ಧಗೊಳಿಸಲಾಗಿದೆ.
ಕಾವ್ಯನೃತ್ಯಾಂಜಲಿ ಎಂಬ ಸಮೂಹ ನೃತ್ಯ ಕಾರ್ಯಕ್ರಮಕ್ಕಾಗಿ ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿಯಿಂದ ೧೨೦೦ ಜನ ವಿದ್ಯಾರ್ಥಿಗಳನ್ನು ಆಯ್ದು ಸಮೂಹನೃತ್ಯಕ್ಕೆ ಖ್ಯಾತ ಕಲಾವಿದೆ ಡಾ|| ಮಾಯಾರಾವ್ ಅವರ ನಿರ್ದೇಶನದಲ್ಲಿ ತರಬೇತಿ ನೀಡಲಾಗುತ್ತಿದೆ.
ರಾಜ್ಯದ ೧೩ ಜನಪದ ಕಲಾತಂಡಗಳನ್ನು ಆಯ್ದು ೧೦೦೧ ಜನಪದ ಕಲಾವಿದರಿಂದ ಜನಪದ ಕಲಾವೈಭವ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಾ. ಕದ್ರಿ ಗೋಪಾಲನಾಥ್, ಡಾ. ನರಸಿಂಹಲು ವಡವಾಟಿ ಅವರಿಂದ ಜುಗಲ್‌ಬಂದಿ ಕಾರ್ಯಕ್ರಮ ; ಶ್ರೀಮತಿ ಎಂ.ಎಸ್.ಶೀಲ ತಂಡದಿಂದ ಕರ್ನಾಟಕ ಸಂಗೀತ ; ಶ್ರೀಮತಿ ಸಂಗೀತ ಕಟ್ಟಿ,  ಶ್ರೀಮತಿ ಮೌನಾ ರಾಮಚಂದ್ರ,  ಶ್ರೀ ಪಂಡಿತ್ ಪರಮೇಶ್ವರ ಹೆಗಡೆ,  ಶ್ರೀ ಅಂಬಯ್ಯ ನುಲಿ,  ಶ್ರೀಮತಿ ಅನಿತಾ ಪಾಗದ್,  ಪಂ.ಎಂ.ವೆಂಕಟೇಶ್ ಕುಮಾರ್,  ಪಂ. ವಿನಾಯಕ ತೊರವಿ, ಪಂ.ರಾಜಪ್ರಭು ದೋತ್ರೆ, ಡಾ. ಹನುಮಣ್ಣ ನಾಯಕದೊರೆ, ಪಂ. ಅನಂತ ತೇರದಾಳ್, ಶ್ರೀಮತಿ ಶಕ್ತಿಪಾಟೀಲ್, ಶ್ರೀಮತಿ ಮಾನಸಿ ಪ್ರಸಾದ್, ಶ್ರೀ ರವೀಂದ್ರ ಹಂದಿಗನೂರು, ಶ್ರೀ ಡಿ.ಕುಮಾರದಾಸ್, ಶ್ರೀ ಕೈವಲ್ಯ ಕುಮಾರ್ ಗುರುವ, ಶ್ರೀಮತಿ ಶಾಂತಲಾ ವಟ್ಟಂ, ಶ್ರೀ ಎಂ.ಎಸ್.ಕಾಮತ್, ಮುಂತಾದ ಹಿರಿಯ ಕಲಾವಿದರಿಂದ ಶಾಸ್ತ್ರೀಯ ಸಂಗೀತ, ವಚನ ಮತ್ತು ದಾಸರಪದಗಾಯನ, ಗಜಲ್ ಕಾರ್ಯಕ್ರಮಗಳನ್ನು ವಿವಿಧ ವೇದಿಕೆಗಳಲ್ಲಿ ಏರ್ಪಡಿಸಲಾಗಿದೆ.
ಶ್ರೀಮತಿ ಬಿ.ಜಯಶ್ರೀ, ಶ್ರೀಮತಿ ಸುಭದ್ರಮ್ಮ ಮನ್ಸೂರ್, ಶ್ರೀ ಶಾಮಿತ್ ಸಾಹೇಬ್ ಲಾಟಿ ಮತ್ತು ತಂಡ, ಶ್ರೀ ಲಕ್ಷ್ಮಣದಾಸ್ ಮತ್ತು ತಂಡ, ಸಮುದಾಯ ತಂಡ, ಮುಂತಾದವರಿಂದ ರಂಗಗೀತೆಗಳು ;
ಡಾ. ಮಾಯಾರಾವ್ ತಂಡ, ಶ್ರೀಮತಿ ನಿರುಪಮ ರಾಜೇಂದ್ರ ತಂಡ, ಪ್ರಸಿದ್ಧ ಫೌಂಡೇಷನ್, ನವದೆಹಲಿ, ಪ್ರಭಾತ್ ಕಲಾವಿದರು, ಶ್ರೀಮತಿ ಶುಭಾ ಧನಂಜಯ ತಂಡ, ಮಂಗಳೂರಿನ ಸನಾತನ ನಾಟ್ಯಾಲಯ, ಶ್ರೀಮತಿ ಉಷಾದಾತಾರ್ ಅವರ ತಂಡ, ಶ್ರೀಮತಿ ಅನುರಾಧ ವಿಕ್ರಾಂತ್ ಅವರ ತಂಡ, ಶ್ರೀಮತಿ ಕೃಪಾ ಪಡಕೆ ಅವರ ತಂಡ, ಸಪ್ತಸ್ವರ ಆರ್ಟ್ ಅಂಡ್ ಕ್ರಿಯೇಷನ್ಸ್ ಅವರ ತಂಡ, ಭ್ರಮರಿ ಜ್ಯೋತಿ ಪಟ್ಟಭಿರಾಮನ್ ಅವರ ತಂಡ, ನೂಪುರ ಫೈನ್ ಆರ್ಟ್ಸ್ ತಂಡಗಳಿಂದ ನೃತ್ಯರೂಪಕಗಳನ್ನು ;
ಖ್ಯಾತ ಕಲಾವಿದರಾದ ವಿದ್ವಾನ್ ಅನೂರು ಅನಂತಕೃಷ್ಣಶರ್ಮ, ಮತ್ತು ಪಂ.ಪ್ರವೀಣ್ ಗೋಡ್ಕಿಂಡಿ ಅವರಿಂದ ಸ್ವರಲಯ ಸಮ್ಮೇಳನ ;
ಡಾ. ಸುಮಾ ಸುಧೀಂದ್ರ ಅವರಿಂದ ವಾದ್ಯಮೇಳ ;
ಶ್ರೀ ಶಿವಲಿಂಗಪ್ಪ ರಾಜಾಪೂರ ಹಾಗೂ ಇತರರಿಂದ ಬಾನ್ಸುರಿ ವಾದನ ;
ಮಂಗಳೂರು ಶ್ರೀಮತಿ ಲಾವಣ್ಯ ಮತ್ತು ಶ್ರೀಮತಿ ಸುಬ್ಬಲಕ್ಷ್ಮಿ ಅವರಿಂದ ಸ್ಯಾಕ್ಸೋಫೋನ್ ;
ಡಾ. ಸುಪರ್ಣ ರವಿಶಂಕರ್‌ತಂಡದಿಂದ ಪಂಚವಾದ್ಯಗಳ ನಾದಮೇಳ ;
ಶ್ರೀ ಪ್ರಕಾಶ್ ಸೊಂಟಕ್ಕಿ ಗಿಟಾರ್‌ವಾದನ ;
ಶ್ರೀ ಡಿ.ಎಸ್.ಚಾಳೇಕರ್ ಅವರಿಂದ ಪಂಚಸಿತಾರ್ ವಾದನ ;
ಶ್ರೀ ರಾಜಗೋಪಾಲ ಕಲ್ಲೂರಕರ ಮತ್ತು ಅವರ ತಂಡದಿಂದ ತಬಲ ತರಂಗ ;
ರಾಷ್ಟ್ರಮಟ್ಟದಿಂದ ಡಾ. ಬಾಲಮುರಳಿಕೃಷ್ಣ ಅವರಿಂದ ಕರ್ನಾಟಕ ಸಂಗೀತ ;
ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಗೀತಸೌರಭ ;
ಶ್ರೀ ಶಿವಮಣಿ ತಂಡದವರಿಂದ ವಾದ್ಯಲಹರಿ ;
ಶ್ರೀ ವಿಜಯಪ್ರಕಾಶ್ ತಂಡದವರಿಂದ ಸಂಗೀತ ಸಂಜೆ ;
ಒರಿಸ್ಸಾ ತಂಡದಿಂದ ಗೋಟಿ ಪೂವಾ ; ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ
ಶ್ರೀ ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಾರ್ಧನ, ಪಿಚ್ಚಳ್ಳಿ ಶ್ರೀನಿವಾಸ್, ಜೋಗಿಲ ಸಿದ್ಧರಾಜು, ಸಿ.ಎಂ.ನರಸಿಂಹಮೂರ್ತಿ, ಬಸವಲಿಂಗಯ್ಯ ಹಿರೇಮಠ್, ವೇಮಗಲ್ ನಾರಾಯಣಸ್ವಾಮಿ,  ರಾಮು ಮೂಲಗಿ, ತಂಬೂರಿ ರಾಜಮ್ಮ, ಮರಿಸಿದ್ದಮ್ಮ, ರಾಧಾಬಾಯಿ ಮಾದರ್, ಜಯಂತಿ ಶ್ರೀನಿವಾಸ್, ಮೈಸೂರು ಮಹಾದೇವಪ್ಪ, ವಿನುತಾ ಬೂದಾಳ್, ಕೆ.ಯುವರಾಜ್, ವೀರೇಶ್ ಬಳ್ಳಾರಿ, ಶ್ರೀ ಸೋಬಾನೆ ಕೃಷ್ಣೇಗೌಡ ಮಳವಳ್ಳಿ, ಮಹದೇವ್ ಯುಗಧರ್ಮ ರಾಮಣ್ಣ,  ಗಣಪಗೌಡ, ಮುಂತಾದ ಹಿರಿಯ/ಕಿರಿಯ ಕಲಾವಿದರಿಂದ ಜಾನಪದ ಗೀತೆಗಳ ಗಾಯನ ಹಾಗೂ ಜಾನಪದ ನೃತ್ಯ ವೈಭವ ;
ಡಾ.ಶಿವಮೊಗ್ಗ ಸುಬ್ಬಣ್ಣ, ಬಿ.ಕೆ.ಸುಮಿತ್ರ, ಈಶ್ವರಪ್ಪ ಮಿಣಜಿ, ವೈ.ಕೆ.ಮುದ್ದುಕೃಷ್ಣ, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ರಮೇಶ್ಚಂದ್ರ, ಮಾಲಾಶ್ರೀ ಕಣವಿ, ಪಿ.ಎ. ಮಂಗಳ, ದಿವ್ಯಾರಾಘವನ್, ಯಶವಂತ ಹಳಬಂಡಿ, ಫಲ್ಗುಣ, ಸಂಗೀತ ಕಾಖಂಡಕಿ, ಲತಾ ಜಹಾಗೀರ್‌ದಾರ್, ಉದಯ ಅಂಕೋಲ, ಹಿಂದೂ ವಿಶ್ವನಾಥ್, ಹೆಚ್.ಆರ್.ಲೀಲಾವತಿ, ಶಶಿಧರ್ ಕೋಟೆ, ರವಿಶಂಕರ್, ಚಂದ್ರಿಕಾ ಗುರುರಾಜ್, ಅರ್ಚನಾ ಉಡುಪ, ಜ್ಯೋತಿರವಿಪ್ರಕಾಶ್, ಕಸ್ತೂರಿ ಶಂಕರ್, ಉಪಾಸನ ಮೋಹನ್, ಕಿಕ್ಕೇರಿ ಕೃಷ್ಣಮೂರ್ತಿ, ಸ್ನೇಹ ಹಂಪಿಹೊಳಿ, ನಾಗಚಂದ್ರಿಕಾ ಭಟ್, ಪ್ರೇಮಲತಾ ದಿವಾಕರ, ಮೃತ್ಯುಂಜಯ ದೊಡ್ಡವಾಡಿ, ವಿ.ರಾಜು, ರಮಾ ಅರವಿಂದ್, ನಾರಾಯಣರಾವ್ ಮಾನೆ, ಅಲ್ಲದೆ ಯುವ ಪ್ರತಿಭೆಗಳಾದ ಸಿಂಚನಾ, ಆಕಾಂಕ್ಷ, ಎಂ.ಎಸ್.ಮೀನಾಕ್ಷಿ, ಸೂಗೂರೇಶ್ ಅಸ್ಕಿಹಾಳ, ಮುಂತಾದ ಯುವಪ್ರತಿಭೆಗಳನ್ನೊಳಗೊಂಡ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ;
ವಿಶೇಷ ಆಕರ್ಷಣೆಯಾಗಿ ಚಲನಚಿತ್ರ ಕಲಾವಿದರು ಹಾಗೂ ಕಿರುತೆರೆಯ ಕಲಾವಿದರು ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ ;
ಇದಲ್ಲದೆ ಕರ್ನಾಟಕ ಪ್ರಗತಿಯನ್ನು ಕುರಿತಂತೆ ವಿಶೇಷವಾಗಿ ಲೇಸರ್ ಶೋ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ;
ಮೂರು ವೇದಿಕೆಗಳಲ್ಲಿ ರಾಜ್ಯದ ಎಲ್ಲಾ ಕಡೆಯಿಂದ ೫೦ ನಾಟಕಗಳನ್ನು (ಹವ್ಯಾಸಿ, ವೃತ್ತಿ, ಯಕ್ಷಗಾನ, ಬಯಲಾಟ, ಪ್ರಸಂಗಗಳು ಸೇರಿ) ಏರ್ಪಡಿಸಲಾಗಿದೆ ; ಬೀದಿರಂಗ, ಯುವರಂಗ, ವೃತ್ತಿನಾಟಕದ ತುಣುಕುಗಳ ೧೫೦ ಪ್ರದರ್ಶನಗಳಿವೆ ;
ವಾಷಿಂಗ್ಟನ್ ಡಿ.ಸಿ.ಯ ಕಾವೇರಿ ಕನ್ನಡ ಸಂಘದವರು ಯಯಾತಿ ನಾಟಕವನ್ನು ;
ದುಬಾಯಿ ರಂಗಸಿರಿ ಅವರು ಒಡಕಲು ಬಿಂಬ ನಾಟಕವನ್ನು ;
ದೆಹಲಿ ಕನ್ನಡ ಸಂಘದವರು ನಾ ಸತ್ತಿಲ್ಲ ;
ಮುಂಬೈಯ ಕರ್ನಾಟಕ ಸಂಘ ಮತ್ತು ಮೈಸೂರು ಅಸೋಸಿಯೇಷನ್‌ರವರು ಸಾದರಪಡಿಸುವ ನಾಟಕಗಳನ್ನು ;
ಮುಂಬೈನಿಂದ ಒಂದು ಯಕ್ಷಗಾನ ತಂಡವು ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ಭಾಗವಹಿಸುತ್ತಿವೆ;
ಗೋಷ್ಠಿಗಳು
ಪ್ರೊ.ಕೆ.ಎಸ್.ನಿಸಾರ್‌ಅಹಮದ್ ಉದ್ಘಾಟಿಸಿ, ಡಾ. ಚನ್ನವೀರಕಣವಿಯವರ ಅಧ್ಯಕ್ಷತೆಯಲ್ಲಿ ೨೯ ಜನ ಕವಿಗಳನ್ನೊಳಗೊಂಡ ಸಿರಿಗನ್ನಡ, ಕವಿಗೋಷ್ಠಿಯು ; ಶ್ರೀ ಎಚ್.ಎಸ್.ಶಿವಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕನ್ನಡವು ಸೇರಿದಂತೆ ತೆಲುಗು, ಮರಾಠಿ, ತುಳು, ತಮಿಳು, ಕೊಂಕಣಿ, ಬ್ಯಾರಿ, ಉರ್ದು, ಹಿಂದಿ ಕವಿಗಳು ಭಾಗವಹಿಸುವ ಬಹುಭಾಷಾ ಕವಿಗೋಷ್ಠಿಯು ನಡೆಯಲಿದೆ ;
ಪ್ರೊ. ಅ.ರಾ.ಮಿತ್ರ ಅವರ ಅಧ್ಯಕ್ಷತೆಯಲ್ಲಿ ನಗುನಗುತಾ ಬಂದೇವಾ ಎಂಬ ಹಾಸ್ಯ ಗೋಷ್ಠಿಯನ್ನು ಏರ್ಪಡಿಸಲಾಗಿದೆ ;
ಸಾಂಸ್ಕೃತಿಕ ಕರ್ನಾಟಕ ; ಸಮಕಾಲೀನ ಜಗತ್ತು ಮತ್ತು ಮಹಿಳೆ ; ಹೊರನಾಡು ಮತ್ತು ಹೊರದೇಶದ ಕನ್ನಡಿಗರು ; ಗಡಿನಾಡ ಕನ್ನಡಿಗರು ; ಕನ್ನಡ ಆಡಳಿತ ಭಾಷೆ ; ಜಾಗತೀಕರಣ ಕರ್ನಾಟಕ ; ಜ್ಞಾನ ವಿಜ್ಞಾನ ತಂತ್ರಜ್ಞಾನ ಕರ್ನಾಟಕ ; ಕೃಷಿ ಸಾಧನೆ ಸವಾಲು ; ಸಮೂಹ ಮಾಧ್ಯಮ ಸಾಮಾಜಿಕ ಕಾಳಜಿ ; ಕನಸಿನ ಕರ್ನಾಟಕ ; ದೇಸಿ ಚಿಂತನೆ ; ದಲಿತ ಸಂಸ್ಕೃತಿ ಅನನ್ಯತೆ ; ಎಂಬ ಗೋಷ್ಠಿಗಳ ಜೊತೆಗೆ ಕನ್ನಡ ಪುಸ್ತಕೋದ್ಯಮ ; ಕನ್ನಡ ಚಿತ್ರೋದ್ಯಮ ಕುರಿತ ವಿಚಾರಸಂಕಿರಣಗಳು ಹಾಗೂ ಮಕ್ಕಳಿಗಾಗಿ ವಿಶೇಷವಾದ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ ;
ಈ ಗೋಷ್ಠಿಗಳಲ್ಲಿ ಸುಮಾರು ೩೩೧ಕ್ಕೂ ಹೆಚ್ಚು ವಿದ್ವಾಂಸರು, ಕವಿಗಳು, ಸಂಸ್ಕೃತಿ ಚಿಂತಕರು ಭಾಗವಹಿಸುತ್ತಿದ್ದಾರೆ.
ಇದಲ್ಲದೆ ೪೦೦ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ; ೧೫೦೦೦ ಅಮೂಲ್ಯ ಕನ್ನಡ ಗ್ರಂಥಗಳ ಪ್ರದರ್ಶನ ; ವಿವಿಧ ಇಲಾಖೆಗಳಿಂದ ಪ್ರಗತಿ ದರ್ಶನ ಮಳಿಗೆಗಳು ; ಶಿಲ್ಪಕಲೆ ; ಚಿತ್ರಕಲೆ ಕುರಿತ ಪ್ರಾತ್ಯಕ್ಷಿಕ ಶಿಬಿರಗಳು ; ರಂಗಭೂಮಿ ; ಕನ್ನಡ ಚಿತ್ರೋದ್ಯಮ ; ಜಾನಪದ ಕ್ಷೇತ್ರ ಕುರಿತಂತೆ ವಸ್ತುಪ್ರದರ್ಶನ ; ಅಪರೂಪದ ದಾಖಲೆಗಳು ; ಅಂಚೆಚೀಟಿ ಹಾಗೂ ನಾಣ್ಯಗಳ ಕುರಿತ ಪ್ರದರ್ಶನ ಏರ್ಪಡಿಸಲಾಗಿದೆ ;
ಒಟ್ಟಾರೆ ೫೫೦೦ ಜನ ಜನಪದ ಕಲಾವಿದರು, ಸಂಗೀತ ನೃತ್ಯ ಮುಂತಾದ ಕಲಾವಿದರು ಭಾಗವಹಿಸುತ್ತಿದ್ದಾರೆ.
ಕನ್ನಡತೇರು – ಮೆರವಣಿಗೆ
ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಪ್ರತಿಜಿಲ್ಲೆಯಿಂದ ವಿಶ್ವಕನ್ನಡ ತೇರು ಹೊರಟು ಬೆಳಗಾವಿಗೆ ಮಾರ್ಚ್ ೧೦ರಂದು ಸೇರಲಿವೆ. ೧೧ ರಂದು ಆಕರ್ಷಕವಾದ ಬೃಹತ್ ಮೆರವಣಿಗೆಯನ್ನು ಬೆಳಗಾವಿ ನಗರದಲ್ಲಿ ಏರ್ಪಡಿಸಲಾಗಿದೆ.
ಪುಸ್ತಕ ಬಿಡುಗಡೆ
ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ೧೦೧ ಕನ್ನಡ ಗ್ರಂಥಗಳು, ಸಂದರ್ಭ ಗ್ರಂಥ ಪುನರಾವಲೋಕನ ಹಾಗೂ ೩೬ ಜಾನಪದ ಯಕ್ಷಗಾನ ಗ್ರಂಥಗಳು ಬಿಡುಗಡೆಯಾಗಲಿವೆ.