ಪುಟಗಳು

'ಅನಂತ' ನಿಧಿ: ಕರ್ನಾಟಕ ದೇಗುಲಗಳ ಮೇಲೂ ಬಿತ್ತು ಕಣ್ಣು!

vijaynagar kingdom
ಬೆಂಗಳೂರು, ಜುಲೈ 4: ಕೇರಳದ ಅನಂತ ಪದ್ಮನಾಭ ದೇವಸ್ಥಾನದ ಖಜಾನೆಯಲ್ಲಿ ಒಂದು ಲಕ್ಷ ಕೋಟಿ ಸಂಪತ್ತು ಸಿಕ್ಕಿರುವ ಬೆನ್ನಲ್ಲೇ ಕರ್ನಾಟಕದ ಪ್ರಾಚೀನ ದೇವಾಲಯಗಳಲ್ಲಿನ ನಿಧಿ ಸಂಪತ್ತು ಬಗ್ಗೆ ಜಿಜ್ಞಾಸೆ ಶುರುವಾಗಿದೆ. ಅದರಲ್ಲಿಯೂ ಹಂಪಿ ಸಾಮ್ರಾಜ್ಯ ಮತ್ತು ಅಲ್ಲಿನ ಪ್ರಾಚೀನ ದೇವಾಲಯಗಳ ಚಿನ್ನಾಭರಣ, ವಜ್ರ ವೈಢೂರ್ಯಗಳ ಬಗ್ಗೆ ಇತಿಹಾಸಕಾರರು ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ರಾಜಮನೆತನ ಹಂಪಿ ವಿಜಯನಗರ ಸಾಮ್ರಾಜ್ಯ. 13ನೇ ಶತಮಾನದಲ್ಲಿ ರಾಜರು ಕಟ್ಟಿಸಿದ ಅತ್ಯಂತ ಪ್ರಾಚೀನವಾದ ಬಹಳಷ್ಟು ದೇವಸ್ಥಾನಗಳು ಈಗಲೂ ಹಂಪಿಯಲ್ಲಿವೆ. ಅಲ್ಲದೆ ಕರ್ನಾಟಕದಲ್ಲಿ ರಾಜ ಮನೆತನದ ಆಳ್ವಿಕೆಯಲ್ಲಿ ಅತಿ ಹೆಚ್ಚು ದೇವಾಲಯಗಳು ಇದ್ದಿದ್ದು ಕೂಡ ಹಂಪಿಯಲ್ಲೇ.

ಶಾಸನಗಳ ಪ್ರಕಾರ ಹಂಪಿಯಲ್ಲಿ ಪ್ರಾಚೀನ ಕಾಲದ 70ಕ್ಕೂ ಅಧಿಕ ದೇವಸ್ಥಾನಗಳಿವೆ. ಆ ಎಲ್ಲಾ ದೇವಾಲಯಗಳಿಗೂ ರಾಜರು ದಾನ ರೂಪದಲ್ಲಿ ಚಿನ್ನದ ನಾಣ್ಯ, ವಜ್ರ, ವೈಢೂರ್ಯ ನೀಡುತ್ತಿದ್ದರು. ಆದರೆ ಈಗ ಹಂಪಿಯಲ್ಲಿ ನಾಲ್ಕೈದು ದೇವಾಲಯ ಹೊರತುಪಡಿಸಿದರೆ ಉಳಿದೆಲ್ಲವೂ ಪಾಳು ಬಿದ್ದಿವೆ. ಇವುಗಳ ಉತ್ಖನನ ನಡೆಸಿದರೆ ಪದ್ಮನಾಭ ದೇವಸ್ಥಾನದ ಹತ್ತು ಪಟ್ಟು ಸಂಪತ್ತು ಸಿಗಬಹುದು ಎನ್ನುವುದು ಇತಿಹಾಸಜ್ಞರ ಅಭಿಪ್ರಾಯ.

ತಿರುವಾಂಕೂರಿನ ರಾಜ ಮಾರ್ತಾಂಡ ವರ್ಮ ಕಟ್ಟಿಸಿದ್ದ ಸಣ್ಣ ಪದ್ಮನಾಭ ದೇವಸ್ಥಾನದಲ್ಲಿ ಟನ್‌ಗಟ್ಟಲೆ ಚಿನ್ನಾಭರಣ ಸಿಕ್ಕಿರಬೇಕಾದರೆ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರೀಮಂತ ರಾಜ ಮನೆತನಕ್ಕೆ ಸೇರಿದ ವಿರೂಪಾಕ್ಷ ದೇವಸ್ಥಾನದ ಸಂಪತ್ತು ಎಲ್ಲಿ ಹೋಗಿವೆ ಎನ್ನುವ ಪ್ರಶ್ನೆ ಸಹಜ.

ಇತಿಹಾಸಕಾರರು ಹಾಗೂ ಶಾಸನ ತಜ್ಞರು ಹೇಳುವ ಪ್ರಕಾರ ಹಂಪಿಯಲ್ಲಿ ಬಹಳಷ್ಟು ಕಡೆ ಅಪಾರ ಸಂಪತ್ತು ಸಂಗ್ರಹದ ನಿಧಿಗಳು ಇರುವುದು ಗ್ಯಾರಂಟಿ. ಅದರಲ್ಲಿಯೂ ವಿರೂಪಾಕ್ಷನ ಗುಡಿ, ಕಮಲಾಪುರದ ರಾಜರ ಅರಮನೆಯಾದ ಮಹಾನವಮಿ ದಿಬ್ಬ, ಅನೆಗೊಂದಿ ಆಂಜನೇಯ ಗುಡಿ, ಕೃಷ್ಣಸ್ವಾಮಿ ದೇವಸ್ಥಾನ, ತುಂಗಭದ್ರ ದಡದ ವಿಜಯ ವಿಠಲ ದೇವಸ್ಥಾನ, ಕಮಲಾಪುರದ ಪಟ್ಟಾಭಿರಾಮ ದೇವಸ್ಥಾನ, ಮಾತಂಗ ಪರ್ವತದ ಬುಡದಲ್ಲಿರುವ ಅಚ್ಚುತರಾಯ ದೇವಾಲಯ ಸುತ್ತಮುತ್ತ ಇಂಥ ಸಂಪತ್ತಿನ ನಿಧಿ ಇರುವುದು ಖಚಿತ. ಆದರೆ ಅವು ನಿರ್ಧಿಷ್ಟವಾಗಿ ಎಲ್ಲಿವೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಈ ಮಧ್ಯೆ ವಿಜಯನಗರ ಸಾಮ್ರಾಜ್ಯದ ಖಜಾನೆ ಎಲ್ಲಿದೆ ಎನ್ನುವುದು ಶಾಸನ, ದಾಖಲೆಗಳಲ್ಲಿಯೂ ಇಲ್ಲ. ಸುರಕ್ಷತೆ ದೃಷ್ಟಿಯಿಂದ ರಾಜರು ತಮ್ಮ ಖಜಾನೆಯನ್ನು ಬಹಳ ಗೌಪ್ಯವಾಗಿಟ್ಟಿದ್ದರು. ಆದರೆ ವಿಶಾಲ ಹಂಪಿಯಲ್ಲಿ ಖಜಾನೆ ಇತ್ತು ಮತ್ತು ಅದನ್ನು ಸಂಪೂರ್ಣವಾಗಿ ಬ್ರಿಟಿಷರಿಂದ ದೋಚಲು ಆಗಿರಲಿಲ್ಲ. ಹಾಗಾದರೆ ರಾಜರ ಖಜಾನೆ ಎಲ್ಲಿದೆ ಎನ್ನುವುದು ಕೂಡ ಬಿಲಿಯನ್‌ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

ವಿರೂಪಾಕ್ಷನ ದೇವಸ್ಥಾನದ ಭುವನೇಶ್ವರಿ ಗರ್ಭಗುಡಿ ಪೂರ್ವ ದಿಕ್ಕಿಗೆ ಸುಮಾರು 100 ಮೀಟರ್ ದೂರದಲ್ಲಿ ಅಪಾರ ಸಂಪತ್ತಿನ ಸಂಗ್ರಹ ಇದೆ ಎಂದು ಹೇಳಲಾಗುತ್ತಿದೆ. ಹಂಪಿ ಸುತ್ತಮುತ್ತ ಬಹಳಷ್ಟು ಕಡೆ ಸುವರ್ಣ ನಾಣ್ಯ ಹೂತಿಟ್ಟಿರುವ ಬಗ್ಗೆ ಶಾಸನಗಳು ಉಲ್ಲೇಖಿಸಿವೆ.

ಈ ಮಧ್ಯೆ, 'ಆದರೆ ಹಂಪಿಯಲ್ಲಿ ಇರಬಹುದಾದ ಸಂಪತ್ತು ಶೋಧನೆ ವೈಜ್ಞಾನಿಕವಾಗಿ ನಡೆಯಬೇಕು. ಶೋಧನೆಯಿಂದ ಯಾವುದೇ ಕಾರಣಕ್ಕೂ ಹಂಪಿ ಪರಂಪರೆ, ಸ್ಮಾರಕ ಅಥವಾ ಇತಿಹಾಸಕ್ಕೆ ಧಕ್ಕೆಯಾಗಬಾರದ್ದು' ಎಂದು ಡಾ. ಡಿ.ವಿ. ಪರಮಶಿವಮೂರ್ತಿ, ಹಂಪಿ ಕನ್ನಡ ವಿವಿ ಶಾಸನಶಾಸ್ತ್ರ ವಿಭಾಗ ಮುಖ್ಯಸ್ಥರು ಎಚ್ಚರಿಸಿದ್ದಾರೆ.

ಇತ್ತೀಚಿಗೆ ದ್ವನಿಸುರುಳಿ ಬಿಡುಗಡೆಯಾಗಿರುವ ಕನ್ನಡ ಸಿನಿಮಾಗಳ ಹೆಸರು ಹಾಗೂ wallpaper





ಎಂ.ಎಸ್. ಧೋನಿ ಭಾರತೀಯ ಸೇನೆಗೆ ಭರ್ತಿ

ಜಾರ್ಖಂಡ್‌, ಜೂನ್ 24: ಭಾರತೀಯ ಕ್ರಿಕೆಟ್ ಸೇನೆಯ ಸಾರಥ್ಯವನ್ನು ಯಶಸ್ವಿಯಾಗಿ ಹೆಗಲಮೇಲೆ ಹೊತ್ತು ಮೆರೆಯುತ್ತಿರುವ ತಂಡದ ನಾಯಕ ಎಂ. ಎಸ್. ಧೋನಿ ಅವರೀಗ ಸೇನಾ ದಂಡನಾಯಕರಾಗಿಯೂ ನೇಮಕಗೊಳ್ಳಲಿದ್ದಾರೆ. ವಿಶ್ವ್ ಕಪ್ ಅನ್ನು ಭಾರತದ ಮಾಡಿಲಿಗೆ ಹಾಕಿದ ಅಗ್ರಗಣ್ಯ ಆಟಗಾರ ಕಪಿಲ್ ದೇವ್ ಮತ್ತು ಮೊನ್ನೆಯ ವಿಶ್ವ್ ಕಪ್ ಗೆಲುವನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಪ್ರಚಂಡ ಆಟಗಾರ ಸಚಿನ್ ತೆಂಡೂಲ್ಕರ್ ಈ ಹಿಂದೆಯೇ ಸೇನೆಗೆ ಭರ್ತಿ ಆಗಿದ್ದಾರೆ.

ಭಾರತಕ್ಕೆ ಎರಡನೆಯ ಬಾರಿಗೆ ವಿಶ್ವ್ ಕಪ್ ಗೆದ್ದುಕೊಟ್ಟ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಲಿದ್ದಾರೆ. ಈ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ರಕ್ಷಣಾ ಇಲಾಖೆಗೆ ಗುರುವಾರ ಪತ್ರ ಬರೆದಿದ್ದಾರೆ. 2008ರಲ್ಲಿ ಕಪಿಲ್ ಗೆ ಪ್ರಾಂತೀಯ ಸೇನೆಯಲ್ಲಿ ಮತ್ತು 2010 ರಲ್ಲಿ ವಾಯುಪಡೆಯಲ್ಲಿ ಗೌರವ ಸ್ಥಾನ ಪಡೆದಿದ್ದಾರೆ.

ಅಳಿವಿನಂಚಿನಲ್ಲಿರುವ ಹುಲಿಗಳ ಉಳಿವಿಗಾಗಿ ಈಗಾಗಲೇ ಧೋನಿ ಜಾರ್ಖಂಡ್ ಮತ್ತು ಉತ್ತರಾಕಾಂಡ್ ನಲ್ಲಿ ರಾಯಭಾರಿಯಾಗಿದ್ದಾರೆ. ಈ ಮಧ್ಯೆ, ಬಿಹಾರ ಮತ್ತು ಜಾರ್ಖಂಡಿನಲ್ಲಿ ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಧೋನಿ ಅತ್ಯಧಿಕ ಆದಾಯ ತೆರಿಗೆ ಪಾವತಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಇಲಾಖೆ ಇನ್ನೂ ಹೆಚ್ಚಿಗೆ ಇದರ ಪ್ರಯೋಜನ ಪಡೆಯಲು ನಿರ್ಧರಿಸಿದ್ದು, ಧೋನಿ ಅವರನ್ನು ತೆರಿಗೆ ಪಾವತಿಗಾಗಿ ಇಲಾಖೆಯ ಪರವಾಗಿ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.

ಶಿವರಾಮ ಕಾರಂತರ ಕೋಟ ಮನೆ ಮೇಲೆ ಬುಲ್ಡೋಜರ್

 
K Shivaram Karanth
 
ಉಡುಪಿ ಜೂ 24: ’ಕಡಲ ತೀರದ ಭಾರ್ಗವ’ ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಸಾಹಿತಿ ಕೋಟ ಶಿವರಾಮ ಕಾರಂತರ ಕೋಟದಲ್ಲಿರುವ ಮೂಲ ಮನೆ ಬುಡಕ್ಕೆ ಸರ್ಕಾರ ಕೈ ಹಾಕಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಸದ್ಯದಲ್ಲೆ ಕಾರಂತರ ಮನೆ ನೆಲಸಮವಾಗಲಿದೆ.

ಕಾರಂತರ ಮನೆ ಸ್ಮಾರಕಕವಾಗಿ ಉಳಿಸಬೇಕೆಂದು ಸಾಹಿತಿಗಳು ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಶಿವರಾಮ ಕಾರಂತರ ಮನೆ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ.

ಈ ಗ್ರಾಮ ಪಂಚಾಯಿತಿ ಪ್ರತಿವರ್ಷ ಕಾರಂತರ ಸ್ಮರಣಾರ್ಥ ಕಾರಂತರ ಹುಟ್ಟೂರು ಪ್ರಶಸ್ತಿಯನ್ನು ಸಾಹಿತಿಗಳಿಗೆ, ಸಾಧಕರಿಗೆ ನೀಡುತ್ತಿದೆ. ಈಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಕಾರಂತರ ಮನೆ ಧರೆಗುರುಳಲಿದ್ದು, ಕಾಮಗಾರಿಯ ನೀಲನಕ್ಷೆ ಬದಲಾಯಿಸಿ ಕಾರಂತರ ಮನೆ ಹುಟ್ಟೂರು ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ಪ್ರೊ ಕೆ ಆರ್ ಹಂದೆಯ ಅಭಿಪ್ರಾಯಪಟ್ಟಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಏಳು ಮಂದಿ ಕನ್ನಡ ಸಾಹಿತಿಗಳಲ್ಲಿ ಶಿವರಾಮ ಇವರ ಮನೆ ‘ಸುಹಾಸ್’ ಈಗ ಕಾಲಗರ್ಭಕ್ಕೆ ಸೇರಲಿದೆ. ಕಾರಂತರ ಪುತ್ತೂರಿನ ಮನೆಯಾದ ‘ಹರ್ಷ’ ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ. ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯ

First portable computer

Pictured here is one of the first "portable" computers. It could be considered the first laptop.
This is the Osborne 1, which came out in 1981.
The computer cost $1,800, weighed 25 pounds, and had a 5 inch screen.

ದಶಮಾನೋತ್ಸವ ಸಂಭ್ರಮದಲ್ಲಿ ಕರವೇ ಕಾರ್ಯಕರ್ತರು



karave
ಬೆಂಗಳೂರು, ಜೂನ್ 21: ಹತ್ತು ವರ್ಷಗಳ ಹಿಂದೆ ನಡೆದ ಕಾವೇರಿ ನದಿ ನೀರು ಹೋರಾಟದ ಫಲವಾಗಿ ಮೊಳಕೆಯೊಡೆದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಇಂದು ರಾಜ್ಯಾದ್ಯಂತ ಟಿಸಿಲೊಡೆದು ಹೆಮ್ಮರವಾಗಿ ಬೆಳೆಯುತ್ತಿದೆ.

ಹತ್ತು ವರ್ಷಗಳ ಸಾರ್ಥಕ ಪಯಣದಲ್ಲಿ ಕರವೇ ಅನುಭವ, ಹೋರಾಟಗಳು, ಯಶಸ್ಸುಗಳು - ಈ ಎಲ್ಲವನ್ನೂ ದಶಮಾನೋತ್ಸವದ ಒಂದು ಸಂಭ್ರಮ ಜಾತ್ರೆಯಲ್ಲಿ ಹಂಚಿಕೊಳ್ಳುವ ಸಮಯ ಹತ್ತಿರವಾಗಿದೆ.

ಜೂನ್ 22 ಮತ್ತು 23 ರಂದು ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ (ಗಾಯತ್ರಿ ವಿಹಾರ) ದಶಮಾನೋತ್ಸವ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಉತ್ಸವದಲ್ಲಿ ಸಮಸ್ತ ಕನ್ನಡಿಗರು ಪಾಲ್ಗೊಂಡು, ಕರ್ನಾಟಕದ ಜಾನಪದ ಸೊಗಡನ್ನು ಸವಿಯಬಹುದಾಗಿದೆ.

ಕಾರ್ಯಕ್ರಮದ ವಿವರಗಳು: ಬುಧವಾರ ಸಂಜೆ 5 ಗಂಟೆಗೆ ಜಾನಪದ ಜಾತ್ರೆ ಉದ್ಘಾಟನೆ. ಗುರುವಾರ ಬೆಳಗ್ಗೆ 11ಗಂಟೆಗೆ ರಾಷ್ಟ್ರೀಯ ವಿಚಾರ ಸಂಕಿರಣ. ಗುರುವಾರ ಸಂಜೆ 5.30ಕ್ಕೆ ಸಮಾರೋಪ ಸಮಾರಂಭ.

ಕರವೇ ವಿಳಾಸ:
ಕರ್ನಾಟಕ ರಕ್ಷಣಾ ವೇದಿಕೆ, ನಂ 29, ಪ್ರವೀಣ್ ಕಟ್ಟಡ, 5ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು.
ದೂರವಾಣಿ: 080-2237 0032.

ಹೆಣ್ಣು ಹೆಣ್ಣು ಮದುವೆಗೆ ಸಾಕ್ಷಿಯಾದ ನೇಪಾಳ

ಕಠ್ಮಂಡು ಜೂ 21: ಅಮೆರಿಕ ಮೂಲದ ಸಲಿಂಗ ಜೋಡಿಯೊಂದು ಇಲ್ಲಿನ ಪ್ರಸಿದ್ಧ ದಕ್ಷಿಣಕಾಳಿ ದೇವಸ್ಥಾನದಲ್ಲಿ ಹಿಂದೂ ವೈದಿಕ ಸಂಪ್ರದಾಯದಂತೆ ಹಸೆಮಣೆ ಏರಿದ ಘಟನೆ ಸೋಮವಾರ ನಡೆದಿದೆ. ಸಾರ್ವಜನಿಕವಾಗಿ ಲೆಸ್ಬಿಯನ್ ಗಳ ಮದುವೆ ನೇಪಾಳದಲ್ಲಿ ನಡೆದಿದ್ದು ಇದೆ ಮೊದಲು. ಬ್ಲ್ಯೂಡೈಮಂಡ್ ಸೊಸೈಟಿ ಹಾಗೂ ಪಿಂಕ್ ಮೌಂಟೇನ್ ಟ್ರಾವೆಲ್ಸ್ ಜಂಟಿಯಾಗಿ ಆಯೋಜಿಸಿದ್ದ ಈ ವಿವಾಹ ಯಶಸ್ವಿಯಾಗಿ ನೆರವೇರಿತು. 48 ವರ್ಷದ ವಕೀಲೆಯಾಗಿರುವ ಸಾರಾ ವೆಲ್ಟನ್ ಹಾಗೂ ಕೊಲೊರೋಡೋದ ಮನಃಶಾಸ್ತ್ರಜ್ಞ 41 ವರ್ಷದ ಕರ್ಟ್ನಿ ಮಿಚೆಲ್ ಮದುವೆಯಾದ ಹೆಣ್ಣು ಸಲಿಂಗಿಗಳು.

ನನಗೆ ನೇಪಾಳ ಎಂದರೆ ಇಷ್ಟ. ಇಲ್ಲಿನ ಸಂಪ್ರದಾಯ, ಪದ್ಧತಿಗೆ ಮನಸೋತಿದ್ದೇನೆ ಹಾಗಾಗಿ ನಮ್ಮ ವಿವಾಹ ಇಲ್ಲಿ ನೇರವೇರಿತ್ತು ಸಂತಸದ ವಿಷ್ಯ ಎಂದು ಮಿಚೆಲ್ ಹೇಳುತ್ತಾರೆ. ಹಿಂದೂ ಪುರಾಣಗಳಲ್ಲಿ ಸಲಿಂಗ ಮದುವೆಗಳ ಉಲ್ಲೇಖ ಇದೆ ಎಂದು ಮಿಚೆಲ್ ಖುಷಿಯಾಗಿ ಹೇಳುತ್ತಾರೆ.

ಕಾನೂನಿನ ನೆರವು: ಐದು ವರ್ಷ ಹಳೆಯದಾದ ಇವರ ಸ್ನೇಹ ಮದುವೆಯಾಗಿ ತಿರುಗಿದೆ ಆದರೆ, ಇದಕ್ಕೆ ಮಾನ್ಯತೆ ಎಲ್ಲೆಡೆ ಸಿಗುವುದು ಕಷ್ಟ. ಹಾಗಾಗಿ ಅಮೆರಿಕದ ಲೊವಾ ಪ್ರದೇಶದ ಕಾನೂನಿನಲ್ಲಿ ಸಲಿಂಗಿಗಳ ಮದುವೆಗೆ ಮಾನ್ಯತೆಯಿದೆ. ಅಲ್ಲಿ ಮದುವೆ ನೋಂದಾಯಿಸಲು ಕರ್ಟ್ನಿ ಹಾಗೂ ಮಿಚೆಲ್ ನಿರ್ಧರಿಸಿದ್ದಾರೆ.

ವಿಶೇಷವೆಂದರೆ ನೇಪಾಳದಲ್ಲಿ ಈ ಮುಂಚೆ ಕೂಡಾ ಗೇಗಳ ಮದುವೆ ಜರುಗಿತ್ತು. ನೇಪಾಳದಲ್ಲಿ ನಡೆಯುತ್ತಿರುವ ಜನಗಣತಿಯಲ್ಲಿ ಗೇ ಹಾಗೂ ಲೆಸ್ಬಿಯನ್ ಗಳಿಗೆ ಪ್ರತ್ಯೇಕ ಕಾಲಂ ಕೂಡಾ ಇದೆ. ಆದರೆ, ಸಲಿಂಗಿಗಳ ಮದುವೆಗೆ ಕಾನೂನಿನಲ್ಲಿ ಮಾನ್ಯತೆ ಸಿಕ್ಕಿಲ್ಲ.

ಕನ್ನಡ ಅಂಕಿಗೆ ದಂಡ ಯಾವ ಸೀಮೆ ನ್ಯಾಯ?

-OÚ«Û%lOÚ ÑÚOÛ%ÁÚ¦M¥ÚÅæÞ OÚ«Ú„sÚ ÉÁæàÞƒ ¬Þ~ RMsÚ¬Þ¾Úß
¥æàsÚu…×ÛÙ®Úâ´ÁÚ:  ÈÛÔÚ«ÚVÚ×Ú ÈæßÞÅæ OÚ«Ú„sÚ @MPVÚ×ÚÆÇ ÈÛÔÚ«Ú «æàM¥Ú{ ÑÚMSæÀ¾Úß«Úß„ …ÁæÒ¥Ú§Áæ 300 ÁÚß ¥ÚMsÚ ÈÚÑÚàÆ ÈÚáÛsÚß~¡ÁÚßÈÚ ÑÛÂVæ @ƒOÛÂVÚ×Ú ¨æàÞÁÚzæ RMsÚ¬Þ¾Úß. B¥ÚOæQ ÑÚOÛ% OÚä®Û®æãÞÏ}Ú OÚ«Ú„sÚ @»ÈÚ䦪 ®ÛÃOÛÁÚ¥ÚM}ÚÔÚ ÑÚMÑæ¤VÚ×Ú ¥Ú¬¾æß~¡ ÔæàÞÁÛl ÈÚáÛsÚ†æÞOÚß. OÚàsÚÅæÞ ¥ÚMsÚ ÈÚÑÚàÆ OÚÃÈÚß ¬ÆÇÑÚ†æÞOÚß GM¥Úß BÆÇ«Ú ºÚßÈÚ«æÞËڇ OÚ«Ú„sÚ ÑÚMYÚ J}Û¡¿ßÒ¥æ.
ÑÚMYÚ¥Ú @¨Ú´ÀOÚÐ }Ú.«Ú.®ÚúÚߥæÞÈé, dà.20ÁÚM¥Úß OÚ«Ú„sÚ®ÚÃºÚ¥ÚÆÇ …M¥Ú ÈÚÁÚ¦ VÚÈÚß«Ú Ñæ×æ¦¥æ. OÚ«Ú„sÚ @MPVÚ×Ú«Úß„ ÈÛÔÚ«ÚVÚ×Ú ÈæßÞÅæ …Áæ¿ßÑÚßÈÚ OÚ«Ú„sÚ®æÃÞÈÚßOæQ «ÛM¦ ÔÛt¥Úß§ VæàÞOÛOé ^Ú×ÚÈÚØ. «ÚM}ÚÁÚ «Úsæ¥Ú C «æÄ¥Ú eÛVÚä~ ÔæàÞÁÛlVÚ×Ú @»ÈÚáÛ«Ú ÈÚß}Úß¡ ÑÛ‡»ÈÚáÛ«Ú¥Ú ÑÚMOæÞ}Ú B¥Úß. ÈæàÞmÛÁÚß ÈÛÔÚ«Ú Oۿߥæ 1989ÁÚ ®ÚÃOÛÁÚ ±ÚÄOÚ AMVÚÇ ºÛÎæ¾Úᒀ OÚsÛu¾Úß ÔÛVÚà †æÞP¥Ú§Áæ OÚ«Ú„sÚ¥ÚÄàÇ …ÁæÑÚ…ÔÚߥæM¥Úß ~ØÒ¥æ. A¥ÚÁæ CW«Ú ÑÛÂVæ @ƒOÛÂVÚ×Ú «æ®Ú ÔæàÁÚ ÁÛdÀ¥ÚÈÚÁÚß ÈÚß}Úß¡ @«ÚÀºÛÏOÚÁÚß ÁÛdÀ¥ÚÆÇ Ôæ_`ÁÚßÈÚâ´¥ÚÂM¥Ú @ÈÚÂVæ K¥ÚÄß }æàM¥ÚÁæ¾ÚáÛVÚß}Ú¡¥æ GM¥Úß ÔæÞØ OÚ«Ú„sÚ ÉÁæàÞƒVÚ×ÚM}æ ÈÚ~%ÑÚß~¡¥Û§Áæ GM¥Úß AÁæàÞ¯Ò¥Û§Áæ.
ÈÛÔÚ«ÚVÚ×Ú ¥ÛRÅÛ~ ®Úâ´ÑÚ¡OÚ¥ÚÆÇ GÄàÇ OÚ«Ú„sÚ @MPVÚ×Ú«Úß„ …Áæ¦ÁÚßÈÚâ´¦ÄÇ. }Ú®ÛÑÚzæ ÑÚM¥ÚºÚ%¥ÚÆÇ ÑÚM…M¨Ú®Úlo @ƒOÛÂVÚ×Úß ¥ÛRÅÛ~VÚ×Ú«Úß„ «æàÞsÚß}Û¡Áæ¾æßÞ ÔæàÁÚ}Úß @«ÚÀºÛÎæ¾Úß ÑÛÈÚ%d¬OÚÁÚ«Ú„ÄÇ. B¥ÚÁÚ …VæX OÚ«Ú„sÚ @»ÈÚ䦪 ®ÛÃOÛÁÚ OÚàsÚÅæÞ OÚÃÈÚß OæçVæà×ÚÙ†æÞOÚß. BÄÇÈÛ¥ÚÆÇ BÄÇ¥Ú DÑÛ…Â «ÚÈÚßVæÞOæ GM¥Úß OÚ«Ú„sÚ @MPVÚ×Ú …×ÚOæ ¬ÆÇÑÚßÈÚâ´¥ÚÂM¥Ú OÚ«Ú„sÚ¥Ú @»ÈÚ䦪Væ ÈÚáÛÁÚOÚÈÛW ®ÚÂyÉßÑÚÆ¥æ. ÔæàÞÁÛl @¬ÈÛ¾Úß%ÈÛVÚÆ¥æ GM¥Úß @ÈÚÁÚß G^Ú`ÂÒ¥Û§Áæ.
OÚ«Ú„sÚ ±ÚÄOÚ Èæç±ÚÄÀ: C ÈÚߨæ´À OÛ¾æß§ 24G @t¾Úᒀ ®Úè۫ÚÈÛW ®ÛÃ¥æÞÌOÚºÛÎæ OÚ«Ú„sÚ¥ÚÅæÇÞ eÛÕÁÛ}Úß, ÈÛ{dÀ ±ÚÄOÚVÚ×Úß, B¬„}ÚÁÚ ®ÚÃOÚlzæVÚ×Úß BÁÚ†æÞOæM¥Úß @ƒ¬¾ÚßÈÚßÉ¥æ. B¥Úß OÛÉß%OÚ BÅÛSæ¾Úß ÈÛÀ¯¡Væ …M¥Úß C ÈÚßàÄàOÚ ®Úãy% @«ÚÀºÛÎæ¾ÚßÅæÇÞ ®ÚÃOÚnÑÚßÈÚÈÚÂVæ @ƒOÛÂVÚ×Úß 500ÂM¥Ú 1 ÑÛÉÁÚ¥ÚÈÚÁæVæ ¥ÚMsÚ ÉƒÒ ÈÚß}Úß¡ «ÛÀ¾ÚáÛľÚßOÚàQ ¥ÚàÁÚß ÑÚÆÇÑÚ…ÔÚߥÛW¥æ. C …VæX ®ÛÃOÛÁÚ¥Ú ÕM¦«Ú @¨Ú´ÀOÚÐÁÛ¥Ú …ÁÚVÚàÁÚß ÁÛÈÚß^ÚM¥Úîڰ Ôæ_`«Ú AÑÚP¡ ÈÚÕÒ¥Ú§ÁÚß. É¥æÞÌ ÈÚß}Úß¡ In-¸n ÑÚMÑæ¤VÚ×ÚÄàÇ OÚ«Ú„sÚ¥Ú @«ÚßÎÛr«ÚOæQ J}Û¡¿ßÒ¥Ú§ÁÚß. B~¡Þ^æVæ ®ÛÃOÛÁÚ¥Ú @¨Ú´ÀOÚÐ ÈÚßßRÀÈÚßM~à ^ÚM¥Úßà @ÈÚÁÚß 10 ÑÛÉÁÚ¥ÚÈÚÁæVÚà ¥ÚMsÚ ÔÛOÚßÈÚ G^Ú`ÂOæ ¬Þt¥Ú§ÁÚß. A¥ÚÁæ ¾ÚáÛÈÚâ´¥æàÞ OÚM®Ú¬ }Úsæ¾ÚáÛeæk }ÚM¦}æM¥Úß ÔæÞØ OÛÉß%OÚ BÅÛSæ @ƒOÛÂVÚ×Úß ÈÚáè«ÚÈÚÕÒ¥Û§Áæ. ®ÛÃOÛÁÚ C …VæX G^æ`}Ú¡Áæ JØ}Úß GM¥Úß AVÚÃÕÒ¥Û§Áæ

KSTRC Paper Less Ticket

ಕೆಎಸ್ಆರ್ಟಿಸಿ ಪೇಪರ್ಲೆಸ್ ಟಿಕೆಟ್, ಎಸ್ಎಂಎಸ್ ತೋರಿಸಿ ಸಾಕುದೇಶದಲ್ಲಿ ಮೊತ್ತಮೊದಲ ಬಾರಿಗೆ ಪೇಪರ್ಲೆಸ್ ಟಿಕೆಟ್ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಪರಿಚಯಿಸಿದೆ. ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಪ್ರಿಂಟೌಟ್ ತೆಗಿಸುವ ಅಗತ್ಯನೂ ಇಲ್ಲ.

ಏನ್ರಿ ಇದು: ಇದು ಮೊಬೈಲ್ ಟಿಕೆಟ್. ಅಂದ್ರೆ ಕೆಎಸ್ಆರ್ಟಿಸಿ ಟಿಕೆಟ್ ಬುಕ್ಕಿಂಗ್ ಮಾಡಿದಾಗ ಪಡೆದ
ಎಸ್ಎಂಎಸ್ ಮತ್ತು ನಿಮ್ಮ ಗುರುತಿನ ಚೀಟಿಯನ್ನು ಬಸ್ ನಿರ್ವಾಹಕರಿಗೆ ತೋರಿಸಿದರೆ ಸಾಕು. ಪ್ರಿಂಟೌಟ್ ತೆಗೆದ ಟಿಕೆಟ್ ಬೇಕಿಲ್ಲ. ಪೇಪರ್ ಬಳಕೆಯಿಲ್ಲ. ಹೀಗಾಗಿ ಇದು ಪರಿಸರ ಸ್ನೇಹಿ ಟಿಕೆಟ್.

ಏನು ಮಾಡಬೇಕು?: ಕೆಎಸ್ಆರ್ಟಿಸಿ ವೆಬ್ಸೈಟ್(www.ksrtc.in) ನಲ್ಲಿ ಇ-ಟಿಕೆಟ್ ಬುಕ್ಕಿಂಗ್ ಮಾಡಬಹುದು. ಅದರಲ್ಲಿ ಮೊಬೈಲ್ ನಂಬರ್, ಜನ್ಮದಿನಾಂಕ ಮತ್ತು ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿ ನೀಡಬೇಕು. ಜಿಪಿಆರ್ಎಸ್ ಸೌಲಭ್ಯವಿರುವ ಮೊಬೈಲ್ ನಲ್ಲೂ ಟಿಕೆಟ್ ಬುಕ್ಕಿಂಗ್/ಕ್ಯಾನ್ಸಲ್ ಮಾಡಬಹುದು.

ಹೀಗೆ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ
ನಿಮ್ಮ ಮೊಬೈಲ್ ಗೆ ಸಂದೇಶವೊಂದು ಬರುತ್ತದೆ. ಅದರಲ್ಲಿ ಬಸ್ ನಂಬರ್, ಸೀಟ್ ನಂಬರ್, ಪ್ರಯಾಣದ ದಿನಾಂಕ, ತಲುಪಬೇಕಾದ ಸ್ಥಳ ಸೇರಿದಂತೆ ಅಗತ್ಯ ಮಾಹಿತಿಗಳೆಲ್ಲ ಇರುತ್ತದೆ. ಇದನ್ನೇ ಕಂಡೆಕ್ಟರ್ ಗೆ ತೋರಿಸಿದರೆ ಸಾಕು. [ಓದಿ: ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ ]

ಏನು ಲಾಭ: ಬಸ್ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಸೈಬರ್ ಕೆಫೆ ಇತ್ಯಾದಿ ಕಡೆ ಹೋಗಿ ಪ್ರಿಂಟೌಟ್ ತೆಗೆಸಬೇಕಾಗುತ್ತದೆ. ಆದರೆ ನೂತನ ಯೋಜನೆಯಲ್ಲಿ ಅಂತಹ ಕಷ್ಟವಿಲ್ಲ. ಪೇಪರ್ ಬಳಕೆಯಿಲ್ಲ. ಮರ ಕಡಿಯೋದು ಕಡಿಮೆಯಾಗುತ್ತದೆ. ಪರಿಸರ ಉಳಿಯುತ್ತದೆ. ಪ್ರಯಾಣಿಕನಿಗೆ ಹೆಚ್ಚಿನ ಕಿರಿಕಿರಿಯಿಲ್ಲ. ವಾಟ್ ಆನ್ ಐಡಿಯಾ