ಪುಟಗಳು

ಮಂಗಳವಾರ ಹೆಣ್ಣುಮಗುವನ್ನು ಬೀದಿಗೆಸೆದ ಮಹಾತಾಯಿ


ಯಾದಗಿರಿ, ಸೆ. 20 : ಮಂಗಳವಾರ ಹೆಣ್ಣುಮಕ್ಕಳಿಗೆ ಮಂಗಳಕರ ವಾರ ಅಂತಾರೆ. ಆದರೆ, ಮಂಗಳವಾರವೆ ಬೆಳಗಿನ ಜಾವ 6 ಗಂಟೆ ಸುಮಾರಿಗೆ ತಾಯಿಯೊಬ್ಬಳು 6 ತಿಂಗಳ ಹೆಣ್ಣುಮಗುವನ್ನು ಬೀದಿಗೆಸೆದು ಹೋದ ಅಮಾನವೀಯ ಮತ್ತು ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿತೆ.

ನಗರದ ಸಿಂಡಿಕೇಟ್ ಬ್ಯಾಂಕ್ ಎದುರು ಬೀದಿಯಲ್ಲಿ ಬಿದ್ದಿದ್ದ ಹಸುಗೂಸನ್ನು ಪ್ಲಾಸ್ಟಿಕ್ ಆಯುವವರು ನೋಡಿ ವಾಕಿಂಗ್ ಮಾಡುವವರಿಗೆ ತಿಳಿಸಿದ್ದಾರೆ. ಮಗು ಅಸುನೀಗಿತ್ತು, ಮೂಗಿನಲ್ಲಿ ಕಿವಿಯಲ್ಲಿ ರಕ್ತ ಬಂದಿತ್ತು. ಬೇಡದ ಮಗುವನ್ನು ಕೊಲೆ ಮಾಡಿ ಬಿಸಾಕಿರಬಹುದು ಎಂದು ಅನುಮಾನಿಸಲಾಗಿದೆ.

ನವಜಾತ ಶಿಶುವನ್ನು ಎಸೆದು ಹೋದ ಪ್ರಕರಣಗಳು ಯಾದಗಿರಿ ಜಗುಗುತ್ತಿದ್ದು, ಇದು 3ನೆಯ ಪ್ರಕರಣವಾಗಿದೆ. ಮಕ್ಕಳಿಲ್ಲದವರು ನಮ್ಮ ದೇಶದಲ್ಲಿ ಬಹಳಷ್ಟು ಜನರಿದ್ದಾರೆ. ಮಕ್ಕಳಿಗಾಗಿ ಕಂಡ ಕಂಡ ಕಲ್ಲು ದೇವರಿಗೆ ಕೈಮುಗಿಯುತ್ತಾರೆ. ಮಕ್ಕಳಿಲ್ಲದವರಿಗೆ ಇಂಥ ಮಕ್ಕಳನ್ನು ನೀಡಿದ್ದರೆ ತಾಯ ಮಡಿಲನ್ನು ತುಂಬಬಹುದಾಗಿತ್ತು. ಮಕ್ಕಳನ್ನು ಬೀದಿಗೆಸೆಯುವ ಇಂಥ ತಾಯಂದಿರಿಗೆ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.