ಪುಟಗಳು

ಆಧಾರ್ ಕಾರ್ಡಿಗಾಗಿ mad rush ಬೇಡ!

 
ಬೆಂಗಳೂರು, ಆಗಸ್ಟ್ 14 : ದೇಶ ವಾಸಿಗಳನ್ನೆಲ್ಲ ಏಕರೂಪದಲ್ಲಿ ಗುರುತಿಸುವ ಸಲುವಾಗಿ ಕೇಂದ್ರ ಸರಕಾರ ಕೊಡಮಾಡುತ್ತಿರುವ ಆಧಾರ್ ವಿಶಿಷ್ಟ ಗುರುತಿನ ಚೀಟಿಗಾಗಿ ಜನ ಎದ್ನೋ ಬಿದ್ನೋ ಎಂದು ಐಡಿ ಕಾರ್ಡ್ ವಿತರಿಸುವ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ ಇವತ್ತೇ ಇದನ್ನು ತೆಗೆದುಕೊಂಡರೆ ನಾಳೆನೇ ಅಷ್ಟೈಶ್ವರ್ಯ ಕುಲಾಯಿಸುತ್ತದೆ ಎಂದೇನೂ ಇಲ್ಲ.

ಸೋ, ಮ್ಯಾಡ್ ರಶ್ ಬೇಡ. ಸುಮ್ಮನೆ ಯುಐಡಿ ಕಾರ್ಡ್ ವಿತರಣೆ ಕೇಂದ್ರಗಳಿಗೆ ಹೋಗಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳಬೇಡಿ. ಏಕೆಂದರೆ ಈಗಿನ ರಷ್ ನೋಡಿದರೆ ಈ ಕಾರ್ಡ್ ಪಡೆಯುವುದು ಆಲ್ ಮೋಸ್ಟ್ ಒಂದು ದಿನದ ಪ್ರೋಗ್ರಾಂ ಆಗುತ್ತದೆ. ಆದ್ದರಿಂದ ಪುರುಸೊತ್ತಿದ್ದರೆ ಮಾತ್ರ ಅತ್ತ ಹೆಜ್ಜೆ ಹಾಕಿ. ಅಷ್ಟಕ್ಕೂ ಇವತ್ತಲ್ಲದಿದ್ದರೆ ನಾಳೆ ಪಡೆದರಾಯಿತು.

ಏಕೆಂದರೆ ಇದು ಕೇವಲ ಒಂದೆರಡು ವಾರದ ಯೋಜನೆ ಅಲ್ಲ. ಆದ್ದರಿಂದ ಇಂದೇ ಪಡೆಯೋಣ ಎಂಬ ಧಾವಂತ ಖಂಡಿತಾ ಬೇಡ. ಆಧಾರ್ ಕಾರ್ಡು ಪಡೆಯುವುದು ಒಳ್ಳೆಯದೇ. ಅದು ಕಡ್ಡಾಯವೂ ಆಗಲಿದೆ. ಆದರೆ ತಿಂಗಳು ಬಿಟ್ಟು ಪಡೆದರಾಯಿತು. urgent ಆಗಿರುವವರು ಹೋಗಿ ಕಾರ್ಡ್ ಪಡೆಯಲಿ. ನೀವು ನಿಧಾನಕ್ಕೆ ಹೋದರಾಯಿತು. ಏನಂತೀರಿ!?

ಅನಂತ ಪ್ರಶ್ನೆ: ಧರ್ಮ ಸಂಕಟದಲ್ಲಿ ಸುಪ್ರೀಂಕೋರ್ಟ್

padmanabha-wealth-ashtamangala-supreme-court
ತಿರುವನಂತಪುರ, ಆಗಸ್ಟ್ 14: ಅನಂತ ಸಂಪತ್ತು ಪ್ರಶ್ನೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿದೆ. ದೇಗುಲದ ನೆಲಮಾಳಿಗೆಯಲ್ಲಿನ ಅನಂತ ಸಂಪತ್ತಿನ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ತೀರ್ಪನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳುವುದೇ? ಎಂಬ ಪ್ರಶ್ನೆ ಕಾಡುತ್ತಿದೆ. ಅಷ್ಟಮಂಗಲ ಪ್ರಶ್ನೆ ಪ್ರಕಾರ ಸಂಪತ್ತು ಶೋಧದಿಂದ ದೇವರು ಮುನಿದಿದ್ದಾರೆ ಹಾಗೂ ಬಿ ಉಗ್ರಾಣನ್ನು ತೆರೆದರೆ ಭಾರೀ ಅವಘಡಗಳು ಸಂಭವಿಸಲಿವೆ.

ಆದರೆ ಈ ಎಚ್ಚರಿಕೆಯನ್ನು ನ್ಯಾಯಾಲಯ ಪರಿಗಣಿಸೀತೆ? ಪರಿಗಣಿಸಿದರೆ ನ್ಯಾಯಾಂಗಕ್ಕಿಂತ ಅಷ್ಟಮಂಗಲ ಪ್ರಶ್ನೆಯೇ ಮಿಗಿಲು ಎಂದಾಗುತ್ತದೆ. ಪರಿಗಣಿಸದೆ ಬಿ ಉಗ್ರಾಣವನ್ನು ತೆರೆಯಲು ಮುಂದಾದರೆ ದೇವರನ್ನು ಧಿಕ್ಕರಿಸಿ ಹೋದಂತಾಗುತ್ತದೆ. ಸೋ, ಹೇಗೆ ನೋಡಿದರೂ ನ್ಯಾಯಾಂಗದ ಪಾಲಿಗೆ ಇದು ಧರ್ಮ ಸಂಕಟದ ವಿಚಾರವಾಗಿ ಪರಿಣಮಿಸಲಿದೆ.

ಮೂರು ದಿನಗಳ ಕಾಲ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ನೆಲಮಾಳಿಗೆಯಲ್ಲಿರುವ ಸಂಪತ್ತು ಶೋಧಿಸಿರುವುದರಿಂದ ಅನಂತ ಪದ್ಮನಾಭ ಮುನಿದಿದ್ದಾನೆ. ಅಂತೆಯೇ ಅತ್ಯಂತ ಮುಖ್ಯವಾಗಿರುವ ಬಿ ಉಗ್ರಾಣವನ್ನು ತೆರೆದರೆ ಅದನ್ನು ತೆರೆದವರ ವಂಶ ನಾಶವಾಗುತ್ತದೆ ಹಾಗೂ ಇನ್ನಿತರ ಅವಘಡಗಳು ಸಂಭವಿಸುತ್ತವೆ. ಸಂಪತ್ತಿನ ಫೊಟೊ ತೆಗೆಯುವುದು ಮತ್ತು ವಿಡಿಯೋ ಶೂಟಿಂಗ್‌ ಮಾಡುವುದು ಕೂಡ ದೇವ ಸಮ್ಮತವಲ್ಲ ಎಂದು ಕಂಡು ಬಂದಿದೆ.

ಬಿ ಉಗ್ರಾಣದಲ್ಲಿ ಅನಂತ ಪದ್ಮನಾಭನ ಇನ್ನೊಂದು ಬೃಹತ್‌ ವಿಗ್ರಹವಿದೆ. ಅನಾದಿ ಕಾಲದಿಂದ ಈ ವಿಗ್ರಹವನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಸಾಕ್ಷಾತ್‌ ನರಸಿಂಹಸ್ವಾಮಿಯೇ ಈ ಉಗ್ರಾಣವನ್ನು ಕಾವಲು ಕಾಯುತ್ತಿದ್ದಾನೆ. ಅಲ್ಲದೆ ಭಯಂಕರ ಸರ್ಪಗಳ ಕಾವಲು ಈ ಉಗ್ರಾಣಕ್ಕಿದೆ. ದೇಗುಲದ ಚೈತನ್ಯವಿರುವುದು ಕೂಡ ಈ ಉಗ್ರಾಣದಲ್ಲಿ. ಜತೆಗೆ ಈಗ ಸಿಕ್ಕಿರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚು ಸಂಪತ್ತು ಬಿ ಉಗ್ರಾಣದಲ್ಲಿದೆ. ಆದರೆ ಇದನ್ನು ಯಾವ ಕಾರಣಕ್ಕೂ ತೆರೆದು ನೋಡಬಾರದು. ಹಾಗೇನಾದರೂ ತೆರೆದರೆ ನಾನಾ ರೀತಿಯ ಕೆಡುಕುಗಳು ತಲೆದೋರಲಿವೆ ಹಾಗೂ ಕ್ಷೇತ್ರಕ್ಕೂ ಧಕ್ಕೆಯಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಟ್ಟಿರುವ ದೈವಜ್ಞರು ಎಚ್ಚರಿಸಿದ್ದಾರೆ.