ಪುಟಗಳು

ಆರೋಗ್ಯದ ಐಶ್ವರ್ಯಕ್ಕೆ ಕಲ್ಲುಪ್ಪು ಸೇವಿಸಿ!

ಕಲ್ಲುಪ್ಪು ನೈಸರ್ಗಿಕವಾದ ಉಪ್ಪು. ಆದರೆ ಅಯೋಡಿನ್ ಭರಿತ ಉಪ್ಪನ್ನೇ ಸೇವಿಸಿ ಘೋಷಣೆಯ ಹೊಡೆತಕ್ಕೆ ಸಿಲುಕಿ ಕಲ್ಲುಪ್ಪು ಕಾಣೆಯಾಗಿದೆ. ಸಕ್ಕರೆಗಿಂತ ಕಲ್ಲು ಸಕ್ಕರೆ ಹೆಚ್ಚು ಆರೋಗ್ಯಕಾರಿಯಾಗಿರುವಂತೆ, ಪುಡಿ ಉಪ್ಪಿಗಿಂತ ಕಲ್ಲುಪ್ಪು ಉತ್ತಮವಾಗಿದೆ. ಇವತ್ತು ನಾವು ಕಲ್ಲುಪ್ಪಿನ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ.

ಕಲ್ಲುಪ್ಪಿನ ಪ್ರಯೋಜನಗಳು:

1. ಕಲ್ಲುಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಅಧಿಕವಾಗಿ ಇರುವುದರಿಂದ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಾಗುವಷ್ಟು ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ.

2. ಕಲ್ಲುಪ್ಪು ದೇಹದ ಅಂಗಗಳು ಚಟುವಟಿಕೆಯಿಂದ ಕಾರ್ಯನಿರ್ವಯಿಸುವಂತೆ ಮಾಡುತ್ತದೆ.

3. ಕಲ್ಲುಪ್ಪು ಸೇವಿಸಿದರೆ ದೇಹವು ನೀರನ್ನು ಹೀರಿಕೊಂಡು ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ.

4. ನಾನು ಉಸಿರಾಡುವ ಗಾಳಿಯಲ್ಲಿರುವ ಹಾನಿಕಾರಕ ಕಣಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

5. ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು ಅಡುಗೆಯಲ್ಲಿ ಕಲ್ಲುಪ್ಪು ಬಳಸುವುದು ಒಳ್ಳೆಯದು.

6. ಉಪ್ಪುನಲ್ಲಿರುವ ಖನಿಜಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

7. ಕಲ್ಲುಪ್ಪಿನಲ್ಲಿರುವ ಖನಿಜಾಂಶಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ದೇಹದ ದುರ್ವಾಸನೆಗೆ ನೈಸರ್ಗಿಕ ಪರಿಹಾರ

Home Remedies For Body Odor
ಚುಮುಚುಮು ಚಳಿ ಮುಗಿದು ಸೆಕೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಬೆವರಿನಿಂದಾಗಿ ದೇಹ ದುರ್ವಾಸನೆ ಬೀರುವುದು. ಈ ರೀತಿಯ ದೇಹದ ದುರ್ವಾಸನೆಯನ್ನು ಹೋಗಲಾಡಿಸಲು ಅನೇಕ ಸುಗಂಧ ದ್ರವ್ಯಗಳು ಲಭ್ಯವಿದೆ. ಆದರೆ ಅವುಗಳಲ್ಲಿ ಕೆಮಿಕಲ್ ಬಳಕೆ ಮಾಡಿರುವುದರಿಂದ ಕೆಲವರಿಗೆ ಪರ್ ಫ್ಯೂಮ್ ಹಾಕಿದರೆ ಅಲರ್ಜಿ ಉಂಟಾಗುತ್ತದೆ. ದೇಹದ ದುರ್ಗಂಧವನ್ನು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಹೋಗಲಾಡಿಸಬಹುದು. ಮನೆಯಲ್ಲಿಯೆ ತಯಾರಿಸಬಹುದಾದ ಸುಗಂಧ ದ್ರವ್ಯಗಳ ಪಟ್ಟಿ ಇಲ್ಲಿದೆ ನೋಡಿ.

1. ಗ್ಲಿಸರಿನ್ ಮತ್ತು ಮೂಲಂಗಿ: ಮೂಲಂಗಿಯನ್ನು ಜ್ಯೂಸ್ ಮಾಡಿ ಅದಕ್ಕೆ 1/2 ಚಮಚ ಗ್ಲಿಸರಿನ್ ಸೇರಿಸಿ. ಈ ಮಿಶ್ರಣವನ್ನು ಕಂಕುಳ, ಕುತ್ತಿಗೆ ಮತ್ತು ಪಾದಗಳಿಗೆ ಹಚ್ಚಿದರೆ ಬೆವರಿನ ದುರ್ಗಂಧ ಬರುವುದಿಲ್ಲ.

2. ಆಲ್ಕೋಹಾಲ್ ಮತ್ತು ವಿನಿಗರ್:
ಆಲ್ಕೋಹಾಲ್ ಮತ್ತು ವಿನಿಗರ್ ಅನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಮೈಗೆ ಹಚ್ಚಬಹುದು.

3. ಟೀ ಎಣ್ಣೆ ಮತ್ತು ರೀಸ್ ಮೆರಿ ಎಣ್ಣೆ:
ಟೀ ಮತ್ತು ರೋಸ್ ಮೆರಿ ಎಣ್ಣೆಯನ್ನು ಮಿಶ್ರ ಮಾಡಿ ಹಚ್ಚುವುದರಿಂದ ದೇಹದವನ್ನು ಸುವಾಸನೆ ಭರಿತವಾಗಿ ಇಡಬಹುದು.

4. ನಿಂಬೆ ಗಿಡದ ಎಲೆ:
ನಿಂಬೆ ಗಿಡದ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿದರೆ ದೇಹದಲ್ಲಿ ಬೆವರಿನ ವಾಸನೆ ತಡೆಯುವುದಷ್ಟೇ ಅಲ್ಲ ತ್ವಚೆಯನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

5. ಅಡುಗೆ ಸೋಡಾ ಮತ್ತು ನಿಂಬೆ ರಸ:
1 ಚಮಚ ಅಡುಗೆ ಸೋಡಾಕ್ಕೆ 1 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಬೆವರಿನ ಕೆಟ್ಟ ವಾಸನೆ ಇರುವುದಿಲ್ಲ. ಬೇಸಿಗೆಯಲ್ಲಿ ಈ ರೀತಿ ಮಾಡುವುದು ಅತ್ಯುತ್ತಮವಾದ ಪರಿಣಾಮವನ್ನು ಕಾಣಬಹುದು.
ಸಾಕಷ್ಟು ನೀರು ಕುಡಿಯುವ ಅಭ್ಯಾಸ ಒಳ್ಳೆಯದು.

ಮಸೂದೆಯಲ್ಲಿ ತಿದ್ದುಪಡಿ:ಗೋಹತ್ಯೆ ಬೇಡ,ಎಮ್ಮೆ ಹತ್ಯೆ ಓಕೆ

Ads by Google
Download Google Chrome 
Searching is fast and easy with Google's web browser.www.Google.com/Chrome
ತುಮಕೂರು, ಫೆ 21: ಗೋಹತ್ಯೆ ನಿಷೇಧ ಶಾಸನಕ್ಕೆ ರಾಷ್ಟ್ರ ಮಟ್ಟದಲ್ಲಿ ಕೆಲವೊಂದು ರಾಜಕೀಯ ಪಕ್ಷಗಳ ಪ್ರಬಲ ವಿರೋಧವಿದ್ದರೂ, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾಯಿದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪರೋಕ್ಷವಾಗಿ ಹಸಿರು ನಿಶಾನೆ ತೋರಿದ್ದಾರೆ. ಎಮ್ಮೆಯನ್ನು ಹೊರತು ಪಡಿಸಿ ವಿಧೇಯಕ ರೂಪಿಸಲು ರಾಷ್ಟ್ರಪತಿ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ರಾಷ್ಟ್ರಪತಿಗಳ ಸಲಹೆಯ ಮೇರೆಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುವುದು ಎಂದು ಸಿಎಂ ಸದಾನಂದ ಗೌಡ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಗೋಹತ್ಯೆ ನಿಷೇಧ ವಿಧೇಯಕ ರಾಷ್ಟ್ರಪತಿಗಳಿಂದ ರಾಜ್ಯಕ್ಕೆ ವಾಪಾಸ್ ಬಂದಿರುವುದು ನಿಜ. ಅವರ ಸಲಹೆ ಮೇರೆಗೆ ವಿಧೇಯಕದಲ್ಲಿ ತಿದ್ದುಪಡಿ ತಂದು ಈ ಬಜೆಟ್ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಸಿಎಂ ಸ್ಪಷ್ಟ ಪಡಿಸಿದ್ದಾರೆ.

ಕರ್ನಾಟಕ ವಿಧಾನಮಂಡಲದಲ್ಲಿ ಅಂಗೀಕಾರ ಗೊಂಡಿರುವ ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಎಮ್ಮೆ ಸೇರ್ಪಡೆಯಾಗಿದೆ. ಆದರೆ ಈ ವಿಧೇಯಕದಲ್ಲಿ ಉಲ್ಲೇಖವಾಗಿರುವ ಎಮ್ಮೆಯನ್ನು ಹೊರತುಪಡಿಸಿ ಈ ವಿಧೇಯಕ ತಿದ್ದುಪಡಿಯಾದರೆ ಒಳ್ಳೆಯದು ಎಂದು ಸಲಹೆ ನೀಡಿದ್ದೇವೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ.

ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಧೇಯಕವನ್ನು ಶಾಸನ ಸಭೆಯಲ್ಲಿ ಮಂಡಿಸಿದಾಗ ವಿಧೇಯಕದ ಪರವಾಗಿ ಕಾಂಗ್ರೆಸ್ ನ ಕೆಲ ಸದಸ್ಯರೂ ಸ್ವಾಗತಿಸಿದ್ದರು. ಹಿಂದೂಗಳಿಗೆ ಗೋಮಾತೆಯಾಗಿರುವ ಹಸುಗಳನ್ನು ಕೊಲ್ಲುವುದು ಪರಮಪಾಪ. ಹಸುಗಳನ್ನು ಕಾಪಾಡಲು ನಮ್ಮ ಸರಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ

ವೀರ್ಯ ದಾನಕ್ಕೆ ಸಜ್ಜಾದ ನಟ ಜಾನ್ ಅಬ್ರಹಾಂ

John Abraham
ಬಾಲಿವುಡ್ ಹ್ಯಾಂಡ್ ಸಮ್ ಬಾಯ್ ಜಾನ್ ಅಬ್ರಹಾಂ ವೀರ್ಯ ದಾನಕ್ಕೆ ಮುಂದಾಗಿದ್ದಾರೆ. ಯಾರಿಗೆ? ಯಾಕೆ, ಎಂದು ತಲೆಕೆಡಿಸಿಕೊಳ್ಳುವ ಮುನ್ನ ಮುಂದೆ ಓದಿ. ಅವರು 'ವೀರ್ಯ ದಾನದ ಕಥಾವಸ್ತುವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಅದು ಬಾಲಿವುಡ್ ಸಿನಿಮಾ ಎಂಬ ನಿಮ್ಮ ಊಹೆ ಖಂಡಿತ ನಿಜ. ಸಂತಾನ ಹೀನತೆ ಹಾಗೂ ವೀರ್ಯ ದಾನದ ಕಥೆಯನ್ನೊಳಗೊಂಡ ಈ ಚಿತ್ರಕ್ಕೆ 'ವಿಕ್ಕಿ ಡೋನರ್' ಎಂದು ಹೆಸರಿಟ್ಟಿದ್ದಾರೆ.

ಸದಾ ಪ್ರಯೋಗಾತ್ಮಕ್ಕೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ಜಾನ್, ಈ ಹಿಂದೆ ಅಭಿಷೇಕ್ ಬಚ್ಚನ್ ಜತೆ 'ದೋಸ್ತಾನಾ' ಚಿತ್ರದಲ್ಲಿ 'ಸಲಿಂಗ ಕಾಮಿ'ಯಾಗಿ ಕಾಣಿಸಿಕೊಂಡಿದ್ದರು. ಈಗ ಅವರ ನಿರ್ಮಾಣದ ಮೊದಲ ಸಿನಿಮಾವನ್ನು ಸಾಮಾಜಿಕ ಸಮಸ್ಯೆಯೊಂದರ ಸುತ್ತವೇ ಸುತ್ತಲಿದ್ದಾರೆ. ಸಂಕೀರ್ಣ ಹಾಗೂ ಸೂಕ್ಷ್ಮ ವಿಷಯಗಳೆಂದರೆ ಜಾನ್ ಗೆ ಇಷ್ಟ. ಅವರು ಸಿನಿಮಾಗಳು ಯಾವುದಾದರೊಂದು ವಿವಾದಾತ್ಮಕ ಕಥೆಯ ಸುತ್ತವೇ ಕೇಂದ್ರೀಕೃತವಾಗಿರುತ್ತವೆ.

ಜಾನ್ ನಿರ್ಮಾಣದ ಈ ಚಿತ್ರದಲ್ಲಿ ಅವರೇ ನಾಯಕರು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಹೊಸ ಹುಡುಗ ವಿ ಜೆ ಆಯುಷ್ಮಾನ್ ಖುರಾನಾ ಈ ಚಿತ್ರದ ಹೀರೋ ಆಗಿ ಆಯ್ಕೆಯಾಗಿದ್ದು, ವೀರ್ಯಾ ದಾನಿ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯಾಗಿ ಕಿರುತೆರೆಯ ನಟಿ ಯಾಮಿ ಗೌತಮ್ ಇದ್ದಾರೆ. ಚಿತ್ರದ ಉಳಿದ ಸಂಗತಿಗಳು ಸದ್ಯಕ್ಕೆ ಸಸ್ಪೆನ್ಸ್. (ಏಜೆನ್ಸೀಸ್)

ನೈಂಟಿ ಕುಡಿದು ಮಾತ್ರೆ ತಿಂದರೆ ಡೇಂಜರ್!!


Medicines
ಫ್ರೆಂಡ್ಸ್ ಜೊತೆ ಪಾರ್ಟಿಗೆ ಹೋಗುವಾಗ ಯಾವುದಾದರೂ ಕಾಯಿಲೆಗೆ ಮಾತ್ರೆ ತೆಗೆದುಕೊಂಡಿದ್ದರೂ ಸಹ ಮದ್ಯ ತೆಗೆದು ಕೊಳ್ಳುತ್ತಾರೆ. ಆದರೆ ಈ ರೀತಿ ಮದ್ಯ ಸೇವನೆ ಆ ಔಷಧಿಯೊಂದಿಗೆ ಬೆರೆತು ವಿಷವಾಗಿ ಪರಿಣಮಿಸುತ್ತದೆ.

ಅದರಲ್ಲೂ ಈ ಕೆಳಗಿನ ಸಂದರ್ಭದಲ್ಲಿ ಮದ್ಯ ಕುಡಿದರೆ ನಿಮ್ಮನ್ನು ನೀವೆ ಅಪಾಯಕ್ಕೆ ಒಡ್ಡಿದಂತಾಗುವುದು.

1. ಮಿತಿಮೀರಿ ಕುರುಕುಲು ತಿಂಡಿಗಳ ಸೇವನೆ ಹೊಟ್ಟೆಯಲ್ಲಿ ಜಂತು ಹುಳಗಳ ಚಟುವಟಿಕೆಗಳನ್ನು ಅಧಿಕ ಮಾಡುತ್ತವೆ, ಅವುಗಲ ನಿವಾರಣೆಗೆ ಔಷಧಿ ಸೇವಿಸುತ್ತಿದ್ದರೆ ಮದ್ಯ ಸೇವಿಸ ಬೇಡಿ.

2. ಹೊಟ್ಟೆ ನೋವುಗೆ ಔಷಧ ಸೇವಿಸುವಾಗ ಮದ್ಯ ಕುಡಿಯ ಬೇಡಿ. ಒಂದು ವೇಳೆ ಈ ಔಷಧಿಗಳು ಮದ್ಯದೊಂದಿಗೆ ಬೆರೆತು ಜೀವಕ್ಕೆ ಅಪಾಯ ತಂದೂಡ್ಡಬಹುದು.

3. ಒಂದು ವೇಳೆ ನೀವು ಯಾವುದಾದರೂ ಅಲರ್ಜಿಗೆ ಔಸಧಿ ಸೇವಿಸುತ್ತಿದ್ದರೆ ಮದ್ಯ ಸೇವಿಸಬೇಡಿ. ಅಲರ್ಜಿಯಿಂದ ಸೀನು, ನೆಗಡಿ ಉಂಟಾಗುತ್ತಿದ್ದು ಅದಕ್ಕೆ ನೀವು ಔಷಧಿ ತೆಗೆದು ಕೊಳ್ಳುವ ಸಮಯದಲ್ಲಿ ಮದ್ಯ ಸೇವಿಸಿದರೆ ಆ ಖಾಯಿಲೆಗಳು ಮತ್ತಷ್ಟು ಉಲ್ಬಣಗೊಳ್ಳುವುದು.

4,ಕುಡಿತದ ಚಟ ಬಿಡಲು ಔಷಧಿ ಸೇವಿಸುತ್ತಿದ್ದ ಸಂದರ್ಭದಲ್ಲಿ ಮದ್ಯಪಾನ ಮಾಡಿದರೆ ವ್ಯತಿರಿಕ್ತ ಪರಿಣಾಮ ಎದುರಿಸ ಬೇಕಾಗುತ್ತದೆ. ಮದ್ಯ ಈ ರೀತಿಯ ಔಷಧಿಯೊಂದಿಗೆ ದೇಹದಲ್ಲಿ ಬೆರೆತು ವಿಷವಾಗಿ ಪರಿಣಮಿಸುತ್ತದೆ.

ಹಿತಮಿತವಾದ ಸುರಾಪಾನ ಹೆಚ್ಚಿಸುವುದು ಆರೋಗ್ಯ


Healthy Alcoholic Drinks

ಮದ್ಯ ಆರೋಗ್ಯಕ್ಕೆ ಹಾನಿಕಾರಕ. ಮದ್ಯ ಸೇವಿಸಿದರೆ ಕಿಡ್ನಿ, ಜಠರ, ಕರಳುಗಳು ಹಾನಿಯಾಗಿ ಮನುಷ್ಯ ಬೇಗನೆ ಸಾವನ್ನಪ್ಪುತ್ತಾನೆ. ಇವೆಲ್ಲಕ್ಕಿಂತ ಕುಡಿದು ರಸ್ತೆಯಲ್ಲಿ ತೂರಾಡುವವರಿಗೆ ಅಥವಾ ಮನೆಯಲ್ಲಿ ರಂಪ ಮಾಡುವವರಿಗೆ ಯಾರೂ ಗೌರವ ಕೊಡುವುದಿಲ್ಲ. ಇಷ್ಟೆಲ್ಲ ಕೆಟ್ಟದು ಮಾಡುವ ಮದ್ಯ ಆರೋಗ್ಯಕ್ಕೆ ಒಳ್ಳೆಯದು! ಇದು ದೇಹದ ತೂಕವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ( ಮಿತಿಯಲ್ಲಿ ಕುಡಿದರೆ ಮಾತ್ರ ).

ಆರೋಗ್ಯ ಹೆಚ್ಚಿಸುವ ಆಲ್ಕೋಹಾಲ್ ಪಟ್ಟಿ ಇಲ್ಲಿದೆ ನೋಡಿ.

1. ಬೀರ್:
ಬೀರ್ ಅನ್ನು ಮಿತಿಯಲ್ಲಿ ಅಂದರೆ ವಾರಕ್ಕೆ 7 ಗ್ಲಾಸ್ ಕುಡಿದರೆ ಆರೋಗ್ಯ ಹೆಚ್ಚುತ್ತದೆ. ಇದರಲ್ಲಿರುವ antioxidant ಹೃದಯಾಘಾತ ಉಂಟಾಗದಂತೆ ತಡೆಯುತ್ತದೆ. ಬೀರ್ ನಲ್ಲಿ ವಿಟಮಿನ್ ಬಿ, ರಂಜಕ, ಮ್ಯಾಗ್ನಿಷಿಯಂ, ಕಬ್ಬಿಣದಂಶ ಇದೆ. ಬೀರ್ ಕುಡಿಯುವುದರಿಂದ ಖಿನ್ನತೆ ಕಡಿಮೆಯಾಗುತ್ತದೆ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

ಅದೇ ಮಿತಿ ಮೀರಿ ಕುಡಿದರೆ ಕರಳು ಹಾಳಾಗುವುದು ಮತ್ತು ದೇಹದ ತೂಕ ಹೆಚ್ಚುತ್ತದೆ.

2.ವೈನ್: ವೈನ್ ನಲ್ಲಿ ಕೆಂಪು ವೈನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿನಿತ್ಯ ಒಂದು ಗ್ಲಾಸ್ ವೈನ್ ಕುಡಿದರೆ ಹೃದಯದ ಸ್ವಾಸ್ಥ್ಯ ಹೆಚ್ಚುತ್ತದೆ. ಈ ಕೆಂಪು ವೈನ್ ಅನ್ನು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ.

3. ವೊಡ್ಕಾ: ಬೊಜ್ಜು ಕರಗಿಸುವಲ್ಲಿ ವೊಡ್ಕಾ ತುಂಬಾ ಪರಿಣಾಮಕಾರಿಯಾದ ಆಲ್ಕೋಹಾಲ್. ಇದರಲ್ಲಿ ವಿಟಮಿನ್ ಬಿ, ರಂಜಕ, ಪೊಟ್ಯಾಷಿಯಂ ಮತ್ತು ಸೋಡಿಯಂ ಅಂಶ ಇದೆ. ಆದರೆ ವೊಡ್ಕಾ ಮಿತಿ ಮೀರಿದರೆ ಆರೋಗ್ಯಕ್ಕೆ ಹಾನಿಕಾರಕ.

4. ಬ್ಲಡಿ ಮೇರಿ: ಈ ಆಲ್ಕೋಹಾಲ್ ಅನ್ನು ಟೊಮೆಟೊದಿಂದ ತಯಾರಿಸಲಾಗುತ್ತದೆ. ಇದನ್ನು ಒಂದು ಲೋಟ ಕುಡಿದರೆ ಹಸಿವು ಕಮ್ಮಿಯಾಗುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು

ರಮ್ಯಾ, ರಾಗಿಣಿಗೆ ಲೈನ್ ಹೊಡೆಯುವ ಸುವರ್ಣಾವಕಾಶ

Line Hodiri Program 
ಸ್ಯಾಂಡಲ್‌ವುಡ್ ನಾಯಕಿಯರಾದ ರಮ್ಯಾ, ರಾಗಿಣಿ, ಪ್ರಿಯಾಮಣಿ, ಪೂಜಾಗಾಂಧಿ, ಐಂದ್ರಿತಾ ರೇ, ನಿಧಿ ಸುಬ್ಬಯ್ಯ ಹಾಗೂ ಶರ್ಮಿಳಾ ಮಾಂಡ್ರೆಗೆ ಲೈನ್ ಹೊಡೆಯುವ ಅಪೂರ್ವ ಅವಕಾಶ ಸಿಕ್ಕಿದೆ. ಈ ಸುವರ್ಣಾವಕಾಶವನ್ನು ಕಲ್ಪಿಸಿರುವುದು 92.7 ಬಿಗ್ ಎಫ್‌ಎಂ ರೇಡಿಯೋ.

ಈ ನೂತನ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್ ನಾಯಕಿಯರೊಂದಿಗೆ ಕೇಳುಗರು ಚಲ್ಲಾಟವಾಡುವ ಅವಕಾಶ ದೊರಕಲಿದೆ. 'ಲೈನ್ ಹೊಡೀರಿ' ಕಾರ್ಯಕ್ರಮ 'ನೋ ಟೆನ್ಷನ್' ಕಾರ್ಯಕ್ರಮದ ಭಾಗವಾಗಿದೆ. ಫೆ.20ರಿಂದ ಸಂಜೆ 5ರಿಂದ 9ರವರೆಗೆ ಪ್ರಸಾರವಾಗಲಿದೆ.

ಮೊದಲ ವಾರದಲ್ಲೇ ನಿಮ್ಮ ಲೈನ್‌ಗೆ ಸಿಕ್ಕಲಿದ್ದಾರೆ ತಾರೆಯರಾದ ರಮ್ಯಾ ಹಾಗೂ ರಾಗಿಣಿ. ಶ್ರೋತೃಗಳು ಈ ತಾರೆಗಳೊಂದಿಗೆ ತುಂಟತನದಿಂದ ಮಾತನಾಡಬಹುದು. ಈ ಕಾರ್ಯಕ್ರಮ ಆರು ವಾರಗಳ ಕಾಲ ನಡೆಯಲಿದೆ. ಕಾರ್ಯಕ್ರಮದಲ್ಲಿ ತಾರೆಗಳೊಂದಿಗೆ ಹರಟೆ, ತುಂಟ ಮಾತುಗಳನ್ನಾಡಬಹುದು. ಆರ್ ಜೆ ರೋಹಿತ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಪುರುಷ ಶ್ರೋತೃಗಳಿಗೆ ಒಂದು ವಿಷಯವನ್ನು ನೀಡಲಾಗುತ್ತದೆ. ಆ ವಿಷಯವನ್ನು ಆಧಾರವಾಗಿಟ್ಟುಕೊಂಡು ನಾಯಕಿಯರೊಂದಿಗೆ ಮಾತನಾಡಬೇಕು. ಅಂತಿಮವಾಗಿ ನಾಯಕಿಯರು ತಮ್ಮೊಂದಿಗೆ ತುಂಟುತನದಿಂದ ಮಾತನಾಡಿದ ಶ್ರೋತೃಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಆಯಾ ವಾರದ ಅಂತ್ಯದಲ್ಲೇ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.

92.7 ಎಫ್‌ಎಂನ ಮಹಿಳಾ ಶ್ರೋತೃಗಳು ಸುಮ್ಮನೆ ಕೂರಬೇಕಾಗಿಲ್ಲ. ಮಹಿಳಾ ಶ್ರೋತೃಗಳು ನಾಯಕಿ ನಟಿಯರ ಉತ್ತಮ ಸ್ನೇಹಿತರಂತೆ ನಟಿಸಬಹುದು. ವಿಜೇತರ ಆಯ್ಕೆಯಲ್ಲಿ ನಾಯಕಿಗೆ ಸಹಕರಿಸಬಹುದು. ಆ ದಿನದ ಉತ್ತಮ ಆಯ್ಕೆಯಲ್ಲಿ ಸಹಕರಿಸಿದ ಒಬ್ಬ ಮಹಿಳಾ ಶ್ರೋತೃಗೆ ಕಾರ್ಯಕ್ರಮದಲ್ಲಿ ನಾಯಕಿಯನ್ನು ಭೇಟಿ ಮಾಡುವ ಹಾಗೂ ಮಾತನಾಡುವ ಅವಕಾಶ ಲಭಿಸಲಿದೆ. (ಒನ್‌ಇಂಡಿಯಾ ಕನ್ನಡ)

ನನ್ನ ಹತ್ತಿರ ಭಯಂಕರ ಆಯುಧಗಳಿವೆ ! - ಸ್ವಾ. ಸಾವರಕರ



ಲಂಡನ್ ನಗರದಲ್ಲಿ ಒಂದು ದಿನ ಗುಪ್ತಚರರು ಸ್ವಾ. ಸಾವರಕರರನ್ನು ದಾರಿ ಮಧ್ಯದಲ್ಲಿ ನಿಲ್ಲಿಸಿ ಕೇಳಿದರು, "ಮಹಾಶಯರೇ, ಕ್ಷಮಿಸಿರಿ. ನಮಗೆ ನಿಮ್ಮ ಬಗ್ಗೆ ಸಂಶಯವಿದೆ. ನಿಮ್ಮ ಹತ್ತಿರ ಘಾತಕ ಆಯುಧಗಳಿವೆ ಎಂದು ನಿಶ್ಚಿತ ಸುಳಿವು ಸಿಕ್ಕಿದೆ. ಆದ್ದರಿಂದ ನಿಮ್ಮ ತಪಾಸಣೆಯನ್ನು ಮಾಡುತ್ತೇವೆ". ಸಾವರಕರರು ನಿಂತರು, ಗುಪ್ತಚರರು ತಪಾಸಣೆ ಮಾಡಿದರು. ಆದರೆ ಏನೂ ಸಿಗಲಿಲ್ಲ. ಆಗ ಗುಪ್ತಚರರ ಪ್ರಮುಖ ಅಧಿಕಾರಿಗಳು ಕೇಳಿದರು, "ಕ್ಷಮಿಸಿರಿ ತಪ್ಪು ಸುದ್ದಿಯಿಂದಾಗಿ ನಿಮಗ ತೊಂದರೆ ನೀಡಿದೆವು". ಆಗ ಸಾವರಕರರು ಹೇಳಿದರು, "ನಿಮಗೆ ಸಿಕ್ಕ ಸುಳಿವು ತಪ್ಪಲ್ಲ. ನನ್ನ ಬಳಿ ಘಾತಕ ಆಯುಧವಿದೆ". ಜೇಬಿನಲ್ಲಿದ್ದ ಪೆನ್ನನ್ನು ತೋರಿಸಿ ಹೇಳಿದರು, "ನೋಡಿ ಇದೇ ಆ ಆಯುಧ, ಇದರಿಂದ ಹೊರ ಬರುವ ಒಂದೊಂದು ಶಬ್ಧ ಯುವಕರಿಗೆ ಅನ್ಯಾಯದ ವಿರುದ್ಧ ಹೋರಾಡುವ ಪ್ರೇರಣೆಯನ್ನು ನೀಡುತ್ತದೆ. ಈ ಶಬ್ಧಗಳಿಂದ ದೇಶಭಕ್ತರ ರಕ್ತ ಕುದಿಯುತ್ತದೆ ಮತ್ತು ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಲು ಸಿದ್ಧರಾಗುತ್ತಾರೆ". 

ಚಹದೊಂದಿಗೆ ತಿನ್ನಿ ಕುರುಕುರು ಈರುಳ್ಳಿ ಚಕ್ರ

Onion Ring Recipe

ಆನಿಯನ್ ರಿಂಗ್ ಎಂದು ಅಂಗಡಿಗಳಲ್ಲಿ ದೊರೆಯುವ ತಿಂಡಿಯ ರುಚಿ ನೋಡಿರುತ್ತೀರಾ. ಈರುಳ್ಳಿಯಿಂದ ತಯಾರಿಸುವ ರಿಂಗ್ ಆಕಾರದ ತಿಂಡಿ ರುಚಿಕರವಾಗಿದ್ದು ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟವಾಗುವ ಈ ತಿಂಡಿ ಮಾಡಲು ಸುಲಭವಾಗಿದ್ದು ತಯಾರಿಸುವ ವಿಧಾನ ನೋಡಿ ಹೀಗಿದೆ.

ಬೇಕಾಗುವ ಸಾಮಾಗ್ರಿಗಳು:
* 1/2 ಕಪ್ ಮೈದಾ
* 1/4 ಕಪ್ ಜೋಳದ ಹಿಟ್ಟು
* 2 ಚಮಚ ಬೇಯಿಸಿ ಹಿಸುಕಿದ ಆಲೂಗೆಡ್ಡೆ
* ಕೆಂಪು ಮೆಣಸಿನ ಪುಡಿ
* ರುಚಿಗೆ ತಕ್ಕ ಉಪ್ಪು
* ವನಸ್ಪತಿ
* 2-3 ಈರುಳ್ಳಿ (ವೃತ್ತಾಕಾರವಾಗಿ ಕತ್ತರಿಸಿದ್ದು)

ತಯಾರಿಸುವ ವಿಧಾನ:

1. ಮೈದಾ, ಜೋಳದ ಹಿಟ್ಟು, ಕೆಂಪು ಮೆಣಸಿನ ಪುಡಿ, ಆಲೂಗೆಡ್ಡೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.

2. ಬಾಣಲೆಯಲ್ಲಿ ಎಣ್ಣೆ ಹಾಕಿ ಕುದಿಸಬೇಕು.

3. ಈರುಳ್ಳಿಯನ್ನು ಈ ಮಿಶ್ರಣದಲ್ಲಿ ಅದ್ದಿ ಎಣ್ಣೆಗೆ ಹಾಕಬೇಕು.

4. ರಿಂಗ್ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಬೇಕು.

ಇದನ್ನು ಸಾಯಾಂಕಾಲದ ಟೀ ಜೊತೆ ಸೇವಿಸಲು ರುಚಿಕರವಾಗಿರುತ್ತದೆ.

ಒಡೆಯುವ ಪಾದಗಳಿಗೆ ಮುಕ್ತಿ ಇಲ್ಲಿದೆ

ಚಳಿಗಾಲದಲ್ಲಿ ಕಾಲು ಒಡೆಯುವ ಸಮಸ್ಯೆ ಹೆಚ್ಚು. ಕೆಲವರ ಮುಖದ ತ್ವಚೆ ತುಂಬಾ ಚೆನ್ನಾಗಿದ್ದು ಪಾದಗಳಲ್ಲಿ ಬಿರುಕು ಉಂಟಾಗಿ ಕಪ್ಪಾಗಿ ಅಸಹ್ಯವಾಗಿ ಕಾಣುತ್ತದೆ. ಆರೋಗ್ಯಕರವಲ್ಲದ ಆಹಾರಕ್ರಮ , ದೂಳು ಇವುಗಳಿಂದ ಪಾದಗಳಲ್ಲಿ ಮಾಯಿಶ್ಚರೈಸರ್ ಕಡಿಮೆಯಾಗಿ ಪಾದಗಳಲ್ಲಿ ಬಿರುಕು ಹೆಚ್ಚಾಗುವುದು. ಒಂದು ವೇಳೆ ಬಿರುಕು ಬಂದಿದ್ದರೆ ಬೇಜಾರು ಬೇಡ. ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಬಿರುಕು ಹೋಗಲಾಡಿಸಿ ಸುಂದರ ಪಾದಗಳನ್ನು ಪಡೆಯಬಹುದು.

1.ಮಲಗುವ ಮೊದಲು ಕಾಲನ್ನು ಹದ ಬಿಸಿ ನೀರಿನಲ್ಲಿ ಮೃದುವಾದ ಸೋಪು ಹಚ್ಚಿ ತೊಳೆಯಬೇಕು. ನಂತರ ಸಾಸಿವೆ ಎಣ್ಣೆ ಹಚ್ಚಿ ಸಾಕ್ಸ್ ಹಾಕಿ ಮಲಗಬೇಕು.

2. ಬಿಸಿ ನೀರಿಗೆ ನಿಂಬೆರಸ ಹಾಕಿ ಅದರಲ್ಲಿ ಕಾಲುಗಳನ್ನು 10 ನಿಮಿಷ ಇಡಬೇಕು. ನಂತರ ಪ್ಯೂಮಿಕ್ ಕಲ್ಲಿನಿಂದ ತಿಕ್ಕಿ ಕಾಲನ್ನು ಸ್ವಚ್ಚಗೊಳಿಸಬೇಕು. ಈ ರೀತಿ ಮಾಡುತ್ತಿದ್ದರೆ ಕಾಲು ಒಡೆಯುವುದು ಕಡಿಮೆಯಾಗುತ್ತದೆ.

3.
ತೆಂಗಿನೆಣ್ಣೆಯಿಂದ ಪಾದಗಳನ್ನು, ಮಸಾಜ್ ಮಾಡಿ ಸಾಕ್ಸ್ ಹಾಕಿ ಮಲಗಬೇಕು. ನಂತರ ಬೆಳಗ್ಗೆ ಎದ್ದು ಹದ ಬಿಸಿನೀರಿನಿಂದ ಪ್ಯೂಮಿಕ್ ಕಲ್ಲು ಬಸಿ ತಿಕ್ಕಿ ತೊಳೆಯಬೇಕು. ಈ ರೀತಿ ಮಾಡಿದರೆ ಕಾಲಿನಲ್ಲಿನ ಬಿರುಕು ಕ್ರಮೇಣ ಮಾಯವಾಗುತ್ತದೆ.

4. ಬಾಳೆಹಣ್ಣು ಅಥವಾ ಬೆಣ್ಣೆ ಹಣ್ಣಿನಿಂದ ಪಾದಗಳನ್ನು 10 ನಿಮಿಷ ತಿಕ್ಕಿ ನಂತರ 10-15 ನಿಮಿಷ ಬಿಡಬೇಕು. ನಂತರ ಕಾಲುಗಳನ್ನು ತೊಳೆದು ತೆಂಗಿನೆಣ್ಣೆ ಹಚ್ಚಬೇಕು. ಈ ರೀತಿ ಮಾಡಿದರೆ ಪಾದಗಳಲ್ಲಿರುವ ಬಿರುಕು ಕಡಿಮೆಯಾಗುತ್ತದೆ.

5. ಪಪ್ಪಾಯಿ ಹಣ್ಣಿಗೆ ಸ್ವಲ್ಪ ನಿಂಬೆರಸ ಹಾಕಿ ಪಾದಗಳಿಗೆ 10 ನಿಮಿಷ ತಿಕ್ಕಿ ನಂತರ ತೊಳೆಯಬೇಕು. ಈ ರೀತಿ ವಾರಕ್ಕೆ 2 ಬಾರಿ ಮಾಡಿದರೆ ಪಾದಗಳು ನುಣಪಾಗಿ ಸುಂದರವಾಗಿ ಕಾಣುವುದು.

ಕೇಂದ್ರ ಸರಕಾರಿ ನೌಕರರಿಗೆ 7 % DA ಹೆಚ್ಚಳ


central-govt-employees-da-hiked-7-percent
 
ನವದೆಹಲಿ,ಫೆ.1: ಕೇಂದ್ರ ಸರಕಾರಿ ನೌಕರರಿಗೆ ಇಲ್ಲೊಂದು ಸಿಹಿಸುದ್ದಿ. ಕೇಂದ್ರ ನೌಕರರಿಗೆ 2012ರ ಜನವರಿ 1 ರಿಂದ ಅನ್ವಯವಾಗುವಂತೆ ಶೇ. 7ರಷ್ಟು ಅಧಿಕ ತುಟ್ಟಿ ಭತ್ಯೆ (DA) ಪ್ರಾಪ್ತಿಯಾಗಲಿದೆ. ಕಳೆದ ಸೆಪ್ಟೆಂಬರಿನಲ್ಲಿ ಇದೇ ಪ್ರಮಾಣದಲ್ಲಿ ತುಟ್ಟಿ ಭತ್ಯೆ ಹೆಚ್ಚಿಸಲಾಗಿತ್ತು.

ಈವರೆಗೆ ನೌಕರರು ಮೂಲ ವೇತನದ ಶೇ. 58ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದರು. ಈಗ ಅದು ಶೇ. 7ರಷ್ಟು ಹೆಚ್ಚಾಗಲಿದ್ದು, ಇನ್ನು ಮುಂದೆ ನೌಕರರು ಪಡೆಯುವ ತುಟ್ಟಿ ಭತ್ಯೆಯ ಪ್ರಮಾಣ ಶೇ. 65 ಆಗಲಿದೆ. ಸುಮಾರು 50 ಲಕ್ಷ ಹಾಲಿ ಉದ್ಯೋಗಿಗಳು ಮತ್ತು 40 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.

ಡಿಸೆಂಬರ್ 2011ರ ಅವಧಿಯವರೆಗೆ ಅಂದರೆ 12 ತಿಂಗಳಲ್ಲಿ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿಯು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ತನ್ನ ನೌಕರರಿಗೆ ಹೆಚ್ಚುವರಿ ತುಟ್ಟಿ ಭತ್ಯೆ ನೀಡಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ. ಈ ಸರಾಸರಿಯ ಆಧಾರದ ಮೇಲೆ ಪ್ರತಿ 6 ತಿಂಗಳಿಗೊಮ್ಮೆ DA ಪರಿಷ್ಕರಿಸಲಾಗುವುದು.

'ಫೈಲ್' ಸರೀನಾ? 'ಕಡತ' ಸರೀನಾ ಚರ್ಚೆ, ಅವಲೋಕನ


Fuel Kannada Program, Bangalore
 
ಬೆಂಗಳೂರು, ಫೆ.1: ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ 28 ಹಾಗು 29 ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್) ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ, ಗಣಕದಲ್ಲಿ ಹೆಚ್ಚಾಗಿ ಬಳಸಲಾಗುವ ಪರ್ಯಾಯ ಕನ್ನಡ ಪದಗಳ ಅವಲೋಕಿಸುವ ಸಲುವಾಗಿ ಕನ್ನಡ ಸಮುದಾಯದ ಮೂಲಕ ಅವಲೋಕನ ನಡೆಸಲಾಯಿತು. ಕಂಪ್ಯೂಟರ್ ತಂತ್ರಾಂಶಗಳ ಕನ್ನಡ ಅನುವಾದದಲ್ಲಿನ ಗೊಂದಲ ಹಾಗು ಏಕರೂಪತೆಯ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸಂಚಯ (sanchaya.net) ತಂಡವು ಈ FUEL ಕನ್ನಡ ಕಾರ್ಯಗಾರವನ್ನು ರೆಡ್‌ ಹ್ಯಾಟ್‌ನ ನೆರವಿನಿಂದ ಹಮ್ಮಿಕೊಂಡಿತ್ತು.

ಭಾಷಾಶಾಸ್ತ್ರಜ್ಞರು, ಅನುವಾದಕರು ಹಾಗು ಬಳಕೆದಾರರು ಮುಂತಾಗಿ ಸುಮಾರು 15 ಜನರು ಪಾಲ್ಗೊಂಡ ಎರಡು ದಿನಗಳ ಈ ಕಾರ್ಯಗಾರದಲ್ಲಿ ಸುಮಾರು 578 ಪದ/ಪದಗುಚ್ಛಗಳ ಪ್ರಸ್ತುತ ಅನುವಾದವನ್ನು ಅವಲೋಕಿಸಿ, ಅದರಲ್ಲಿನ ತಪ್ಪುಗಳನ್ನು ತಿದ್ದಿ ಒಂದು ಶಿಷ್ಟ ಗಣಕ ಪದಕೋಶವನ್ನು ಸಿದ್ಧಗೊಳಿಸಲಾಯಿತು.
ಉದಾ: file ಎನ್ನುವುದಕ್ಕೆ ಕಡತ, edit-ಸಂಪಾದನೆ, window-ಕಿಟಕಿ..ಇತ್ಯಾದಿ

ರೆಡ್‌ ಹ್ಯಾಟ್‌ನ ಶಂಕರ ಪ್ರಸಾದ್ ಎಲ್ಲರನ್ನೂ ಸ್ವಾಗತಿಸಿ, ಕಂಪ್ಯೂಟರ್ ಪದಕೋಶದಲ್ಲಿ ಶಿಷ್ಟತೆಯ ಅಗತ್ಯಗಳನ್ನು ವಿವರಿಸಿದರು. ನಂತರ ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿಯಾದಂತಹ ಜಿ ಎನ್ ನರಸಿಂಹ ಮೂರ್ತಿಯವರು ಈ ನಿಟ್ಟಿನಲ್ಲಿ ಹಿಂದೆ ನಡೆದ ಕೆಲಸಗಳು ಹಾಗು ಮುಂದಿನ ಕಾರ್ಯಗಳ ಕುರಿತು ಮಾತನಾಡಿದರು.

ಈ ಕಾರ್ಯಗಾರದಲ್ಲಿ ಕಿರುತೆರೆಯ ಖ್ಯಾತ ನಟಿ ಜಯಲಕ್ಷ್ಮಿ ಪಾಟೀಲ್, ಬನವಾಸಿ ಬಳಗದ ಸದಸ್ಯರು, ಕಣಜದಲ್ಲಿ ಕೆಲಸ ಮಾಡುತ್ತಿರುವವರು, ತಂತ್ರಜ್ಞರು, ಗೂಗಲ್ ಸಂಸ್ಥೆಯಲ್ಲಿನ ಈ ಹಿಂದಿನ ಅನುವಾದಕರು, ಪತ್ರಕರ್ತರು, ಭಾಷಾತಂತ್ರಜ್ಞರು ಮುಂತಾದವರು ಭಾಗವಹಿಸಿದ್ದರು.

ಲೋಕಲೈಸೇಶನ್ ಅಥವ ಪ್ರಾದೇಶೀಕರಣ ಎನ್ನುವುದು ಒಂದು ಉತ್ಪನ್ನವನ್ನು ನಿರ್ದಿಷ್ಟ ಪ್ರದೇಶ ಅಥವ ಭಾಷಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಪರಿವರ್ತಿಸುವ ಮಾಡುವ ಕೆಲಸವಾಗಿದೆ. ಪ್ರಾದೇಶೀಕರಣವು ಹೆಚ್ಚು ಸಂಕೀರ್ಣವಾದಂತೆಲ್ಲಾ ಮತ್ತು ಹಲವು ಉಪಕರಣಗಳನ್ನು ಒಳಗೊಂಡಂತೆಲ್ಲಾ ಅನುವಾದ ಮತ್ತು ಪದಕೋಶದ ಶಿಷ್ಟತೆಯು ಎದುರಾಗುತ್ತಾ ಹೋಗುತ್ತದೆ.

ಆದ್ದರಿಂದ, ಈ ಸಂದರ್ಭದಲ್ಲಿ ಆ ರೀತಿಯ ಒಂದು ಕಾರ್ಯಗಾರವು ಅಗತ್ಯ ಹಾಗು ಪ್ರಮುಖವೆನಿಸುತ್ತದೆ. ಇಂದಿನ ತಂತ್ರಜ್ಞಾನ ಕ್ರಾಂತಿಯು ನಮ್ಮ ಕರ್ನಾಟಕದ ಪ್ರತಿ ಮೂಲೆಯನ್ನು ತಲುಪಲು ಅದು ಏಕರೂಪವಾದ ಪದಗಳೊಂದಿಗೆ ಕನ್ನಡದಲ್ಲಿ ಲಭ್ಯವಾಗಿಸುವುದು ಅನಿವಾರ್ಯ.

ಸ್ಥಳೀಯ ಬಳಕೆದಾರರು ತಂತ್ರಜ್ಞಾನವನ್ನು ಸುಲಭವಾಗಿ ಬಳಸಲು ನೆರವಾಗಲು FUEL ಪರಿಯೋಜನೆಯು ಒಂದು ಶಿಷ್ಟವಾದ ಹಾಗು ಏಕರೂಪವಾದ ಪಾರಿಭಾಷಿಕ ಪದಕೋಶವನ್ನು ಒದಗಿಸುತ್ತದೆ. ಈಗಾಗಲೆ ಸುಮಾರು 9 ಭಾರತೀಯ ಭಾಷೆಗಾಗಿ ಈ ಬಗೆಯ ಕಾರ್ಯವು ನಡೆದಿದ್ದು, ಕನ್ನಡದ ಕಂಪ್ಯೂಟರ್ ಪದಕೋಶವು 10ನೆಯದ್ದಾಗಿದೆ.