ಪುಟಗಳು

ಸಿಎಲ್ ಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ

ಬೆಂಗಳೂರು, ಸೆ.21: ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಕ್ರಿಕೆಟ್ ನ ಬಿಸಿ ಸೆ.23 ರಿಂದ ಆರಂಭವಾಗಲಿದೆ. ಮೂರನೇ ಆವೃತ್ತಿಯ ಅರ್ಹತಾ ಸುತ್ತಿನ ಪಂದ್ಯಗಳು ಸೆ.21ರಂದು ಕೊನೆಗೊಳ್ಳಲಿದೆ.

* ಸೆ. 23 ರಿಂದ ಅಕ್ಟೋಬರ್ 3 ರವರೆಗೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತ್ತಾದಲ್ಲಿ ಪಂದ್ಯಾವಳಿಗಳು ನಡೆಯಲಿವೆ.
* ಅರಂಭದ ಪಂದ್ಯ ಸೆ. 23 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
* ಚೆನ್ನೈನಲ್ಲಿ ಅಕ್ಟೋಬರ್ 9 ರಂದು ಫೈನಲ್ ನಡೆಯಲಿದೆ.
* 13 ತಂಡಗಳು ಭಾಗವಹಿಸಲಿದ್ದು, 6 ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಲಿದೆ.
* ಮೊದಲ ಹಂತದಲ್ಲಿ ಅರ್ಹತಾ ಸುತ್ತು ಹೈದರಾಬಾದಿನಲ್ಲಿ ಸೆ. 19 ರಿಂದ 21ರ ವರೆಗೆ ನಡೆಯಲಿದೆ.

ಎ ಗುಂಪು: ಚೆನ್ನೈ ಸೂಪರ್ ಕಿಂಗ್ಸ್(ಭಾರತ), ಕೇಪ್ ಕೋಬ್ರಾಸ್(ದಕ್ಷಿಣ ಆಫ್ರಿಕಾ), ನ್ಯೂ ಸೌಥ್ ವೇಲ್ಸ್(ಆಸ್ಟ್ರೇಲಿಯಾ), ಮುಂಬೈ ಇಂಡಿಯನ್ಸ್(ಭಾರತ), ಟ್ರಿನಿಡಾಡ್ ಮತ್ತು ಟೊಬ್ಯಾಗೋ(ವೆಸ್ಟ್ ಇಂಡೀಸ್)

ಬಿ ಗುಂಪು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಭಾರತ), ವಾರಿಯರ್ಸ್(ದಕ್ಷಿಣ ಆಫ್ರಿಕಾ), ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್(ಆಸ್ಟ್ರೇಲಿಯಾ), Q1, Q2
ದಿನಾಂಕತಂಡಗಳುಸ್ಥಳಸಮಯ
ಸೆ.23, ಶುಕ್ರವಾರಆರ್ ಸಿಬಿ vs ವಾರಿಯರ್ಸ್ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಸೆ.24, ಶನಿವಾರಕೇಪ್ ಕೋಬ್ರಾಸ್ vs ನ್ಯೂ ಸೌಥ್ ವೇಲ್ಸ್ ಬ್ಲೂಸ್ಚಿದಂಬರಂ ಸ್ಟೇಡಿಯಂ, ಚೆನ್ನೈಸಂಜೆ 4 ಗಂಟೆ
ಸೆ.24, ಶನಿವಾರಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ಚಿದಂಬರಂ ಸ್ಟೇಡಿಯಂ, ಚೆನ್ನೈರಾತ್ರಿ 8 ಗಂಟೆ
ಸೆ.25, ಭಾನುವಾರಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ vs ವಾರಿಯರ್ಸ್ಹೈದರಾಬಾದ್ಸಂಜೆ 4 ಗಂಟೆ
ಸೆ.25, ಭಾನುವಾರQ1 vs Q3ಹೈದರಾಬಾದ್ರಾತ್ರಿ 8 ಗಂಟೆ
ಸೆ.26, ಸೋಮವಾರಮುಂಬೈ ಇಂಡಿಯನ್ಸ್ vs ಟ್ರಿನಿಡಾಡ್ ಅಂಡ್ ಟೊಬಾಗೊಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಸೆ.27, ಮಂಗಳವಾರQ1 vs ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ಹೈದರಾಬಾದ್ರಾತ್ರಿ 8 ಗಂಟೆ
ಸೆ.28, ಬುಧವಾರNSW ಬ್ಲೂಸ್ vs ಟ್ರಿನಿಡಾಡ್ ಅಂಡ್ ಟೊಬಾಗೊಚಿದಂಬರಮ್ ಕ್ರೀಡಾಂಗಣ, ಚೆನ್ನೈಸಂಜೆ 4 ಗಂಟೆ
ಸೆ.28, ಬುಧವಾರಚೆನ್ನೈ ಸೂಪರ್ ಕಿಂಗ್ಸ್ vs ಕೇಪ್ ಕೋಬ್ರಾಸ್ಚಿದಂಬರಮ್ ಕ್ರೀಡಾಂಗಣ, ಚೆನ್ನೈರಾತ್ರಿ 8 ಗಂಟೆ
ಸೆ.29, ಗುರುವಾರQ1 vs ರಾಯಲ್ ಚಾಲೆಂಜರ್ಸ್ ಬೆಂಗಳೂರುಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಸೆ.30, ಶನಿವಾರಮುಂಬೈ ಇಂಡಿಯನ್ಸ್ vs ಕೇಪ್ ಕೋಬ್ರಾಸ್ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಅ.1, ಶನಿವಾರಸೌಥ್ ಅಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ vs Q3ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುಸಂಜೆ 4 ಗಂಟೆ
ಅ.2, ಭಾನುವಾರಮುಂಬೈ ಇಂಡಿಯನ್ಸ್ vs NSW ಬ್ಲೂಸ್ಚಿದಂಬರಂ ಸ್ಟೇಡಿಯಂ, ಚೆನ್ನೈಸಂಜೆ 4 ಗಂಟೆ
ಅ.2, ಭಾನುವಾರಚೆನ್ನೈ ಸೂಪರ್ ಕಿಂಗ್ಸ್ vs ಟ್ರಿನಿಡಾಡ್ ಅಂಡ್ ಟೊಬ್ಯಾಗೊಚಿದಂಬರಂ ಸ್ಟೇಡಿಯಂ, ಚೆನ್ನೈರಾತ್ರಿ 8 ಗಂಟೆ
ಅ.3, ಸೋಮವಾರಆರ್ ಸಿಬಿ vs Q3ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಅ.4, ಮಂಗಳವಾರಕೇಪ್ ಕೋಬ್ರಾಸ್ vs ಟ್ರಿನಿಡಾಡ್ ಅಂಡ್ ಟೊಬ್ಯಾಗೊಚಿದಂಬರಂ ಸ್ಟೇಡಿಯಂ, ಚೆನ್ನ್ನೈಸಂಜೆ 4 ಗಂಟೆ
ಅ.4, ಮಂಗಳವಾರಚೆನ್ನೈ ಸೂಪರ್ ಕಿಂಗ್ಸ್ vs NSW ಬ್ಲೂಸ್ಚಿದಂಬರಂ ಸ್ಟೇಡಿಯಂ, ಚೆನ್ನ್ನೈರಾತ್ರಿ 8 ಗಂಟೆ
ಅ.5, ಬುಧವಾರQ3 vs ವಾರಿಯರ್ಸ್ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುಸಂಜೆ 4 ಗಂಟೆ
ಅ.5, ಬುಧವಾರಆರ್ ಸಿಬಿ vs ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಅ.7, ಶುಕ್ರವಾರಗ್ರೂಪ್ B1 vs ಗ್ರೂಪ್ A2ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಅ.8, ಶನಿವಾರಗ್ರೂಪ್ A1 vs ಗ್ರೂಪ್ B2ಚಿದಂಬರಂ ಸ್ಟೇಡಿಯಂ, ಬೆಂಗಳೂರುರಾತ್ರಿ 8 ಗಂಟೆ
ಅ.9, ಭಾನುವಾರSF1 vs SF2ಚಿದಂಬರಂ ಸ್ಟೇಡಿಯಂ, ಬೆಂಗಳೂರುರಾತ್ರಿ 8 ಗಂಟೆ
 

ಅಂಕಿತ ಹೊಸ ಪುಸ್ತಕ ಬಿಡುಗಡೆ

ಕನ್ನಡ ಮಾತಿನ ಮಲ್ಲ ಸ್ಪರ್ದೆಗೆ ಆಹ್ವಾನ

ಅನಕ್ಷರಸ್ತರಿಗೊಂದು ಉಚಿತ ಫೋನ್

ಹುಷಾರು! ನಾಸಾ ಉಪಗ್ರಹ ಅವಶೇಷ ತಲೆ ಮೇಲೆ ಬೀಳಬಹುದು

ಹೈದರಾಬಾದ್, ಸೆ.21: ಮೇಲ್ಮೈ ವಾತಾವರಣ ಸಂಶೋಧನಾ ಉಪಗ್ರಹದ (ಯುಎಆರ್ಎಸ್‌) ಭಗ್ನಾವಶೇಷಗಳು ಮುಂದಿನ ಕೆಲವು ದಿನಗಳಲ್ಲಿ (ಸೆ.23) ಭೂಮಿಗೆ ಬಡಿಯುವ ನಿರೀಕ್ಷೆಯಿದೆ ಎಂದು ನಗರದ ಬಿಎಂ ಬಿರ್ಲಾ ವಿಜ್ಞಾನ ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದ ನಾಸಾ ವಿಜ್ಞಾನಿಗಳ ಪ್ರಕಾರ ಅದು ಯಾವುದಾದರೂ ಸಾಗರ, ಸಮುದ್ರದಲ್ಲಿ ಬೀಳುವ ಸಾಧ್ಯತೆಗಳು ದಟ್ಟವಾಗಿವೆ.

ಬಸ್ಸಿನ ಗಾತ್ರದ ಈ ಉಪಗ್ರಹವನ್ನು 1991ರಲ್ಲಿ ಅಮೆರಿಕದ ನಾಸಾ ವಿಜ್ಞಾನಿಗಳು ಉಡಾವಣೆ ಮಾಡಿದ್ದರು. ಅದು 2005ರ ತನಕ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಅದು ನಿಧಾನವಾಗಿ ಭೂಮಿಯ ವಾತಾವರಣಕ್ಕೆ ಜಾರಲಾರಂಭಿಸಿತು. ಈ ಪ್ರಕ್ರಿಯೆಯಲ್ಲಿ ಅದು ಛಿದ್ರಗೊಂಡಿದೆ ಎಂದು ಸಂಸ್ಥೆಯ ಮಹಾನಿರ್ದೇಶಕ ಬಿಜಿ ಸಿದ್ದಾರ್ಥ ಅವರು ಹೇಳಿದ್ದಾರೆ.

'5.6 ಟನ್ ತೂಕದ ಈ ಉಪಗ್ರಹದ ಅವಶೇಷಗಳ ಸಣ್ಣ ತುಣುಕುಗಳು ಭೂಮಿಯನ್ನು ತಲಪುವ ಮೊದಲೇ ಉರಿದುಹೋಗಬಹುದು. ಆದರೆ ದೊಡ್ಡ ತುಣುಕುಗಳು ಭೂಮಿಯನ್ನು ತಲಪಬಹುದು. ಯಾವುದೇ ಸ್ಥಳ ಅಥವಾ ವ್ಯಕ್ತಿ ಮೇಲೆ ಇಂಥ ತುಣುಕು ಬೀಳುವ ಸಾಧ್ಯತೆ ಸಾವಿರ ಶತಕೋಟಿಯಲ್ಲಿ ಒಂದಕ್ಕಿಂತಲೂ ಕಡಿಮೆಯಿದೆ. ಆದರೆ ಅವಶೇಷಗಳು ಭೂಮಿಯ ಯಾವುದೋ ಒಂದು ಸ್ಥಳದಲ್ಲಿ ಬೀಳುವ ಸಾಧ್ಯತೆ ಅಧಿಕವಾಗಿದೆ' ಎಂದು ಅವರು ಎಚ್ಚರಿಸಿದ್ದಾರೆ.

ಬಾಹ್ಯಾಕಾಶದಿಂದ ಅವಶೇಷಗಳು ಭೂಮಿಗೆ ಬಡಿಯುವ ಇಂಥ ಘಟನೆ ಈ ಹಿಂದೆಯೂ ಸಂಭವಿಸಿತ್ತು. 1970ರಲ್ಲಿ ಸ್ಕೈಲ್ಯಾಬ್‌ ವ್ಯೋಮನೌಕೆ ಭೂಮಿಗೆ ಬಿದ್ದಿತ್ತಾದರೂ ಯಾವುದೇ ಜೀವಹಾನಿ ಅಥವಾ ಸೊತ್ತು ಹಾನಿ ಸಂಭವಿಸಿರಲಿಲ್ಲ.

ತೀರಾ ಈಚೆಗೆ ವ್ಯೋಮಯಾತ್ರಿ ಕಲ್ಪನಾ ಚಾವ್ಲಾ ಮತ್ತು ಇತರ ಸಿಬ್ಬಂದಿಯನ್ನು ಹೊತ್ತಿದ್ದ ವ್ಯೋಮನೌಕೆ 'ಕೊಲಂಬಿಯಾ' ವಾಯುಮಂಡಲವನ್ನು ಪ್ರವೇಶಿಸುವ ವೇಳೆ ಸ್ಫೋಟಗೊಂಡು ಅದರ ಅವಶೇಷಗಳು ಭೂಮಿಯ ಕೆಲವೆಡೆ ಬಿದ್ದಿತ್ತು. ಆಗ ಕೂಡ ಭೂಮಿಯಲ್ಲಿ ಯಾವುದೇ ಹಾನಿ ಸಂಭವಿಸಿರಲಿಲ್ಲ. ಈ ಬಾರಿಯೂ ಇದು ನಿಜವಾಗಲಿದೆ ಎಂದೂ ಅವರು ವಿಶ್ವಾಸ ಹೊಂದಿದ್ದಾರೆ.

ರಾಧಿಕನ್ ಗಂಡ ಮೇಲೆ ರಾಧಿಕಾ ಕುಮಾರಸ್ವಾಮಿ ಗರಂ

ಹಾಸ್ಯ ಕಲಾವಿದ ಕೋಮಲ್ ಕುಮಾರ್ ವಿರುದ್ಧ ಕನ್ನಡ ಚಿತ್ರರಂಗದ ನಟಿ ಕಮ್ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಗರಂ ಆಗಿದ್ದಾರೆ. ಆಕೆಯ ಕೋಪಕ್ಕೆ ಕಾರಣವಾಗಿರುವುದು ಕೋಮಲ್ ಕೈಗೆತ್ತಿಕೊಂಡಿರುವ 'ರಾಧಿಕನ್ ಗಂಡ' ಎಂಬ ಚಿತ್ರ. ಈ ಚಿತ್ರದ ಟೈಟಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಧಿಕಾ, ಚಿತ್ರದ ಶೀರ್ಷಿಕೆ ಕೂಡಲೆ ಬದಲಾಯಿಸುವಂತೆ ಎಚ್ಚರಿಸಿದ್ದಾರೆ.

ಒಂದು ವೇಳೆ ಚಿತ್ರದ ಟೈಟಲ್ ಬದಲಾಯಿಸಲಿಲ್ಲ ಎಂದರೆ ಉಗ್ರ ಹೋರಾಟ ನಡೆಸುವುದಾಗಿ ರಾಧಿಕಾ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಮೆಟ್ಟಿಲನ್ನೂ ಹತ್ತಿರುವ ರಾಧಿಕಾ ದೂರು ಸಲ್ಲಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಮೂಲಕ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ರಾಧಿಕಾ ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಕೋಮಲ್, ಇದೊಳ್ಳೆ ಕತೆ ಆಯ್ತಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಾ. ಇದು ನನ್ನ ಗೆಳೆಯ ರಂಗನಾಥ್ ಭಾರದ್ವಾಜ್ ಕತೆಯಾಕಾಗಿರಬಾರದು? ಆತನ ಪತ್ನಿಯ ಹೆಸರೂ ರಾಧಿಕಾ. ನೀವು ಏನೇ ಹೇಳಿದರು ಚಿತ್ರದ ಶೀರ್ಷಿಕೆ ಮಾತ್ರ ಬದಲಾಯಿಸಲ್ಲ ಎಂದಿದ್ದಾರೆ.

ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಈ ಸಂಬಂಧ ರಾಧಿಕಾ ನಿರ್ಮಾಪಕರ ಸಂಘಕ್ಕೂ ಒಂದು ಪತ್ರ ಬರೆದಿರುವುದು. ಆ ಪತ್ರದ ಕೆಳಗೆ ರಾಧಿಕಾ ಕುಮಾರಸ್ವಾಮಿ ಎಂದು ಸಹಿಹಾಕಿರುವುದು! ನಿರ್ಮಾಪಕರ ಸಂಘ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವುದು. ಈಗಾಗಲೆ ನಿಖಿತಾರನ್ನು ಬ್ಯಾನ್ ಮಾಡಿ ನಗೆಪಾಟಲಿಗೀಡಾಗಿದ್ದ ಸಂಘ ಈಗ ಮತ್ತೊಮ್ಮೆ ನಗುವವರ ಮುಂದೆ ಎಡವಿಬೀಳುವಂತಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

ಮೃಗಾಲಯದಲ್ಲಿ ನೂತನ ಗುಳ್ಳೆನರಿ ಮನೆ ಉದ್ಘಾಟನೆ

ಪಾಟೀಲ ಪುಟ್ಟಪ್ಪ ಅಸಮಧಾನ

ಕಂಬಾರರ ಭಾಷೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ


“ಸಿಟಿಯ ಕಗ್ಗತ್ತಲೆಯಿಂದ ಪಾರಾಗಲು ಯತ್ನಿಸಿದವರ ಹಾಡು” “ಕೀಟ್ಸನ ಸಾವನ್ನು ನೆನೆದು-ಒಣಗುತ್ತಿತ್ತು ಗಿಡ ತೊಟಕು ನೀರು ಸಹ ಯಾರೂ ಹನಿಸಲಿಲ್ಲ ಸತ್ತಮೇಲೆ ಕಣ್ಣೀರ ಸುರಿಸಿದರು ವಿಧಿಯ ಆಟವೆಲ್ಲ” ಇಂದಿಗೂ ಬದಲಾಗದ “ದಿನಪತ್ರಿಕೆಯ ಸುದ್ಧಿ ಹಣೆಬರಹ “ಅಲ್ಲಿರುವ ನೆಲ, ನೀರು ಹಳದಿ, ಮುಗಿಲೂ ಹಳದಿ, ಜನ ನಕ್ಕರೂ ಹಳದಿ, ಏನು ಮಂದಿ! “ ಈ ನಡುವೆ ನಾವಿದ್ದೇವೆ-ಅದೇ ರಂಗಭೂಮಿ ಮತ್ತು ನಾನು, ಆಪಾದಿಸುತ್ತಾ, ಸಮರ್ಥಿಸಿಕೊಳ್ಳುತ್ತಾ ಪರಸ್ಪರ ನೋವಿನಲ್ಲಿ ಬೆರಳಾಡಿಸುತ್ತಾ....” ಹೀಗೆಲ್ಲಾ ಹೃದಯಕಾಂತಿಗೆ ಸೂರ್ಯನಾಗಿ ದಿಕ್ಕು ತೋರಿಸಿದ ನನ್ನ ಪ್ರೀತಿಯ ಕಂಬಾರರಿಗೆ ಜ್ಞಾನಪೀಠ ಸನ್ಮಾನವಾಗಿದೆ. 8 ಕವನ ಸಂಕಲನ, 22 ನಾಟಕ, 3 ಬೃಹತ್ ಕಾದಂಬರಿಗಳು, ಎಷ್ಟೆಷ್ಟೋ ಕಥೆಗಳು, ಚಿತ್ರಗಳು ಹಾಡುಗಳು ಇನ್ನೂ ಏನೇನೋ ಇವೆಯಂತೆ ಅವರ ಹೆಮ್ಮೆಯ ಮುಡಿಗೆ, ಆದರೆ ನನಗೆ ಮಾತ್ರ ಚಂದ್ರಶೇಖರ ಕಂಬಾರರ ಬರವಣಿಗೆ, ಭಾಷೆ, ಭಾವವೆಂದರೆ ಗರಡಿ ಮನೆಯ ಸ್ತಬ್ಧ ಚಿತ್ರದಂತೆ. ನನ್ನಂತರಂಗದಂತೆ. ಶ್ರೀರಾಮಚಂದ್ರನ ಧರ್ಮದಂತೆ, ಸೀತೆಯ ನಿಷ್ಠೆಯಂತೆ.

ಊರಿನ ಮುದ್ದು, ಮನೆಯವರ ಕಣ್ಮಣಿ, ಮುಂದೊಂದು ದಿನ ಭೂಮಂಡಲದ ಹಾಹಾಕಾರವ ನೀಗುವ ಶಕ್ತಿಯಾದರೂ ಅಮ್ಮನಿಗೆ ಮಾತ್ರ ಮಗು “ನನ್ನ ಬಂಗಾರ” ತಾನೆ? ಹಾಗೇ, ಬೇಂದ್ರೆ ಅಜ್ಜನ ನಂತರ ಭಾಷೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟವರು ಕಂಬಾರರು ಅಂತ ಪಂಡಿತರು ಹೇಳುತ್ತಿದ್ದರೂ ನನಗೆ ಮಾತ್ರ ತೀರ್ಥರೂಪು “ನನ್ನ ಕಂಬಾರರು” ಅಷ್ಟೆ. ಅದಕ್ಕೆ ಒಂದಷ್ಟು ದಿನಗಳ ಹಿಂದೆ ಪಾಂಡಿತ್ಯ ಪ್ರಖರರೊಬ್ಬರೊಂದಿಗೆ ಸರಿಸುಮಾರು ಯುದ್ಧವನ್ನೇ ಮಾಡಿದ್ದೆ. ಅವರ ಪ್ರಕಾರ ಇಂಗ್ಲಿಷಿಗೆ ಅಸಾಧ್ಯವೆಂಬುದೇ ಇಲ್ಲ! ನಾನು ಕೇಳಿದ್ದು ಸಣ್ಣ ಪ್ರಶ್ನೆಯಷ್ಟೆ, ಕಂಬಾರರ “ಗೌತಮ ಕಂಡ ಪ್ರಥಮ ದರ್ಶನ” ಪದ್ಯದ ಈ ಸಾಲುಗಳನ್ನು ಇಂಗ್ಲಿಷಿಗೆ ತನ್ನಿ ಅಂತ “ಗದಬಡಿಸಿ ಗದಬಡಿಸಿದವನೆ ಹುಡುಕಾಡಿ, ಹುಡುಕಾಡಿದವನೆ ಕೊನೆಗೆ ಹಾಸಿಗೆಗೆ ಬಂದು ನೋಡುತ್ತೇನೆ: ನನ್ನ ಪಾಲಿನ ಹುಡುಗಿ ಇದಕೆ ಹಾಸುಗೆಯಾಗಿ, ಅರೆಗಣ್ಣ ತುದಿಯ ಸೂರು ಜತಿಯಗುಂಟ ಸ್ವರ್ಗದುಯ್ಯಾಲೆ ಕಟ್ಟಿದಹಲ್ಯೆ.” “ತಪ್ಪಿದ್ದರೆ ಕ್ಷಮಿಸಿ ನಾನು ಅಧಮಳು” ಅಂದರೂ ಉತ್ತಮರ ಸಿಟ್ಟು ಇಂದಿಗೂ ಇಳಿದಿಲ್ಲ!

ಕನ್ನಡವೆಂದರೆ ಕಂಬಾರರು ಅಷ್ಟೆ : ಅಂದಹಾಗೆ, ಆ ದಿನ ಬಾಗಿಲು ತೆರೆದಾಗ ಅಯ್ಯರ್ ಮಾಮ ಜೋರಾಗಿ ನಗುತ್ತಾ ಒಳಬಂದರು. ಮಾಮಿಗೆ ಸಂಕೋಚ. ಸೆರಗು ಸರಿ ಮಾಡ್ಕೊಳ್ಳುತ್ತಾ ಗಂಡ ಆಗಲೇ ಪಟ್ಟಾಂಗ ಹಾಕಿಕೊಂಡಿದ್ದ ಸೋಫಾ ಮೆಲೆ ಕುಳಿತರು. ಸೌಜನ್ಯಕ್ಕೆ “ತೊಟ್ಟು ಹಾಲು ಕೊಡಲೇ” ಎಂದೇ. ಅಷ್ಟೇ ಸಾಕು ಮಾಮಾ ತಮಿಳು ಮಿಶ್ರಿತ ಇಂಗ್ಲಿಷ್ನಲ್ಲಿ ಹೇಳ್ತಾ ಹೋದರು “ಕೆಳಜಾತಿಯ ತಮಿಳರಿಗೆ ನಾಲಿಗೆ ಹೊರಳದೆ ತಮಿಳನ್ನು ಅಪಭ್ರಂಶಗೊಳಿಸಿದರು. ಅದೇ ಕನ್ನಡವಾಯ್ತು. ಪಾಲು ಹಾಲಾಯ್ತು. ಇಲ್ಲದಿದ್ದರೆ ಕನ್ನಡಕ್ಕೆ ಸ್ವಂತ ಅಸ್ತಿತ್ತ್ವವೆ ಇಲ್ಲ. ಅದು ಭಾಷೆಯೇ ಅಲ್ಲ. ನಿನಗೆ ಗೊತ್ತಾ? ಸರಸ್ವತಿ ತಮಿಳರ ದೇವತೆ” ಹೀಗೆ ಇನ್ನೂ ಏನೇನೋ. ನನಗೆ ಅದೆಲ್ಲಾ ತಿಳಿಯೋಲ್ಲ. ನನಗೆ ಕನ್ನಡವೆಂದರೆ ಶಾಲೆಯಲ್ಲಿ ಮುದ್ದಣನ ಶ್ರೀಮತಿ ಸ್ವಯಂವರ ಹೇಳಿಕೊಟ್ಟ ಪದ್ಮಾ ಮಿಸ್ ಮತ್ತು ಚಂದ್ರಶೇಖರ ಕಂಬಾರರು ಅಷ್ಟೆ!

ಮಾಮಿಗೆ ಮುಜುಗರವಾಗ್ತಿತ್ತು. ಹಿರಿಯರನ್ನು ಹೀಗೆಳೆಯುವುದು ನಮ್ಮ ಸಂಸ್ಕೃತಿಯಲ್ಲ್ವಲ್ಲಾ? ಅದಕ್ಕೆ ವಾತಾವರಣ ತಿಳಿ ಮಾಡಲು, ಒಳಗೆ ಹೋಗಿ ಮಾಡಿದ್ದ ಹೆಸರುಬೇಳೆ ಕೋಸಂಬರಿಯನ್ನು ಬಟ್ಟಲುಗಳಿಗೆ ಹಾಕಿ ತಂದುಕೊಟ್ಟೆ. ತತ್ಕ್ಷಣ ಮಾಮಾ “ಅರೆ, ಇದು ತಮಿಳರ ತಿಂಡಿ. ನೀನು ಹೇಗೆ ಕಲಿತೆ?” ಅಂದು ಬಿಡೋದೇ? ಸಿಟ್ಟು ಕ್ರೂರ ಸೂರ್ಯನಂತೆ ನೆತ್ತಿ ಸುಡುತ್ತಿದ್ದರೂ, ನಾನು ಪ್ರತಿಭಟಿಸಲಿಲ್ಲ. ಇತ್ತೀಚೆಗೆ ಕಂಬಾರರೇ ನನ್ನ ಮೌನಕ್ಕೂ ಕನ್ನಡದಲ್ಲಿ ಮಾತನಾಡುವ ಸೊಗಡನ್ನು ಪರಿಚಯಿಸಿಕೊಟ್ಟಿದ್ದಾರೆ. ಹಾಗಾಗಿ ನನ್ನ ನಾಳೆಗಳು ಅವರೇ ಹೇಳಿದಂತೆ ಸಂಸ್ಕೃತಿಯಿಂದ ವಿಸ್ಮೃತಿಗೊಳ್ಳಲಾರದೆಂಬ ಭರವಸೆಯಿದೆ, ಹೇಗೆಂದಿರಾ? ಅವರ ಶಿವಾಪುರದ ಪ್ರತಿಮೆಗಳಲ್ಲಿ ಒಂದಾದ ಪದ್ಯ ಸಾಲುಗಳು ಕೇಳುತ್ತ್ವೆ “ಬೇಕಾದಷ್ಟು ಕನಸುಗಳಿವೆಯಲ್ಲಾ ಬದುಕಕ್ಕೆ ಇನ್ನೇನು ಬೇಕು ಗೆಳತಿ...?” ಹೀಗೆ ಕಂಡ ಕನಸೊಂದು ಇಂದು ನನಸಾಗಿದೆ. ಕಂಬಾರರ ಪಾದಕ್ಕೆರಗಿ ಪೀಠದ ಜ್ಞಾನ ಸ್ಫಟಿಕದಂತೆ ಸ್ಫುರಿಸಿದೆ. ಜ್ಞಾನಪೀಠದ ಔನತ್ಯವನ್ನು ಹೆಚ್ಚಿಸಿರುವ ಹಿರಿಯರ ಚರಣಸ್ಪರ್ಶಿಸುತ್ತಿರುವ ಈ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಕಂಬಾರರು ಹಾದುಹೋದದ್ದು ಹೀಗೆ

ಕಣ್ಣೀರ ಹನಿಯಲೂ ಶಾಖವಾದ ಕಂಬಾರರ ಸಾಹಿತ್ಯ* ಅಂಜಲಿ ರಾಮಣ್ಣ, ಬೆಂಗಳೂರು

ಅದು ಕಂಬಾರರ ’ಜೈಸಿದ ನಾಯ್ಕ’ ನಾಟಕ. ಮೊದಲ ಬಾರಿಗೆ ರಂಗದ ಮೇಲೆ ತರಲಾಗ್ತಿತ್ತು. ಅದರಲ್ಲಿ ಬರೋದೇ ಎರಡು ಹೆಣ್ಣು ಪಾತ್ರ. ನಾನು ನಾಯಕಿ. ಗಂಗಾಧರಸ್ವಾಮಿಯವರ ನಿರ್ದೇಶನ. ಎರಡು ತಿಂಗಳುಗಳ ಕಾಲದ ಹಗಲಿರುಳಿನ ಅಭ್ಯಾಸ. ಆ ದಿನ ಪ್ರಥಮ ಪ್ರದರ್ಶನ ಮೈಸೂರಿನ ಕಲಾಮಂದಿರದಲ್ಲಿ. ಮೊದಲ ಸಾಲಿನ ಪ್ರೇಕ್ಷಕರಾಗಿ ಕುಳಿತ್ತಿದ್ದಾರೆ ಡಾ.ಚಂದ್ರಶೇಖರ ಕಂಬಾರ, ಕೀರ್ತಿನಾಥ ಕುರ್ತುಕೋಟಿ, ಡಾ.ಗಿರೀಶ್ ಕಾರ್ನಾರ್ಡ್ ಮತ್ತೆಲ್ಲಾ ಉತ್ತಮೋತ್ತಮರು. ಆಗ ಚೆಲುವಿನ ಅಹಂವುಳ್ಳ ಆತ್ಮ, ವಿಶ್ವಾಸದ ಉತ್ತುಂಗದಲ್ಲಿದ್ದ ವಯಸ್ಸದು ನೋಡಿ ಅದಕ್ಕೆ ಅವರ್ಯಾರೂ ನನ್ನ ಟಾರ್ಗೆಟ್ ವೀಕ್ಷಕರಲ್ಲ! ನಾಟಕದ ಕೊನೆ ಚಪ್ಪಾಳೆಗಳ ಸುರಿಮಳೆ. ಮೇಲೆದ್ದ ಕುರ್ತುಕೋಟಿಯವರು “ನೀನು ಧಾರವಾಡ್ದವಳೇನು?” ಅಂತ ಕೇಳಿದ್ರು ಅದಕ್ಕೆ ಕಂಬಾರರು “ಆಕೀ ಒಡೆಯರ್ರ ಮಗಳು ನೋಡ್ರೀ” ಅಂತ್ಹೇಳಿ ನಕ್ಕರು. ನನಗೆ ಹೆಮ್ಮೆಯೂ ಇಲ್ಲ ಹೆಚ್ಚುಗಾರಿಕೆಯೂ ಅಲ್ಲ. ಹರೆಯದ ಕೈಯಲ್ಲಿತ್ತಲ್ಲ ಬುದ್ಧಿ ಅಂದ್ಮೇಲೆ ಯಾವುದರ ಬೆಲೆತಾನೇ ತಿಳಿದೀತು?

ಬಣ್ಣ ಕಳಚಿತು. ಕಣ್ಣ್ತುಂಬಾ ನಿದ್ದೆಯೂ ಆಯ್ತು. ಮಾರನೆಯ ಸಂಜೆ ಖಾಲೀ ಖಾಲೀ. ನಾಟಕ ತಾಲೀಮು ಇಲ್ಲವಲ್ಲ?! ಆಗ ನನ್ನೊಳಗೆ ಆವಾಹನೆಯಾಗಿದ್ದು ಕಂಬಾರರ “ಅಕ್ಕಕ್ಕು ಹಾಡುಗಳೇ”. “ಬರಗಾಲ ಬಂತೆಂದು ಬರವೇನೋ ಹಾಡಿಗೆ, ಮನಸಿಗೆ ನಿನ್ನ ಕನಸಿಗೆ; ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ ಬಿಡಬೇಕೋ ತಮ್ಮ ಬಯಲಿಗೆ....” ಓಹ್, ಇದನ್ನು ಹಾಡಾಗಿಸಿದ ದೇವರಲ್ಲವೇ ನೆನ್ನೆ ನನ್ನೆದುರು ಇದ್ದದ್ದು? ತಡಾವಾಗಾದ ಜ್ಞಾನೋದಯಕ್ಕೆ ಮರುಕವೇ ಶಿಕ್ಷೆ. ಆಗ ಮನೆಯಲ್ಲಿ ವೆರಾಂಡದಿಂದ ಅಡುಗೆ ಕೋಣೆಯವರೆಗೂ ಪುಸ್ತಕವೇ ಆಸ್ತಿ ಆಗಿದ್ದರೂ ಎಲ್ಲೂ ಕಂಬಾರರ ಒಂದು ವಾಕ್ಯವೂ ಸಿಗದ್ದು. ಅಮ್ಮನಿಗೆ ದುಂಬಾಲು ಬಿದ್ದೆ. ಲೈಬ್ರರಿಯಿಂದ ಅದೇನೆನೋ ಲೇಖನಗಳು ಮನೆಗೆ ಬಂದವು. ಲ್ಯಾಂಡ್ಸ್ಡೌನ್ ಕಟ್ಟಡದ ಮಳಿಗೆಗಳನ್ನೂ ಸುತ್ತಿದ್ದಾಯ್ತು, ಪ್ರಸಾರಾಂಗವನ್ನೂ ಇಣುಕಿದ್ದಾಯ್ತು. ಆದರೂ ಸಮಾಧಾನವಿಲ್ಲ. “ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ ಹಾಡಬೇಕೋ ತಮ್ಮ ಹಾಡಬೇಕು; ಆಕಾಶದಂಗಳ ಬೆಳದಿಂಗಳೂ ಕೂಡಾ ಕಂಗಾಲಾಗುವ ಹಾಡು ಹಾಡಬೇಕೋ....” ಹೀಗೇ ನಿರಂತರವಾಗಿ ಹಾಡ್ಕೋತಾ ಹಾಡ್ಕೋತಾ ಕಂಬಾರರ ಪದಗಳೊಂದಿಗೆ ಪ್ರೀತಿಗೆ ಬಿದ್ದೆ. ಅವರ ಅಕ್ಷರದೆಡೆಗಿನ ನನ್ನ ಮೋಹ ಕಾಡುಕುದುರೆಯಂತೆ.

ಅದ್ಯಾವ ಲೋಕದಲ್ಲಿ ನನ್ನ ಪಯಣ? : “ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ” ನನ್ನನ್ನು “ಏಳಕೊಳ್ಳ ತಿಳ್ಳೀ ಆಡಿ ಕಳ್ಳೆಮಳ್ಳೆ ಆಡಿಸಿ ಕೆಡವಿತ್ತ...” ಆಮೆಲೆ ಸಿಕ್ಕಿದ್ದು “ಮರೆತೇನಂದರ ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ” ಅಂತಿದ್ದ ಕಂಬಾರರು. “ಸೊನ್ನಿಗೆ ಆಕಾರ ಬರೆದೇನಂದಿ, ಬಯಲಿಗೆ ಗೋಡೆ ಕಟ್ಟೇನಂದಿ......ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ” ಸಾಲುಗಳು ನನ್ನೆಲ್ಲಾ ಅಂತಃಸತ್ತ್ವವನ್ನು ಪ್ರತಿಫಲಿಸುತ್ತಿತ್ತು ಆ ದಿನಗಳಲ್ಲಿ. ಮತ್ತೊಮ್ಮೆ ರಂಗದ ದಿನಗಳು. ಕಂಬಾರರ ಕರಿಮಾಯಿ ತಾಯೇ ಸಾಲುಗಳನ್ನು, ಬಿ.ಜಯಶ್ರೀ ಧ್ವನಿಪೆಟ್ಟಿಗೆಯ ಕಂಚು ಉಜ್ಜಿತೆಂದರೆ ಆಹಾ, ಅದ್ಯಾವ ಲೋಕದಲ್ಲಿ ನನ್ನ ಪಯಣ? “ಗುಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ; ಗಂಡಗಂಡರನೆಲ್ಲ ಹೆಂಡಿರ ಮಾಡಿ....ಸಾವಿರದ ಶರಣವ್ವ ಕರಿಮಾಯಿ ತಾಯೇ....” ಸಾಲುಗಳ ಮುತ್ತುದುರಿಸುತ್ತಾ ಭಾಷಣಗಳಲ್ಲಿ ಮೇಜುಗುದ್ದುತ್ತಿದ್ದ ದಿನಗಳವು. ಇವರ ಮತ್ತೊಂದು ಪದ್ಯ “ಗಿಣಿರಾಮ ಹೇಳಿತು” ಅದಕ್ಕೆ ಬಿ.ವಿ ಕಾರಂತರ ಸಂಗೀತ “ಗಿಣಿರಾಮ ಹೇಳಿದ ರೇಪಿನ ಕಥೆಯೊಂದ; ರಾಮಾ ಹರಿ ರಾಮಾ, ಮಾನಭಂಗಿತಳಾಗಿ ಕನಸೊಂದು ಬಿದ್ದಿದೆ; ರಾಮಾ ಹರಿ ರಾಮಾ” ಅಂತ ಕಾರಂತರು ಹಾಡ್ತಿದ್ದರೆ ಅದೆಲ್ಲಿರುತ್ತಿತ್ತೋ ನನ್ನ ಕಣ್ಣೀರು ಝುಳು ಝುಳು ಹರೀತಿತ್ತು.

ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು : ಹೀಗೆ ಒಂದೊಂದು ಕಣ್ಣೀರಿನ ಹನಿಯಲ್ಲೂ ಕಂಬಾರರ ಸಾಹಿತ್ಯ, ಭಾಷೆ ಎಲ್ಲವೂ ನನ್ನೊಳಗೇ ಶಾಖವಾಗ್ತಾ ಹೋಯ್ತು. “ಸ್ವಂತಚಿತ್ರ ಬರೆಯೋದು ಕಷ್ಟವಲ್ಲ ಮಿತ್ರ”, "ಇಬ್ಬರ ತಕರಾರಿಗೆ ಹುಟ್ಟಿ ಹಲವರ ತಕರಾರಲ್ಲಿ ಬೆಳೆದವರು ನಾವು ತಕರಾರಿನವರು” ಎನ್ನುತ್ತಾ ಕಥೆಗೆ ಶುರುವಿಟ್ಟ ಕಂಬಾರರು, “ನನ್ನ ಮನದಾಗರೆ ಇದು ಏನ ಬೆಳೆದೈತಿ? ತುಂಬ ಮಲ್ಲೀಗಿ ಹೂಬಳ್ಳಿ; ಉದುರೀಸಿ ನಿನ್ನ ಪಾತಾಳ ತುಳುಕಲಿ” ಎಂದೆನ್ನುವ ಅರಗೊಡ್ಡಿಯ ಪ್ರೇಮಗೀತೆಯಾಗಿಸತೊಡಗಿದರು ನನ್ನನ್ನು. ಋಷ್ಯಶೃಂಗನ ನಾಟಕೀಯತೆಯಲ್ಲಿ “ಅಪ್ಪ ಸೂತ್ರಧಾರ ಕೇಳೋ ಕನಸ ಕಂಡಿನೆ, ಸುಖದ ನೋವ ಸದ್ದ ಮಾಡಿ ಹೆಂಗ ಹೇಳಲೆ” ಎಂದು ಉನ್ಮಾದಕ್ಕೆ ತಳ್ಳುತ್ತಾ, ಕಲೆಗಾರಣ್ಣನ ಲಾವಣಿಯಲ್ಲಿ “ಇಷ್ಟೆ ಕಣ್ಣಿನ ಇಷ್ಟಿಷ್ಟೆ ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು ಮೇಲಕ್ಕೆ ಕೆಳಕ್ಕೆ ರೆಂಬೆ ರೆಂಬೆಗೆ, ಕೊಂಬೆ ಕೊಂಬೆಗೆ ಸೋಂಕಿನ ಸೊಗಸ ಬೀರುತ, ಕಲೆಗಾರನ ಕಲ್ಪನೆಗೆ ಶರಣೆನ್ನಿರಿ” ಎಂದು ಕುಣಿಸುತ್ತಾ, “ವ್ಯರ್ಥಗಳ ಸಮರ್ಥಿಸಿಕೊಳ್ಳುತ್ತಾ, ಅಪಾರ್ಥದಲ್ಲಿ ಅರ್ಥಗಳ ಸೃಷ್ಟಿಸುತ್ತಾ, ಇಲ್ಲಾ ರಾಮಾಯಣದ ಮಹಿಮೆ ಜಪಿಸುತ್ತಾ” ಗೋದೂ ತಾಯಾಗಿಸಿ ನನ್ನೊಡನೆ ನನ್ನನ್ನು ಇಬ್ಬರಾಗಿಸಿ “ರೆಕ್ಕೆಯೊಳಗಿನ ಹಕ್ಕಿಯ ಥರ ನಮ್ಮ ನೆರಳುಗಳನ್ನೇ ಮೈಗೂ ಮನಸ್ಸಿಗೂ ಸುತ್ತಿಕೊಂಡು ಉರಿವ ಬೆಂಕಿಯ ಬಳಿ ಕೂತೆವು” ಎಂದೆಂದುಕೊಳ್ಳುವಂತೆ ಮಾಡಿಟ್ಟರು. ನಾನು ಒಳಗೇ ಹೇಳುತ್ತಾ ಹೋದೆ ಅವರದೇ ನುಡಿಯಾಗಿ “ಒಂದಾನೊಂದು ಕಾಲದಲ್ಲಿ ಏಸೊಂದ ಮುದವಿತ್ತಾ, ಮುದಕೊಂದು ಹದವಿತ್ತಾ, ಹದಕ ಹಂಗಾಮಿತ್ತಾ, ಅದಕೊಂದ ಶಿವನ ಲಗಾಮಿತ್ತಾ” “ನಾನೀಗ ನನ್ನ ಖಾಸಗಿಯನ್ನು ಕಾಣಬೇಕು. ಮಾತಾಡಬೇಕು ಅದರೊಂದಿಗೆ ನಿಜ ನೋಡಬೇಕು, ಶಬ್ದವೇ ಶಬ್ದವೆ ತೋರು ನಿಜವನ್ನ,ನನ್ನಳತೆಯ ಮನುಷ್ಯನಳತೆಯ ಸತ್ಯವನ್ನ.”

“ಜೋಲಿ ತಪ್ಪಿದ ಪೋರಿ ಬಿದ್ದಾಳ ತೆಕ್ಕೀಗಿ, ಸಂದ ಉಳಿಯದ ಹಾಂಗ ಒಂದಾಗಿ ಮೈಮುರದಾ” ಅನ್ನೋ ಹಾಗೆ ನನ್ನನ್ನು ಜೀವನದೊಳಗೆ ಒಂದು ಮಾಡಿ “ಮಂದಾರ ಮರದಲ್ಲಿ ಪಾರ್ವತಿ ಹಣ್ಣು ತಿಂದದ್ದೇ ದೇವಲೋಕಕ್ಕೂ ಬಂತು ಹಸಿವಿನ ಬಾಧೆ” ಅದಕ್ಕೇ, “ಹಾವಲ್ಲ ಅದು ಹಗ್ಗ ಎನ್ನುವರು ಕೆಲಮಂದಿ ಹಗ್ಗದಲ್ಲೂ ಹರ್ಷ ಚಿಮ್ಮುವಾಕೆ ಈ ಮಾಯೆ” ಎನ್ನುವ ಅರಿವು ನನಗೆ ಮೂಡಿಸಿದ್ದು ಈ ಸೂರ್ಯ ಶಿಖರನ ಸಾಹಿತ್ಯ. “ಲೂಟಿ ಮಾಡಾಕ ಬಂದ ಮಾಟಗಾರೇನ ಸುಖದ ಶಿಖರದ ಮ್ಯಾಲ ಹತ್ತಿನಿಂತಾನ ಇಕ್ಕಟ್ಟೀನ ಬಿಕ್ಕಟ್ಟೆಲ್ಲಾ ಒಟ್ಟಿಗಿ ದೂರ ಮಾಡಿದ್ದ” “ಯಾರವ್ವ ಈ ಚೆಲುವ ತಂತಾನೆ ರಂಜಿಸುವ ಸೂರ್ಯನ ಥರ ಹೊಳೆಯುವ” ಅಂತ ಮನಸ್ಸಿನಲ್ಲೇ ನಾನು ಮುಲುಗುತ್ತಿರುವಾಗಲೇ ನಾಳಿನ ಸತ್ಯವನ್ನು ಇಂದೇ ಬಯಲಾಗಿಸಿಕೊಟ್ಟದ್ದು ಅವರ ಮಾತು ““ಅಜ್ಜ ಅಜ್ಜಿಗೆ ಬೇಜಾರು ನೆನಪೂ ಬೋರು, ಕುರುಡ ಮುದುಕ ಕೈಯಾಡಿಸಿ ಹುಡುಕುತ್ತಾನೆ ಎಲ್ಲಿದ್ದೀಯೆ ಮುದುಕಿ ಎಲ್ಲಿದ್ದೀಯೆ?”

ಮಂಗಳವಾರ ಹೆಣ್ಣುಮಗುವನ್ನು ಬೀದಿಗೆಸೆದ ಮಹಾತಾಯಿ


ಯಾದಗಿರಿ, ಸೆ. 20 : ಮಂಗಳವಾರ ಹೆಣ್ಣುಮಕ್ಕಳಿಗೆ ಮಂಗಳಕರ ವಾರ ಅಂತಾರೆ. ಆದರೆ, ಮಂಗಳವಾರವೆ ಬೆಳಗಿನ ಜಾವ 6 ಗಂಟೆ ಸುಮಾರಿಗೆ ತಾಯಿಯೊಬ್ಬಳು 6 ತಿಂಗಳ ಹೆಣ್ಣುಮಗುವನ್ನು ಬೀದಿಗೆಸೆದು ಹೋದ ಅಮಾನವೀಯ ಮತ್ತು ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿತೆ.

ನಗರದ ಸಿಂಡಿಕೇಟ್ ಬ್ಯಾಂಕ್ ಎದುರು ಬೀದಿಯಲ್ಲಿ ಬಿದ್ದಿದ್ದ ಹಸುಗೂಸನ್ನು ಪ್ಲಾಸ್ಟಿಕ್ ಆಯುವವರು ನೋಡಿ ವಾಕಿಂಗ್ ಮಾಡುವವರಿಗೆ ತಿಳಿಸಿದ್ದಾರೆ. ಮಗು ಅಸುನೀಗಿತ್ತು, ಮೂಗಿನಲ್ಲಿ ಕಿವಿಯಲ್ಲಿ ರಕ್ತ ಬಂದಿತ್ತು. ಬೇಡದ ಮಗುವನ್ನು ಕೊಲೆ ಮಾಡಿ ಬಿಸಾಕಿರಬಹುದು ಎಂದು ಅನುಮಾನಿಸಲಾಗಿದೆ.

ನವಜಾತ ಶಿಶುವನ್ನು ಎಸೆದು ಹೋದ ಪ್ರಕರಣಗಳು ಯಾದಗಿರಿ ಜಗುಗುತ್ತಿದ್ದು, ಇದು 3ನೆಯ ಪ್ರಕರಣವಾಗಿದೆ. ಮಕ್ಕಳಿಲ್ಲದವರು ನಮ್ಮ ದೇಶದಲ್ಲಿ ಬಹಳಷ್ಟು ಜನರಿದ್ದಾರೆ. ಮಕ್ಕಳಿಗಾಗಿ ಕಂಡ ಕಂಡ ಕಲ್ಲು ದೇವರಿಗೆ ಕೈಮುಗಿಯುತ್ತಾರೆ. ಮಕ್ಕಳಿಲ್ಲದವರಿಗೆ ಇಂಥ ಮಕ್ಕಳನ್ನು ನೀಡಿದ್ದರೆ ತಾಯ ಮಡಿಲನ್ನು ತುಂಬಬಹುದಾಗಿತ್ತು. ಮಕ್ಕಳನ್ನು ಬೀದಿಗೆಸೆಯುವ ಇಂಥ ತಾಯಂದಿರಿಗೆ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ

ಬೆಂಗಳೂರು, ಸೆ. 19 : ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಜಾನಪದ ಸೊಗಡಿನ ಹಿರಿಯ ಸಾಹಿತಿ, ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಡಾ. ಚಂದ್ರಶೇಖರ ಕಂಬಾರ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೃಷಿ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಇನ್ನೊಂದು ಹೆಗ್ಗಳಿಕೆ.

ಧಾರವಾಡ ಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ದುಡಿಸಿಕೊಂಡಿರುವ ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯಕ್ಕೆ ಈ ಪ್ರಶಸ್ತಿ ಲಭಿಸಿದೆ. ಇಲ್ಲಿಯವರೆಗೆ ಕುವೆಂಪು, ಶಿವರಾಮ ಕಾರಂತ, ದರಾ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಕೃ ಗೋಕಾಕ, ಗಿರೀಶ್ ಕಾರ್ನಾಡ್ ಮತ್ತು ಯುಆರ್ ಅನಂತಮೂರ್ತಿಯವರು ಈ ಪ್ರಶಸ್ತಿಯನ್ನು ಪಡೆದ ಸಾಹಿತಿಗಳಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಒಡೆತನದ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ಸ್ಥಾಪಿಸಿದ್ದು, 1961ರಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಸಿರಿಸಂಪಿಗೆ, ಜೋಕುಮಾರಸ್ವಾಮಿ, ಮಹಾಮಾಯಿ, ಹರಕೆಯ ಕುರಿ, ಋಷ್ಯಶೃಂಗ, ಬೆಪ್ಪುತಕ್ಕಡಿ ಭೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಕಂಬಾರರ ಪ್ರಮುಖ ನಾಟಕಗಳು. ತಾವೇ ಬರೆದ ಕರಿಮಾಯಿ, ಕಾಡುಕುದುರೆ, ಸಂಗೀತಾ ಕಾದಂಬರಿಯನ್ನು ಆಧರಿಸಿ ಚಿತ್ರಗಳನ್ನು ಕೂಡ ಅವರು ತೆಗೆದಿದ್ದಾರೆ. ಅವರ ಸಿರಿಸಂಪಿಗೆ ನಾಟಕಕ್ಕೆ 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.

ಕಂಬಾರರು ಬೆಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಂಬಾರರು ಸೇವೆ ಸಲ್ಲಿಸಿದ್ದಾರೆ. ಮಾತು ಮತ್ತು ಕೃತಿಗಳಲ್ಲಿ ಅಪ್ಪಟ ಧಾರವಾಡ ಸಂಸ್ಕೃತಿಯನ್ನು, ಜಾನಪದ ಸೊಗಡನ್ನು ಬಿಂಬಿಸುವ ಕಂಬಾರರಿಗೆ ದಟ್ಸ್ ಕನ್ನಡ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
eÛk«Ú®ÚÁÚM®ÚÁæVÚ×Ú PþÚáÛÌÞÄ ËæàÞ¨ÚOÚ:-


ºÛÁÚ}Ú¥Ú ®ÚÃ~Ïr}Ú eÛk«Ú¯ÞpÚ ®ÚÃËÚÒ¡Væ ºÛd«ÚÁÛWÁÚßÈÚ sÛ. ^ÚM¥ÚÃËæÞRÁÚ OÚM†ÛÁÚ @ÈÚÁÚß OÚ«Ú„sÚ¥Ú ÑÛÕ}ÚÀ¥Ú GÄÇ ®ÚÃOÛÁÚVÚ×Ú«Úß„ ÑÚÈÚßä¥ÚªVæàØÒ¥Ú J…¹ ®ÚÃ~ºÛÈÚM}Ú. OÚM†ÛÁÚÁÚ ÑÛÕ}ÚÀÈæM¥ÚÁæ @¥Úß OæÞÈÚÄ ÑÛÕ}ÚÀÈÚÄÇ. eÛk«Ú®ÚÁÚM®ÚÁæVÚ×Ú PþÚáÛÌÞÄ ËæàÞ¨Ú«æ. OÚM†ÛÁÚÁÚß AOÛËÚ¥Ú ºÚàÉßWM}Ú @¥ÚÁÚ ÈÚßàĨÛ}ÚßÈÛ¥Ú †æÞÂVæ †æÅæ OæàloÈÚÁÚß. A }Û¿ß †æÞÂ«Ú ÈÚßàÄOÚÈæÞ ±ÚÄ®Úâ´ÎÚ°VÚ×Ú«Úß„ «æàÞsÚ…¾ÚßÒ¥ÚÈÚÁÚß. A¥Ú§ÂM¥ÚÅæÞ @ÈÚÁÚ ÑÛÕ}ÚÀÈæM¥ÚÁæ }Û«Úß ÔÚßno¥Ú «æÄ¥Ú ±ÚÄÈÚM~Oæ¾Úß ÑÚMOæÞ}Ú. @¥Úß ÈÚßßMVÛÂ«Ú ®ÚâÚÈÚß ÈÚß×æ¾Úß ºÚà ÑÚ°ÎÚ%¥Ú ÑÚßVÚM¨ÚºÚÂ}Ú AÑÛ‡¥Ú. OÚM†ÛÁÚÁÚß }ÚÈæß½ÄÇ ÑÚäd«ÚÌÞÄ OÚäÏVæ †æ×ÚßÈÚÄ¥Ú «æÄ¥ÚÆÇ ^æÆÇ¥Ú eÛ«Ú®Ú¥Ú¥Ú VÚno OÛ×ÚßVÚ×Ú«Úß„ A¾ÚßߧOæàMsÚÁÚß. }ÚÈÚß½ _M}Ú«ÚÌÞÄ OÚÈÚáÛ½ÂOæ¾Úß OÚÅÛ}Ú½OÚ}æ¾ÚßÆÇ OÛ×ÚßVÚ×Ú«Úß„ Èæà×ÚOæ¾æàsÚÒ ÑÚÈÚßä¥Úª ±ÚÑÚÄß ®Úsæ¥Ú "ÅæÞR¬¾æàÞW' @ÈÚÁÚß.
D}Ú¡ÁÚ OÚ«Û%lOÚ¥Ú EØVÚÈÚáÛ«ÚÀ ÈÚÀÈÚÑ椾ÚßÆÇ ÔÚßnoOæàMsÚ ÈæçºÚÉÞOÚä}Ú ¥æÞÒ «ÛlOÚVÚØVæ Èæç^ÛÂOÚ}æ¾Úß ÑÚ°ÎÚ% ¬Þt ÑÚÈÚáÛdÈÛ¥Ú¥Ú †æ×ÚOÚß ¬Þt¥Ú OÚM†ÛÁÚÁÚß A …¾ÚßÅÛl¥Ú ¥æÞÒ ®ÚÁÚM®ÚÁæ¾Úß«Úß„ DØÒOæàMsæÞ ÑÚÈÚßOÛÆÞ«Ú ÈÚáèÄÀOæQ ÑÚ°M¦Ò¥Ú ÈÚßÔÚ}Ú‡¥Ú «ÛlOÚOÛÁÚ. eæàÞOÚßÈÚáÛÁÚÑÛ‡Éß, ÑÚMVÛÀ†Û×ÚÀ, eæç Ò¥Ú«Û¾ÚßOÚ, FßÎÚÀËÚäMVÚ, ÔÚßƾÚß «æÁÚ×Úß ÈÚßßM}Û¥Ú @ÈÚÁÚ «ÛlOÚVÚ×Úß A¨Ú߬OÚ ÁÚMVÚºÚàÉßVæ OÚM†ÛÁÚÁÚß Oæàlo @«Ú«ÚÀ OÛ{OæVÚ×Úß.
OÚM†ÛÁÚÁÚß }ÚÈÚß½ OÚÉ}æVÚ×Ú«Úß„ …Áæ¾ÚßÄß AÁÚM»Ò¥Úߧ «ÚÈÚÀ®ÚM¢Ú D^Ûcñ¾Úß Ò¤~¾ÚßÆÇ¥Ú§ OÛÄ¥ÚÆÇ. «ÚÈÚÀ OÛÈÚÀ GÎÚßo ¸ÁÚßÒ¬M¥Ú …M¦}æàÞ @ÎæoÞ ¸ÁÚßÒ¬M¥Ú d«Ú É¥ÚàÁÚÈÚã A¿ß}Úß. A¥ÚÁæ eÛ«Ú®Ú¥Ú ÑæàVÚsÚß ÈÚß}Úß¡ ÈÚß«ÚÑÚßÓ GÁÚsÚ«Úà„ @¢æ%çÒOæàMsÚß ÈÚß{|«Ú ÈÛÑÚ«æ¾ÚßÆÇ ®Úñڳâ´ÄÇÈÛW @ÁÚØ¥Ú OÚM†ÛÁÚÁÚ OÛÈÚÀ BÈÚ~¡VÚà d«Ú®ÚÁÚÈÛW d«ÛOÚÎÚ%OÚÈÛW ÈÚß}Úß¡ @¢Ú%®Úãy%ÈÛW DØ¥Úß …M¦¥æ. @ÈÚÁÚ @OÚQOÚßQ ÔÛsÚßVÚ×æÞ, †æØÙÉßÞ«Úß, ÑÛÉÁÚ¥Ú «æÁÚ×Úß, }ÚOÚÁÛ«ÚÈÚÁÚß, ÔæÞ×Ú}æÞ«Ú OæÞ×Ú ÈÚßßM}Û¥Ú OÚÈÚ«Ú ÑÚMOÚÄ«ÚVÚ×Úß OÚ«Ú„sÚ¥Ú ËæÃÞÎÚr OÛÈÚÀOæQ ¬Þt¥Ú OÛ{OæVÚ×ÛW ÑÛÈÚ%OÛÆOÚ _M}Ú«æVÚ×ÛW DØ¥Úß …M¦Èæ.
OÚM†ÛÁÚÁÚß OÚ«Ú„sÚ d«Ú®Ú¥Ú ÑÛÕ}ÚÀOæQ Oæàlo OæàsÚßVæ @«Ú«ÚÀÈÛ¥Ú¥Úߧ. @ÈÚÁÚ d«Ú®Ú¥Ú ÑÛÕ}ÚÀÈæM¥ÚÁæ OæÞÈÚÄ ÔÛsÚßVÚ×Ú ÑÚMVÚÃÔÚÈÛW DؾÚßÆÄÇ. …¥ÚÅÛW OÚ«Ú„sÚ¥Ú fÞÈÚÑÚ}Ú‡ÈÚ«Úß„ A¦¿ßM¥Ú OÛ®ÛtOæàMsÚß …M¦¥Ú§ eÛ«Ú®Ú¥ÚÈæM… †æàOÚQÑÚÈÚ«Úß„ @¢Ú%®Úãy%ÈÛW }ÚsÚÉ, ËæàÞƒÒ @¥ÚÁÚ ÈÚáèÄÀÈÚ«Úß„ }ÚÈÚß½ _M}Ú«æVÚ×Ú ÈÚßàÄOÚ ®ÚÃ^ÚßÁÚ®ÚtÒ¥Ú PÞ~% @ÈÚÁÚ¥Úß.  ÔÛVæ¾æßÞ ÈÚßÁæ¾ÚáÛW ÔæàÞVÚ…ÔÚߥÛW¥Ú§ D}Ú¡ÁÚ OÚ«Û%lOÚ¥Ú @«Ú«ÚÀ ¨Ûn, ¨Ú´‡¬VÚ×Ú«Úß„ }ÚÈÚß½ ÑÚäÏoÌÞÄ OÛÈÚÀOæQ ÈÚVÛ%¿ßÒOæàMsÚß @¢Ú% eæà}æVæ «Û¥ÚÈÚã «ÚƾÚßßÈÚM}æ ÈÚáÛt¥Ú ÈÚáÛlVÛÁÚ @ÈÚÁÚß. D}Ú¡ÁÚ OÚ«Û%lOÚ¥Ú  eÛ«Ú®Ú¥Ú ÁÚMVÚºÚàÉß, …{|Ò ÔÛsÚÈÚ‡ d«Ú…×ÚVÚ, …¾ÚßÅÛlVÚ×Úß, ÈÚáÛ}ÛsÚßÈÚ ÆMVÚÈæÞ, «ÚÈÚß½ d«Ú®Ú¥Ú, ÄOÛЮÚ~ ÁÛd«Ú OÚ¢æ, †æÞsÚÁÚ ÔÚßsÚßVÚ, WØ ÈÚß}Úß¡ …äÔÚ¥æ§ÞÌÞ¾Úß _M}Ú«Ú ÈÚßßM}Û¥ÚÈÚâ´ OÚM†ÛÁÚÁÚ eÛ«Ú®Ú¥Ú _M}Ú«æ¾Úß …ÔÚßÈÚßßRÀ OÚä~VÚ×Úß.
OÚM†ÛÁÚÁÚß I¥Úß OÛ¥ÚM…ÂVÚ×Ú«Úß„ …Á榥ۧÁæ. OÛ¥ÚM…ÂVÚ×æM¥ÚÁæ @ÈÚâ´ OÛ¥ÚM…ÂVÚ×ÚÄÇ. JM¥Úß ÂÞ~¾ÚßÆÇ ÈÚßßM¥æ @ÈÚÁÚß …Áæ¥Ú ^ÚOæàÞ ÈÚßÔÛOÛÈÚÀOæQ ®æÃÞÁÚOÚÈÛW ¬M}Ú ÑÚÈÚßä¥Úª VÚ¥ÚÀ OÚ¢Ú«ÚVÚ×ÚÈÚâ´. D}Ú¡ÁÚ OÚ«Û%lOÚ¥Ú ÈæçɨڴÀÈÚß¾Úß d«ÚfÞÈÚ«ÚÈÚ«Úß„ ~ÁÚß×ÚßVÚ«Ú„sÚ¥Ú ºÛÎæ¾ÚßÆÇ ÈÚß«ÚÈÚßßlßoÈÚM}æ OÚno¥Ú ÈæàÞÔÚOÚ OÚ¢Ú«Ú ËæçÆ OÚM†ÛÁÚÁÚ ÈæçÌÎÚo=À. @ÈÚÁÚ ÒMVÛÁÚÈÚ‡ ÈÚß}Úß¡ @ÁÚÈÚß«æ, ÌRÁÚ ÑÚà¾Úß%, fÞ.Oæ.ÈÚáÛÑÚ¡ÁÚÁÚ ®ÚÃy¾Úß ®ÚÃÑÚMVÚ ÈÚß}Úß¡ OÚÂÈÚáÛ¿ß ÈÚßßM}Û¥Ú OÛ¥ÚM…ÂVÚ×Úß OÚ«Ú„sÚ¥Ú ËæÃÞÎÚr  OÛ¥ÚM…ÂVÚ×ÚÆÇ GM¦VÚà ÑÛ¤«Ú ®Úsæ¾Úß…ÄÇ @ÈæàÞYÚ OÚä~VÚ×Úß.
sÛ. ^ÚM¥ÚÃËæÞRÁÚ OÚM†ÛÁÚ @ÈÚÁÚß BÎæoÄÇ ÈæçɨڴÀÈÚß¾Úß ÑÛÕ}ÚÀ ÁÚ^Ú«æ¾Úß eæà}æVæ J…¹ ËæÃÞÎÚr _M}ÚOÚÁÛW, ¥æÞÒ ®ÚÁÚM®ÚÁæ¾Úß ÑÚÈÚߢÚ%OÚÁÛW, ÌOÚÐy }ÚdkÁÛW ÈÚáÛ«ÚÉÞ¾Úß ÈÚáèÄÀVÚ×Ú«Úß„ ÑÛÁÚßÈÚ J…¹ D¥Û}Ú¡ ÈÚÀP¡¾ÚáÛW OÚ«Ú„sÚ¥Ú ÈÚß}Úß¡ ºÛÁÚ}Ú¥Ú d«ÚÈÚáÛ«ÚÑÚ¥ÚÆÇ _ÁÚÑÛ¤¿ß¾ÚáÛW DؾÚßßÈÚ OæÄÑÚ ÈÚáÛt¥ÚÈÚÁÚß. ÈæßÞÆ«Ú @ÈÚÁÚ OÚä~VÚ×ÚM}æ¾æßÞ OÚ«Ú„sÚ «ÛtVæ @ÈÚÁÚß ¬Þt¥Ú ÈÚß}æà¡M¥Úß ËæÃÞÎÚr OæàsÚßVæ GM¥ÚÁæ ÔÚM¯¾Úß OÚ«Ú„sÚ ÉËڇɥÛÀľÚß. ÈÚÁÚOÚÉ †æÞM¥æþÚßÈÚÁÚ OÛĦM¥Ú OÚ«ÚÑÛW¾æßÞ Dئ¥Ú§ OÚ«Ú„sÚ ÉËڇɥÛÀľÚßOæQ ÑÛOÛÁÚ ÁÚà®Ú Oæàlo J…¹ ÑÚÈÚߢÚ% ÌÆ° @ÈÚÁÚß. OÚ«Ú„sÚ «Ût«Ú VÚ}ÚÈæçºÚÈÚÈÚ«Úß„ ®Úâ´«ÚÁÚÑÛ¤¯ÑÚßÈÚM}æ ÔÚM¯¾Úß É¥ÛÀÁÚyÀ AÈÚÁÚy¥ÚÆÇ @ÈÚÁÚß ¬Éß%Ò¥Ú OÚlosÚVÚ×Úß @ÈÚÁÚ ÑèM¥Ú¾Úß% ®ÚÃeækVæ ÑÛPоÚáÛW «ÚÈÚß½«Úß„ Oæç ¸ÞÒ OÚÁæ¾Úßß}Ú¡Èæ. D ¸ÒÆ«Ú A …mÛ…¾ÚßÆ«ÚÆÇ @ÈÚÁÚß «ælo ÈÚßÁÚWsÚVÚ×Úß BM¥Úß ÔÚà, ÔÚyß|, _VÚßÁÚßVÚ×Úß «Ú×Ú«ÚØÑÚßÈÚ ÈÚ«ÛM}ÚÁÚVÚ×ÛW ®ÚÂÈÚ~%}ÚÈÛVé¥Ú¥Úß, ÔÚPQ, ®ÚPÐ, ®ÛÃ{ ÈÚßßM}Û¥Ú «ÚàÁÛÁÚß …Væ¾Úß fÞÈÚÁÛÌVÚØVæ AËÚþÚß}ÛyÈÛW ÈÚßÅæ«ÛsÚ«Úß„ «æ«Ú¯ÑÚß}Ú¡¥æ. OÚM†ÛÁÚÁÚß OæÞÈÚÄ OÚlosÚ OÚloÆÄÇ. @ÈÚâ´VÚØVæ fÞÈÚ }ÚßM¸¥ÚÁÚß. A¥ÚËÚ% ËæçOÚÐ{OÚ}æ¾Úß ÅæÞ®Ú ÔÚ_`¥ÚÁÚß. OÚ«Ú„sÚ ÉËڇɥÛÀľÚßÈæM…ߥÚß ËÚßÎÚQ ®Ú¥ÚÉVÚ×Ú«Úß„ ¬ÞsÚßÈÚ OæÞÈÚÄ ÌOÚÐy ÑÚMÑ椾ÚáÛVÚ†ÛÁÚ¥Úß. @¥æàM¥Úß É¥æÀ¾Úß«Úß„ ÑÚäÏoÑÚßÈÚ ÑÚMÑ椾ÚáÛVÚ†æÞOÚß GM… OÚ«ÚÑÚ«Úß„ «Ú«ÚÑÚß ÈÚáÛt¥ÚÁÚß. OÚ«Ú„sÚ «Ût«Ú BtÞ …¾ÚßÅæÞ «ÚÈÚß½ ÉËڇɥÛÀľÚßÈæM¥Úß ÑÛÂ¥ÚÁÚß. A ÈÚßàÄOÚ …¾ÚßÄß ÈÚß}Úß¡ AľÚß¥Ú OÚÄ°«æ¾Úß«Úß„ ÈÚ^Ú«ÚOÛÁÚÁÚ ¾ÚßßVÚOæQ OæàMsæà¾Úßߧ ÉËڇɥÛÀľÚßÈÚ«Úß„ A¨Ú߬OÚ @«ÚߺÚÈÚ ÈÚßMsÚÈÚ«Û„W ®ÚÂÈÚ~%Ò¥Ú PÞ~% @ÈÚÁÚ¥Úß.
OÚ«Ú„sÚ ÑÛPÐ ®ÚÃeæk¾Úß ®ÚÃ~ÞOÚÈÛWÁÚßÈÚ, eÛ«Ú®Ú¥ÚÈæM… A¨ÛÀ~½OÚ ®ÚÁÚM®ÚÁæ¾Úß ®ÚÃ~¬ƒ¾ÚáÛWÁÚßÈÚ sÛ. ^ÚM¥ÚÃËæÞRÁÚ OÚM†ÛÁÚÁÚ ÑÚÈÚßVÚà ÑÛÕ}ÚÀÈÚ«Úß„ ºÛÁÚ}Ú¥Ú ËæÃÞÎÚr  ÑÛÕ}ÚÀÈæM¥Úß ®ÚÂVÚ{Ò "eÛk«Ú¯ÞpÚ' ®Úâ´ÁÚÑÛQÁÚÈÚ«Úß„ ¬ÞsÚßÈÚ ÈÚßàÄOÚ OÚ«Ú„sÚ «Ût«Ú ®ÚÃ~Îær¾Úß«Úß„ ÈÚß}Ú¡ÎÚßo L«Ú„}ÚÀOæQ OæàMsæà¾ÚßÀÅÛW¥æ. OÚ«Ú„sÚ¥Ú C ÔæÈæß½Væ OÛÁÚ{ÞºÚà}ÚÁÛ¥Ú «Ût«Ú VÚßÁÚß «ÛsæàÞd sÛ.^ÚM¥ÚÃËæÞRÁÚ OÚM†ÛÁÚÁÚ«Úß„ OÚ«Ú„tVÚÁæÄÇ ÈÚß«Ú¥ÚßM¸ ÔÛÁæçÑÚß}Û¡Áæ.

-sÛ. Õ._.†æàÞÁÚÆMVÚ¾ÚßÀ
®ÛèÛÀ®ÚOÚÁÚß, OÚ«Ú„sÚ ÉËڇɥÛÀľÚß, ÔÚM¯



ಸೃಷ್ಟಿ ವೆಂಚರ್ಸ್ ಪುಸ್ತಕ ಪರಿಷೆ ಬಗ್ಗೆ ನಿಮಗೆ ಎಷ್ಟು ಗೊತ್ತು?

ಬೆಂಗಳೂರು, ಸೆ.16: ನಗರದ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಅಕ್ಟೋಬರ್ 30 ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ 'ಪುಸ್ತಕ ಪರಿಷೆ' ನಡೆಯಲಿದೆ. ಸೃಷ್ಟಿ ವೆಂಚರ್ಸ್ ಮತ್ತು ಅನುಭವ ಶಾಲೆ ಈ ಪರಿಷೆಯನ್ನು ಆಯೋಜಿಸಿದೆ.

ಆದರೆ, ಸಂತೆಯಲ್ಲಿ ಪುಸ್ತಕಗಳ ಖರೀದಿ ಅಥವಾ ಮಾರಾಟ ಇರುವುದಿಲ್ಲ. ಬದಲಾಗಿ ಹೊಸ ಮತ್ತು ಹಳೆಯ ಎಲ್ಲ ಪ್ರಕಾರದ ಪುಸ್ತಕಗಳು ಹಸ್ತದಿಂದ ಹಸ್ತಕ್ಕೆ ಹಾಗೂ ಪುಸ್ತಕದಿಂದ ಪುಸ್ತಕಕ್ಕೆ ವಿನಿಮಯವಾಗಲಿವೆ. ಅಲ್ಲಿ ಯಾರು ಬೇಕಾದರೂ ತಮಗೆ ಇಷ್ಟವಾದ ಪುಸ್ತಕವನ್ನು ಉಚಿತವಾಗಿ ಕೊಂಡೊಯ್ಯಬಹುದು. ಅದೇ ರೀತಿ, ಇತರರ ಅನುಕೂಲಕ್ಕಾಗಿ ಪುಸ್ತಕವನ್ನು ಕೊಡಬಹುದಾಗಿದೆ ಎಂದು ಸೃಷ್ಟಿ ವೆಂಚರ್ಸ್ ಸಂಚಾಲಕ ನಾಗರಾಜ್‌ ಆರ್. ನಾವುಂದ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕಡಿಮೆಯಾಗುತ್ತಿರುವ ಪುಸ್ತಕ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರವೇಶ ಉಚಿತ. ಆದರೆ, ಒಬ್ಬರಿಗೆ ಒಂದು ಪುಸ್ತಕ ಮಾತ್ರ ನೀಡಲಾಗುವುದು ಎಂದು ನಾಗರಾಜ್‌ ತಿಳಿಸಿದರು. ನಾಗರಾಜ್‌ ನಾವುಂದ ಅವರ ಮೊಬೈಲ್ - 99450 03479 ಮತ್ತು 93434 99518.

ಇದು ಸಂಸ್ಥೆಯ ನಾಲ್ಕನೇ ಪುಸ್ತಕ ಪರಿಷೆಯಾಗಿದೆ. ಕಳೆದ ಮೂರು ಪುಸ್ತಕ ಪರಿಷೆಗಳಲ್ಲಿ ಸುಮಾರು 80 ಸಾವಿರ ಪುಸ್ತಕಗಳನ್ನು ವಿತರಿಸಿದ್ದೇವೆ. ಈ ಬಾರಿ 1 ಲಕ್ಷ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಪುಸ್ತಕ ಸಂಗ್ರಹ ಕಾರ್ಯ ನಡೆದಿದ್ದು, ಈಗಾಗಲೇ ಸುಮಾರು 35 ಸಾವಿರ ವಿವಿಧ ಪ್ರಕಾರದ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಓದುಗರು ಮತ್ತು ಪುಸ್ತಕಗಳ ನಡುವಿನ ಸೇತುವೆಯಾಗಿ ಪುಸ್ತಕ ಪರಿಷೆ ಕಾರ್ಯನಿರ್ವಹಿಸಲಿದೆ. ಪುಸ್ತಕಗಳ ಸಂಗ್ರಹಕ್ಕೆ ಸ್ಥಳೀಯ ಸಂಘಟನೆಗಳು, ಪುಸ್ತಕ ಪ್ರಾಧಿಕಾರ ಸೇರಿದಂತೆ ಜನರೂ ಕೈಜೋಡಿಸಿದ್ದಾರೆ ಎಂದು ಅವರು ಸ್ಮರಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ನಾಗಶ್ರೀ, ಪದ್ಮಶ್ರೀ, ಸತೀಶ್‌ ಉರಾಳ ಮತ್ತಿತರರು ಉಪಸ್ಥಿತರಿದ್ದರು.

ಮಗಳಿಗೆ 3 ಮಗು ಕರುಣಿಸಿದ್ದ ರೇಪಿಸ್ಟ್ ಫಾದರ್ ಸೆರೆ

ಬರ್ಲಿನ್, ಸೆ.15: ಅಸಹ್ಯವಾದರೂ ಇದು ಸತ್ಯ. ತನ್ನ ಮಗಳಿಗೆ ಮೂರು ಮಕ್ಕಳನ್ನು ಕರುಣಿಸಿದ್ದ, ರೇಪ್ ಮಾಡುವುದರಲ್ಲಿ ಸಿದ್ದಹಸ್ತ ಎನಿಸಿದ್ದ ಜರ್ಮನಿಯ 69 ವರ್ಷದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ಸುಮಾರು 497 ಸಲ ತನ್ನ ಮಗಳ ಮೇಲೆ ಬಲಾತ್ಕಾರ ಮಾಡಿ, ಸುಮಾರು 34 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಆರೋಪವನ್ನು ಜರ್ಮನಿಯ ಮಹಾನ್ ತಂದೆ ಮೇಲೆ ಹೊರೆಸಲಾಗಿದೆ.
  Read:  In English 

12 ವರ್ಷ ವಯಸ್ಸಿದ್ದಾಗಲಿಂದ ತನ್ನ ಲೈಂಗಿಕ ತೃಪ್ತಿಗಾಗಿ ನನ್ನನ್ನು ನನ್ನ ತಂದೆ ಬಳಸುತ್ತಿದ್ದ. ನ್ಯೂರೆಂನ್ಬರ್ಗ್ ನ ಮನೆ ಅಥವಾ ಕಾರಿನಲ್ಲಿ ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದು ಅಪ್ಪನಿಂದ ಮೂರು ಗಂಡು ಮಕ್ಕಳನ್ನು ಪಡೆದ 46 ವರ್ಷದ ಮಗಳು ಹೇಳಿಕೊಂಡಿದ್ದಾಳೆ.

ಇತ್ತೀಚೆಗೆ ತನ್ನ ಅಧಿಕಾರಿಯೊಬ್ಬರ ಬಳಿ ತಂದೆಯ ಪ್ರತಾಪದ ಗುಟ್ಟನ್ನು ಬಿಚ್ಚಿದ್ದು, ಈಗ ಎಲ್ಲೆಡೆ ಸುದ್ದಿಯಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಬಾಬಾ ರಾಮ್‌ದೇವ್‌ಗೆ ರಾಖಿ ಸಾವಂತ್ ಚಾಲೆಂಜ್

ಯೋಗ ಗುರು ಬಾಬಾ ರಾಮ್‌ದೇವ್ ಅವರಿಗೆ ಐಟಂ ಬೆಡಗಿ ರಾಖಿ ಸಾವಂತ್ ಸಖತ್ ಚಾಲೆಂಜ್ ಹಾಕಿದ್ದಾರೆ. ತಾಕತ್ ಇದ್ದರೆ ತಮ್ಮ ಜೊತೆ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಬನ್ನಿ ಎಂದಿದ್ದಾರೆ. ಈ ಹಿಂದೊಮ್ಮೆ ರಾಖಿ ಸಾವಂತ್‌ಗೆ ಬಾಬಾ ತೀವ್ರ ಮುಖಭಂಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಖಿ ತಿರುಗೇಟು ನೀಡಿದ್ದಾರೆ.

'ಬಿಗ್ ಬಾಸ್' ಅಡ್ಡಾಗೆ ಬನ್ನಿ ಮುಖಾ ಮುಖಿ ಭೇಟಿಯಾಗೋಣ. ಅಲ್ಲಿ ನೀನಾ ನಾನಾ ನೋಡೇ ಬಿಡೋಣ ಎಂದಿದ್ದಾರೆ. ಈ ಹಿಂದೆ ಬಾಬಾ ರಾಮ್‌ದೇವ್ ಮೇಲೆ ರಾಖಿಗೆ ಮನಸಾಗಿ ಮದುವೆಯಾಗುವುದಾದರೆ ಅವರನ್ನೇ ಆಗುತ್ತೇನೆ. ಇಲ್ಲದಿದ್ದರೆ 'ಕನ್ಯೆ'ಯಾಗಿಯೇ ಉಳಿದುಬಿಡುತ್ತೇನೆ ಎಂದಿದ್ದರು.
  Read:  In English 

ಇದಕ್ಕೆ ತಡವಾಗಿ ಪ್ರತಿಕ್ರಿಯಿಸಿದ ಬಾಬಾ, ಇದೊಂದು ನಡತೆಗೆಟ್ಟ ಮಾತು ಎಂದಿದ್ದರು. ಬಾಬಾ ಮಾತಿಗೆ ಕೆರಳಿದ ಸರ್ಪದಂತಾಗಿರುವ ರಾಖಿ, "ಬಾಬಾಗೆ ನಾನು ಚಾಲೆಂಜ್ ಮಾಡುತ್ತಿದ್ದೇನೆ, ನನ್ನೊಂಗಿಗೆ ಅವರು ಬಿಗ್‌ಬಾಸ್ ಮನೆಗೆ ಬರಲಿ. ವಿಶ್ವಾಮಿತ್ರನಿಗೆ ಮೇನಕೆ ತಪಸ್ಸು ಭಂಗ ಮಾಡಿದಂತೆ ಮಾಡುತ್ತೇನೆ. ನಾನು ಚಾಲೆಂಜ್ ಮಾಡುತ್ತಿದ್ದೇನೆ ಅವರ ಶೀಲ ಹರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ.

ಕಲರ್ಸ್ ವಾಹಿನಿಯ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮಕ್ಕೆ ವೆಲ್ಡ್ ಎಂಟ್ರಿ ಮೂಲಕ ಬಾಬಾ ರಾಮ್ ದೇವ್ ಹಾಗೂ ರಾಖಿ ಸಾವಂತ್ ಪ್ರವೇಶಿಸುವ ಸಾಧ್ಯತೆಗಳೂ ಇಲ್ಲದಿಲ್ಲ! ಆದರೆ ಬಾಬಾ ರಾಮ್ ದೇವ್‌ ಗಡ್ಡ ಯಾಕೋ ಇಷ್ಟವಾಗಲಿಲ್ಲ. ಅವರು ಕ್ಲೀನ್ ಆಗಿ ಶೇವ್ ಮಾಡಿಕೊಂಡು ಬಂದರೆ ಒಳಿತು ಎಂದಿದ್ದಾರೆ ಬಿಂಕದ ರಾಣಿ ರಾಖಿ.

ವಿದ್ಯಾ ಬಾಲನ್ ಮತ್ತೊಮ್ಮೆ ಕಳಚಲಿದ್ದಾರೆ ವಸ್ತ್ರ!

ಈಗಾಗಲೆ ತಮ್ಮ ಯೌವನವನ್ನು ಬೆಳ್ಳಿತೆರೆಯ ಮೇಲೆ ಪ್ರದರ್ಶಿಸಿ ಚಿತ್ರರಸಿಕರ ಹೃದಯಕ್ಕೆ ಡೈವ್ ಹೊಡೆದಿರುವ ಸಖತ್ ಹಾಟ್ ಬೆಡಗಿ ವಿದ್ಯಾ ಬಾಲನ್ ಮತ್ತೊಮ್ಮೆ ಪಡ್ಡೆಗಳ ನಿದ್ದೆ ಕೆಡಿಸಲು ಬರುತ್ತಿದ್ದಾರೆ. 'ದಿ ಡರ್ಟಿ ಪಿಕ್ಚರ್' ಬಳಿಕ ವಿದ್ಯಾ ಸಹಿ ಹಾಕಿರುವ ಮತ್ತೊಂದು ಚಿತ್ರ 'ಎಂಜಾಯ್ ಯುವರ್ ಲೈಫ್'.
  Read:  In English 

ವಿದ್ಯಾ ತಮ್ಮ ಪಾತ್ರಕ್ಕಾಗಿ ನಗ್ನವಾಗುತ್ತಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು. ಚಿತ್ರದ ಪ್ರಮುಖ ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಕಾಣಿಸಲಿದ್ದಾರೆ. ಏತನ್ಮಧ್ಯೆ 'ದಿ ಡರ್ಟಿ ಪಿಕ್ಚರ್' ನೋಡಿರುವ ದಕ್ಷಿಣದ ನಿರ್ಮಾಪಕರು ಕಾಲ್ ಶೀಟ್‌ಗಾಗಿ ವಿದ್ಯಾ ಹಿಂದಿ ಬಿದ್ದಿದ್ದಾರೆ. ಆದರೆ ಅವರ ಬಲೆಗೆ ವಿದ್ಯಾ ಅಷ್ಟು ಸುಲಭವಾಗಿ ಸಿಗುವ ಮೀನಲ್ಲ.

'ಎಂಜಾಯ್ ಯುವರ್ ಲೈಫ್' ಚಿತ್ರದಲ್ಲಿ ವಿದ್ಯಾ ಏನೇನು ಮಾಡ್ತರೋ ಇನ್ನೇನು ತೋರಿಸ್ತಾರೋ ಎಂಬ ಕುತೂಹಲವಂತೂ ಆಕೆಯ ಅಭಿಮಾನಿಗಳಲ್ಲಿ ಇದ್ದೇ ಇದೆ. ಪ್ರೇಕ್ಷಕರು ಎಂಜಾಯ್ ಮಾಡುವುದಂತೂ ಸತ್ಯ. ಈ ಚಿತ್ರದ ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. ಅಲ್ಲಿಯವೆರಗೂ ವಿದ್ಯಾ ಅಭಿಮಾನಿಗಳು ತಾಳ್ಮೆವಹಿಸಲಿ

ಬೀಟ್ ರೂಟ್ ಮದ್ಯ, ಟೊಮ್ಯಾಟೋ ಮದ್ಯ:ರೇಣು ಯೋಜನೆ


ಬೆಂಗಳೂರು, ಸೆ. 14: ಬೀಟ್‌ರೂಟ್‌ನಿಂದ ಮದ್ಯ ತಯಾರಿಕೆ ಬಗ್ಗೆ ಸುಳಿವು ಕೊಟ್ಟಿದ್ದ ಮಾನ್ಯ ಅಬಕಾರಿ ಸಚಿವರು ಬುಧವಾರ ಮತ್ತೆ ಅದೇ ರಾಗ ಹಾಡಿದ್ದಾರೆ. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಹೊಸ ವಿಧಾನಗಳಲ್ಲಿ ಮದ್ಯ ತಯಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೇಣುಕಾಚಾರ್ಯ ಹೇಳಿದ್ದಾರೆ.

ಬೀಟ್‌ರೂಟ್‌ನಿಂದ ಮದ್ಯ ತಯಾರಿಕೆ ಬಗ್ಗೆ ಕಂಪೆನಿಯೊಂದು ಪ್ರಸ್ತಾವನೆ ಸಲ್ಲಿಸಿದೆ. ಇಲಾಖೆಯ ತಾಂತ್ರಿಕ ಸಮಿತಿ ಸಹ ಇದಕ್ಕೆ ಸಮ್ಮತಿಸಿದೆ. ಆದರೆ, ಹೊಸ ವಿಧಾನದ ಮದ್ಯ ತಯಾರಿಕೆಗೆ ಪ್ರಸಕ್ತ ಕಾಯ್ದೆಯಲ್ಲಿ ಅವಕಾಶಗಳಿಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ರೇಣುಕಾಚಾರ್ಯ ಹೇಳಿದರು.

ಬೀಟ್ ರೂಟ್ ನಂತರ ಟೋಮ್ಯಾಟೋ : 1 ಟನ್ ಬೀಟ್‌ರೂಟ್‌ನಲ್ಲಿ 350 ಲೀಟರ್ ಮದ್ಯ ತಯಾರಿಸಬಹುದು.[ತಯಾರಿಸುವ ವಿಧಾನ ನೋಡಿ] ಈ ಮದ್ಯದಲ್ಲಿ ಶೇ.16ರಷ್ಟು ಸಕ್ಕರೆ ಅಂಶವಿರುತ್ತದೆ. ಕೋಲಾರದ ನಿವೃತ್ತ ಸೇನಾಧಿಕಾರಿಯೊಬ್ಬರು ಟೊಮ್ಯಾಟೊದಿಂದ ಮದ್ಯ ತಯಾರಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಇದರ ಜೊತೆಗೆ, ರಾಜ್ಯದಲ್ಲಿ ಸಣ್ಣ ಪ್ರಮಾಣದ ಮದ್ಯ ತಯಾರಿಕಾ ಘಟಕ ಸ್ಥಾಪನೆಗೆ ಸರಕಾರ ಸಿದ್ಧತೆ ನಡೆಸಿದೆ.  ಚಾನ್ಸರಿ ಹೊಟೇಲ್, ಇಂದಿರಾನಗರದ ಫ್ರೆಶ್‌ಫೋರ್ ಮತ್ತು ನ್ಯೂ ಬಿಇಎಲ್ ರಸ್ತೆಯ ಸ್ಪಿರಿಟ್ ಬಿಯರ್ ವರ್ಲ್ಡ್ ಸಂಸ್ಥೆ ಅರ್ಜಿ ಸಲ್ಲಿಸಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದ್ದಾರೆ

ನಾನೇ ಬೇರೆ ನನ್ನ ಸ್ಟೈಲೇ ಬೇರೆ : ಶಿವರಾಜ ಪಾಟೀಲ - ಸಾಗರ ದೇಸಾಯಿ. ಯಾದಗಿರಿ


ಯಾದಗಿರಿ, ಸೆ. 15 : "ಮೊದಲನೇ ಲೋಕಾಯುಕ್ತ ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆ ಇದೆ ಎನ್ನುವುದನ್ನು ತೋರಿಸಿಕೊಟ್ಟರು. ಎರಡನೇ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸಂಸ್ಥೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋಸಿರಿದರು. ಮೂರನೇಯವನಾಗಿ ನಾನು ಹೇಗೆ ಕೆಲಸ ಮಾಡುತ್ತೇನೆ, ನನ್ನ ಸ್ಟೈಲ್ ಹೇಗಿದೆ ಎಂಬುದನ್ನು ಕಾದು ನೋಡಿ."

ಹೀಗೆಂದು ಲೋಕಾಯುಕ್ತ ಸಂಸ್ಥೆ ಮತ್ತು ತಮ್ಮ ಕಾರ್ಯನಿರ್ವಹಣೆಯ ಬಗ್ಗೆ ವಿಚಿತ್ರ ಕುತೂಲಹ ಕೆರಳಿಸಿದವರು ಮೂರನೇ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ.

ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಯಾದಗಿರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು ಮತ್ತು ಸಾರ್ವಜನಿಕರೊಡನೆ ಮುಕ್ತವಾಗಿ ಸಂವಾದ ನಡೆಸಿದರು.

ಲೋಕಾಯುಕ್ತರಿಗೆ ಸರ್ವಾಧಿಕಾರ ಬೇಡ, ಆದರೆ ಸರಿಯಾದ ಅಧಿಕಾರ ಇರಬೇಕು ಮತ್ತು ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ನಾನು ಲೋಕಾಯುಕ್ತನಾಗಿ ಕಾರ್ಯನಿರ್ವಹಿಸುವ ರೀತಿ ಭಿನ್ನವಾಗಿರುತ್ತದೆ. ನನ್ನ ಸ್ಟೈಲ್ ನೋಡಿ ನೀವೇ ನಿರ್ಧಾರ ಮಾಡಿ ಎಂದು ಅವರು ಜನರಿಗೇ ಸವಾಲ್ ಹಾಕಿದರು.

ಪರಮಾತ್ಮ ಹಾಡು & ಸಾಹಿತ್ಯ ಸೂಪರ್ ಬಿಡಿ ಭಟ್ರೇ - ಬಾಲರಾಜ್ ತಂತ್ರಿ

ಯೋಗರಾಜ್ ಭಟ್ ಮತ್ತು ಪುನೀತ್ ಕಾಂಬಿನೇಶನ್ ಚಿತ್ರವೆಂದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಸಹಜ. ಭಟ್ರ ಚಿತ್ರವೆಂದರೆ ಹಾಡಿಗೆ ಪ್ರಾಮುಖ್ಯತೆ ಜಾಸ್ತಿ. ಈ ಆಲ್ಬಮ್‌ನಲ್ಲಿ ಹಾಡಿನ ಟ್ಯೂನ್ ಜೊತೆ ಸಾಹಿತ್ಯದ ಮೇಲೂ ಒಲವು ತೋರಿದ್ದಾರೆ ನಿರ್ದೇಶಕರು. ಪಡ್ಡೆ ಹುಡುಗರಿಗೆ ಮತ್ತು ಅಪ್ಪಟ ಸಂಗೀತ ಪ್ರಿಯರಿಗೆ ಸಮವಾಗುವಂತೆ ಆಲ್ಬಮ್‌ನಲ್ಲಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಬಹು ನಿರೀಕ್ಷಿತ ಪರಮಾತ್ಮ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಬುಧವಾರ ( ಸೆ.14) ಬೆಂಗಳೂರಿನಲ್ಲಿ ನಡೆಯಲಿದೆ.

ಯಾವನಿಗೆ ಗೊತ್ತು... ಅವ್ಳು ಸಿಕ್ತಾಳ...( ಹಾಡಿರುವವರು: ಟಿಪ್ಪು)
ಸಾಹಿತ್ಯ: ಯೋಗರಾಜ್ ಭಟ್
ವಿಶಿಷ್ಟ ಸಾಹಿತ್ಯ ಮತ್ತು ಸಂಗೀತವಿರುವ ಹಾಡು. ಸ್ಲೋ ಬಿಟ್ ನಿಂದ ಫಾಸ್ಟ್ ಬಿಟ್‌ನಲ್ಲಿ ಸಾಗುವ ಹಾಡು, ಪಡ್ಡೆ ಹುಡುಗರಿಗಾಗಿಯೇ ಭಟ್ರು ವಿಭಿನ್ನ ರೀತಿಯಲ್ಲಿ ಸಾಹಿತ್ಯ ನೀಡಿದ್ದಾರೆ.

ಪರವಶನಾದೆನು...ಅರಿಯುವ ಮುನ್ನವೇ (ಹಾಡಿರುವವರು: ಸೋನು ನಿಗಮ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಮೆಲೋಡಿಯಸ್ ಟ್ಯೂನ್. ಅಬ್ಬರದ ಸಂಗೀತ ನೀಡದೆ ಶಿಸ್ತುಬದ್ಧ ಸಂಗೀತ ನೀಡಿರುವ ಹರಿಕೃಷ್ಣ ತನ್ನ ಹಿಟ್ ಹಾಡುಗಳ ಬತ್ತಳಿಕೆಗೆ ಇನ್ನೊಂದು ಹಾಡನ್ನು ಸೇರಿಸಿಕೊಂಡಿದ್ದಾರೆ. ಹಾಡಿನ ಸಾಹಿತ್ಯದ ಬಗ್ಗೆ ಕಾಯ್ಕಿಣಿ ಸಾಹೇಬ್ರುಗೆ ನಮ್ಮ ಕಡೆಯಿಂದ ಒಂದು ಸಲಾಂ.

ಕತ್ಲಲ್ಲಿ ಕರಡಿಗೆ... ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರ್ದೂರಿ (ಹಾಡಿರುವವರು: ಯೋಗರಾಜ್ ಭಟ್ )
ಸಾಹಿತ್ಯ: ಯೋಗರಾಜ್ ಭಟ್
ಜಾನಪದ ಬಿಟ್‌ನಲ್ಲಿ ಸಾಗುವ ಹಾಡು. ಎರಡೆರಡು ಹುಡುಗಿಯರನ್ನು ಪ್ರೀತಿಸಿದರೆ ಜೀವನ ಎಲ್ಲಿಗೆ ಸಾಗುತ್ತದೆ ಎನ್ನುವುದನ್ನು ಭಟ್ರು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದ್ದಾರೆ ಮತ್ತು ಹಾಡಿದ್ದಾರೆ. ಹಾಡಿನ ಟ್ಯೂನ್ ಅಷ್ಟಕಷ್ಟೇ ಆದರೂ ಸಾಹಿತ್ಯದ ಮೂಲಕ ಹಿಟ್ ಆದರೆ ಅಚ್ಚರಿ ಪಡಬೇಕಾಗಿಲ್ಲ.

ಕಾಲೇಜ್ ಗೇಟಿಗೆ..ಫೇಲ್ ಆಗಿ ಬಂದವರೋ ಚೊಂಬೆಶ್ವರ (ಹಾಡಿರುವವರು: ಹರಿಕೃಷ್ಣ)
ಸಾಹಿತ್ಯ: ಯೋಗರಾಜ್ ಭಟ್
ಮಾರ್ಕ್ ಕಾರ್ಡ್ಸ್ ನಲ್ಲಿ ಸೊನ್ನೆ ರೌಂಡ್ ಆಗಿ ಕಾಣುವುದು ಏನ್ ಮಾಡ್ಲಿ..ಏನ್ಮಾ ಮಾಡ್ಲಿ... ಚೊಂಬೆಶ್ವರ. ಪಾಸ್ ಆಗಿ ಒಂದೇಸಲ ಏನ್ ಮಾಡ್ಲಿ. ದಡ್ಡ ವಿಧ್ಯಾರ್ಥಿಯೊಬ್ಬ ತನ್ನ ಪದವಿ ಮುಗಿಸಲು ಪರೆದಾಡುವ ರೀತಿಯನ್ನು ಭಟ್ರು ಹಾಡಿನ ಮೂಲಕ ತಿಳಿಸಿದ್ದಾರೆ. ಈ ಹಾಡು ಸ್ವಲ್ಪ ದಿನದಲ್ಲೇ ಕಾಲೇಜ್ ಹುಡುಗ/ಹುಡುಗಿಯರ ಬಾಯಲ್ಲಿ ಗುನುಗುವುದರಲ್ಲಿ ಅನುಮಾನವಿಲ್ಲ.

ಹೆಸರು ಪೂರ್ತಿ, ತುಟಿಯ ಕಚ್ಚಿ ಕೊಳ್ಳಲೇ (ಹಾಡಿರುವವರು: ವಾಣಿ ಹರಿಕೃಷ್ಣ)
ಸಾಹಿತ್ಯ: ಯೋಗರಾಜ್ ಭಟ್
ಕಿವಿಗೆ ಮುದ ನೀಡುವ ಹಾಡು. ಇಂತಹ ಟ್ಯೂನ್ ಇರುವ ಹಾಡನ್ನು ಶ್ರೇಯಾ ಕಂಠಸಿರಿಯಲ್ಲಿ ಕೇಳಿರುವ ನಮಗೆ ಅವರೇ ಈ ಹಾಡನ್ನು ಹಾಡಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂದು ಅನಿಸದೇ ಇರದು.

ತನ್ಮಯಲಾದೆನು... ತಿಳಿಯುವ ಮುನ್ನವೇ ಕಣ್ಮರೆ ಆಗಲೇ ಹೇಳು... (ಹಾಡಿರುವವರು: ಶ್ರೇಯಾ ಘೋಶಾಲ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಆಲ್ಬಮ್‌ನ ಮತ್ತೊಂದು ಸೂಪರ್ ಟ್ರ್ಯಾಕ್. ಎಂದಿನಂತೆ ಶ್ರೇಯಾ ಮಸ್ತ್ ಆಗಿ ಹಾಡಿದ್ದಾರೆ. ಸದ್ಯಕ್ಕಂತೂ ಮೆಲೋಡಿಯಸ್ ಹಾಡೆಂದರೆ ಅದು ಶ್ರೇಯಾ ಹಾಡಿದರನೇ ಸೂಕ್ತ ಎನ್ನುವ ಮಟ್ಟಿಗೆ ಕನ್ನಡ ಚಿತ್ರರಂಗ ಬಂದ ಹಾಗಿದೆ. ಹಾಗೇ... ಉಚ್ಚಾರ ತಪ್ಪಿಲ್ಲದೆ ಹಾಡುವ ಶ್ರೇಯಾ ಅದನ್ನು ಉಳಿಸಿಕೊಂಡಿದ್ದಾರೆ ಕೂಡಾ.

ಲೋಕಾಯುಕ್ತಕ್ಕೆ ಪರಮಾಧಿಕಾರ ಬೇಕಾಗಿಲ್ಲ: ಪಾಟೀಲ್

ಗುಲ್ಬರ್ಗಾ, ಸೆ.14: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಮಾಧಿಕಾರ ಎನ್ನುವುದಕ್ಕೆ ಅರ್ಥವಿರುವುದಿಲ್ಲ. ಲೋಕಾಯುಕ್ತ ಸಂಸ್ಥೆ ಪರಮಾಧಿಕಾರ ಅಥವಾ ಸರ್ವಾಧಿಕಾರ ನೀಡುವ ಅವಶ್ಯಕತೆ ಇಲ್ಲ ಎಂದು ಲೋಕಾಯುಕ್ತ ಶಿವರಾಜ್ ಪಾಟೀಲ್ ಅವರು ಹೇಳಿದ್ದಾರೆ.

ಪರಮಾಧಿಕಾರ ನೀಡುವಂತೆ ಸರ್ಕಾರವನ್ನು ಕೇಳುವುದಿಲ್ಲ. ಆದರೆ, ಮೂರು ಮುಖ್ಯ ಅಧಿಕಾರ ನೀಡಬೇಕು. ಕರ್ನಾಟಕದ ಲೋಕಾಯುಕ್ತ ಕಾಯ್ದೆ ದೇಶದಲ್ಲೇ ಉತ್ತಮವಾದ ಕಾಯ್ದೆ ಎಂದು ಶಿವರಾಜ್ ಪಾಟೀಲ್ ಅವರು ಸಾರ್ವಜನಿಕ ಅಹವಾಲು ಸ್ವೀಕರಿಸಿದ ನಂತರ ಹೇಳಿದರು.

* ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿ, ನೌಕರರನ್ನು ಹುದ್ದೆಗೆ ಪುನರ್ ನೇಮಕ ಮಾಡುವಾಗ ಲೋಕಾಯುಕ್ತರ ಗಮನಕ್ಕೆ ತರಬೇಕು.
* ದಾಳಿ ನಂತರ ಅಧಿಕಾರಿಗಳು, ನೌಕರರು ಯಾರೇ ಆಗಿರಲಿ ಅವರ ವಿಚಾರಣೆಗೆ ಅನುಮತಿ ನೀಡಬೇಕು.
* ಭ್ರಷ್ಟರ ವಿರುದ್ಧ ಚಾರ್ಜ್ ಶೀಟ್ ಹಾಕಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವ ಅಧಿಕಾರ ಕಲ್ಪಿಸಬೇಕು.

ಈ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು. ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ್ಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಉಪ ಲೋಕಾಯುಕ್ತರ ಅಧೀನದಲ್ಲಿ 12 ಸಾವಿರ ಪ್ರಕರಣಗಳಿವೆ. ಲೋಕಾಯುಕ್ತರ ಅಧೀನದಲ್ಲಿ 3000 ಪ್ರಕರಣಗಳು ಬಾಕಿ ಉಳಿದಿವೆ.

ಮಾಂಸಪ್ರಿಯರಷ್ಟೇ ಅಲ್ಲ, ಕುಟ್ಟಿಗಳು ಸಕತ್ ಎಂಡ್ಕುಡುಕರು

ತಿರುವನಂತಪುರ, ಸೆ.14 : ಈ ಬಾರಿಯ ಓಣಂ ಆರಂಭದಲ್ಲಿ ಒಂದು ದಿನ ಮಾಂಸ ತಿನ್ನುವುದನ್ನು ಕಷ್ಟಪಟ್ಟು ತಡೆದುಕೊಂಡರೂ ದೇಶದ ಟಾಪ್ ಮಾಂಸಪ್ರಿಯ ಜನ ಎನಿಸಿದ ಕುಟ್ಟಿಗಳು ಈಗ ಮದ್ಯ ಮಾರಾಟದಲ್ಲಿ ದಾಖಲೆ ಸೃಷ್ಟಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಬಿವರೇಜಸ್ ನಿಗಮ(KSBC)ದ ಮಾಹಿತಿ ಪ್ರಕಾರ, ಉತ್ರಾಡಂ ದಿನ ತನಕದ 8 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ 236 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ. ಕಳೆದ ಬಾರಿಗಿಂತ 48 ಕೋಟಿ ರೂಪಾಯಿ ಮದ್ಯ ಮಾರಾಟ ಅಧಿಕವಾಗಿದೆ.

ಉತ್ರಾಡಂ ದಿನ ಮಾತ್ರ 37 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ. ಕಳೆದ ವರ್ಷ 30 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿತ್ತು. ಕಳೆದ ವರ್ಷ 8 ದಿನಗಳ ಅವಧಿಯಲ್ಲಿ 199 ಕೋಟಿ ರೂಪಾಯಿನ ಮದ್ಯ ಮಾರಾಟವಾದರೆ ಈ ವರ್ಷ 236 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ ಎಂದು ಅಂಕಿ ಅಂಶ ತಿಳಿಸುತ್ತಿದೆ.

ಕಳೆದ ವರ್ಷಕ್ಕಿಂತ 24.93 ಶೇಕಡಾ ಅತ್ಯಧಿಕವಾಗಿದೆ. ಕರುನಾಗಪಳ್ಳಿ ಮದ್ಯ ಮಾರಾಟದಲ್ಲಿ ಪ್ರಥಮ ಹಾಗೂ ಚಾಲಕ್ಕುಡಿ ಎರಡನೇ ಸ್ಥಾನದಲ್ಲಿದೆ. ಇಡುಕ್ಕಿ ಚಿನ್ನಕಲ ಕೊನೆಯ ಸ್ಥಾನದಲ್ಲಿದೆ. ಕೇರಳದಲ್ಲಿ ದಿನೇ ದಿನೇ
ಕುಡುಕರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಈ ಅಂಕಿ ಅಂಶ ತಿಳಿಸುತ್ತಿದೆ.

ಅಂಕಿಅಂಶದಂತೆ 2005-06ನೇ ಸಾಲಿನಲ್ಲಿ 2,635.81 ಕೋಟಿ ರೂಪಾಯಿನ ವ್ಯವಹಾರ ಬಿವರೇಜಸ್ ನಿಗಮದಲ್ಲಿ ನಡೆದಿದೆ. 2010-11ರ ಅವಧಿಯಲ್ಲಿ 5,239.32 ಕೋಟಿ ರೂಪಾಯಿನ ವಹಿವಾಟು
ನಡೆದಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಮದ್ಯದ ವಹಿವಾಟು ಮೂರುಪಟ್ಟು ಜಾಸ್ತಿಯಾಗಿದೆ ಎಂದು ಅಂಕಿಅಂಶ ತಿಳಿಸುತ್ತಿದೆ.

ಕುಡುಕರ ನಾಡಾಗುತ್ತಿರುವ ಕೇರಳಗೆ ಒಮ್ಮೆ ಯಾಕೆ ಭೇಟಿ ಕೊಟ್ಟು ಅಲ್ಲಿನ ಮದ್ಯಪ್ರಿಯ ಜನರ ರಹಸ್ಯ ತಿಳಿಯಬಾರದು ಎಂದು ನಮ್ಮ ಅಬಕಾರಿ ಸಚಿವ ರೇಣುಕಾಚಾರ್ಯ ಯೋಚಿಸಿದ್ದಾರೆ ಎಂಬ ಸುದ್ದಿಯಿದೆ.

ತಾಯಿಗೆ 'ಎಚ್ಚರ'ವಾದಾಗ ಮಗಳು ಗರ್ಭಿಣಿಯಾಗಿದ್ದಳು!


ಮುಂಬೈ, ಸೆ. 14 : ನೆರೆಹೊರೆಯ ಯುವಕ ಪ್ರತಿದಿನ ಕೊಡುತ್ತಿದ್ದ ದಾರೂವನ್ನು ಪ್ರತಿರಾತ್ರಿ ಸೇವಿಸಿ ಲೋಕವನ್ನೇ ಮೈಮರೆಯುತ್ತಿದ್ದ ಆ ಮಹಾತಾಯಿಗೆ ನಾಲ್ಕು ತಿಂಗಳಿಂದ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿದಿರಲಿಲ್ಲ. ಆಕೆ 'ಎಚ್ಚರ'ವಾದಾಗ ಕಾಲ ಮಿಂಚಿ ಹೋಗಿತ್ತು. ಹದಿನಾರು ವರ್ಷದ ಮಗಳು ಗರ್ಭಿಣಿಯಾಗಿದ್ದಳು.

ಅಮಾಯಕರನ್ನು ದಾರಿತಪ್ಪಿಸಲು, ಅವಕಾಶದ ದುರ್ಲಾಭ ಪಡೆಯಲು ದುರುಳರು ಎಂತೆಂಥ ತಂತ್ರಗಳನ್ನು ಹೂಡುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ತಾಜಾ ಉದಾಹರಣೆ. ಬೆಳೆದ ಹೆಣ್ಣುಮಗಳು ಮನೆಯಲ್ಲಿರುವಾಗ ಪಾಲಕರು ಎಚ್ಚರಿಕೆಯಿಂದಿರಬೇಕು ಎಂಬ ಪಾಠವನ್ನೂ ಈ ಪ್ರಕರಣ ಕಲಿಸಿದೆ.

ಆಗಿದ್ದಿಷ್ಟು : ಊಟ ವಿತರಿಸುವ ಕಂಪನಿಯ ಮ್ಯಾನೇಜರ್ ಆಗಿರುವ ರಾಮ್ ರಾಜೇಶ್ ವರ್ಮಾ ಎಂಬಾತ ಪಕ್ಕದ ಮನೆಯ ಹೆಂಗಸಿಗೆ ಪ್ರತಿರಾತ್ರಿ ಮದ್ಯ ತಂದುಕೊಡುತ್ತಿದ್ದ. ಆಕೆ ಅದನ್ನು ಹೀರಿ ಆನಂದಸಾಗರದಲ್ಲಿ ಮೈಮರೆಯುತ್ತಿದ್ದಂತೆ ತನ್ನ ರಾತ್ರಿ ಕಾರ್ಯಾಚರಣೆ ಆರಂಭಿಸುತ್ತಿದ್ದ.

ತಾಯಿ ನಿದ್ರಾಪರವಶಳಾಗುತ್ತಿದ್ದಂತೆ ಆಕೆಯ ಹದಿನಾರು ವರುಷದ ಹದಿಹರೆಯದ ಮಗಳ ಅತ್ಯಾಚಾರ ಮಾಡುತ್ತಿದ್ದ. ಇದು ನಾಲ್ಕು ತಿಂಗಳುಗಳ ಕಾಲ ಸಾಗಿದೆ. ಹದಿನಾರರ ಬಾಲಕಿಯನ್ನು ಬೆದರಿಸಿ ಬಾಯಿಮುಚ್ಚಿಸಿದ್ದಾನೆ. ಆಕೆ ಬಾಯಿ ಮುಚ್ಚಿದರೂ ಹೊಟ್ಟೆ ಕೇಳಬೇಕಲ್ಲ. ಮೂರು ತಿಂಗಳು ದಾಟುತ್ತಿದ್ದಂತೆ ಉಬ್ಬುತ್ತಾ ಸಾಗಿದೆ.

ತಾಯಿಗೆ ತನ್ನ ತಪ್ಪಿನ ಅರಿವಾಗಿ ಮಗಳನ್ನು ಮದುವೆಯಾಗುವಂತೆ ವರ್ಮಾನಿಗೆ ಧಮ್ಕಿ ಹಾಕಿದ್ದಾಳೆ. ಆತ ಓಕೆ ಓಕೆ ಅನ್ನುತ್ತಲೇ ದಿನಗಳನ್ನು ದೂಡಿದ್ದಾನೆ. ಒಂದು ದಿನ ಮೊಬೈಲಿಗೂ ಸಿಗದೆ ಪರಾರಿಯಾಗಿದ್ದಾನೆ. ಆತನನ್ನು ನಂಬಿ ಕೆಟ್ಟ ತಾಯಿ ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಆತ ಬೋರಿವ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ನೈಂಟಿ ನೋಡಿ ಥಿಯೇಟರ್‌ನಲ್ಲೇ ಪಲ್ಟಿ ಹೊಡದ ಪ್ರೇಕ್ಷಕ!

ಒಟ್ಟಿನಲ್ಲಿ 'ನೈಂಟಿ' ಚಿತ್ರ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಗಾಂಧಿನಗರ 'ನೈಂಟಿ' ಚಿತ್ರದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈಗ ಅವರೂ ಬಾರ್‌ನಲ್ಲಿ ಕೂತು ನೈಂಟಿ ಚಿತ್ರದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಧು ಕೋಕಿಲ ಅವರ ಕಾಮಿಡಿ ಕಿಕ್‌ಗೆ ಪ್ರೇಕ್ಷಕರು ಚಿತ್ರಮಂದಿರದಲ್ಲೇ ತೂರಾಡುವಂತಾಗಿದೆ. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್ ಕೂಡ ಬರುತ್ತಿದ್ದಾರೆ. ಚಿತ್ರದ ಸಬ್ಜೆಕ್ಟ್ ಸಖತ್ ಇಷ್ಟವಾಗಿದೆ. ನಮಗೂ ಅಷ್ಟೇ ನೈಂಟಿ ಚಾ ಕುಡಿದಷ್ಟೇ ಸಂತಸವಾಗಿದೆ ಎಂದಿದ್ದಾರೆ ಸಾಧು ಕೋಕಿಲ.

ಪ್ರೇಕ್ಷಕರಿಗೆ ಚಿತ್ರದ ಮೆಸೇಜ್ ಇಷ್ಟವಾಗಿದೆ. ಕಾಮಿಡಿ ಸೀನ್‌ಗಳಂತೂ ಅವರನ್ನು ನಗುವಿನ ಅಲೆಯಲ್ಲಿ ತೇಲಿಸಿವೆ. ನಗಿಸುವುದರ ಜೊತೆಗೆ ಕುಡಿತ ದೈಹಿಕ ಮತ್ತು ಮಾನಸಿಕವಾಗಿ ಎಷ್ಟು ಮಾರಕ ಎಂಬ ಸಂದೇಹವನ್ನು ನೀಡಿದ್ದೇವೆ ಎನ್ನುವ ಸಾಧು ಅವರು ಲಕ್ಕಿ ಶಂಕರ್ ನಿರ್ದೇಶನಕ್ಕೆ ತಲೆತೂಗಿದ್ದಾರೆ.

ಉತ್ತಮ ಕತೆ, ಜೊತೆಗೆ ಅದರ ಪ್ರೆಸೆಂಟೇಷನ್ ಚೆನ್ನಾಗಿದ್ದರೆ ಪ್ರೇಕ್ಷಕರು ಖಂಡಿತ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದನ್ನು ನೈಂಟಿ ಕುಡಿ ಪಲ್ಟಿ ಹೊಡಿ ಚಿತ್ರ ನಿರೂಪಿಸಿದೆ. ಚಿತ್ರಕ್ಕೆ ನೈಂಟಿ ಕಿಕ್ ನೀಡಿದವರು ತಬಲಾ ನಾಣಿ, ರಂಗಾಯಣ ರಘು, ರಾಜು ತಾಳಿಕೋಟೆ. (ದಟ್ಸ್‌ಕನ್ನಡ ಸಿನಿವಾರ್ತೆ)

ಮೊಬೈಲ್ ನಲ್ಲಿ ಮಾತೃಭಾಷೆ ನೋಡಿ; ಹಾಯಾಗಿ ಹಾಡಿ

ಐಎಮ್ ಐ ಮೊಬೈಲ್ "ಮೈ ಎಸ್ ಎಮ್ ಎಸ್" ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದರ ಕಾರ್ಯ ನಿರ್ವಹಣೆ ಹೀಗಿದೆ...

ಈ ಅಪ್ಲಿಕೇಶನ್ ಗಳು ನೆಟ್ ವರ್ಕ್ ಆಪರೇಟರ್ಸ್ ಗಳಿಗೆ ಈ ಸಂಬಂಧ ಸೇವೆಗಳನ್ನು ನೀಡುವುದರ ಮೂಲಕ ಕಾರ್ಯ ನಿರ್ವಹಿಸುತ್ತವೆ. ಗ್ರಾಹಕರು ತಮ್ಮ ಮಾತೃಭಾಷೆಯನ್ನು ಎಕ್ಸೆಸ್ ಮಾಡಿಕೊಳ್ಳಬೇಕು. ಇದಕ್ಕೂ ಮೊದಲು ಸಂಬಂಧಿಸಿದ ಅಪ್ಲಿಕೇಶನ್ನನ್ನು ಡಿವೈಸ್ ಗೆ ಡೌನ್ ಲೋಡ್ ಮಾಡಿಕೊಂಡು ಕಾರ್ಯ ಪ್ರಾರಂಬಿಸಬೇಕು. ಇಷ್ಟಾದ ಮೇಲೆ ಗ್ರಾಹಕರು ತಮ್ಮ ಮಾತೃಭಾಷೆಯಲ್ಲಿ ಮೂಡಿದ ಪದಗಳನ್ನು ನೋಡಿ ಖುಷಿಪಡಬಹುದು.

ಸದ್ಯಕ್ಕೆ ಸಿಂಬಿಯನ್ ಮತ್ತು J2ME ಆಪರೇಟಿಂಗ್ ಸಿಸ್ಟಮ್ ಉಳ್ಳ ಮೊಬೈಲ್ ಉಪಯೋಗಿಸುವ ಗ್ರಾಹಕರು ಮಾತ್ರ ಇದರ ಉಪಯೋಗ ಪಡೆಯಲು ಸಾಧ್ಯ.

ಈ ಅಪ್ಲಿಕೇಶನ್ ಗಳಿಗಾಗಿ 56263 ನಂಬರಿಗೆ ಕರೆ ಮಾಡಿ. ಸಂಬಂಧಿಸಿದ ಸೆಟ್ಟಿಂಗ್ ಗಳು ಸ್ವಯಂಚಾಲಿತವಾಗಿ ಗ್ರಾಹಕರ ಮೊಬೈಲುಗಳಿಗೆ ಡೌನ್ ಲೋಡ್ ಆಗುತ್ತವೆ. ಸದ್ಯಕ್ಕೆ ಈ ಭಾಷಾ ಅಪ್ಲಿಕೇಶನ್ ಸ್ಥಳೀಯ 8 ಭಾಷಗಳಿಗೆ ಸೀಮಿತವಾಗಿದೆ. ಅವು ಇಂಗ್ಲಿಷ್, ಹಿಂದಿ, ತೆಲುಗು, ತಮಿಳ್, ಮಲೆಯಾಳಮ್, ಗುಜರಾತಿ, ಮರಾಠಿ ಹಾಗೂ ಬಂಗಾಳಿ ಭಾಷೆಗಳಲ್ಲಿ ಲಭ್ಯ.

ಇಷ್ಟು, ಸದ್ಯಕ್ಕೆ ದೊರೆತಿರುವ ಮಾಹಿತಿ. ಆದರೆ ಈ ಮೊಬೈಲ್ ಅಪ್ಲಿಕೇಶನ್ ನಿಂದ ನಿಜವಾಗಿಯೂ ಕ್ರಾಂತಿಯಾಗಬಲ್ಲದು. ಏಕೆಂದರೆ ಹೆಚ್ಚು ಓದಿಲ್ಲದ ಹಳ್ಳಿಯ ಜನರು ಅಗತ್ಯ ಮಾಹಿತಿಗಳನ್ನು ಅವರವರ ಭಾಷೆಗಳಲ್ಲೇ ಪಡೆಯಬಹುದಲ್ಲವೇ! ಮುಂದೆ ಎಲ್ಲಾ ಭಾಷೆಗಳಲ್ಲೂ ಬಂದರೆ ಇದು ಸಾಕಷ್ಟು ಸದ್ದಿ-ಸದ್ದು ಮಾಡುವುದರಲ್ಲಿ ಸಂದೇಹವೇ ಇಲ್ಲ...

ಕಾಜಲ್ ಅಗರವಾಲ್ ಬೆತ್ತಲೆ ಫೋಟೋ ರಿಯಲ್!


ಇತ್ತೀಚೆಗೆ ಬೆಡಗಿ ಕಾಜಲ್ ಅಗರವಾಲ್ ಕಾಮೋತ್ತೇಜಕ ಫೋಟೋಗಳನ್ನು ಎಫ್‌ಎಚ್‌‍ಎಂ ಮ್ಯಾಗಜಿನ್‌ ಪ್ರಕಟಿಸಿತ್ತು. ಸಂಚಿಕೆ ಹೊರಬರುತ್ತಿದ್ದಂತೆ ಕಾಜಲ್ ಕಂಗಾಲಾಗಿದ್ದರು. ಅವು ನನ್ನ ಫೋಟೋಗಳು ಅಲ್ಲವೆ ಅಲ್ಲ ಎಂದು ಆಕಾಶ ಭೂಮಿ ಒಂದಾಗುವಂತೆ ಹುಯಿಲೆಬ್ಬಿಸಿದ್ದರು. ಆದರೆ ಅವು ಆಕೆಯದೇ ರಿಯಲ್ ಫೋಟೋಗಳು ಎಂದು ಎಫ್‌ಎಚ್‌ಎಂ ಮ್ಯಾಗಜಿನ್ ಇದೀಗ ಸ್ಪಷ್ಟೀಕರಣ ನೀಡಿದೆ.

ಸೆಪ್ಟೆಂಬರ್ 2011ರ ಸಂಚಿಕೆಗಾಗಿ ಸ್ವತಃ ಕಾಜಲ್ ಅಗರವಾಲ್ ಅವರೇ ವಿವಿಧ ಭಂಗಿಗಳಲ್ಲಿ ತಮ್ಮ ಅಂಗಸೌಷ್ಟವನ್ನು ಪ್ರದರ್ಶಿಸಿದ್ದರು. ಆ ಫೋಟೋಗಳನ್ನೇ ತಾವು ಪ್ರಕಟಿಸಿದ್ದೇವೆ ಎಂದು ಪುರುಷರ ಮ್ಯಾಗಜಿನ್ ಸ್ಪಷ್ಟಪಡಿಸಿದೆ. ಈ ಮೂಲಕ ಕಾಜಲ್ ಅಗರವಾಲ್ ಬೆತ್ತಲೆ ಫೋಟೋ ವಿವಾದ ಮತ್ತೊಂದು ತಿರುವು ಪಡೆದಿದೆ.

ಕಾಜಲ್ ಇಮೇಜ್ ಕೆಡಿಸಲು ಪತ್ರಿಕೆ ಮಾಡಿರುವ ಗಿಮಿಕ್ ಇದು ಎಂದು ಕಾಜಲ್ ತಂಗಿ ನಟಿ ನಿಶಾ ಅಗರವಾಲ್ ಕೆಂಡಾಮಂಡಲವಾಗಿದ್ದರು. ಕನಸಿನಲ್ಲೂ ಈ ರೀತಿ ನನ್ನಕ್ಕ ಕಾಣಿಸಿಕೊಳ್ಳುವುದಿಲ್ಲ ಎಂದು ನಿಶಾ ಸ್ಪಷ್ಟವಾಗಿ ಹೇಳಿದ್ದರು. ಈಗ ಪತ್ರಿಕೆಯೇ ಕಾಜಲ್ ಫೋಟೋಗಳು ಸುಳ್ಳಲ್ಲ ಎನ್ನುತ್ತಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. (ಏಜೆನ್ಸೀಸ್)

ಎಂಡ್ಕುಡರಿಗೆ ಹಬ್ಬ, 3 ಸಾವಿರ ಬಾರ್ ಗೆ ರೇಣು ಜೈ


ಬೆಂಗಳೂರು, ಸೆ.7:ಯಾರೂ ಏನಾದರೂ ಅಂದುಕೊಳ್ಳಲಿ, ಬಾಟ್ಲಿ ಹೊಡೆಯುವುದು, ಲೈಸನ್ಸ್ ರದ್ದು, ಟೈಮಿಂಗ್ಸ್ ಚೇಂಜ್ ಮಾಡುವುದರಲ್ಲಿ ಸಚಿವ ರೇಣುಕಾಚಾರ್ಯ ಅವರನ್ನು ಮೀರಿಸಿದವರಿಲ್ಲ.

ಈಗ ಮಾನ್ಯ ಅಬಕಾರಿ ಸಚಿವರು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮೂರು ಸಾವಿರದಷ್ಟು ಹೊಸ ಬಾರ್‌ ಹಾಗೂ ರೆಸ್ಟೋರೆಂಟ್ ಗಳಿಗೆ ಅನುಮತಿ ನೀಡುವ ಬಗ್ಗೆ
ಮುಖ್ಯಮಂತ್ರಿ ಸದಾನಂದ ಗೌಡರೊಂದಿಗೆ ಸಮಾಲೋಚನೆ ಮಾಡುವುದಾಗಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಹೊಸದಾಗಿ ಯಾವುದೇ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಲೈಸನ್ಸ್ ನೀಡಲ್ಲ ಎಂಬ ವಿಷಯವನ್ನು ಒತ್ತಿ ಒತ್ತಿ ಹೇಳಿದ ರೇಣುಕಾ, ಹೊಸ ಬಾರುಗಳ ಉದ್ಘಾಟನೆಗೆ ತಯಾರಿ ನಡೆಸಿದ್ದರಂತೆ.

ಹೊಸ ಬಾರ್ ಏಕೆ?: ಸಾರಾಯಿ ನಿಷೇಧ ಮಾಡಿದ್ದರಿಂದ ಬಾರ್‌ಗಳ ಬೇಡಿಕೆ, ಪ್ರಮಾಣ, ಹೆಚ್ಚಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಂದ ಮದ್ಯವನ್ನು ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ.

ಗ್ರಾಹಕರಿಗೆ ಹೊರೆಯಾಗುವುದನ್ನು ತಪ್ಪಿಸಲು ಹೊಸ ಲೈಸನ್ಸ್ ನೀಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

ಮದ್ಯಸಾರ ವಿತರಣೆ: ಸುಮಾರು ಆರು ಕಂಪನಿಗಳಿಗೆ 13 ಲಕ್ಷ ಮದ್ಯಸಾರವನ್ನು ವಾರ್ಷಿಕವಾಗಿ ವಿತರಣೆ ಮಾಡಲು ಸಮ್ಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಂದ 27 ಕೋಟಿ ಲೀಟರ್ ಮದ್ಯಸಾರವನ್ನು ಉತ್ಪಾದನೆ ಮಾಡುತ್ತಿದ್ದು, ಇದರಲ್ಲಿ 19 ಕೋಟಿಗೂ ಹೆಚ್ಚು ಲೀಟರ್ ಮದ್ಯಸಾರವನ್ನು ಮದ್ಯ ಉತ್ಪಾದನೆಗೆ
ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪರ್ಯಾಯ ಇಂಧನ: ಕರ್ನಾಟಕದ ವಾಹನಗಳಿಗೆ ಸ್ಪಿರಿಟ್‌ನ್ನು ಪರ್ಯಾಯ ಇಂಧನವಾಗಿ ಬಳಸುವುದರ ಜೊತೆಗೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯ ಗಳಿಗೆ ಸ್ಪಿರಿಟ್‌ನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದರು.

ಜರಾಸಂಧ ಮ್ಯೂಸಿಕ್ ರಿವ್ಯೂ: ಮೊದಲ ಹಾಡು ಸೂಪರ್

 
 
ಶಶಾಂಕ್ ನಿರ್ದೇಶನದ, ದುನಿಯಾ ವಿಜಯ್ ಮತ್ತು ಪ್ರಣೀತಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಆಲ್ಬಮ್ ನಲ್ಲಿರುವ ಮೂರು ಹಾಡು ಚೆನ್ನಾಗಿದ್ದು, ಆಲ್ಬಮ್ ನ ಮೊದಲ ಹಾಡು ಸೂಪರ್ ಹಿಟ್ ಆಗುವುದರಲ್ಲಿ ಡೌಟೇ ಇಲ್ಲ. ಕನ್ನಡದ ರೆಹಮಾನ್ ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದಲ್ಲಿ ಉಪೇಂದ್ರ ಕಂಠಸಿರಿಯಿಂದ ಒಂದು ಹಾಡು ಮೂಡಿಬಂದಿರುವುದು ವಿಶೇಷ.

1 . ನೀ ಊರಿಗೆ ಬಾರೋ ಚನ್ನಿ ಹಿಡ್ಕೊಂಡು (ಅರ್ಜುನ್ ಜನ್ಯ, ಶಮಿತಾ ಮಲ್ನಾಡ್)
ಸಾಹಿತ್ಯ:
ಶಶಾಂಕ್

ಗ್ರಾಮ್ಯ ಭಾಷೆಯ ಶೈಲಿಯಲ್ಲಿರುವ ಸಾಹಿತ್ಯ.ಜಾನಪದ ಮೆಲೋಡಿಯಸ್ ನಲ್ಲಿರುವ ಈ ಹಾಡು ಕಿವಿಗೆ ಇಂಪು ಮತ್ತು ರಸವತ್ತಾಗಿದೆ. ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕಿನ್ನಿಸುತ್ತದೆ. ಈ ಹಾಡು ಚಿತ್ರ ಬಿಡುಗಡೆಗೆ ಮುನ್ನವೇ ಹಿಟ್ ಆಗುವುದರಲ್ಲಿ ಸಂದೇಹವೇ ಬೇಡ.

2 . ಅವರಿವರ ಜೊತೆ ಸೇರದೆ, ನುಡಿ ಕೇಳದೆ (ಸೋನು ನಿಗಮ್, ಅನುರಾಧ ಭಟ್)
ಸಾಹಿತ್ಯ: ಶಶಾಂಕ್

ಸೋನು ನಿಗಮ್ ಟ್ರೇಡ್ ಮಾರ್ಕ್ ಟ್ಯೂನ್. ಹಾಡಿನ ಸಾಹಿತ್ಯ ಕೂಡಾ ಅರ್ಥಪೂರ್ಣವಾಗಿದೆ. ಹಾಡಿನ ಅನುಪಲ್ಲವಿ ಫಾಸ್ಟ್ ಟ್ರ್ಯಾಕ್ ನಲ್ಲಿದ್ದು, ಹಾಡು ಉತ್ತಮವಾಗಿ ಮೂಡಿ ಬಂದಿದೆ.

3. ಪದೇ ಪದೇ ಫೋನಿನಲಿ (ಉಪೇಂದ್ರ, ಪ್ರಿಯಾ ಹಿಮೇಶ್)
ಸಾಹಿತ್ಯ: ಶಶಾಂಕ್ ಮತ್ತು ಪ್ರಹ್ಲಾದ್ ರಾಜ್

ನಾಯಕಿಯನ್ನು ನಾಯಕ ಸದಾ ಕಾಯುತ್ತಿರುತ್ತಾನೆ. ಫೋನಲ್ಲಿ ನಡೆಸುವ ಸಂಭಾಷಣೆ ಈ ಹಾಡಿನ ಸಾಹಿತ್ಯ. ಟ್ಯೂನ್ ಬಗ್ಗೆ ಸಂಗೀತ ನಿರ್ದೇಶಕರು ತಲೆ ಕೆಡಿಸಿ ಕೊಳ್ಳದೆ ಉಪೇಂದ್ರ ಇಮೇಜ್‌ಗೆ ತಕ್ಕಂತೆ ಸಂಗೀತ ನೀಡಿದ್ದಾರೆ. ಹಾಡು ಸುಮಾರಾಗಿದೆ.

4. ಹಳೇ ಹುಬ್ಬಳ್ಳಿ ಬಸ್ಟ್ಯಾಂಡ್ ಮೇಲೆ ನಿಂತಿದ್ದೆ (ಅರ್ಜುನ್ ಜನ್ಯ)
ಸಾಹಿತ್ಯ: ಯೋಗರಾಜ್ ಭಟ್

ಈ ಹಾಡು ಪಕ್ಕಾ ಮಾಸ್ ಗೆ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ಈ ಹಾಡು ಆ ಭಾಗದ ಜನರನ್ನು ಸೆಳೆಯುವುದರಲ್ಲಿ ಸಂಶಯ ಬೇಡ. ಹಾಡು ಸಂಪೂರ್ಣ ಫಾಸ್ಟ್ ಪಿಚ್ ನಲ್ಲಿದೆ. ಹುಬ್ಬಳ್ಳಿ ಕನ್ನಡ ಭಾಷೆ, ಜೀವನಶೈಲಿಗೆ ತಕ್ಕಂತೆ ಭಟ್ರು ಉತ್ತಮ ಸಾಹಿತ್ಯ ನೀಡಿದ್ದಾರೆ.

5. ಯಾರಾದ್ರೂ ಹಾಳಾಗೋಗ್ಲಿ ನಾವಿಷ್ಟೇ ಇದ್ರೆ ಸಾಕು (ಕೈಲಾಶ್ ಖೇರ್, ಶಶಾಂಕ್ ಶೇಷಗಿರಿ, ಹರ್ಷ ಸದಾನಂದ )
ಸಾಹಿತ್ಯ: ಶಶಾಂಕ್

ಯಾರು ಹೇಗೇ ಇರಲಿ, ಬೇನಾಮಿ ಆಸ್ತಿ ಮಾಡಿ ತಾನು ಸಾಚಾ ಎಂದು ಗಂಟೆ ಹೊಡಿಯ ಬೇಕು, ಪ್ರಳಯ ಕೂಡಾ ಆಗ್ತಿಲ್ಲ. ಕುಡಿತದ ಬಗ್ಗೆ ಕೂಡಾ ಸಾಹಿತ್ಯ ವಿರುವ ಹಾಡು. ಇಂದಿನ ಪ್ರಾಪಂಚಿಕ ಜಗತ್ತಿನ ಬಗ್ಗೆ ಶಶಾಂಕ್ ಹಾಡಿನ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಗಂಡನ ಸಮಸ್ಯೆ ಹೇಳಿದ ಸೆಕ್ಸಿ ತಾರೆ

ಫೇಸ್‌ಬುಕ್ಕನ್ನು ಹೀಗೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಬಾಲಿವುಡ್‌ನ ಅಂದಕಾಲತ್ತಿಲ್ ಸೆಕ್ಸಿ ತಾರೆ ಮನೀಷಾ ಕೋಯಿರಾಲಾ. ಈಗಾಗಲೆ ನಲವತ್ತು ಪ್ಲಸ್ ವಯಸ್ಸು ದಾಟಿರುವ ಈಕೆ ಮದುವೆಯಾಗಿ ಒಂದು ವರ್ಷ ಕಳೆಯುವಷ್ಟರಲ್ಲೆ ತನ್ನ ಸಂಸಾರದ ಗುಟ್ಟುಗಳನ್ನು ಫೇಸ್‌ಬುಕ್‌ನಲ್ಲಿ ಬಿಚ್ಚಿಟ್ಟಿದ್ದಾರೆ.

ಅನಿವಾಸಿ ಭಾರತೀಯ ಉದ್ಯಮಿ ಸಾಮ್ರಾಟ್ ದಹಲ್‌ ಕೈಹಿಡಿದ ಬಳಿಕ ಮನಿಷಾ ಸಂಸಾರದಲ್ಲಿ ಅಪಸ್ವರಗಳೂ ಕೇಳಿಬಂದಿದ್ದವು. ಬಳಿಕ ಇದೆಲ್ಲಾಯಾರೋ ಹಬ್ಬಿಸುತ್ತಿರುವ ಪುಕಾರು ಎಂದು ಮನೀಷಾ ಸ್ಪಷ್ಟಪಡಿಸಿದ್ದರು. ಈಗ ಮತ್ತೊಮ್ಮೆ ತನ್ನ ಗಂಡನ ಬಗ್ಗೆ ಫೇಸ್ ಬುಕ್‌ನಲ್ಲಿ ಸಣ್ಣ ಸುದ್ದಿ ಲೀಕ್ ಮಾಡಿದ್ದಾರೆ.

"ನನ್ನ ಗಂಡ ನನಗೆ ಶತ್ರುವಾಗಿ ಪರಿಣಮಿಸಿದ್ದಾನೆ. ಮಹಿಳೆಗೆ ಇದಕ್ಕಿಂತ ದುಃಖದ ಸಂಗತಿ ಇನ್ನೇನು ಇರಲಿಕ್ಕೆ ಸಾಧ್ಯ?" ಎಂದಿದ್ದಾರೆ. ಈ ಹಿಂದೊಮ್ಮೆ ಇಬ್ಬರೂ ಶರಂಪರ ಕಿತ್ತಾಡಿ ಇನ್ನೇನು ಇವರಸಂಸಾರ ಬೀದಿಗೆ ಬೀಳಬೇಕು, ಅಷ್ಟರಲ್ಲಿ ಇವರಿಬ್ಬರಸಂಬಂಧಿಕರು ಮಧ್ಯೆ ಪ್ರವೇಶಿಸಿ ಹಳಿ ತಪ್ಪಿದ್ದ ಸಂಸಾರವನ್ನು ಸರಿ ಮಾಡಿದ್ದರು. ಈಗ ಮತ್ತೊಮ್ಮೆ ಇವರಿಬ್ಬರ ನಡುವೆ ಹೊಗೆಯಾಡುತ್ತಿವೆ

ಬೆತ್ತಲೆ ಚಿತ್ರ ಕಂಡು ಕಂಗಾಲಾದ ನಟಿ ಕಾಜಲ್

ಬಾಲಿವುಡ್ ನ ಥಳಕು ಬಳಕಿನ ಪ್ರಪಂಚದ ಚಾಲ್ ಗಳನ್ನು ಈಗಷ್ಟೇ ಕಲಿಯುತ್ತಿರುವ ಸಿಂಗಂ ಚಿತ್ರ ಖ್ಯಾತಿಯ ಕಾಜಲ್ ಅಗರವಾಲ್ ತೆರೆದೆದೆಯ ಚಿತ್ರವನ್ನು ಮುಂಬೈ ಮೂಲದ ಪತ್ರಿಕೆ ಮುಖಪುಟದಲ್ಲಿ ಪ್ರಕಟಿಸಿದೆ.

ಪುರುಷರಿಗಾಗಿ ಇರುವ ಎಫ್ ಎಚ್ ಎಂ ಮ್ಯಾಗಜೀನ್ ನ ಮುಖಪುಟದಲ್ಲಿ ಕಾಜಲ್ ತನ್ನ ಸ್ತನಗಳನ್ನು ಕೈಗಳಿಂದ ಅಡ್ಡಡ್ಡವಾಗಿ ಮುಚ್ಚಿಟ್ಟುಕೊಂಡಿರುವ ಚಿತ್ರವಿದೆ. ಆದರೆ, ಇದು ಕೀಳುಮಟ್ಟದ ವರದಿಗಾರಿಕೆ, ನಾನು ಆ ರೀತಿ ಎಂದಿಗೂ ಪೋಸ್ ನೀಡಿಲ್ಲ ಎಂದು ನಟಿ ಕಾಜಲ್ ಹೇಳಿದ್ದಾರೆ.

ಕಾಜಲ್ ಅವರ ಮುಖವನ್ನು ಬೇರೆ ಯಾರದೋ ದೇಹಕ್ಕೆ ಅಂಟಿಸಿ ಮಾರ್ಫ್ ಮಾಡಲಾದ ಚಿತ್ರವನ್ನು ಬಳಸಲಾಗಿದೆ. ಈಗಷ್ಟೇ ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಕಾಜಲ್ ಮುಖಭಂಗ ಮಾಡಲು ಯಾರೋ ಕುಹಕಿಗಳು ಈ ರೀತಿ ಮಾಡಿದ್ದಾರೆ.

ಅಕ್ಕನಿಗೆ ತಂಗಿ ಸಾಥ್: ಕಾಜಲ್ ಇಮೇಜ್ ಕೆಡಿಸಲು ಪತ್ರಿಕೆ ಮಾಡಿರುವ ಗಿಮಿಕ್ ಇದು ಎಂದು ಕಾಜಲ್ ತಂಗಿ ನಟಿ ನಿಶಾ ಅಗರವಾಲ್ ಹೇಳಿದ್ದಾರೆ. ಕನಸಿನಲ್ಲೂ ಈ ರೀತಿ ನನ್ನಕ್ಕ ಕಾಣಿಸಿಕೊಳ್ಳುವುದಿಲ್ಲ ಎಂದು ನಿಶಾ ಸ್ಪಷ್ಟವಾಗಿ ಹೇಳುತ್ತಾರೆ.

ಮ್ಯಾಗಜೀನ್ ನಲ್ಲಿ ಆ ರೀತಿ ಚಿತ್ರ ಕಾಣಿಸಿಕೊಂಡ ಮೇಲೆ ಕುಟುಂಬದ ಸದಸ್ಯರು ಕಂಗಾಲಾಗಿದ್ದಾರೆ. ಆಪ್ತೇಷ್ಟರಿಂದ ಕರೆಗಳು ಬರುತ್ತಿದೆ. ಎಲ್ಲರಿಗೂ ಉತ್ತರ ಕೊಡುವಷ್ಟರಲ್ಲಿ ಸಾಕಾಗಿ ಹೋಗಿದೆ. ಜನಕ್ಕೆ ನಿಜಕ್ಕಿಂತ ಸುಳ್ಳಿನ ಮೇಲೆ ನಂಬಿಕೆ ಹೆಚ್ಚು ಏನು ಮಾಡೋದು. ಪತ್ರಿಕೆ ವಿರುದ್ಧ ದೂರು ನೀಡಲು ಚಿಂತನೆ ನಡೆದಿದೆ ಎಂದು ನಿಶಾ ಹೇಳುತ್ತಾರೆ.

ಬಾಲಿವುಡ್ ನಲ್ಲಿ ಬಿಗ್ ಆಫರ್ ಗಳಿಸಲು ಕಾಜಲ್ ಈ ರೀತಿ ಮಾಡಿರಬಹುದು ಎಂದು ತಿಳಿದಿದ್ದ ಬಾಲಿವುಡ್ ನ ಕೆಲ ಮಂದಿಗೆ ಕಾಜಲ್ ನಿರಾಕರಿಸಿದ ಮೇಲೆ ಒಂದಿಷ್ಟು ನಿರಾಶೆಯಾಗಿದೆ. ಕಾಜಲ್ ಮಾತ್ರ ಪತ್ರಿಕೆಯನ್ನು ಶಪಿಸುತ್ತಾ ಮನೆಯಲ್ಲೇ ಕೂತಿದ್ದಾರೆ.

ಕಿರಿಕಿರಿ ಕರೆ, ಎಸ್ಎಂಎಸ್ ಗೆ ಬಿತ್ತು ಕಡಿವಾಣ

ನವದೆಹಲಿ, ಸೆ.6: ಸೆ.27ರಿಂದ ಅನಪೇಕ್ಷಿತ ಕಿರಿಕಿರಿ ಕರೆ ಹಾಗೂ ಎಸ್ಎಂಎಸ್ ನಿಷೇಧ ಜಾರಿಗೊಳಿಸಲು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ 'ಟ್ರಾಯ್' ನಿರ್ಧರಿಸಿದೆ.

ಟೆಲಿ ಮಾರುಕಟ್ಟೆ ಕಂಪೆನಿಗಳಿಂದ ಮೊಬೈಲ್ ಮತ್ತು ಸ್ಥಿರ ದೂರವಾಣಿಗಳಿಗೆ ಬರುವ ವಾಣಿಜ್ಯ ಕರೆ ಮತ್ತು 'ಎಸ್‌ಎಂಎಸ್'ಗಳಿಂದ ಗ್ರಾಹಕರು ಮುಕ್ತರಾಗಬಹುದು.

ಕಿರಿಕಿರಿ ಕರೆ ತಪ್ಪಿಸಿಕೊಳ್ಳಲು ರಾಷ್ಟ್ರೀಯ ಗ್ರಾಹಕ ಆದ್ಯತಾ ನೋಂದಣಿಯಲ್ಲಿ (ಎನ್‌ಸಿಪಿಆರ್) ನೋಂದಾಯಿಸಿಕೊಂಡರೆ ಸಾಕು. ವಾಣಿಜ್ಯ ಕರೆಗಳ ಕಿರಿಕಿರಿ ತಪ್ಪಲಿದೆ.

ದೇಶದಲ್ಲಿ 850 ದಶಲಕ್ಷ ಮೊಬೈಲ್ ಮತ್ತು 34 ದಶಲಕ್ಷ ಸ್ಥಿರ ದೂರವಾಣಿ ಚಂದಾದಾರರಿದ್ದಾರೆ. ಟೆಲಿ ಮಾರುಕಟ್ಟೆ ಕರೆಗಳಿಗೆ ಟ್ರಾಯ್ '140' ಸಂಖ್ಯಾ ಸರಣಿ ನಿಗದಿಪಡಿಸಿದೆ. ಈ ಸಂಖ್ಯೆಗಳಿಂದ ಅಂತ್ಯಗೊಳ್ಳುವ ಕರೆಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸಿ, ಆ ಸಂಖ್ಯೆಗಳ ನಿಷೇಧಕ್ಕೆ ಮನವಿ ಸಲ್ಲಿಸಬಹುದು.
  Read:  In English 
ಭಾರಿ ದಂಡ : ನಿಯಮ ಉಲ್ಲಂಘಿಸುವ ಟೆಲಿ ಮಾರುಕಟ್ಟೆ ಸಂಸ್ಥೆಗಳಿಗೆ 25 ಸಾವಿರ ರೂ.ನಿಂದ 2.5 ಲಕ್ಷ ರೂ ವರೆಗೂ ದಂಡ ವಿಧಿಸಲಾಗುವುದು ಎಂದು ಟ್ರಾಯ್ ಎಚ್ಚರಿಕೆ ನೀಡಿದೆ.

ಸುಮಾರು 130 ದಶಲಕ್ಷ ಮೊಬೈಲ್ ಚಂದಾದಾರರು ಅನಪೇಕ್ಷಿತ ಕರೆ ನಿಷೇಧಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಸುಮಾರು 47 ಸಾವಿರ ದೂರುಗಳು ದಾಖಲಾಗುತ್ತಿವೆ. ಸುಮಾರು 72 ಸಾವಿರ ನೋಂದಾಯಿತ ಟೆಲಿ ಮಾರುಕಟ್ಟೆ ಸಂಪರ್ಕಗಳನ್ನು ಟ್ರಾಯ್ ರದ್ದುಗೊಳಿಸಿದೆ.

ಕತ್ತಲಗರ್ಭದ ಮಿಂಚು ಬಿಡುಗಡೆ..

ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನುಮಂತ ಹಾಲಿಗೇರಿಯವರ  ಕಥಾಸಂಕಲನ “ಕತ್ತಲಗರ್ಭದ ಮಿಂಚು” ಬಿಡುಗಡೆಯಾಗುತ್ತಿದೆ.
ಇದರಲ್ಲಿನ ೬ ಕಥೆಗಳು ಕಥಾಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನಗಳು ಪಡೆದುಕೊಂಡಿವೆ. ಈ ಸಂಕಲನ ಪ್ರಕಟಣೆಯ ಮುನ್ನ ಕನ್ನಡ ಪುಸ್ತಕ ಪ್ರಾದಿಕಾರದ ಪ್ರೊತ್ಸಾಹ ಧನ ಪಡೆದುಕೊಂಡಿದ್ದು, ಪ್ರಕಟಣೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಬಿಳಗಿ ಘಟಕದ ದತ್ತಿ ಪ್ರಶಸ್ತಿಯನ್ನು ಬಾಚಿಕೊಂಡಿದ.. . ಇಲ್ಲಿನ ಎಲ್ಲ ಕಥೆಗಳು ಶೋಷಣೆಯ ದವಡೆಯಲ್ಲಿ ಸಿಕ್ಕ ದಲಿತರ ಮತ್ತು ಸ್ತ್ರೀಯರ ಹೋರಾಟ ಮತ್ತು ಜೀವನ ಪ್ರೀತಿಯನ್ನು ಒಟ್ಟೊಟ್ಟಿಗೆ ವಿವರಿಸುವ ಕಥಾವಸ್ತುವನ್ನು ಒಳಗೊಂಡಿವೆ.
ಕತೆಗಾರ ನಾಗತಿಹಳ್ಳಿ ಚಂದ್ರಶೇಖರ್ ಪುಸ್ತಕ ಬಿಡುಗಡೆ ಮಾಡಲಿದ್ದು, ಕವಿ ಎಲ್.ಎನ್.ಮುಕುಂದರಾಜ್ ಕಥೆಗಳ ಕುರಿತು ಮಾತನಾಡಲಿದ್ದಾರೆ. ಮೇಸ್ಟ್ರು ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷತೆವಹಿಸಲಿದ್ದಾರೆ.

M S Subbulakshmi Bhagyada Lakshmi PUrandara

ಪ್ರಕಟಣೆ