ಪುಟಗಳು

ಕತ್ತಲಗರ್ಭದ ಮಿಂಚು ಬಿಡುಗಡೆ..

ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನುಮಂತ ಹಾಲಿಗೇರಿಯವರ  ಕಥಾಸಂಕಲನ “ಕತ್ತಲಗರ್ಭದ ಮಿಂಚು” ಬಿಡುಗಡೆಯಾಗುತ್ತಿದೆ.
ಇದರಲ್ಲಿನ ೬ ಕಥೆಗಳು ಕಥಾಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನಗಳು ಪಡೆದುಕೊಂಡಿವೆ. ಈ ಸಂಕಲನ ಪ್ರಕಟಣೆಯ ಮುನ್ನ ಕನ್ನಡ ಪುಸ್ತಕ ಪ್ರಾದಿಕಾರದ ಪ್ರೊತ್ಸಾಹ ಧನ ಪಡೆದುಕೊಂಡಿದ್ದು, ಪ್ರಕಟಣೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಬಿಳಗಿ ಘಟಕದ ದತ್ತಿ ಪ್ರಶಸ್ತಿಯನ್ನು ಬಾಚಿಕೊಂಡಿದ.. . ಇಲ್ಲಿನ ಎಲ್ಲ ಕಥೆಗಳು ಶೋಷಣೆಯ ದವಡೆಯಲ್ಲಿ ಸಿಕ್ಕ ದಲಿತರ ಮತ್ತು ಸ್ತ್ರೀಯರ ಹೋರಾಟ ಮತ್ತು ಜೀವನ ಪ್ರೀತಿಯನ್ನು ಒಟ್ಟೊಟ್ಟಿಗೆ ವಿವರಿಸುವ ಕಥಾವಸ್ತುವನ್ನು ಒಳಗೊಂಡಿವೆ.
ಕತೆಗಾರ ನಾಗತಿಹಳ್ಳಿ ಚಂದ್ರಶೇಖರ್ ಪುಸ್ತಕ ಬಿಡುಗಡೆ ಮಾಡಲಿದ್ದು, ಕವಿ ಎಲ್.ಎನ್.ಮುಕುಂದರಾಜ್ ಕಥೆಗಳ ಕುರಿತು ಮಾತನಾಡಲಿದ್ದಾರೆ. ಮೇಸ್ಟ್ರು ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷತೆವಹಿಸಲಿದ್ದಾರೆ.