ಪುಟಗಳು

ದಿ ಮಾರ್ಟಿರ್ ಭಗತ್ ಸಿಂಗ್ಸ್ ಎಕ್ಸ್ಪರಿಮೆಂಟ್ಸ್ ಇನ್ ರೆವೆಲ್ಯೂಷನ್

ಭಗತ್ ಸಿಂಗ್ ಅವರ ಬದುಕು ಮತ್ತು ಹೋರಾಟವನ್ನು ಕುರಿತಂತೆ ಅನೇಕ ಪುಸ್ತಕಗಳು ಪ್ರಕಟವಾಗಿವೆ. ಪ್ರಸ್ತುತ ಕೃತಿ ಭಿನ್ನವಾದದ್ದು ಮತ್ತು ಭಗತ್ ಸಿಂಗ ಅವರ ಬದುಕಿನ ಮೇಲೆ ಹೊಸ ಬೆಳಕನ್ನು ಚೆಲ್ಲುವಂಥದ್ದು.
ಖ್ಯಾತ ಪತ್ರಕರ್ತ ಕುಲದೀಪ ನಯ್ಯರ್ ಅವರು ಗತಕಾಲದ ಹಲವು ದಾಖಲೆಗಳನ್ನು ಶೋಧಿಸಿ, ಕಾಗದ ಪತ್ರಗಳನ್ನು ಪರಿಶೀಲಿಸಿ, ವ್ಯಕ್ತಿಗಳನ್ನು ಸಂದರ್ಶಿಸಿ, ಸಾಕಷ್ಟು ಅಧ್ಯಯನವನ್ನು ನಡೆಸಿ ಇಂಗ್ಲೀಷ್ನಲ್ಲಿ ರೂಪಿಸಿದ ಕೃತಿ `ದಿ ಮಾರ್ಟಿರ್ ಭಗತ್ ಸಿಂಗ್ಸ್ ಎಕ್ಸ್ಪರಿಮೆಂಟ್ಸ್ ಇನ್ ರೆವೆಲ್ಯೂಷನ್‘. ಅದರ ಕನ್ನಡ ಅನುವಾದವೇ `ಹುತಾತ್ಮ ಭಗತ್ ಸಿಂಗ್‘.
ಜೀವನ ಚರಿತ್ರೆಯಂತೆ ಕಂಡರೂ ಇದು ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಘಟನೆಗಳ ಮಂಡನೆ, ಸನ್ನಿವೇಶಗಳ ಚಿತ್ರಣ, ಭಾವನಾತ್ಮಕ ಸಂದರ್ಭಗಳನ್ನು ಸೆರೆಹಿಡಿದಿರುವ ಕ್ರಮ – ಇವೆಲ್ಲ ಈ ಕೃತಿಗೆ ಕಾದಂಬರಿಯ ಮೆರುಗನ್ನು ನೀಡಿವೆ. ಸೂಕ್ಷ್ಮ ಸಂವೇದನಾಶೀಲ ಲೇಖಕನೊಬ್ಬನ ಪ್ರತಿಭಾಪೂರ್ಣ ಸ್ಪರ್ಶವೂ ಇಲ್ಲಿ ಕಾಣಿಸುತ್ತದೆ. ಭಗತ್ ಸಿಂಗ್ ಅವರ ನಾಸ್ತಿಕ ಚಿಂತನೆಯನ್ನು ಕಟ್ಟಿ ಕೊಡುವ ಅವರ ಪ್ರಸಿದ್ಧ ಲೇಖನ `ನಾನೇಕೆ ನಾಸ್ತಿಕಕೂಡಾ ಇಲ್ಲಿ ಸೇರಿದೆ. ಈ ಕೃತಿಯ ಕನ್ನಡ ಅನುವಾದ ಮೂಲ ಕೃತಿಗೆ, ಮುಖ್ಯ ಸತ್ವಕ್ಕೆ, ಸೂಕ್ಷ್ಮ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿದೆ; ಸರಳವೂ ಸಹಜವೂ ಆಗಿರುವುದರಿಂದ ನಿರಾತಂಕ ಓದಿಗೆ ಸಹಕಾರಿಯಾಗಿಯೂ ಇದೆ.
ಶೀರ್ಷಿಕೆ : ಹುತಾತ್ಮ ಭಗತ್ ಸಿಂಗ್ ಲೇಖಕರು: ಕುಲ ದೀಪ ನಯ್ಯರ್ ಅನುವಾದ: ಬಿ. ಪಿ. ಬಸವರಾಜ್ ಪ್ರಕಾಶಕರು : ಲೋಹಿಯಾ ಪ್ರಕಾಶನ ಪುಟಗಳು : 120 ಬೆಲೆ: ರೂ.60/